ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡಾ. ಎ. ಎನ್. ಮೂರ್ತಿರಾಯರು- ದೇವರ ಬಗ್ಗೆ:

ಎನ್. ಮೂರ್ತಿರಾಯರು- ದೇವರ ಬಗ್ಗೆ: 103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ ! 'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -ಅಷ್ಟೆ.!' 'ಇತರರಿಗೆ ದೈವಭಕ್ತಿಯಿಂದ ಶಾಂತಿ ಬರುವುದಾದರೆ ಬರಲಿ; ಅದರಿಂದ ಸಜ್ಜನಿಕೆಗೆ ಉತ್ತೇಜನ ದೊರಕುವುದಾದರೆ ಅವರ ದೈವ ಭಕ್ತಿ ಸಂತತವಾಗಿ ಇರಲಿ' ಎಂದು ಹಾರೈಸಲೂ ನಾನೂ ಸಿಧ್ಧ. ನನಗೆ ನಂಬಿಕೆ ಬರಲೊಲ್ಲದು- ಅದು ನನ್ನ ತಪ್ಪಲ್ಲ.!

ಸುಧಾ ಹಾಸ್ಯ ವಿಶೇಷಾಂಕ (ಏಪ್ರಿಲ್ ೬ ರ ಸಂಚಿಕೆ )

ಸಾಮಾನ್ಯವಾಗಿ ಹಾಸ್ಯ ವಿಶೇಷಾಂಕ ಎಂದರೆ ಪ್ರಯತ್ನಪೂರ್ವಕವಾಗಿ ಹೊಸೆದ ಹಾಸ್ಯದ ಲೇಖನಗಳು ಇಉತ್ತವೆ. ಆದರು ಒಮ್ಮೊಮ್ಮೆ ಅತಿ ಉತ್ತಮ ಲೇಖನಗಳೂ ಇರುತ್ತವೆ.

SMS ಎಂಬ ನವ ಜಾನಪದ

ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್‌ ಹೊಡೆಸುವ ಲೆಕ್ಚರರ್‌ ಇನ್ನಷ್ಟು ಬೋರ್‌ ಹೊಡೆಸುವ ಲೆಕ್ಚರ್‌ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್‌ಎಂಎಸ್‌ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್‌ಎಂಎಸ್‌ಗೆ ಮೊರೆಹೋಗಿ ಇರವು ಮರೆಯಬಹುದು.

ಧನಾತ್ಮಕ (Positive Thinkers)ಚಿಂತಕರಾಗೋಣ!

ಮೊನ್ನೆ ಎಲ್ರೂ ರಸವತ್ತಾಗಿ, ಖುಷಿಯಾಗುವಂತೆ ಸ್ಮಿತಪೂರ್ವಭಾಷಿಯ ಗುಣಗಾನಗಳನ್ನು ಮಾಡುತ್ತಿರುವಾಗ, ಐತಾಳರು ಪೋಸ್ಟ್ ಮಾಡಿದ ಕಾಮೆಂಟಿನಲ್ಲಿ ಅವರಿಗೆ ಗೊತ್ತಿದೆಯೋ ಇಲ್ವೋ ಆದ್ರೆ ನನಗೆ ಅನೇಕ ಸ್ವಾರಸ್ಯಗಳು ಗೋಚರವಾದವು. ಅಲ್ಲಿಯೇ ಈ ರಿಪ್ಲೈ ಕೊಡಬಹುದಿತ್ತು ಆದರೆ ಎಲ್ಲರ ಕಣ್ಣಿಗೂ ಈ ಸ್ವಾರಸ್ಯಗಳು ಕಣ್ಣಿಗೆ ಬೀಳದೆ ಹೋಗಬಹುದು ಅನ್ನಿಸಿತು ಅದಕ್ಕೆ ಸೆಪರೇಟಾಗಿ ಬ್ಲಾಗ್ ಮಾಡಿದ್ದೀನಿ. ಸ್ವಲ್ಪ ದೀರ್ಘ ಅನ್ನಿಸಿದ್ರೂ ಪರವಾಗಿಲ್ಲ ಓದಿರಿ. ಇದನ್ನು ನಾನು ಐತಾಳರ ಮೇಲೆ ಆಗ್ರಹದಿಂದ ಬರೆಯುತ್ತಿದ್ದೇನೆ ಅಂತ ದಯವಿಟ್ಟು ಅನ್ಕೋಬೇಡ್ರಿ. ಆಸಕ್ತಿಯುಳ್ಳವರಿಗೆ ಈ ಪಾಯಿಂಟುಗಳು ಒಳ್ಳೆ ಸಂತಸವನ್ನಂತು ನೀಡಬಲ್ಲವು.

