ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!

ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು.ದೋಣಿ ಯಾತ್ರೆ ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್‌ ಟೇಕರ್' ಮಿನ್ನ ಹೆನ್ರಿಕ್‌ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿದೆ. ಅಲ್ಲಿನ ಕಲಾಶಾಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು. "ಬೇಜಾರಾಗುತ್ತಿದೆಯ? ಊರಿಗೆ ಹೋಗಬೇಕೆನಿಸುತ್ತಿದೆಯ? ಒಂಟಿ ಎನಿಸುತ್ತಿದೆಯ?" ಎಂದೆಲ್ಲ ಒಮ್ಮೆ ಕೇಳಿದಳು. ಪಾಪ ಎಂದುಕೊಂಡು ಬಿಯರ್ ಕೊಡಿಸಿದೆ. "ಹೀಗೆ ಹೇಳಿ ಊರಿನ ನೆನಪು ಮಾಡುತ್ತಿದ್ದೀಯ" ಎಂದೆ. ಅಲ್ಲಿ ನಾನು ಭೇಟಿ ಮಾಡಿದ ಕಲಾವಿದರ ಹೆಸರುಗಳನ್ನೆಲ್ಲ ಆಕೆಗೆ ದಿನನಿತ್ಯ ಹೇಳುತ್ತಿದ್ದೆ. "ಎಸ್ಕೊ ಮನಕ್ಕೊ ಗೊತ್ತೆ? ಯಾರ್ಮ ಪುರಾನನ್ನ ಭೇಟಿ ಮಾಡಿದೆ, ಯಾನ್ ಕಾಯ್ಲಾ ಸಿಕ್ಕಿದ್ದ" ಎಂದೆಲ್ಲ ಹೇಳುತ್ತಿದ್ದಾಗ ಆಕೆ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು. ನೆನಪಿರಲಿ ಫಿನ್ನಿಶ್ ಜನ ನಗುವುದಿಲ್ಲ, ನಗದವರ ಮುಖಭಾವ ಓದುವುದು ಸುಲಭವಲ್ಲ. "ಹೇಗೆ ನೀನು ಹೆಸರುಗಳನ್ನು ಜ್ಞಾಪಕವಿರಿಸಿಕೊಳ್ಳುವೆ?" ಎಂದು ಕೇಳಿದಳು.

ಸಾವಿರ ಪಾಯಿಂಟ್ ಸರದಾರ ! (- ಇದು Vote of thanks ಅಲ್ಲ!)

ನಾನು ಜನವರಿ ೨೦೦೬ ರ ಹೊತ್ತಿಗೆ ಸಂಪದದಲ್ಲಿ ಸದಸ್ಯನಾದೆ. ಈವರೆಗೆ ಓದಿದ ಒಳ್ಳೆಯ ವಿಷಯಗಳನ್ನು 'ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ' ಎಂಬಂತೆ ಓದುವವರಿಗೆ ತಿಳಿಸೋಣವೆಂದು ಬರೆಯಲಾರಂಭಿಸಿದೆ. ಬರವಣಿಗೆಗೆ ಇಲ್ಲಿ ಪಾಯಿಂಟ್ ನೀಡುವ ವ್ಯವಸ್ಥೆ ಇದೆ. ಬ್ಲಾಗ್ ಗಳಿಗೆ ಕಡಿಮೆ , ಲೇಖನಗಳಿಗೆ ಹೆಚ್ಚು ಎಂತೆಲ್ಲ ಇದೆ. ಹೆಚ್ಚಿನ ಪಾಯಿಂಟ್ ಪಡೆದವರ ಪಟ್ಟಿಯೂ ಲಭ್ಯವಿತ್ತು . ಅದನ್ನೇಕೋ ವ್ಯವಸ್ಥಾಪಕರು ತೆಗೆದು ಹಾಕಿದ್ದಾರೆ ಇರಲಿ. ಅಂದಿನಿಂದ ಈವರೆಗೆ ಆಗಾಗ ಚಿಕ್ಕ ಪುಟ್ಟ ಲೇಖನ , ಅದು-ಇದು ಬರೆದಿದ್ದೇನೆ. ಎರಡು ಮೂರು ಬಾರಿ( ಅಪರೋಕ್ಷವಾಗಿ) ಭಾಷಾಚರ್ಚೆಗೂ ಕಾರಣವಾಗಿದ್ದೇನೆ ಅದರಿಂದ ಎಷ್ಟೋ ನಾನರಿಯದ ವಿಷಯಗಳೂ ತಿಳಿದು ಬಂದಿವೆ. ( ಶ್ರೀಯುತರುಗಳಾದ ಸಂಗನಗೌದರು , ಮಹೇಶ್ ಭೋಗಾದಿ , ಇಸ್ಮಾಯಿಲ್ , ಬೆನಕ , ಪವನಜ ಮುಂತಾದವರಿಂದ . ಶ್ರೀ ತಳಕಿನ ಶ್ರೀನಿವಾಸ್ ಅವರಿಂದ ಸದಾ ಪ್ರೋತ್ಸಾಹವು ಸತತವಾಗಿತ್ತು)

