ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಫಿ ಮತ್ತು ಆತ್ಮ

ರಾಮಯ್ಯ ಒ೦ದು ಸಣ್ಣ ಕಾರ್ಖಾನೆಯಲ್ಲಿ ದುಡಿಯುತ್ತಾನೆ. ಅವನ ಕಾರ್ಖಾನೆ ನಮ್ಮ ಕಾರ್ಖಾನೆಯ ಆರ್ಡರ್‌ಗಳನ್ನು ಪಡೆದು ವಸ್ತುಗಳನ್ನು ಸಿದ್ಧಪಡಿಸಿ ಪೂರೈಸುತ್ತದೆ. ಆತನ ಕೆಲಸ ತನ್ನ ಕಾರ್ಖಾನೆ ಪೂರೈಸುವ ವಸ್ತುಗಳನ್ನು ಮತ್ತವಕ್ಕೆ ಸ೦ಬ೦ಧಿಸಿದ ಕಾಗದ-ಪತ್ರಗಳನ್ನು ನಮ್ಮಲ್ಲಿಗೆ ತಲಪಿಸಿ, ಚೆಕ್ಕುಗಳು ಸಿದ್ಧವಾದಾಗ ಅವುಗಳನ್ನು ಸ೦ಗ್ರಹಿಸಿ ಬ್ಯಾ೦ಕಿನಲ್ಲಿ ಜಮಾ ಮಾಡುವುದು. ಈ ಕೆಲಸಗಳು ಸದಾ ಇದ್ದು ಆತ ವಾರದಲ್ಲಿ ಎರಡು-ಮೂರು ಬಾರಿ ನಮ್ಮಲ್ಲಿಗೆ ಬರುತ್ತಾನೆ. ಹಳ್ಳಿಯ ಶಾಲೆಯಲ್ಲಿ ೧೦ನೇ ತರಗತಿಯವರೆಗೆ ಓದಿದ್ದ. ಅವಶ್ಯಕ್ಕೆ ತಕ್ಕಷ್ಟು ಸುಮಾರಾಗಿ ಇ೦ಗ್ಲಿಶಲ್ಲಿ ವ್ಯವಹರಿಸಲು ಬಳಕೆಯಿ೦ದ ನಿಭಾಯಿಸುವ ಚಾತುರ್ಯವನ್ನು ಪಡೆದಿದ್ದರೂ, ಸ್ವಭಾವತ: ರಾಮಯ್ಯ ಮುಗ್ಧ, ವಿಧೇಯ ಮತ್ತು ವಿನಯ ಸ೦ಪನ್ನ.

ದೇವರೊಡನೆ ಒಂದು ಕ್ಷಣ !!

ಅದೊಂದು ಸಂಜೆ ನಾನು ಕಚೇರಿಯ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದೆ. ನನ್ನ ಮನಸ್ಸು ಕೆಲವು ಕಠಿಣ ಭಾವನೆಗಳ ಜಾಲದಲ್ಲಿ ಸಿಲುಕಿ ತೊಳಲಾಡುತ್ತಿತ್ತು. ಬದುಕಿನ ಕಷ್ಟಗಳನ್ನು ಎದುರಿಸುತ್ತ ಸೋತೆನೆಂಬ ಭಯದ ಭಂಗಿಯಲ್ಲಿ ಶುನ್ಯವನ್ನೇ ದಿಟ್ಟಿಸುತ್ತ ನಿಂತೆ. ಈ ಬದುಕೇ ಸಾಕು, ಇನ್ನು ಜೀವನ ಬೇಡವೆಂಬ ಬೇಸರದಿಂದ ಬೆಂದು ಬಳಲುತ್ತಿದ್ದೆ !!

ಚೀಟಿ ಮಹಾತ್ಮೆ..