ಶುಭಂ

ಕನ್ನಡ ಚಲನ ಚಿತ್ರರಂಗ ಬದಲಾಗುತ್ತಿದೆ.ಇತ್ತೇಚೆಗೆ ಮಠ,೭ ಓ ಕ್ಲಾಕ್ ಮತ್ತು ಮೈ ಆಟೋಗ್ರಾಫ್ ನೋಡಿದ್ದೆ.ಪ್ರತಿಯೊಂದು ವಿಭಿನ್ನವಾಗಿತ್ತು.

ಬಾದಲವ ಬರಸಾನ ಲಾಗೆ

ಈ ಕತೆಯನ್ನು ಬರೆದಿದ್ದು ಐದು ವರ್ಷಗಳ ಹಿಂದೆ. ಹಾಸಣಗಿ ಗಣಪತಿ ಭಟ್ಟರ `ಮಾನ್ಸೂನ್‌ ಮೆಲೋಡೀಸ್‌' ಅನ್ನು ಪದೇ ಪದೇ ಕೇಳುತ್ತಿದ್ದ ಕಾಲ ಅದು. ಅವರ ಸಂಗೀತವನ್ನು ಕೇಳುತ್ತ ಕೇಳುತ್ತ ಒಂದು ದಿನ ಸಂಜೆ ಉದಯವಾಣಿಯ ಆಫೀಸಿನಲ್ಲಿ ಕುಳಿತು ಬರೆದ ಕತೆ ಇದು. ಈ ಕತೆ ಬರೆಯುವಾಗ ನನ್ನೊಳಗೆ ಧಾರಾಕಾರವಾಗಿ ಸುರಿದ ಭಾವನೆಗಳ ಮಳೆಗೆ ಒದ್ದೆಯಾದ ಮನಸ್ಸು ಇನ್ನೂ ಒಣಗಿಲ್ಲ. ಓದಿ ನೋಡಿ. ಅನಿಸಿದ್ದನ್ನು ಹೇಳಿ

ವಿನ್‌-98ನಲ್ಲಿ ಯೂನಿಕೋಡ್‌

ಸಂಪದ ಆಗಷ್ಟೇ ಆರಂಭವಾಗಿತ್ತು. ಇಷ್ಟೂ ಕಾಲವೂ ಕಚೇರಿ ಕಂಪ್ಯೂಟರ್‌ಗಳಲ್ಲಿಯೇ ನನ್ನ ಕಲಿಕಾ ಸಾಹಸವನ್ನು ನಡೆಸಿದ್ದ ನಾನು ಕೊನೆಗೂ ಒಂದು ಕಂಪ್ಯೂಟರ್‌ ಕೊಂಡಿದ್ದೆ. ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಯೂನಿಕೋಡ್‌ ಸವಲತ್ತಿದ್ದರೂ ಅದರಲ್ಲಿ ಇಂಟರ್ನೆಟ್‌ ಇರಲಿಲ್ಲ. ಅದನ್ನು ಪಡೆಯುವ ಯೋಚನೆಯೂ ನನಗಾಗ ಇರಲಿಲ್ಲ.

