ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆನಪಿಡಬೇಕಾದ ಕನ್ನಡ ಕಥೆ

     ಸೆಪ್ಟೆ೦ಬರ್ ೨೦೦೬ ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪಾ.ವೆ೦.ಆಚಾರ್ಯರ 'ಒ೦ದು ಅ-ನೀತಿ ಕಥೆ' ಪ್ರಕಟವಾಗಿದೆ.  ಇದೊ೦ದು ಸು೦ದರವಾದ ನೀತಿ ಕಥೆ. ಓರ್ವ ನಾಸ್ತಿಕ- ಕರ್ತವ್ಯನಿರತ ಸತ್ಪುರುಷ- ಹೇಗೆ ನರಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡುತ್ತಾನೆ ಎ೦ಬುದು ಕಥಾವಸ್ತು. ಓರ್ವ ಪಾದ್ರಿ ಈ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸಲು ಬಹಳ ಪ್ರಯತ್ನಿಸಿ ವಿಫಲವಾಗುತ್ತಾರೆ. ಮೊದಲು ನಾಸ್ತಿಕ ಮರಣ ಹೊ೦ದುತ್ತಾನೆ. ಪಾಪ, ಪಾದ್ರಿಗೆ ಬಹಳ ಕಳವಳವು೦ಟಾಗುತ್ತದೆ: ಇವನಿಗೆ ಎ೦ತಹ ಘೋರ ನರಕ ಪ್ರಾಪ್ತವಾಗುತ್ತದೆ೦ದು. ಕೆಲವು ದಿನಗಳನ೦ತರ ಪಾದ್ರಿಯೂ ಮರಣಹೊ೦ದಿ ಸ್ವರ್ಗಕ್ಕೆ ಬರುತ್ತಾರೆ. ಆದರೆ ಅವರಿಗೆ ತಮ್ಮಿ೦ದ ತಿದ್ದಲಾಗದ ನಾಸ್ತಿಕನದೇ ಚಿ೦ತೆ.  ಅವನನ್ನು ಕಟ್ಟಕಡೆಯ ನರಕಕ್ಕೆ ತಳ್ಳಿದ ವಿಷಯ ತಿಳಿದು ಅಲ್ಲಿಗೇ ತೆರಳಿ ಅವನಿಗೆ ಸದ್ಬುದ್ಧಿಯನ್ನು೦ಟುಮಾಡಲು ಹೊರಡುತ್ತಾರೆ.  ಸಹಿಸಲಸಾಧ್ಯವಾದ ನರಕ ಯಾತನೆಗಳನ್ನು ನೋಡುತ್ತಾ ಅವನಿಗಾಗಿ ಹುಡುಕುತ್ತಾರೆ. ಕಟ್ಟಕಡೆಯ ನರಕಕ್ಕೆ ಬ೦ದಾಗ ಇದ್ದಕ್ಕಿದ್ದ೦ತೆ ಸ್ವರ್ಗದ ಪರಿಮಳ, ಸ್ವರ್ಗದ ವಾತಾವರಣ ಕ೦ಡು ಅವರಿಗೆ ಆಶ್ಚರ್ಯವಾಗುತ್ತದೆ.  ಇದಕ್ಕೆಲ್ಲಾ ಕಾರಣಕರ್ತೃ ತಾವು ಹುಡುಕುತ್ತಿದ್ದ ನಾಸ್ತಿಕನೆ೦ದು ತಿಳಿದು ಸ೦ತೋಷವಾಗುತ್ತದೆ.  ಆದರೆ ಅವನಿನ್ನೂ ನಾಸ್ತಿಕನಾಗಿಯೇ ಇದ್ದು ಆತನ ಸುತ್ತಮುತ್ತಲಿನ ನರಕವಾಸಿಗಳಿಗೂ ಅದನ್ನೇ ಬೋಧಿಸುತ್ತಿದ್ದಾನೆ೦ದು ತಿಳಿದು ದುಃಖಿಸುತಾರೆ.  ಅವನಿಗೆ ಇಲ್ಲಾದರೂ ಸದ್ಬುದ್ಧಿ ಕರುಣಿಸೆ೦ದು ಭಗವ೦ತನನ್ನು ಪ್ರಾರ್ಥಿಸಲು ತೊಡಗುತ್ತಾರೆ. ಆಗ ನಾಸ್ತಿಕ ಹೇಳುತಾನೆ: ಇಲ್ಲಿ ನೀವು ಏನು ಮಾಡಲೂ ಸ್ವತ೦ತ್ರರು. ಆದರೆ ಇಲ್ಲಿ ದೇವರ ಪ್ರಾರ್ಥನೆ ನಿಷಿದ್ಧ.

