ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನವರಾತ್ರಿಯ ಹತ್ತನೇ ದಿನ

ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

ಕಳೆದ ಭಾನುವಾರ ಶಿವಮೊಗ್ಗದಲ್ಲಿ ಯು.ಆರ್.ಅನಂತಮೂತೀಯವರು ನನ್ನ 'ಮರಳಿ ಬರಲಿದೆ ಸಮಾಜವಾದ!' ಪುಸ್ತಕವನ್ನು ಬಿಡುಗಡೆ ಮಾಡುತ್ತಾ, ಇಂದಿನ ಸಂದರ್ಭಕ್ಕೆ ಮುಖ್ಯವೆನಿಸುವ ಅನೇಕ ಮಾತುಗಳನ್ನಾಡಿದರು. ಸಮಾಜವಾದ ಕುರಿತಂತೆ ಹೊಸದೆನ್ನುವಂತಹ ಒಳನೋಟಗಳನ್ನು ನೀಡಿದರು. ಇಂದಿನ ರಾಷ್ಟ್ರ ಮತ್ತು ರಾಜ್ಯ ರಾಜಕಾರಣ ಕುರಿತಂತೆ ತಮ್ಮದೇ ವೈಯುಕ್ತಿಕ ಅಭಿಪ್ರಾಯಗಳನ್ನು ದಾಖಲಿಸಿದರು. ಬೆಂಗಳೂರಿನಲ್ಲಿ ಕೌಟುಂಬಿಕವಾದ ತುರ್ತು ಕೆಲಸವಿರುವುದರಿಂದ ಆದಷ್ಟು ಬೇಗ ಸಮಾರಂಭದಿಂದ ತಮ್ಮನ್ನು ಕಳಿಸಿಕೊಡಬೇಕೆಂದು ಹೇಳಿದ್ದ ಅವರು; ಸಮಾರಂಭಕ್ಕೆ ಬಂದಿದ್ದ ಜನಸಮೂಹವನ್ನು ನೋಡಿ, ಈ ಜನ ಸಮೂಹದ ಮಧ್ಯೆ ಬೆರೆತಿದ್ದ ತಮ್ಮ ಓರಿಗೆಯ ಅನೇಕ ಸಮಾಜವಾದಿ ಮಿತ್ರರ ಎದುರಿನಲ್ಲಿ ವಿನೀತರಾದಂತೆ, ಕಾಲ ಮರೆತು ಸಮಾರಂಭ ಮುಗಿಯುವವರೆಗೂ ಕೂತರು! ತಮ್ಮ ಭಾಷಣದ ನಂತರವೂ ಎದ್ದು ಬಂದು ಇತರರ ಮಾತುಗಳಿಗೆ ಪ್ರತಿಕ್ರಿಯಿಸುವ ಸಡಗರ ತೋರಿದರು... ಒಂದೆರಡು ತಿಂಗಳುಗಳ ಹಿಂದೆ 'ಆವರಣ' ಹಗರಣದ ಸಂದರ್ಭದಲ್ಲಿ ತಮ್ಮ ಮೇಲೆ ನಡೆದಿದ್ದ 'ಆಕ್ರಮಣ'ದ ಬಗ್ಗೆ ನನ್ನೊಡನೆ ಮಾತಾಡುತ್ತಾ, 'ನನಗೆ 75 ವರ್ಷ ಎಂಬುದು ನೆನಪಿರಲಿ ನಾಗಭೂಷಣ;ಇದನ್ನೆಲ್ಲ ಸಹಿಸುವುದು ಕಷ್ಟ...' ಎಂದು ಖಿನ್ನರಾಗಿ ಹೇಳಿದ್ದ ಅನಂತಮೂರ್ತಿ ಇವರೇನಾ ಎಂದು ಆಶ್ಚರ್ಯ ಪಡುವಷ್ಟು ಉತ್ಸಾಹ - ಆಸಕ್ತಿಗಳಿಂದ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು - ಅದೂ ಹಿಂದಿನ ಸಂಜೆಯವರೆಗೆ ಹೆಗ್ಗೋಡಿನಲ್ಲಿ ಒಂದು ವಾರದ 'ನೀನಾಸಂ' ಸಾಂಸ್ಕೃತಿಕ ಶಿಬಿರದ ನಿರ್ದೇಶಕತ್ವ ವಹಿಸಿದ ಬಳಲಿಕೆಯ ನಂತರವೂ!

