ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಾರಿ .

ಭೂಮಿ ಒಡಲಿನಿಂದ ಬಂತೆ ಈ ವೃಕ್ಷ ...?
ಯಾಕೆ ಎಂಬುದು ತಿಳಿಯದು .
ಆಕಾರ ವಿಕಾರ ಚಕಾರ ಎತ್ತಿದ ನೊಂದವ ;
ಎಕೆ ಎಂಬುದು ತಿಳಿಯದು ...?

ಮಳೆ .

ಜಿಟಿ - ಜಿಟಿ ಜಿಟಿ - ಜಿಟಿ ಮಳೆಯು ಬರುತಿದೆ ,
ನೆಲವು ನೆಂದು ಹಸಿದ ಮಣ್ಣಿನ ಸುವಾಸನೆಯು ತರುತಿದೆ ;
ವರುಷದ ಮುಂಗಾರಿನ ಸೂಚನೆಯು ಇದಾದರೆ ,
ಹರುಷದ ಅಲೆಯ ಮೇಲೆ ಸವಾರಿ ಇದಕೆ ಕಾದರೆ .

ಇಟಲಿ ( ಅಝೂರಿ ), ಇಂದಿನ ಕಾಲ್ಚೆಂಡಾಟದ, ೨೦೦೬ ರ ವಿಶ್ವ ಛಾಂಪಿಯನ್ !

೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್ ಭಾನುವಾರ, ೯ ನೆಯ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್, ಬರ್ಲಿನ್ ನಲ್ಲಿ ನಡೆಯಿತು.ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸ್ ನ್ನು ಧ್ವಂಸಗೊಳಿಸಿ ಫುಟ್ಬಾಲ್ ಛಾಂಪಿಯನ್ ಪಟ್ಟವನ್ನೇರಿತು. ಇದು ೧೨೦ ನಿಮಿಷದ ನಂತರವೂ ಹಣಾ ಹಣಿ ಮುಂದುವರಿದಾಗ ಅಂತಿಮ ಫಲಿತಾಂಷ ನಿರ್ಧರಿಸಲು ಪೆನಾಲ್ಟಿಶೂಟ್ ಔಟಿನಿಂದ ಮಾತ್ರ ಸಾಧ್ಯವಾಯಿತು.ಇಟಲಿ ೧೯೮೨ ರಲ್ಲಿ ಛಾಂಪಿಯನ್ ಆಗಿತ್ತು.ಪುನಃ ೨೪ ವರ್ಷಗಳ ಬಳಿಕ ಅದನ್ನು ದಕ್ಕಿಸಿಕೊಂಡಿದೆ !

'ಎಂಥೆಂಥ ದೊಡ್ಡ ಜನರನ್ನೂ ಕಡೆಗಣಿಸಿದ್ದೇನೆ!' ಅಥವಾ 'ನನಗೆಷ್ಟು ಕನ್ನಡ ಗೊತ್ತಿದೆ?' ಅಥವಾ 'ಕನ್ನಡ ಪದಪರೀಕ್ಷಕದಲ್ಲಿ ಒಂದು ಲಕ್ಷ ಶಬ್ದಗಳು!'

ಇದೇನಿದು ಮೂರುಮೂರು ತಲೆಬರಹ ಎನ್ನುತ್ತೀರಾ ? ನಿಮಗೆ ಗೊತ್ತಿರಲಿಕ್ಕಿಲ್ಲ . ಮೊದಲಿಗೆ ಕಾದಂಬರಿಗಳು ಕನ್ನಡದಲ್ಲಿ ಪ್ರಾರಂಭವಾದಾಗ ಈ ರೀತಿಯೇ ಹೆಸರುಗಳನ್ನು ಕೊಡುತ್ತಿದ್ದರು ! ಇರಲಿ. ಈಗ ವಿಷಯಕ್ಕೆ ಬರೋಣ .

ನನ್ನ ಚುಟುಕ ಹಾಗೂ ಲೇಖನಗಳು

ಗೆಳೆಯರೇ,
ನನ್ನ ಕೆಲವು ಚುಟುಕಗಳು (ಹಾಸ್ಯ ಚುಟುಕಗಳು) ಹಾಗೂ ಲೇಖನಗಳನ್ನು ಕೆಳಗಿನ ಬ್ಲಾಗ್ ನಲ್ಲಿ ದಾಖಲಿಸಿದ್ದೇನೆ... ನಿಮ್ಮ ಆಭಿಪ್ರಾಯಕ್ಕೆ ಸದಾ ಸ್ವಾಗತ.