ಮ್ಯಾಕ್ ನೊಂದಿಗೆ ವಿಂಡೋಸ್

ವಿಂಡೋಸ್ ನೊಂದಿಗೆ ಲಿನಕ್ಸ್ dual boot ಮಾಡಿ ಕೆಲವರು ಬಳಸಿದ್ದೀರಿ. ವಿಂಡೋಸ್ ನಲ್ಲಿ ಲಿನಕ್ಸ್ ಎಮ್ಯುಲೇಟರ್ ಬಳಸಿ ಕೆಲವರು ಉಪಯೋಗಿಸಿದ್ದೀರಿ.

ಲೋಕಲ್ ಅನುಭವ

ಮಾಮೂಲಿನಂತೆ ಇಂದು ಬೆಳಗ್ಗೆ ೭.೧೫ಕ್ಕೆ ಬ್ಯಾಂಕಿಗೆ ಹೋಗಲು ಗೋರೆಗಾಂವ್ ರೈಲ್ವೇ ಸ್ಟೇಷನ್ನಿಗೆ ಹೋದೆನು. ಆಗ ೭.೧೦ರ ಫಾಸ್ಟ್ ಗಾಡಿ ಬರುತ್ತಿರುವುದು ಕಾಣಿಸಿತು. ಈ ಗಾಡಿಯಲ್ಲಿ ಹೋದರೆ ೭.೫೦ಕ್ಕೆ ಚರ್ಚ್‍ಗೇಟ್ ತಲುಪುತ್ತೇನೆ, ಅದರ ಬದಲಿಗೆ ನಂತರದ ೭.೧೪ ರ ಸ್ಲೋ ಗಾಡಿಯಲ್ಲಿ ಹೋದರೆ ೮.೦೦ ಘಂಟೆಗೆ ಚರ್ಚ್‍ಗೇಟ್ ತಲುಪುತ್ತೇನೆ. ಅಲ್ಲಿಂದ ನಮ್ಮ ಆಫೀಸಿಗೆ ಹೋಗಲು ಮೊದಲ ಬಸ್ಸು ಇರುವುದು ೮.೧೫ಕ್ಕೆ. ಯಾವುದರಲ್ಲಿ ಹೊರಟರೂ ತೊಂದರೆ ಇಲ್ಲ. ಆದರೆ ಸ್ಲೋ ಗಾಡಿಯಲ್ಲಿ ಹೊರಟರೆ ಗೋರೆಗಾಂವಿನಲ್ಲೇ ಕುಳಿತುಕೊಳ್ಳಲು ಅವಕಾಶ ಸಿಗುತ್ತದೆ ಆದರೆ ಫಾಸ್ಟ್ ಗಾಡಿಯಲ್ಲಿ ಹೊರಟರೆ ಬಾಂದ್ರಾವರೆವಿಗೆ ನಿಂತು ಹೋಗಬೇಕು, ನಂತರ ಕುಳಿತುಕೊಳ್ಳಲು ಅವಕಾಶ ಸಿಗುವುದು ಮತ್ತು ಅಲ್ಲಿಂದ ಚರ್ಚ್‍ಗೇಟಿಗೆ ೨೫ ನಿಮಿಷಗಳ ಪ್ರಯಾಣ. ಆದರೆ ಫಾಸ್ಟ್ ಗಾಡಿಯಲ್ಲಿ ಹೋದರೆ ಗಾಳಿ ಚೆನ್ನಾಗಿ ಬರುತ್ತದೆ ಮತ್ತು ಬೆವರುತ್ತಿರುವ ಮೈಯನ್ನು ಆ ಗಾಳಿಗೆ ಒಡ್ಡಿದರೆ ಮನಕಾಗುವ ಆಹ್ಲಾದತೆ ಅವರ್ಣನೀಯ. ಅದಕ್ಕಾಗಿಯೇ ಪ್ರಯಾಣಿಕರು ಹೆಚ್ಚಾಗಿ ಫಾಸ್ಟ್ ಗಾಡಿಗಳಲ್ಲೇ ಪ್ರಯಾಣಿಸುವುದು.