ಅವರ ಮಾತುಗಳನ್ನು ಕೇಳಲು ಬಂದಿದ್ದ ಜನಸಮೂಹ ಕೂಡ ಕಥೆ - ಉಪಕಥೆ - ದೃಷ್ಟಾಂತ - ನೆನಪು - ಉಲ್ಲೇಖಗಳನ್ನು ಹದವಾಗಿ ಬೆರೆಸಿ ಅವರು ಮಾಡಿದ ಭಾಷಣದ ಮೋಡಿಗೊಳಗಾದಂತೆ ಅಲುಗಾಡದೆ ಕೂತಿತ್ತು. ರಾಜೇಂದ್ರ ಚೆನ್ನಿಯವರು ತಮ್ಮ ನಂತರದ ಪ್ರತಿಕ್ರಿಯೆಯಲ್ಲಿ ಇದನ್ನು ಉಪನಿಷತ್ (ಗುರುವಿನ ಹತ್ತಿರವೇ ಕೂತು ಕೇಳುವ) ಶೈಲಿಯ ವಿಚಾರ ಮಂಡನೆ ಎಂದದ್ದು ಸ್ವಲ್ಪ ಅತಿಯಾಯಿತೆನಿಸಿದರೂ, ಅನಂತಮೂರ್ತಿಯವರು ಆಂದಿನ ಆ ಲೋಹಿಯಾ - ನೆಹರೂ ಕಾಲದ ರಾಜಕಾರಣ ಹಾಗೂ ಇಂದಿನ ಈ ದೇವೇಗೌಡ - ಯಡಿಯೂರಪ್ಪ ರಾಜಕಾರಣದ ಮಧ್ಯೆ ಕಳೆದು ಹೋಗಿರುವ ಮೌಲ್ಯ ಪ್ರಜ್ಞೆ ಹಾಗೂ ರಾಜಕೀಯ ಕೌಶಲ್ಯಗಳ ವಿವೇಚನೆ ಮಾಡುತ್ತಾ, ಸಮಕಾಲೀನ ರಾಜಕಾರಣದ ಭಿತ್ತಿಯಲ್ಲಿ ಹೊಸ ಸಮಾಜವಾದದ ಚಿತ್ರ ಬಿಡಿಸಿದ ರೀತಿ ತಲೆ ತೂಗುವಂತಿತ್ತು. ಮುಖ್ಯವಾಗಿ ಸಮಯ ಪ್ರಜ್ಞೆಯ ರಾಜಕೀಯ ಹಾಗೂ ಸಮಯ ಸಾಧಕ ರಾಜಕೀಯಗಳ ನಡುವಣ ವ್ಯತ್ಯಾಸಗಳನ್ನು ಸೋದಾಹರಣವಾಗಿ ವಿಷದೀಕರಿಸುವ ಮೂಲಕ ಇಂದಿನ ರಾಜಕೀಯವನ್ನು ಗ್ರಹಿಸುವ, ಮೌಲ್ಯಮಾಪನ ಮಾಡುವ ಬಗೆಯನ್ನು ಅವರು ತಮ್ಮದೇ ಸೃಜನಶೀಲ ವಿಚಾರ ಮಂಡನೆಯ ಶೈಲಿಯಲ್ಲಿ ವಿವರಿಸಿದರು. ಲೋಹಿಯಾರ ಆಗಿನ ನೆಹರೂ ವಿರೋಧ ಹಾಗೂ ಕಾಂಗ್ರೆಸ್ಸೇತರವಾದ ಸಮಯ ಪ್ರಜ್ಞೆಯ ಉದಾಹರಣೆಗಳಾದರೆ, ದೇವೇಗೌಡರ ಈಗಿನ ಜಾತ್ಯತೀತೆಯ ಹುಯಿಲು ಸಮಯ ಸಾಧಕ ರಾಜಕಾರಣದ ಉದಾಹರಣೆಗಳೆಂದರು. ತಮ್ಮ ಗೆಳೆಯ ಜಾರ್ಜ್ ಫ‌ರ್ನಾಂಡೀಸ್ ಇಂತಹುದೇ ಸಮಯ ಸಾಧಕ ರಾಜಕಾರಣ ಮಾಡಿ ಸಮಾಜವಾದದ ವಿಶ್ವಾಸಾರ್ಹತೆಯನ್ನು ಹಾಳುಗೆಡಹಿದ್ದನ್ನು ಹೇಳಲು ಅವರು ಮರೆಯಲಿಲ್ಲ.