ಪರೀಕ್ಷಾ ಕೊಠಡಿ. ಸೈನ್ಸ್ ಪರೀಕ್ಷೆ ದಿನ. ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ಕೊಡುತ್ತಾ ಬಂದರು. ಜೀರೋದಿಂದ ನೂರು ಕಿ.ಮೀ.-ಐದೇ ಸೆಕೆಂಡುಗಳಲ್ಲಿ ಎಂದು ಬೈಕುಗಳಿಗೆ ಪ್ರಚಾರ ಮಾಡುತ್ತಾರಲ್ಲ, ಹಾಗೇ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮಕ್ಕಳ ಮುಖ ಐದೇ ಸೆಕೆಂಡುಗಳಲ್ಲಿ ಜೀರೋಗೆ ಇಳಿದಿರುತ್ತಿತ್ತು. ಬಹಳ ಟಫ್ ಇರಬೇಕು.


ಮೇಲ್ವಿಚಾರಕರು ನನ್ನ ಬಳಿ ಬಂದಾಗ ನಗುತ್ತಾ ಪ್ರಶ್ನೆಪತ್ರಿಕೆ ತೆಗೆದುಕೊಂಡೆ. ಪೂರ್ತಿ ತಯಾರಾಗಿ ಬಂದವರಿಗೆ ಯಾವುದೇ ಭಯವಿರುವುದಿಲ್ಲ . ಪ್ರಶ್ನೆ ಪತ್ರಿಕೆ ಮೇಲೆ ಕಣ್ಣಾಡಿಸುವ ಮೊದಲು ಪ್ಯಾಂಟ್‌ನ ಎಡಕಿಸೆಗೆ ಕೈಹಾಕಿ ಚೀಟಿ ತೆಗೆದು ಪ್ರಶ್ನೆ ಪತ್ರಿಕೆಯ ಅಡಿಯಲ್ಲಿ ಇಟ್ಟು ನೋಡಿಕೊಂಡು ಬರೆಯಲು ಆರಂಭಿಸಿದೆ.

ಮಿತ್ರರೇ, ನನ್ನನ್ನು ಬೆಂಬಲಿಸಿ !

ಸಂಪದಿಗ ಮಿತ್ರರೇ, 


ಇದೊಂದು ವಿನಂತಿ ಪತ್ರ.... 


ದಿಲ್ಲಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ ೨೦೧೧ ರ ಪ್ರಯುಕ್ತ ಪ್ರಕಟಣೆಯಾಗಿರುವ ಅನಿವಾಸಿ ಭಾರತೀಯರ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿರುವ ನಾನು ನಿಮ್ಮ ಪ್ರೋತ್ಸಾಹ ದೊರೆತಲ್ಲಿ ಭಾರತದ ಮಹತ್ವವನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದೇನೆ. ಈ ಕಾರ್ಯದಲ್ಲಿ ನನ್ನನ್ನು ಬೆಂಬಲಿಸಿ ಗೆಲ್ಲಿಸುತ್ತೀರಿ ಅಂತ ನಂಬಿದ್ದೇನೆ. ಇದಕ್ಕಾಗಿ ತಮ್ಮ ಸ್ವಲ್ಪ ಸಮಯ ನೀಡಿ, ಈ ತಾಣಕ್ಕೆ ಹೋಗಿ, ಅಲ್ಲಿ ನನ್ನ ಬಗ್ಗೆ ಬರೆದ ವಿಚಾರಗಳು ಸರಿಯೆನಿಸಿದರೆ, ನನ್ನನ್ನು ದೃಢೀಕರಿಸಿ (endorse me) ಮತ್ತು ತಮ್ಮ ಮತ ಹಾಕಿ (vote for me) ಬೆಂಬಲಿಸುವಿರಿ ಎಂದು ನಂಬಿದ್ದೇನೆ. 