ಬ್ಲಾಗ್ ಸ್ಪಾಟ್ ಬಳಕೆದಾರರಿಗೊಂದು ಕಹಿ ಸುದ್ದಿ

ಬ್ಲಾಗ್ ಸ್ಪಾಟ್ ಡೊಮೈನು ಬಳಸುವ ಎಲ್ಲ ಬ್ಲಾಗುಗಳನ್ನು (ಉದಾ: [:http://kannada-kathe.blogspot.com|kannada-kathe.blogspot.com]) ಭಾರತದ ISPಗಳು (ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪೆನಿಗಳು) ಬ್ಲಾಕ್ ಮಾಡಿದಂತಿದೆ. [:http://www.sepiamutiny.com/sepia/archives/003580.html|ಕೆಲವು ಮೂಲಗಳ] ಪ್ರಕಾರ ಇದು ಭಾರತದ ಸರ್ಕಾರ ಜಾರಿಗೊಳಿಸಿರುವ ಆಜ್ಞೆ. ಉಗ್ರಗಾಮಿಗಳು ಬ್ಲಾಗ್‌ಸ್ಪಾಟನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ, ಆದ್ದರಿಂದ ಭಾರತದ ಸರಕಾರ ಐ ಎಸ್ ಪಿಗಳಿಗೆ blogspot ಬ್ಲಾಕ್ ಮಾಡುವಂತೆ ಆಜ್ಞೆಯಿತ್ತಿದೆ ಎಂಬ ಗುಲ್ಲು ಅಂತರಜಾಲದಾದ್ಯಂತ ಇಂದು ಹಬ್ಬಿದೆ. ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ, ಆದರೆ ಅದು ನಿಜವೇ ಆಗಿದ್ದಲ್ಲಿ, ಹಾಗೆ ಬ್ಲಾಕ್ ಮಾಡುವುದರಿಂದ ಸರಕಾರಕ್ಕೂ ಇಲ್ಲಿನ ಜನತೆಗೂ ಹಾನಿಯೇ ಹೊರತು, ಬಹುಶಃ ಏನೂ ಸಾಧಿಸಿದಂತಾಗದು (ಏಕೆಂದರೆ ಪ್ರಾಕ್ಸಿ ಬಳಸಿ, ಅಥವಾ ಇನ್ನೊಬ್ಬರ ಕಂಪ್ಯೂಟರಿಗೆ ಲಾಗಿನ್ ಆಗಿ ಬ್ಲಾಗ್ ಸ್ಪಾಟ್ ಎಂದಿನಂತೆ ವೀಕ್ಷಿಸಬಹುದು).

ಹೆಚ್ಚಿನ ವಿವರ: [:http://in.rediff.com/news/2006/jul/17blog.htm|ರೀಡಿಫ್ ಲೇಖನದಲ್ಲಿ], [:http://yro.slashdot.org/yro/06/07/17/1732209.shtml|/. ಪುಟದಲ್ಲಿ].

ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೨

(ಮುಂದುವರಿದುದು)
"ಮುಂಬೈ ಪಟ್ಟಣದೊಳಗೆ ಕ್ರಿ.ಶ. ೧೮೨೩ರಲ್ಲಿ ವಿದ್ಯಾಖಾತೆಯು ಆರಂಭವಾಯಿತು . ೧೮೫೬ರಲ್ಲಿ ಕರ್ನಾಟಕದ ಜಿಲ್ಲೆಗಳೊಳಗೆ ಶಾಲೆಗಳು ಸ್ಥಾಪಿತವಾದವು. ಆಗ ಶಾಲೆಗಳಲ್ಲಿ ಮಹಾರಾಷ್ಟ್ರ ಭಾಷೆಯನ್ನೇ ಕಲಿಸುತ್ತಿದ್ದರು. ಸರಕಾರಿ ಕಾಗದಪತ್ರಗಳು ಸಹಿತ ಅದೇ ಭಾಷೆಯಲ್ಲಿ ಬರೆಯಲಾಗುತ್ತಿದ್ದವು. ಆದರೆ ೧೮೬೫ರಲ್ಲಿ ವಿದ್ಯಾಖಾತೆಯವರಿಗೆ ಕರ್ನಾಟಕದ ಭಾಷೆಯು ಕನ್ನಡವೆಂದು ತಿಳಿದುಬಂದಿತಂತೆ ! ಅಂದರೆ ಕರ್ಣಾಟಕದ ಭಾಷೆ ಕನ್ನಡವೆಂದು ತಿಳಿಯಲಿಕ್ಕೆ ಆಗಿನ ಸರಕಾರಕ್ಕೆ ಒಂಬತ್ತು ವರ್ಷಗಳೇ ಹಿಡಿದವು! ೧೮೬೫ರಲ್ಲಿ ವಿದ್ಯಾಧಿಕಾರಿಗಳಾಗಿದ ರಸೆಲ್ಲರವರು ಆ ವರ್ಷದ ತಮ್ಮ ವರದಿಯಲ್ಲಿ ಹೀಗೆ ಬರೆದಿದ್ದಾರೆ ;

