ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಯಸು ಮತ್ತು ಮನಸು

ಯಶವಂತ ಚಿತ್ತಾಲರ 'ಕತೆಯಾದಳು ಹುಡುಗಿ’ ಯನ್ನು ಒಂದೇ ರಾತ್ರಿ (ರಾತ್ರಿ ೯ ರಿಂದ ೩ ರ
ವರೆಗೆ) ಒಂದೇ ಗುಕ್ಕಿನಲ್ಲಿ ಓದಿದಾಗ ನನಗೆ ಹದಿನೇಳೋ ಹದಿನೆಂಟೋ ವರ್ಷ. ಈಗದೆಲ್ಲ
ನೆನಪಾಗುತ್ತಿರುವುದು ಹದಿನೇಳೋ ಹದಿನೆಂಟೋ ವರ್ಷದ ನಂತರ ಮತ್ತೆ ಅವರ ’ಐವತ್ತೊಂದು
ಕತೆಗಳು’ ಓದಿದಾಗ.

ಅವಮಾನಕ್ಕೆ ಅಂಜಬೇಡಿ...

’ಕಲಿಯೋದರಲ್ಲಿ ಈತ ತುಂಬ ನಿಧಾನ’ ಅಂತ ಆ ಪುಟ್ಟ ಹುಡುಗನ ಟೀಚರ್‍ ಒಬ್ಬಳು ಆ ಹುಡುಗನೆದುರೇ ಪಾಲಕರಿಗೆ ಹೇಳಿಬಿಡುತ್ತಾಳೆ. ಆ ಬಾಲಕನಿಗೆ ತುಂಬ ಅವಮಾನವಾಗಿಬಿಡುತ್ತದೆ. ಆತ ಆದ ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ. ’ಅವಮಾನ’ ಅನ್ನೋದು ಬಹುಶಃ ಹಾಗೆ ಸುಮ್ಮನೆ ಕೂರಿಸುವುದೂ ಇಲ್ಲ. ಆ ಅವಮಾನವನ್ನಾತ ಛಲವನ್ನಾಗಿ ಸ್ವೀಕರಿಸುತ್ತಾನೆ.

ಸಂಪದ ಸದಸ್ಯರ ಮೀಟಿಂಗ್

ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ, ಬೆಂಗಳೂರು.

ಚರ್ಚೆಯ ವಿಷಯಗಳು:
* [:http://dev.sampada.net/Project_Akshara_Siri|ಪ್ರಾಜೆಕ್ಟ್ ಅಕ್ಷರಸಿರಿ],
* [:http://sampadafoundation.org|ಸಂಪದ ಫೌಂಡೇಶನ್] - ಟೆಕ್ನಿಕಲ್ ಕಮಿಟಿಗೆ ಸಂಬಂಧಪಟ್ಟ ನಿರ್ಧಾರಗಳು.

ಭಾಗವಹಿಸಲು ಆಸಕ್ತಿಯಿರುವ ಸಂಪದ ಸದಸ್ಯರು ಇನ್ನಷ್ಟು ಮಾಹಿತಿಗಾಗಿ ದಯವಿಟ್ಟು events@sampada.net ಗೆ ಒಂದು ಇ-ಮೇಯ್ಲ್ ಕಳುಹಿಸಿ.

ಚಿನ್ನದ ನಾಡಿದು, ಗಂಧದ ಗುಡಿಯಿದು, ಎಲ್ಲಾ ಹೊರಟುಹೋಗಿ, ನಾಟಕದ ಬೀಡಿದು ಕರ್ ನಾಟಕ ವಾಗಿದೆ !

ಎಲ್ಲಾ ರಾಜ್ಯಗಳೂ ತಮ್ಮ ತಮ್ಮ ರಾಜ್ಯಗಳ ಯೋಜನೆಗಳ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುವ ಸಡಗರ, ದಲ್ಲಿರುವಾಗ, ನಮ್ಮ ಕರ್ ನಾಟಕ ರಾಜ್ಯ, ಅನಿಶ್ಚಿತ ರಾಜಕೀಯು ಬೆಳವಣಿಗೆಗಳ ಸುಳಿಯಲ್ಲಿ ಸಿಲುಕಿ, ನಲುಗಿಹಣ್ಣಾಗಿದೆ.

ಹೊಸ ವರ್ಷ

ಹೊಸವರುಷ ಬಂದಾಯ್ತು ಹೊಸ್ತಿಲಲಿ ನಿಂದು
ಹಳೆಯ ಪಳಿಯುಳಿಕೆಗಳ ಹಳೆಗಾಲ ಸಂದು
ಸಡಗರೋಲ್ಲಾಸಗಳ ಜಡರುಗಳ ಕಳೆದು
ಹೊಸಹೊಳಹು ಮೂಡಿರಲಿ ನಿನಗೆನ್ನ ಬಂಧು

ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ

೨೦೦೮ ನೇ ಇಸ್ವಿ, ರೈಲ್ವೇ ಗ್ರೂಪ್ ಡಿ ಪರೀಕ್ಷೆ ಬೆಂಗಳೂರು, ಮೈಸೂರು ಹಾಗು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.
ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಬಂದವರಲ್ಲಿ ಬಹುತೇಕರು ಪರರಾಜ್ಯದವರು. ಶೇ ೧೦ ಮಾತ್ರ ಕನ್ನಡಿಗರು.