ಮೂಢ ಉವಾಚ -44

             ಮೂಢ ಉವಾಚ -44


ಕೆಲಸಕಾರ್ಯವ ನೋಡೆ ಒಂದು ಕೈಮೇಲು|
ಧೃಢ ನಿಲುವು ಇರಲು ಕಾಲದ ಅರಿವು||
ಸರಳ ನಡೆಯೊಡನೆ ಜಾಣತನ ಮೇಳವಿಸೆ|
ನಾಯಕನು ಉದಯಿಸುವ ಕಾಣು ಮೂಢ||

ನುಡಿದಂತೆ ನಡೆದು ಮಾದರಿಯು ತಾನಾಗಿ|
ಪರರ ಮನವರಿತು ನಡೆವ ಕರುಣೆಯಿರಲಾಗಿ||
ಕೆಲಸ ಮಾಡಿಸುವ ಕಲೆಯು ಕರಗತವು ತಾನಾಗೆ|
ನಾಯಕನು ಉದಯಿಸುವ ಕಾಣು ಮೂಢ||

ವಿಚ್ಛೇದನಾ-ಪರಿಣಯವೆಂಬ ಕೆ. ಸತ್ಯನಾರಾಯಣ ಅವರ ಹೊಸ ಕಾದಂಬರಿ

ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ. ಈ ಹಿಂದೆ ಮುಂದಾಗುವುದನ್ನು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ. ಆದರೆ ಮುಂದೆ ಮುಂದೆ ಹಿಂದಿನ ವಾಡೆಯಲ್ಲಿನ ನಿಲುವುಗನ್ನಡಿ ಹೊರತು ಉಳಿದೆಲ್ಲ ಹೊಸತರಂತಿದ್ದ ವಸ್ತುಗಳು ವಾಡೆಯ ಬೀಗ ತೆಗೆದ ಬಳಿಕ ಧೂಳೀಪಟವಾಗಿಹೋಗುತ್ತವೆ. ನಾನು ಬಲ್ಲಂತೆ ಕನ್ನಡಿಗಳು ಹಾಳಾಗುವುದಿಲ್ಲ. ಅವುಗಳ ಕಣಕಣವೂ ಹೊಸಕನ್ನಡಿಗಳಾಗಿ ಇರುತ್ತವೆ. ಒಳಗೆ ನುಸುಳುವ ಬಿಂಬಗಳನ್ನು ತಿಂದುಕೊಂಡು ಬದುಕುತ್ತವೆ. ಇಲ್ಲಿಯೂ ನಿಲುವುಗನ್ನಡಿ ಹುಡಿಯಾಗದೆ ಉಳಿಯುತ್ತದೆ.

ನಗಾರಿ ಕಿಕ್ಕಿಂಗ್!

ತಲೆಮರೆಸಿಕೊಂಡು ಹೋಗುವುದರಲ್ಲಿ ಸಾಮ್ರಾಟರಾಗಿರುವ ನಗೆ ಸಾಮ್ರಾಟರನ್ನು ಹುಡುಕಿ ಕರೆತರುವುದಕ್ಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಗಾರಿಯ ಉಸ್ತುವಾರಿಯನ್ನು ಯುವ ಸದಸ್ಯರೊಬ್ಬರು ವಹಿಸಿಕೊಂಡದ್ದು, ತಮ್ಮ ಅತ್ಯಾಪ್ತ ಚೇಲ ಕುಚೇಲ ತಮ್ಮ ವಿರುದ್ಧವೇ ತಿರುಗಿ ಬಿದ್ದದ್ದು ಇವೆಲ್ಲವುಗಳನ್ನು ಕಂಡ ಸಾಮ್ರಾಟರು ಕಂಗಾಲಾಗಿದ್ದರು. ಹಲ್ಲಿಲ್ಲದ ತನ್ನ ಬಳಿಯಿರುವ ಕಡಲೆಯನ್ನು ಕಿತ್ತುಕೊಳ್ಳಲು ಬರುವ ‘ಹಲ್ಕಟ್’ ಮಂದಿಯಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದರು.

