ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಫ್ಜಲ್‍ ಗುರುಗೆ ಅಡ್ವಾಣಿ ಪಿ.ಎಮ್ ಆಗಬೇಕಂತೆ

ಮೂರು ವರ್ಷದ ಮೇಲೆ ಅಫ್ಜಲ್ ಗುರು ಬಾಯಿ ಬಿಟ್ಟಿದ್ದಾನೆ
ಅದೂ ಅಂತಿಥ ಮಾತಲ್ಲ
ಕಾಂಗ್ರೆಸ್ಸ್‌ನ ಜಂಘಾಬಲವನ್ನೆ ಉಡುಗಿಸುವ ಮಾತು
ತನ್ನ ಗಲ್ಲಿನ ವಿಷಯ್ದದಲ್ಲಿ ಕೇವಲ ಬಿಜೆಪಿ ಮಾತ್ರ ದೃಢ ನಿರ್ಧಾರ ತಳೆಯಬಲ್ಲುದು
ಕಾಂಗ್ರೆಸ್ನದು ವೋಟಿನ ರಾಜಕಾರಣ ಅಂತ ಬಡಾಯಿಸಿದ್ದಾನೆ
ನಿಜಕ್ಕೂ ಒಬ್ಬ ಭಯೋತ್ಪದಕನ ಬಾಯಲ್ಲಿ ಇಂತಹ ಮಾತುಗಳು ತೀವ್ರ ಆಶ್ಚರ್ಯಕರ
ನೀವೆನಂತೀರಾ?

ಗದೆ ಮತ್ತು ಗಧೆ

ಇತ್ತೀಚೆಗೆ ರನ್ನನ" ಗದಾಯುದ್ದ" ಓದುತ್ತಿದ್ದೇನೆ.ಲೇಖಕರು ಡಾ! ಎಲ್ ಬಸವರಾಜು. ನನಗಿರುವ ಸ೦ಶಯವೆ೦ದರೇ, ಈ ಪುಸ್ತಕದ ಹೆಸರು "ಸರಳ ಗದಾಯುದ್ದ", "ಗದೆ" ಮತ್ತು "ಗಧೆ " ಇದರಲ್ಲಿ ಯಾವುದು ಸರಿ...?

"ನೀನಾರಿಗಾದೆಯೋ ಎಲೆ ಮಾನವ"

ನೆನ್ನೆ ಮನೆ ಕೆಲಸ ಮುಗಿಸಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ೫.೦೦ ಘಂಟೆಗೆ ಎಚ್ಚರವಾಗಲಿಲ್ಲ. ನನ್ನ ಮೊಬೈಲಿನಲ್ಲಿ ಮೆಸ್ಸಜ್ ಟೋನ್ ಕೂಗಿ ೫.೨೦ಕ್ಕೆ ನನ್ನ ಎಬ್ಬಿಸಿತ್ತು, ನಾನು ಇದ್ಯಾರು ಇಷ್ಟು ಬೆಳಿಗ್ಗೆ ಬೆಳಿಗ್ಗೆ ನನಗೆ Good morning ವಿಶ್ ಮಾಡ್ತಾಇರೊವ್ರು ಅಂತ ಅರ್ಧಂಭರ್ದ ಕಣ್ಣಿನಲ್ಲೇ ಮೆಸ್ಸೇಜನ್ನ ಓದಿ ಧಡ್ ಅಂತ ಎದ್ದು ಕುಳಿತೆ.

'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

ಚಂದಮಾಮ ಕಥೆಗಳಲ್ಲಿಯ ವಿಕ್ರಮ ಮತ್ತು ಬೇತಾಳ ಸೀರೀಸ್ [ಸೀರಿಯಸ್] ಅಲ್ಲ. ಕಥೆಗಳ ಪರಿಶ್ಕ್ರುತ ರೂಪ ಅಥವಾ ಮುಂದುವರೆದ

ರೂಪವೆನ್ನಬಹುದಾದ ನಮ್ಮ ಸಿನಿಮಾಗಳ ಮುಂದುವರೆದ ಭಾಗಗಳು ತಮ್ಮ ಹಿಂದಿನ ಸಿನಿಮಾಗಳಷ್ಟೇ ಯಶಸ್ವಿಯಾಗುವಲ್ಲಿ ಸದಾ

ಎಡುವುತ್ತಲೇ ಇರುವುದು ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ ರಾಮಗೋಪಾಲ್ ವರ್ಮಾ ನ ಬಹು ನಿರೀಕ್ಷಿತ ಚಿತ್ರ
"ಸರ್ಕಾರ್ ರಾಜ್"

ದೆಹಲಿ ದೂದ ಹಾಗೂ ನೆನಪುಗಳು!