ಮಾನವೀಯತೆಯ ಪ್ರತೀಕ ಮುಂಬಯಿ

(ಈ ಲೇಖನವು ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ನಿನ್ನೆಯ ದಿನ ಪ್ರಕಟವಾಗಿದೆ.)
ಮೊನ್ನೆ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ಜಗತ್ತಿಗೇ ಮಾಹಿತಿ ದೊರಕಿದೆ. ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಆದರೂ ನನಗೆ ತಿಳಿದ, ನಾನು ಅನುಭವಿಸಿದದ್ದನ್ನು ತಿಳಿಸ ಬಯಸುವೆ. ಮೊನ್ನೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಸುದ್ದಿ ಜಗತ್ತನ್ನೇ ತಲ್ಲಣಿಸಿದೆ. ಅಂದು ಮಂಗಳವಾರ, ಎಂದಿನಂತೆ ನಾನು ೬.೧೪ರ ಬೊರಿವಿಲಿ ಫಾಸ್ಟ್ ಲೋಕಲ್‍ನಲ್ಲಿ ಗೋರೆಗಾಂವಿಗೆ ಹೊರಟೆ. ಮುಂಬೈ ಸೆಂಟ್ರಲ್ ಸ್ಟೇಷನ್ನಿನವರೆವಿಗೆ ಗಾಡಿ ಸರಿಯಾಗಿಯೇ ಚಲಿಸಿತು. ಮಹಾಲಕ್ಷ್ಮಿ ಸ್ಟೇಷನ್ನಿನ ಕಡೆಗೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆಯೇ ಟ್ರೈನ್ ನಿಂತಿತು.

ಮನೋರಮಾದಲ್ಲಿ ಕನ್ನಡದ ಸ್ಥಾನ

ಮನೋರಮಾ ಎಂಬ ಪುಸ್ತಕ ಅತ್ಯಧಿಕ ಮಾರಟವಾಗುವ ಸಮಾನ್ಯ ಅರಿವಿನ ಪುಸ್ತಕ ಅಂತ ಅವರೇ ದೊಡ್ಡ ಅಕ್ಷರಗಳಲ್ಲಿ ಪುಸ್ತಕದ ಮೇಲೆ ಬರೆದುಕೊಂದಿದ್ದಾರೆ.

ಅಂತರಾಳದ ಅರ್ಥಗಳು

ಅಂತರಾಳದ ಅರ್ಥಗಳನ್ನೆಲ್ಲ ಶಬ್ದಗಳಲ್ಲಿ ಸೆರೆಹಿಡಿಯುವುದೂ ಸಾಗರದ ಅಲೆಗಳೊಡನೆ ಸ್ಪರ್ಧಿಸುವೂದೂ ಒಂದೇ... ಆದರೇನು! ಈ ವಿಶ್ವದ ಉದ್ದಗಲಕ್ಕಿಂತ ವಿಸ್ತಾರವಾಗಿ ಅರ್ಥೈಸಿಕೊಳ್ಳಬಲ್ಲ ಶಕ್ತಿಯೊಂದಿದ್ದರೆ, ಅದು ನಮ್ಮ ಆತ್ಮಶಕ್ತಿಯೆ. ಧ್ಯಾನ ಮುದ್ರೆಯಲ್ಲಿ ಆತ್ಮವು, ಸಾಗರದಾಚೆ ಏನು ಇಡೀ ಬ್ರಹ್ಮಾಂಡವನ್ನೇ ಸುತ್ತಿಬರಬಲ್ಲದೆಂಬುದು ಸಿದ್ಧಿಪಡೆದವರಿಂದ ಅನುಭವವೇದ್ಯವೇ... ಈ ವಿಚಿತ್ರ ಪ್ರಪಂಚದಲ್ಲಿ ಒಬ್ಬ ತನ್ನ ಅಸ್ತಿತ್ವಕ್ಕಾಗಿ ಹೋರಾಡುವುದೆಂದರೆ, ಸಾಗರತಳದಲ್ಲೋ, ಹಿಮಾಲಯದಲ್ಲೆಲ್ಲೋ ತನ್ನ ಅಂತಾರಾತ್ಮನಿಗೆ ಸರಿಯೆನಿಸುವ ಮೌಲ್ಯಗಳನ್ನು ಹೆಕ್ಕಿತೆಗೆದಂತೆಯೆ, ಇಲ್ಲ ಹುಡುಕಿ ತೆಗೆದಂತೆಯೇ ಆದೀತು!... ಇತರರ ಅಂತರಾಳದಲ್ಲೇನಿದೆ? ಎಂಬುದನ್ನು ಅರಿಯಲು ಸಾಧ್ಯವಾದರೆ ಮನುಷ್ಯ ಮನುಷ್ಯನಾಗಿಯೆ ಇರುತ್ತಿರಲಿಲ್ಲ.  ಅಷ್ಟಕ್ಕೂ, ಅಂತರಂಗ ತಿಳಿಸಿಕೊಡುವ ಮಾನವೀಯತೆನ್ನು ತಿರಸ್ಕರಿಸಿ ನಡೆದುಕೊಂಡರೆ ಅವನು ದಿಕ್ಕೆಟ್ಟು ಅಲೆಯುತ್ತಾ ಪಶುವಿಗೂ ಕಡೆಯಾಗುತ್ತಾನೆ.

*****