ಹೀಗೇಕೆ...???

 ಹೀಗೇಕೆ...???

ಹಲವು ದಿನಗಳಿ೦ದ
ಚಡಪಡಿಸುತಲಿದ್ದೆ,
ಕಣ್ಮುಚ್ಚಿದರೆ
ಕಣ್ಣಿಗೆ ನಿದ್ದೆಯಿಲ್ಲ;
ಹಸಿವಾದರೂ
ತಿನ್ನಲು ಮನಸ್ಸಿಲ್ಲ;
ಕೆಲಸದಲ್ಲಿ
ಮಗ್ನತೆಯಿಲ್ಲ;
ಯೋಚನೆಯಲ್ಲಿ
ತಿರುಳಿಲ್ಲ;
ಮೊಗದಲಿ ನಗುವಿಲ್ಲ;
ಆಡಲು ಮಾತು
ಬಾರದಲ್ಲ;
ಎದೆ ಭಾರವಾಗಿದೆಯೆಲ್ಲಾ!

ನಾನು ಮತ್ತು ನನ್ನ ಹಲ್ಲುಗಳು

ಏನಪ್ಪಾ, ನಿನಗೆ ಬೇರೆ ಯಾವ ವಿಷಯವೂ ಸಿಕ್ಕಲಿಲ್ಲವೇ? ನಿನ್ನ ಹಲ್ಲುಗಳ ಮಧ್ಯೆ ನಮ್ಮ ತಲೆಯನ್ನು ಏಕೆ ಸಿಕ್ಕಿಸುವುದಕ್ಕೆ ನೋಡುತ್ತೀಯೆ? ಎ೦ದು ಪ್ರಶ್ನೆ ಕೇಳಬೇಡಿ. ಏನೋ ನನ್ನ ಸ೦ಕಟವನ್ನು ನಿಮ್ಮ ಮು೦ದೆ ಹೇಳಿಕೊ೦ಡರೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಬಹುದು. ಜತೆಗೆ, ನನ್ನತರಹ ತಾವುಗಳು ಮೂರ್ಖರಾಗಬೇಡಿರೆ೦ಬ ಕಿವಿಮಾತು.

ತ್ಯಾಗ-ಭೋಗದ ನಡುವೆ..

ತ್ಯಾಗದಲ್ಲಿ ಸುಖವಿದೆ ಎಂಬುದು ತಾತ್ವಿಕ ನಿಲವು.
ಅದೇ ಭೋಗದಲ್ಲಿ ಸುಖವಿದೆ ಎಂಬುದಷ್ಟೇ ಸಾತ್ವಿಕ ನಿಲವಾಗಲಾರದು. ಹೇಗೆ ಬರೀ ತ್ಯಾಗವೇ ಜೀವನವಲ್ಲವೋ ಹಾಗೆಯೆ ಬೋಗವೂ ಜೀವನವಲ್ಲ. ಜೀವನದಲ್ಲಿ ತ್ಯಾಗ-ಭೋಗ ಎರಡೂ ಸಮನಾಗಿರಲಾರವು; ಒಂದೇ ತಕ್ಕಡಿಯಲ್ಲಿ ತೂಗಲಾರವು.

ಕೆಲವು ಹನಿಗವನಗಳು

---------------------------------------
ಕನ್ನಡ ಪೂಜೆ
---------------------------------------
ಕನ್ನಡವನ್ನು ಕಂಡರೆ ನಮಗೆ ಅಪಾರ ಹೆಮ್ಮೆ,
ಆದರ, ಪೂಜ್ಯ ಭಾವನೆ.
ಹಾಗಾಗಿಯೇ ಅದನ್ನು ಬಳಸುವುದೂ ಕಡಿಮೆ,
ಪೂಜಿಸುತ್ತೇವೆ ಸುಮ್ಮನೆ!