ಎರಡು ಹನಿಗವನಗಳು

ಪ್ರಿಯೆ,
ನನ್ನ ಜೊತೆ
ನೀನು
ಬ೦ದರೆ
ನಿನ್ನನ್ನು
ಪ್ರೀತಿಸುವೆ.
ನೀನು
ಬರದಿದ್ದರೆ
......
......
ಜೀವನವನ್ನು
ಪ್ರೀತಿಸುವೆ.....

 

*******

 

-2-

 

ನಲ್ಲೆ...
ನಮ್ಮಿಬ್ಬರ
ಮಧ್ಯೆಯ
ಪ್ರೀತಿ ಪ್ರೇಮದ
ಶಬ್ದಗಳು
...ಪಿಸುಮಾತುಗಳು
ಎಲ್ಲವೂ
ಖಾಲಿಯಾಗಿವೆ
ಸರಿ,
ಇನ್ನು
ನಾನು
ಬರಲಾ...? !
*****

ಅಸಾಮಾನ್ಯ ಸೌಂದರ್ಯದ ‘ಕಾಮನ್ ಗ್ರೀನ್ ವಿಪ್’!

ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆದರೆ ಇಂದು ನಮಗೆ ಆ ಭಾಗ್ಯ ಲಭಿಸಿತ್ತು. ಪ್ರೊ. ಗಂಗಾಧರ ಕಲ್ಲೂರ ಹಾಗೂ ದಂತ ವೈದ್ಯ ಡಾ.ಮಹಾಂತೇಶ ಸರದೇಸಾಯಿ ಅವರ ಮೂಲಕ ನಾವು ಫಲಾನುಭವಿಗಳಾದೆವು. ಹರ ಸಾಹಸ ಪಟ್ಟು ಅವರು ಆ ಕಿರು ಬೆರಳು ಗಾತ್ರ ದೇಹದ ಆಗಂತುಕ ಅತಿಥಿಯನ್ನು  ಕೆಲಕಾಲ ತಾತ್ಕಾಲಿಕವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

 

ಬಕಿಟ್ ಈ ಶ್ವರರು

ಬಕಿಟ್  ಈ ಶ್ವರರು  ಸ್ವಾಮಿ ಬಕಿಟ್  ಈ ಶ್ವರರು


ಕಿಸಿಯುತ್ತಾರೆ ದೇನೆಸಿಯಂತೆ ಬಿಟ್ಟು ಮೂರೂ ಮತ್ತು ಹಲ್ಲು ಮೂವತ್ತೆರಡು .
ಬಾಗುತಾರೆ ಕಾಣುವ ತನಕ ಕುಂಡಿ, ಅಣ್ಣಾ ಬಾಗಿದನೆಂದು ಬೀಗಬೇಡ
ಇಡುತಾನೆ ಯಾವಾಗಲಾದರೂ  ಬುಡ್ದಕ್ಕೆ ಬತ್ತಿ .

ಸದಾ ಬೇರೆಯವರ ಮಾತಿನ ಮೇಲೆ ಹಿಡಿತ
ಯಾಕಂದ್ರೆ ಆಗಾಗ ಹುಚ್ಚುನಾಯಿ  ಕಡಿತ
ತಲೆ ಇದೆ ತುಂಬಾ ಬೇವರ್ಸಿ ಬುದ್ದಿ
ಇಲ್ಲಿಂದ ಅಲ್ಲಿಗೆ ಚುಚ್ಚುವ ಆದುನಿಕ ನಾರದರು .

ಎಲರಿಗೂ ಒಂದೇ ಇವರಿಗೆರಡು ಸೀಳು ನಾಲಿಗೆ
ಏನೇನೂ ಅಲ್ಲ ಇವರ ಮುಂದೆ ಊಸರವಳ್ಳಿ
ಅನ್ನ ಕೊಟ್ಟ ಬೆಪ್ಪರಿಗಿವರು ನಮಕ್  ಹರಾಮ್
ಹುಶಾರ್ ಅಣ್ಣ ನಮ್ಮಲ್ಲಿ ಎಲ್ಲಾದರೂ ಇರಬಹುದು .