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ದಟ್ಸ್ ಕನ್ನಡದಲ್ಲಿದ್ದ ವರದಿಗೂ ಕೊಂಡಿ ಹಾಕಿದ್ರು. ನಾನೂ ಹಿನ್ನಲೆ ಗಾಯನಕ್ಕೆ ಯಾರಿಗೆ ಬಂದಿದೆ ಈ ಸರ್ತಿ ಪ್ರಶಸ್ತಿ ಅಂತ ನೋಡ್ದೆ. ಪಂಜಾಬಿ ಸಿನೆಮಾದಲ್ಲಿ ಗುರುದಾಸ್ ಮಾನ್ ಗೆ ಪ್ರಶಸ್ತಿ ಬಂದಿದೆ! ಆಗ ಹಿಂದೆ ನಮಗೆಲ್ಲ ಟಿ.ವಿ. ಅಂದ್ರೆ ಬರೀ ಹಿಂದಿ ದೂರದರ್ಶನ ಆಗಿದ್ದ ಕಾಲ ನೆನಪಾಯ್ತು. ನಮ್ಮೂರಲ್ಲಿ ಟಿ.ವಿ. ಸ್ಟೇಷನ್ ಶುರುವಾದ ಹೊಸತು. ದಿನಾ ಬೆಳಗೂ ಸಂಜೆ ಬರೀ ಹಿಂದಿ ಅಷ್ಟೆ. ಭಾನುವಾರ ಮಧ್ಯಾಹ್ನ ಒಂದು ಪ್ರಾದೇಶಿಕ ಚಿತ್ರ ಅಂತ ಹಾಕೋರು. ಕನ್ನಡದ ಸರತಿ ಎರಡೋ ಮೂರೋ ತಿಂಗಳಿಗೆ ಒಮ್ಮೆ. ಆದ್ರೆ, ಅದು ಹೇಗೋ ನಮ್ಮ ಮನೆಗೆ ಟಿ.ವಿ.ತಂದ ದಿನವೇ ಕನ್ನಡ ಚಿತ್ರ ಸಂಧ್ಯಾರಾಗ ಬಂದಿತ್ತು. ಅದ್ದ್ಯಾವ್ದೋ ಶ್ರೀವಾಸ್ತವ ಅನ್ನೋ ನಿರ್ವಾಹಕಿ "ಅಬ್ ದೇಖಿಯೇ ಕನ್ನಡ್ ಚಿತ್ರ್ ಸಾಂಧ್ಯ್ ರಾಗ್" ಅಂತ ತಪ್ಪು ತಪ್ಪಾಗಿ ಉಲಿದಿದ್ದಳು. ಈ ಪ್ರಾದೇಶಿಕ ಚಿತ್ರದ ಸಾಲಿನಲ್ಲೇ ಎಷ್ಟೋ ಒಳ್ಳೆ ಮಲೆಯಾಳಮ್, ತಮಿಳು ಚಿತ್ರಗಳನ್ನೂ ನೋಡಿದ ನೆನಪಿದೆ.