೧. ಕೆಳ ದರ್ಜೆಯ ಕೆಲಸಕ್ಕೆ ಏಕೆ ಬೇಕು ಪರ ರಾಜ್ಯದವರು?
೨. ಕನ್ನಡ ಪತ್ರಿಕೆಗಳಲ್ಲಿ, ರೈಲ್ವೇ ಗ್ರೂಪ್ ಡಿ ಅರ್ಗಿಗಳ ಜಾಹಿರಾತುಗಳು ಏಕೆ ಬರಲಿಲ್ಲ?

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಐದನೆಯ ಕಂತು

ಅಹ್ಮದ್ನೊಂದಿಗೆ ಗೆಲುವಾಗಿದ್ದಷ್ಟು ನಾನು ನನ್ನ ಬದುಕಿನಲ್ಲೇ ಯಾರ ಜೊತೆಗೂ ಗೆಲುವಾಗಿರಲಿಲ್ಲ. ಅಂದರೆ ಮನೆಯಲ್ಲಿ ನನಗೆ ಸುಖದ ಗಳಿಗೆಗಳೇ ಇರಲಿಲ್ಲವೆಂದಲ್ಲ. ಇದ್ದವು. ಹೆನ್ರಿಯನ್ನು ಮದುವೆಯಾಗುವ ಮೊದಲು ನನಗೆ ತುಂಬಾ ಸ್ನೇಹಿತರಿದ್ದರು. ಪಾರ್ಟಿಗಳು, ನರ್ತನ, ಕುಡಿತ ಅಂತ ತುಂಬಾ ಸುಖಪಟ್ಟಿದ್ದೆ. ಆದರೆ ಅವೆಲ್ಲ ಅಹ್ಮ್ದದ್ನೊಂದಿಗಿನ ಸುಖದ ಕ್ಷಣಗಳಿಗೆ ಸಾಟಿಯಲ್ಲ.

ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ

ಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.

ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?

(ಚಿತ್ರ: http://www.karnatik.com/ ಕೃಪೆ)

ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ

ಸ್ನೇಹಿತರೆ,

ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್‌ಪಿರೇಷನಲ್ ಆಡಿಯೊ ಕ್ಯಾಸೆಟ್‍ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್‌ರವರು ತಮ್ಮ "ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ" ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ.

ಕೆಂಟ್ ಕೀತ್‌ರವರು ಇಂಗ್ಲಿಷಿನಲ್ಲಿ ಬರೆದಿರುವ "Anyway – The Paradoxical Commandments" ಎಂಬ ಪುಸ್ತಕವಿದೆ. ಆ ಕಟ್ಟಳೆಗಳು ಹೀಗಿವೆ:

  • ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು - ಏನೇ ಇರ್ಲಿ, ಅವರನ್ನು ಪ್ರೀತಿಸಿ.
  • ನೀವು ಒಳ್ಳೆಯದನ್ನು ಮಾಡಿದ್ದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ - ಯಾರು ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.
  • ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ - ಆದ್ರೂ ಯಶಸ್ವಿಯಾಗಿ. 
  • ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ - ಆದ್ರೂ ಒಳ್ಳೆಯದನ್ನು ಮಾಡಿ. 
  • ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ - ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ. 
  • ಉನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳೂ ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು - ಆದ್ರೂ ದೊಡ್ಡದಾಗಿಯೇ ಆಲೋಚಿಸಿ. 
  • ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ - ಹಾಗಿದ್ರೂ ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ. 
  • ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು - ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.
  • ಜನರಿಗೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೇ ಆಕ್ರಮಣ ಮಾಡಬಹುದು - ಆದ್ರೂ, ಸಹಾಯ ಮಾಡಿ.
  • ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲು ಜನ ನಿಮ್ಮ ಹಲ್ಲುದುರಿಸಬಹುದು - ಆದ್ರೂ ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.

ಈ ಪುಸ್ತಕವನ್ನು ನಾನು "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಎಂಬ ಹೆಸರಿನಲ್ಲಿ

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ನಾಲ್ಕನೆಯ ಕಂತು

"ಇಂಥ ಮದುವೆಗಳ ಏರ್ಪಾಟು ಒಳ್ಳೆಯದೆ?" ಎಂದು ನಾನು ಅವನನ್ನು ಕೇಳಿದೆ. ಅವನು ನನ್ನ ಕಡೆ ತಿರುಗಿ "ನೀನಾದರೆ ಏನು ಮಾಡುತ್ತಿದ್ದೆ?" ಎಂದು ಪ್ರಶ್ನಿಸಿದ. ನಾನು ಪ್ರೀತಿ -ಗೀತಿ ಅಂತ ಏನೋ ಹೇಳಹೊರಟಾಗ ಅವನಿಗೆ ನಗು ಬಂತು. ಅದೆಲ್ಲ ಬರೀ ಸಿನೆಮಾಕ್ಕೆ ಮಾತ್ರ ಅಂತ ಅವನು ಹೇಳಿದ. ನನಗೆ ನನ್ನ ಅಭಿಪ್ರಾಯ ಸಮರ್ಥಿಸಿಕೋಬೇಕು ಅಂತ ಅನ್ನಿಸಲಿಲ್ಲ.