ನವರಾತ್ರಿಯ ಒಂಬತ್ತನೆಯ ದಿನ

ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಇವತ್ತು ಕರ್ನಾಟಕದ ಒಬ್ಬ ವಾಗ್ಗೇಯಕಾರರ ರಚನೆ ನೋಡೋಣ.

ನವರಾತ್ರಿಯ ಎಂಟನೇ ದಿನ

ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ.

'ನಮಸ್ಕಾರ'- ಡಾ. ಎಚ್. ಎಸ್. ರಾಘವೆಂದ್ರರಾವ್, ರವರ ಸಾಹಿತ್ಯ ವಿಮರ್ಶೆ.

ಈ ಪುಸ್ತಕದಲ್ಲಿನ ಶ್ರೀ. ಯಶವಂತ ಚಿತ್ತಾಲರ ಲೇಖನದಲ್ಲಿನ ಒಂದು ಕೃತಿಯ ಬಗ್ಗೆ, "ನಮಸ್ಕಾರ" ದಲ್ಲಿ ರಾಯರು ಹೇಗೆಬರೆದಿದ್ದಾರೆಯೋ ಹಾಗೆಯೇ ಟೈಪಿಸಿ ಓದುಗರಿಗಾಗಿ ಇಲ್ಲಿ ಕೊಟ್ಟಿದ್ದೇನೆ. ಅದರ ರಸ ಸ್ವಾದಿಸಬೇಕಾಗಿ ಕಳಕಳಿಯ ಪ್ರಾರ್ಥನೆ.

ಆಫ್ರಿಕಾದಲ್ಲಿ ಗಣೇಶ

ಮೊನ್ನೆ ಅ೦ದರೆ ಸೆಪ್ಟೆ೦ಬರ್16 ರ೦ದು ನಾವೂ ಕೂಡ ಇಲ್ಲಿ ಅ೦ದರೆ ಮೋವಾ೦ಜ,ತಾ೦ಜಾನಿಯದಲ್ಲಿ ಗಣೇಶ ಹಬ್ಬವನ್ನ ಆಚರಿಸಿದ್ವಿ ಆ ಒ೦ದು ದಿನ ನಮ್ಮನ್ನು ನಾವೆ ಮರೆತು ಹೋಗಿದ್ದ೦ತ ಸ೦ಧರ್ಭ.ತಾಯ್ನಾಡಿನಲ್ಲೇ ಇದ್ದ೦ತಹ ಭಾವನೆ.ಮೋವಾ೦ಜ ಕನ್ನಡ ಸ೦ಘದಿ೦ದ ರಚಿತವಾದ ಈ ಉತ್ಸವ ಬಹಳ ನೆನಪಿನಲ್ಲಿ ಉಳಿಯುವ ದಿನ.ಆ ನೆನಪುಗಳನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.ಒಪ್ಪಿಸಿಕೊಳ್ಳಿ.

ನಾನು ಊರಿಗೆ ಹೊರಟೆ

 

 

 

 

 

 

 

 

 

 

ಡಿಸೆಂಬರ್ ಬರುತ್ತಿದ್ದಂತೆ ಊರಿಗೆ ಹೋಗುವವರೆಲ್ಲ ಊರಿಗೆ ಹೊರಡುತ್ತಿದ್ದಾರೆ. ನಾನೂ ೨೧ಕ್ಕೆ ಹೊರಟೆ. ಒಂದು ತಿಂಗಳು ಊರು !.

ವಸಂತ್.

ನವರಾತ್ರಿಯ ಏಳನೇ ದಿನ

ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.

ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.

ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:

ಶ್ರೀ ವಿಶದವರ್ಣೆ ಮಧುರಾ

ರಾವೋಚಿತೆ ಚತುರ ರುಚಿರ ಪದರಚನೆ ಚಿರಂ

ದೇವಿ ಸರಸ್ವತಿ ಹಂಸೀ

ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್