ಇದಲ್ಲದೆ, ಟಿ.ವಿ.ಯಲ್ಲಿ ಕನ್ನಡ ಏನಾರೂ ಕೇಳ್ಬೇಕಂತಿದ್ರೆ, ಎರಡುವಾರಕ್ಕೊಂದು ಸಲ ರಾತ್ರಿ ೧೦:೧೦ ಕ್ಕೋ ಏನೋ ( ಅದ್ಯಾಕೆ ಈ ಸಮಯ ಇಟ್ಕೊಂಡಿದ್ರೋ ಗೊತ್ತಿಲ್ಲ, ಬೇರೆ ಭಾಷೆಯವರಿಗೆ ತಾನೇ, ತಡ ಆದ್ರೂ ಕಾಯ್ತಾರೆ ಅಂತಿರ್ಬೋದು), ಚಿತ್ರಮಾಲಾ ಅಂತ ಒಂದು ಕಾರ್ಯಕ್ರಮ. ಅದರಲ್ಲಿ ಹಿಂದಿ ಬಿಟ್ಟು ಬೇರೆಬೇರೆ ಭಾಷೆಯ ಚಿತ್ರಗೀತೆ ಹಾಕೋರು. ಒಂದು ತರಹದಲ್ಲಿ ಈ ಚಿತ್ರಗೀತೆ ಕಾರ್ಯಕ್ರಮಕ್ಕೇ ಪರವಾಗಿಲ್ಲ, ಸ್ಪೆಶಲ್ ಟ್ರೀಟ್‍ಮೆಂಟ್ ಅಂದ್ಕೋಬಹುದು. ಯಾಕಂದ್ರೆ, ತಿಂಗಳಿಗೋ ಎರಡು ತಿಂಗಳಿಗೋ ಬರ್ತಿದ್ದ ಶಾಸ್ತ್ರೀಯ ಸಂಗೀತ ಬರ್ತಾ ಇದ್ದದ್ದು ಇನ್ನೂ ತಡವಾಗಿ - ರಾತ್ರಿ ಹತ್ತೂ ಐವತ್ತಕ್ಕೋ ಏನೋ!

'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ

ಈ ಬಾರಿಯ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳಲ್ಲಿ [:http://thatskannada.oneindia.in/movies/headlines/2008/06/10-master-kishan-movie-bags-swarna-kamala.html|ದಟ್ಸ್ ಕನ್ನಡ ವರದಿಯಂತೆ] ಕನ್ನಡದ 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ ಲಭಿಸಿದೆ.
ನಿರ್ದೇಶನ: ಲಿಂಗದೇವರು. ನಿರ್ಮಾಣ: ವೀರೇಶ್ (ಚಿತ್ರಲೋಕ ಡಾಟ್ ಕಾಮ್) ಮಧು ಬಂಗಾರಪ್ಪ.

ಪ್ರಶಸ್ತಿ ಪಡೆದ ಉಳಿದ ಚಿತ್ರಗಳು:

ಉದ್ಯಾನ ನಗರಿ ಮತ್ತು ಉದ್ದಾನೆ ಗರಿ

ಬೆಂಗಳೂರು- ಉದ್ಯಾನನಗರಿ
ಹಿಂದೆ ದೈತ್ಯಗಾತ್ರದ ಮರಗಳ ನಡುವೆ ಎಲ್ಲೋ ಒಂದೆರಡು ಕಟ್ಟಡಗಳು, ಮರಕ್ಕಿಂತಲೂ ಮೇಲೆ ತಲೆ ಎತ್ತಿ ಹೊರಜಗತ್ತನ್ನು ನೋಡುತ್ತಿದ್ದವು.

ಈಗ ದೈತ್ಯಕಟ್ಟಡಗಳ ನಡುವೆ ಅಳಿದುಳಿದ ಕೆಲ ಮರಗಳು ಬೊನ್ಸಾಯ್‌ನಂತೆ ಕಾಣಿಸುತ್ತಿವೆ. ಆ ಮರಗಳಿಗೆ ಇದಕ್ಕಿಂತ ಬೇರೆ ಅವಮಾನ ಬೇಕಾ?

ಹಕ್ಕಿಯೊಂದು ಗೂಡು ಕಟ್ಟಿತ್ತು...

ನಾನು ಹೈದರಾಬಾದಿನಲ್ಲಿ ವಾಸವಿದ್ದ ಕೆಲವೇ ತಿಂಗಳುಗಳಲ್ಲಿ ನಾನು ನನ್ನ ಜೀವನದ ಪುಟಗಳಲ್ಲಿ ಮರೆಯೋದಕ್ಕೇ ಸಾಧ್ಯವಾಗದೇ ಇರೋ ಅಂಥಾ ಕೆಲವು ಸುಂದರ ನೆನಪುಗಳು ನನ್ನಲ್ಲಿ ಮನೆಮಾಡಿವೆ.