ಇನ್ನೊಂದು ಒಳೆಯ ಝೆನ್ ಕಥೆ :- ಒಮ್ಮೊಮ್ಮೆ ಹಾಗಾಗುತ್ತದೆ!

ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
"ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ.

OLN ರವರ ಪುಸ್ತಕ - ಲೋಕಾಂತ ಏಕಾಂತ

ಇತ್ತೀಚೆಗೆ ಬೆಂಗಳೂರ್‍ಇಗೆ ಹೋದಾಗ ಸಪ್ನ ಪುಸ್ತಕದಂಗಡಿಗೆ ಹೋಗಿದ್ದೆ . ಅಂಗಡಿ ಮುಚ್ಚಲು ಹತ್ತೇ ನಿಮಿಷಗಳು ಇದ್ದವು . ಅವಸರದಲ್ಲಿ ನಾನು ತೆಗೆದುಕೊಂಡ ಪುಸ್ತಕಗಳಲ್ಲಿ OLN ರವರ ಪುಸ್ತಕ ವೂ ಒಂದು .

ಕಿಟಕಿಯಲ್ಲಿ ಕಂಡಾತ

ಒಂದು ದಿನ ಮಧ್ಯಾಹ್ನ ಊಟ ಮುಗಿಸಿ ಕಿಟಕಿಯಾಚೆ ನೋಡುತ್ತಾ ಕುಳಿತಿದ್ದೆ.

ಸ್ಥಳ: ಮುಂಬೈಯ ದಾದರ್‌ನಲ್ಲಿರುವ ಹಳೆಯ ಕಟ್ಟಡವೊಂದರ ಮೂರನೆಯ ಮಹಡಿ. ಕಿಟಕಿಯಿಂದ ಹೊರಕ್ಕೆ ನೋಡಿದರೆ ಅಹ್ಲಾದ ತರುವಂಥದ್ದೇನೂ ಅಲ್ಲಿರಲಿಲ್ಲ. ಆದರೆ ಒಳ್ಳೆಯ ಗಾಳಿ ಬರುತ್ತಿತ್ತು. ಹಾಗಾಗಿ ಕಿಟಕಿಯಿಂದ ಆಕಾಶ ನೋಡುತ್ತಾ ಕುಳಿತುಕೊಳ್ಳುವುದು ಖುಷಿ ಕೊಡುತ್ತಿತ್ತು.

ಈ ಹೊತ್ತಿನಲ್ಲಿ ಒಂದು ಅಸಾಧಾರಣ ವಿದ್ಯಮಾನ ಘಟಿಸಿತು. ಕಪ್ಪಗಿನ ಸ್ಥೂಲ ದೇಹಿಯೊಬ್ಬ ನನ್ನೆದುರು ನಿಂತಿರುವಂತೆ ಭಾಸವಾಯಿತು. ಆತ ಕಿಟಕಿಯ ಹೊರಗಿದ್ದುದರಿಂದ ಶರೀರದ ಮೇಲಿನರ್ಧ ಭಾಗ ಮಾತ್ರ ನನಗೆ ಕಾಣಿಸುತ್ತಿತ್ತು. ಹೀಗೆ ಸುಖಾಸುಮ್ಮನೆ ಯಾರೋ ಕಂಡಂತಾಗುವುದು, ಯಾವುದೋ ಶಬ್ದ ಕೇಳಿಸಿದಂತಾಗುವುದು ಇದೆಲ್ಲಾ ಭ್ರಾಂತಿ ಎಂದು ಮನಶ್ಶಾಸ್ತ್ರದ ಅಧ್ಯಯನದ ವೇಳೆ ಕಲಿತದ್ದು ನೆನಪಿಗೆ ಬಂತು. ಈ ಮೊದಲು ನನಗೆ ಯಾವಾಗಲೂ ಹೀಗಾಗಿರಲಿಲ್ಲ.

