ಮಂಕುತಿಮ್ಮನ ಕಗ್ಗ
ಬಂಧನವದೇನಲ್ಲ ಜೀವಜೀವಪ್ರೇಮ
ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ
ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ
ಬಂಧನವದೇನಲ್ಲ ಜೀವಜೀವಪ್ರೇಮ
ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ
ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ
ಸ೦ಪದ ಬ೦ಧು ಮಿತ್ರರೇ,
ಮಲ್ಲೇಶ್ವರ೦ ನಲ್ಲಿ ಒ೦ದು UnderPass ಕಟ್ಟುವ ಕಾರ್ಯ ಯೋಜನೆ ಸ್ವಲ್ಪ ಕಾಲದ ಹಿ೦ದೆ ಮಾಡಲಾಗಿತ್ತು.
ನಮಗೆ ಹಿತ್ತಲ ಗಿಡ ಮದ್ದು ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ನಮ್ಮ ದೇಶದ ಹಿತ್ತಲಿನಲ್ಲಿ ಬೆಳೆಯುವ ಗಿಡ ಬೇರೆ ದೇಶಕ್ಕೆ ಹೋಗಿ ಮದ್ದು ಮಾಡಿಸಿಕೊಂಡು, ರೂಪಾಂತರವಾಗಿ ಮತ್ತೆ ನಮ್ಮದೇ ದೇಶಕ್ಕೆ "ಇಂಪೋರ್ಟೆಡ್" ಆಗಿ ಬರುವಬಗೆ ಇಲ್ಲಿದೆ ನೋಡಿ. ಸಂತಸದ ವಿಷಯವೆಂದರೆ ಈ ಗಿಡದಿಂದಲಾದರೂ ಲಂಡನ್ನಿನ ಕಂಪನಿಯೊಂದರ ಸೈಟಿನಲ್ಲಿ ಕನ್ನಡವನ್ನು ನೋಡುವಂತೆ ಆಯಿತಲ್ಲ ಎನ್ನುವುದು!
ವಿಷಯವೊಂದನ್ನು ಇನ್ನೊಬ್ಬರೆದುರು ಪ್ರಸ್ತುತಪಡಿಸುವಾಗ ವಿಷಯದ ಗಾಂಭೀರ್ಯವನ್ನು ಕಾಯ್ದುಕೊಳ್ಳುವುದು ಹಾಗು ವಿಷಯದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕವಲ್ಲವೇ. ವಾರ್ತೆಗಳನ್ನು ಬಿತ್ತರಿಸುವಾಗ ಪ್ರಕಟ ಮಾಡುವಾಗ ಇದಕ್ಕೆ ಹೆಚ್ಚು ಒತ್ತು ಕೊಡಬೇಕು.
ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ ಹುಸೇನಿಯನ್ನು ಕೋರ್ಟ್ ಮಾರ್ಷಲ್ಲುಗಳ ಬಳಿಕ ನೇತಾಡಿಸಿ ಕೊಲ್ಲಬೇಕೆಂದು ತೀರ್ಮಾನವಾಗಿತ್ತಲ್ಲ..
ಸಂಪದ ಬಳಗದ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.
ಹೊಸ ವರ್ಷದ ಶುಭಾಷಯ ತಿಳಿಸೋದಕ್ಕೆ ಅಂತ ಒಂದು ಕವನ ಬರೆಯೋಣ ಅಂತ ಕುಳಿತೆ. ಇದ್ದಕ್ಕಿದಂತೆ ಒಂದು ಹೊಸ ಯೋಚನೆ ಬಂತು. "ಒಬ್ಬನೇ ಎಲ್ಲರಿಗೂ ಶುಭಾಷಯ ಹೇಳುವ ಬದಲು, ಎಲ್ಲರೂ ಎಲ್ಲರಿಗೂ ಶುಭಾಷಯ ಹೇಳುವಂತಾದರೆ ಎಷ್ಟು ಚೆನ್ನ ಅಂತ". ನನ್ನ ಯೋಚನೆ/ಕಲ್ಪನೆ ಎಷ್ಟರ ಮಟ್ಟಿಗೆ ಸಿಂಧುವೆಂದು ನಿಜಕ್ಕೂ ನನಗೆ ಗೊತ್ತಿಲ್ಲ.
ಓಡುತ್ತಿರುವ ರಥದಿಂದ ಐದು ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಹಾಗೆಯೇ ಯೋಧನಿಂದ ಹತ್ತು ಕೈಯಳತೆ ಮತ್ತು ಮದಿಸಿದ ಆನೆಯಿಂದ ಸಾವಿರ ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಆದರೆ ದುಷ್ಟ ವ್ಯಕ್ತಿಯಿಂದ ಮಾತ್ರ ಎಷ್ಟು ದೂರವಿದ್ದರೂ ಸಾಲದು. ದುಷ್ಟನ ಸಹವಾಸ ಮಾಡದಿರುವುದೇ ಕ್ಷೇಮ!