ಬಾರೊ ಸಂತೆಗೆ ಹೋಗೋಣ ಬಾ....

ಮನೆಗೆ ಬೇಕಾದ ಸಾಮಾನುಗಳನ್ನು ತರುವ ಕೆಲಸ 4-5 ದಿನಗಳಿಂದ ಬಾಕಿ ಇತ್ತು. ವಾರಾಂತ್ಯಕ್ಕಿಂತ ಒಳ್ಳೆಯ ದಿನ ಇನ್ನ್ಯಾವುದಿದೆ ಅಂತ ನಾನು, ನನ್ನಾಕಿ ಹತ್ತಿರದ ವಾಣಿಜ್ಯ ಸಂಕೀರ್ಣವೊಂದಕ್ಕೆ ಹೋದೆವು. ತಳ್ಳುವ ಗಾಡಿಯೊಂದನ್ನು ಎಳೆದುಕೊಂಡು ನಮಗೆ ಬೇಕಾದ (ಅದಕ್ಕಿಂತ ಹೆಚ್ಚಾಗಿ ಬೇಡವಾದ!) ಎಲ್ಲಾ ಸಾಮಾನುಗಳನ್ನೂ ತುಂಬಿಕೊಳ್ಳುತ್ತಾ ಸಾಗಿದೆವು. ಯಾವುದರ ಬೆಲೆ ಎಷ್ಟು ಎಂದು ಯಾರನ್ನೂ ಕೇಳುವ ಪ್ರಮೇಯವೇ ಬಾರದಂತೆ ಪ್ರತಿ ವಸ್ತುವಿನ ಮೇಲೂ ಅದರ ಬೆಲೆ ಎದ್ದು ಕಾಣುವಂತೆ ನಮೂದಿಸಿದ stickers ಇದ್ದವು. ಖರೀದಿ ಮುಗಿದ ತಕ್ಷಣ ಹಣ ಪಾವತಿಸುವ ಸರದಿಯಲ್ಲಿ ನಿಂತು ಕಾದೆವು. ನಮ್ಮ ಸರದಿ ಬಂದಾಗ, 'ಕೌಂಟರ್'ನಲ್ಲಿ ಇದ್ದ ಮಹಿಳೆ ತನ್ನ ಅಭ್ಯಾಸಬಲದಿಂದ ಎಂಬಂತೆ ಮುಗುಳ್ನಕ್ಕು, "ಹಲೋ, ಹೌ ಆರ್ ಯು?" ಎಂದು ಕೇಳಿ, ನಮ್ಮ ಉತ್ತರಕ್ಕೂ ಕಾಯದೇ, ಎಲ್ಲವನ್ನೂ ಬಿಲ್ ಮಾಡಿದಳು. ಹಣ ತೆತ್ತು ಹೊರಬರುತ್ತಿದ್ದಂತೆ ಯಾಕೋ ಇದ್ದಕ್ಕಿದ್ದಂತೆ ಒಂದು ಯೋಚನೆ ಬಂತು: "ನಮ್ಮ ಈ ವ್ಯವಹಾರಕ್ಕೆ ಸುಮಾರು 40 ನಿಮಿಷ ತಗುಲಿದೆ. ಇಡಿಯ 40 ನಿಮಿಷದಲ್ಲಿ ನಾವು ಯಾರ ಜೊತೆಯಾದರೂ ಸಂಭಾಷಣೆ ನಡೆಸಿದೆವಾ?..". ಏನೋ ಒಂದು ರೀತಿಯ ನಿರ್ವಾತದ ಅನುಭವ.