ಬರುವ ವಾರಾಂತ್ಯ ಸಂಪದ ಲಭ್ಯವಿರುವುದಿಲ್ಲ

ಸ್ನೇಹಿತರೆ,

ಈ ವಾರಾಂತ್ಯ ಕೆಲವು maintenance ಕೆಲಸಗಳನ್ನು ಹಮ್ಮಿಕೊಂಡಿರುವ ಸಲುವಾಗಿ ಸಂಪದ
ಎರಡು ದಿನಗಳ ಮಟ್ಟಿಗೆ ಲಭ್ಯವಿರುವುದಿಲ್ಲ. ಆದರೆ ಸಂಪದ ಸರ್ವರ್ ನಲ್ಲಿ ಇರುವ ಇತರೆ
ತಾಣಗಳು ಕಾರ್ಯನಿರ್ವಹಿಸುತ್ತಿರುತ್ತವೆ.

ಮಿಲಿ, ಆನಂದ್, ಗುಡ್ಡಿ ಯಂತಹ ಶ್ರೇಷ್ಟ ಹಿಂದಿ ಚಿತ್ರ ನಿರ್ಮಾಪಕ, ಹೃಷೀಕೇಶ್ ಮುಖರ್ಜಿ ನಿಧನ !

ಹಿಂದೀ ಚಿತ್ರರಂಗದ ಮಹಾನ್ ಹಸ್ತಿ, ಶ್ರೇ‍ಷ್ಟ ನಿರ್ದೇಶಕ, 'ಹೃಷಿದಾ', ತಮ್ಮ ೮೪ ನೆಯ ವಯಸ್ಸಿನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ರವಿವಾರ, ೨೭ನೆ ಆಗಸ್ಟ್, ೨೦೦೬ ರಂದು ನಿಧನರಾದರು.

ಒಂಟಿಕೊಪ್ಪಲ್ ೮ನೇ ಕ್ರಾಸ್ ಗಣಪತಿ ಮಹೋತ್ಸವ

ಮೈಸೂರಿನ ಒಂಟಿಕೊಪ್ಪಲ್ ೮ನೇ ಕ್ರಾಸಿನಲ್ಲಿ ಕಳೆದ ೪೫ ವರ್ಷಗಳಿಂದ ಗಣಪತಿ ಮಹೋತ್ಸವವನ್ನು ಆಚರಿಸುತ್ತಿದ್ದಾರೆ.

ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ.

ಈ ತಲೆಬರಹದ ಬರಹವು ('ಶೀರ್ಷಿಕೆ'ಗೆ ಬದಲಾಗಿ 'ತಲೆಬರಹ', 'ಲೇಖನ'ದ ಬದಲಾಗಿ 'ಬರಹ' ಬಳಸಿದ್ದೇನೆ- 'ಉಪಯೋಗಿ'ಸಿಲ್ಲ . ಇಂದಿನ ಆಂಡಯ್ಯಗೆ ಧನ್ಯವಾದಗಳು. ಈ 'ತಲೆಬರಹದ ಬರಹ ' ಎಂಬುದು ವಿಚಿತ್ರವಾಗಿ ಕಾಣಿಸುವದು ಅಲ್ಲವೇ ? 'ತಲೆಕಟ್ಟಿನ' ಎನ್ನಬೇಕಿತ್ತೇನೋ . ಇರಲಿ ) ನಿನ್ನೆಯ ಪ್ರಜಾವಾಣಿ (೨೭-೮-೦೬) ನಲ್ಲಿದೆ . ಓದಿ. ಅಲ್ಲಿ ಹೇಳಿರುವದೇನೆಂದರೆ - ಕನ್ನಡಿಗರು ಯಾವತ್ತೂ ದ್ರಾವಿಡರೊಂದಿಗೆ , ದ್ರಾವಿಡ ಭಾಷೆಯೊಂದಿಗೆ ಗುರುತಿಸಿಕೊಂಡಿಲ್ಲ . ಮತ್ತು ಕಾಲ್ಡ್ ವೆಲ್ ಮಹಾಶಯನು ಕನ್ನಡ ತೆಲುಗು ಮತ್ತು ಕೆಲವು ವಾಯುವ್ಯ ಭಾರತದ ಭಾಷೆಗಳನ್ನು ಒಂದು ವರ್ಗವನ್ನಾಗಿಸಿ ಅದಕ್ಕೆ 'ದ್ರಾವಿಡಿಯನ್' ಎಂಬ ಹೆಸರಿಟ್ಟಿದ್ದಾನೆ ಅಷ್ಟೇ)