ಹೇಗೆ (ಬೆಳಕು ನೀಡದ) ಸಾವಿರಾರು ತಾರೆಗಳಿದ್ದರೂ ರಾತ್ರಿ ಬೆಳಕನ್ನೀಯಲು ಚಂದ್ರನೊಬ್ಬನೇ ಸಾಕೋ,
(ಹಾಗೆ) ಚಾರಿತ್ರ್ಯವಿಲ್ಲದ ನೂರಾರು ಮಕ್ಕಳಿಗಿಂತ ಉತ್ತಮ ಗುಣವುಳ್ಳ ಒಬ್ಬ ಮಗ ಸಾಕು.
ಇದರಿಂದ ನನಗೆ ಬಹಳ ಸಂತೋಷವಾಗಿದೆ. ಲೇಖನವನ್ನು ಬರೆದು ಪ್ರಕಟಿಸಿದರೂ ಒಂದು ವಾರದಲ್ಲಿ ೧೫೦ ಜನ ಓದುವುದಿಲ್ಲ. ಎಚ್.ಪಿ.ಎನ್. ಮತ್ತು ಗೆಳೆಯರಿಗೆ ವಂದನೆಗಳು.
ನನ್ನ ಬರವಣಿಗೆಗೆ ಬಂದಿರುವ ಪ್ರತಿಕ್ರಿಯೆಗಳೂ ಕುತೂಹಲ ಹುಟ್ಟಿಸುತ್ತವೆ. ಅದನ್ನು ನಾನು ನಿರೀಕ್ಷಿಸಿದ್ದೆ.
ನನ್ನ ಅನುಮಾನ ಇರುವುದು, ಭಾವನೆ ಮತ್ತು ಅನುಭವಗಳನ್ನು ಅವುಗಳ ಶುದ್ಧ ಸ್ಠಿತಿಯಲ್ಲಿ ಪಡೆಯಲು, ಆ ಕ್ಷಣದಲ್ಲಿ ಅವುಗಳ ಬಗ್ಗೆ ಯೋಚಿಸುತ್ತಿರುವುದೇ ಅಡ್ಡಿಯಾಗುವುದೇ ಎಂದು. ಏಕೆಂದರೆ, ಏಕೆಂದರೆ ಅನುಭವಿಸುವ ವ್ಯಕ್ತಿಗೂ ಅನುಭವಕ್ಕೂ ಇರುವ ದೂರವೇ `ತಲ್ಲೀನತೆ'ಯನ್ನು ಅಳಿಸಿಬಿಡುವುದೇನೋ. ಇದನ್ನೇ ಕುವೆಂಪು ಅವರು
ನಾ ಮನುಜನು ನನ್ನೆದೆಯಲಿ ಅರಿವೆನ್ನುವ ಬಾವು
ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು
ಎಂದು ವಿವರಿಸಿದ್ದಾರೆ. ಇರವು ಮತ್ತು ಅರಿವುಗಳ ನಡುವಿನ ಈ ದ್ವಂದ್ವವು ಮನುಷ್ಯನಿಗೆ ಅನಿವಾರ್ಯವೇನೋ. ಇಲ್ಲವಾದರೆ, ಅವನು ಪ್ರಾಣಿಸಹಜವಾದ ಸ್ಠಿತಿಗಾಗಿ ಅಥವಾ ಶಿಶುಸಹಜವಾದ ಅಸ್ತಿತ್ವಕ್ಕಾಗಿ ಹಂಬಲಿಸಬೇಕಾಗುತ್ತದೆ.
ಭಾಷೆಯು ನಮ್ಮ ವಿಧಿಯೆಂಬ ಮಾತನ್ನು ಹಲವರು ಹೇಳಿದರೂ ಅದು ಸರ್ವಸಮ್ಮತವಲ್ಲ. ಅಲ್ಲಮನು ಹೇಳಿದಂತೆ `ಪದ' ಬೇರೆ `ಪದಾರ್ಥ' ಬೇರೆ. ಉದಾಹರಣೆಗೆ `ನೀಲಿ' ಬಣ್ಣವನ್ನು ಹೇಳುವ ಪದಗಳು ಕನ್ನಡದಲ್ಲಿ ಹತ್ತು ಇರಬಹುದು. ಆದರೆ ನೀಲಿಯ ವರ್ಣಛಾಯೆಗಳು ಅನೇಕವೆನ್ನುವುದು ನಮಗೆಲ್ಲರಿಗೂ ಗೊತ್ತು. ಭಾಷಾಲೋಕವು ಅಸಮರ್ಥವೋ ಅಥವಾ ಅದು ನಮ್ಮ ಅನುಭಲೋಕಕ್ಕೆ ಹಾಕಿದ ಅನುಲ್ಲಂಘನೀಯವಾದ ಚೌಕಟ್ಟೋ?
ಈ ಪ್ರಶ್ನೆಗೆ ಉತ್ತರವು ಸರಳವಲ್ಲ. `ಯಥಾ ವಾಚಾ ನಿವರ್ತಂತೇ ಅಪ್ರಾಪ್ಯ ಮನಸಾ ಸಹಾ' ಎಂಬ ಮಾತನ್ನು ದೇವರನ್ನು ಕುರಿತು ಹೇಳಿದಂತೆಯೇ ಲೋಕವನ್ನು ಕುರಿತೂ ಹೇಳಿರಬಹುದು.