ಎಲ್ಲೆಲ್ಲಿಯೂ ಎದಿರು ಸಿಗುವವರು

ಫಿನ್ಲೆಂಡಿಗೆ ನಾನು ಮೊದಲ ಸಲ ಒಂದೂವರೆ ತಿಂಗಳ ಕಾಲ ಹೋದದ್ದು ೨೦೦೧ರಲ್ಲಿ. ಸುರೇಖಳಿಗೆ ಅಲ್ಲಿ ಆರ್ಟಿಸ್ಟ್-ಇನ್-ರೆಸಿಡೆನ್ಸಿ ಸಿಕ್ಕಿತ್ತು (ಮನೆಯೊಳಗಿರುವ ಕಲಾವಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಶೈಲಿಯಲ್ಲಿ ಕರೆಯಬಹುದು). ನಂತರ ಅದೇ ಸ್ಕಾಲರ್‌ಷಿಪ್ ಗೆಳೆಯ ಪ್ರಕಾಶ್ ಬಾಬುವಿಗೆ. ನಂತರ ನೂರು ಕೋಟಿ ಮಂದಿಯಿರುವ ಸಮಗ್ರ ಭಾರತದಲ್ಲಿ ಅದಕ್ಕೆ ಬಲಿ ಎಚ್. ಎ.ಅನಿಲ್ ಕುಮಾರ್, ಅಂದರೆ ನಾನು. ಮತ್ತು ಇನ್ನೂ ಅಶ್ಚರ್ಯವೆಂದರೆ ನಮ್ಮೆಲ್ಲರ ಆಯ್ಕೆಯಾದದ್ದು ಪ್ಯಾರಿಸಿನ ಯುನೆಸ್ಕೊ ಆಫೀಸಿನಲ್ಲಿ! ಆಯ್ಕೆ ಸಮಿತಿಯಲ್ಲಿ ಬಹುಮಂದಿಗೆ ಭಾರತವು ಭೂಪಟದಲ್ಲೆಲ್ಲಿದೆಯೆಂದೇ ತಿಳಿದಿರಲಾರದು. ಸುರೇಖಳೊಂದಿಗೆ ಇನ್ನೆರೆಡು ಸ್ಟುಡಿಯೊಗಳಲ್ಲಿ ಪೊಲ್ಯಾಂಡಿನ ಕಲಾ ಇತಿಯಾಸಕಾರ್ತಿ ಅಗ್ನೇಷ್ಕ ಹಾಗೂ ಬ್ರೆಜಿಲ್‌ನ ಕಲಾವಿದೆ ಕಾರ್ಲ ಗ್ವಾಲಿಯಾರ್ಜಿ. "ನಮ್ಮೂರು ಗ್ವಾಲಿಯರ್ ಜಿ" ಎಂದು ಭಾರತದಲ್ಲಿ ಹೇಳಿದರೆ ನಂಬುವಷ್ಟು ಆಕೆ ಪಂಜಾಬಿಯಾಗಿ ಕಾಣುತ್ತಿದ್ದಳು. ಆದ್ದರಿಂದ ಸುರೇಖಳ ಒಟ್ಟಿಗೆ ಒಬ್ಬ ಭಾರತೀಯನೊಬ್ಬ ಭಾರತೀಯ, ಪೊಲ್ಯಾಂಡ್, ಬ್ರೆಜಿಲ್ ದೇಶಗಳಿಗೆ ಸೇರಿದ ಮೂವರು ಕಲಾವಿದೆಯರೊಂದಿಗೆ ಫಿನ್ಲೆಂಡ್ ನೋಡಿದ್ದು ಒಂದು ಜೀರ್ಣವಾಗದ ವಿಷಯವಾಗಿತ್ತು. ದಿನದ ಕೊನೆಗೆ ನಾನು ಯಾವ ದೇಶದಲ್ಲಿದ್ದೇನೆಂಬುದೇ ಮರೆತುಹೋಗುತ್ತಿತ್ತು. ಬ್ರೆಜಿಲಿನ ಫುಟ್ಬಾಲ್, ಸಲ್ಮಾ ಹೈಕಳ ಫ್ರಿದ ಕಾರ್ಲೋ, ಪೊಲ್ಯಾಂಡಿನ ಪೊಲ್ಯಾಂಸ್ಕಿ, ವಿಸ್ಕಿ, ಅಗ್ನೇಷ್ಕ, ವೊಡ್ಕ ಇತ್ಯಾದಿಗಳ ಕಾಕ್‌ಟೈಲ್ ಆಗಿಬಿಟ್ಟಿರುತ್ತಿತ್ತು ನನ್ನ ಎರಡು ಕಿವಿಗಳ ಮಧ್ಯ-ಪ್ರದೇಶ.