ಮತ್ತಷ್ಟು ಗಾದೆಗಳು - ೪
೧. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ.
೨. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ.
- Read more about ಮತ್ತಷ್ಟು ಗಾದೆಗಳು - ೪
- Log in or register to post comments
೧. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ.
೨. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ.
ಓದಿದ ದಿನಗಳು
ಹೇಗೆ ಮರೆಯಲಿ ನಾನು
ಸಾವಿರದ ದಿನಗಳನು
ಭಾಗೇಪಲ್ಲಿಯ ಎರಡು
ಸಾವಿರದ ದಿನಗಳನು
ಬ್ರಹ್ಮ ಕಮಲ.
ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದು
ನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು
ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲಿ ನನ್ನ ತಲೆ ಹನ್ನೆರಡಾಣೆ ಆಗಿ 'ತಲೆಹರಟೆ'ಗೆ ತಲೆಯೇ ಇಲ್ಲ ಎನ್ನುವ ಹಾಗಾಗಿದೆ. ಆದರೆ ಸಂದರ್ಶನ ವೇಳೆ ಆಡಿದ ಮಾತುಗಳೆಲ್ಲಾ ಆಫ್ ದಿ ರೆಕಾರ್ಡ್!! ಆದರೂ ಧೈರ್ಯ ಮಾಡಿ ಸಂದರ್ಶನದ ಒಂದೆರಡು ತುಣುಕುಗಳನ್ನು ಇಲ್ಲಿ ನೀಡಿದ್ದೀನಿ.
ತಲೆಹರಟೆ: ಗೌಡ್ರೇ ನಿಮ್ಮ ಇದುವರೆಗಿನ ಮಹತ್ತರ ಸಾಧನೆ ಯಾವುದು?
ಗೌಡ್ರು: ಮಗನನ್ನು ಸಿ ಎಮ್ ಮಾಡಿದ್ದು. ಇದು ಆಫ್ ದಿ ರೆಕಾರ್ಡ್. ಪತ್ರಿಕೆಯಲ್ಲಿ ಪ್ರಕಟಿಸಬೇಡಿ.
ತಲೆಹರಟೆ: ನೀವು ಕೆಲವು ತಿಂಗಳ ಹಿಂದಿನವರೆಗೂ ಸರಾಸರಿ ದಿನಕ್ಕೊಂದು ಪತ್ರ ಬರೆಯುತ್ತಿದ್ದರಲ್ಲ. ಈಗೇಕೆ ನಿಮ್ಮ ಪತ್ರಗಳು ಅಪರೂಪ ಆಗಿಬಿಟ್ಟಿದೆ.
ಗೌಡ್ರು: ವಯಸ್ಸಾಯಿತು. ಪತ್ರ ಬರೆದು ಬರೆದು ಸುಸ್ತಾಗಿದ್ದೀನಿ. ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಸುಮ್ಮನಾಗಿದ್ದೀನಿ. ಹದಿನಾರು ತಿಂಗಳು ರೆಸ್ಟ್. ಆಮೇಲೆ ನೋಡಿ ಮತ್ತೆ ಪ್ರಾರಂಭ ಆಗುತ್ತೆ ನನ್ನ ಪತ್ರಾವಳಿ! (ಪತ್ರ ಹಾವಳಿ? ಆಡಳಿತ ಹಂಚಿಕೆ ಸೂತ್ರದ ಪ್ರಕಾರ ಇನ್ನು ಹದಿನಾರು ತಿಂಗಳ ನಂತರ ಮಂಡಿಊರಿ-ಯಡಿಯೂರಿ ಅಲ್ಲ-ಎಂಬುವವರು ಮುಖ್ಯ ಮಂತ್ರಿ ಆಗಲಿದ್ದಾರೆ....ಸಂದರ್ಶಕ).
ತಲೆಹರಟೆ: ನೀವು ಸೋನಿಯಾಗೂ ಪತ್ರ ಬರೆಯುತ್ತಿದ್ದರಲ್ಲಾ ಆಗ ನಿಮ್ಮ ಧರ್ಮಪತ್ನಿ ಏನು ಅನ್ನುತಿರಲ್ಲಿಲ್ಲವಾ?
ಗೌಡ್ರು: ..............................(ಗೌಡರ ತುಟಿಯಂಚಿನಲ್ಲಿ ತುಂಟನಗೆಯೊಂದು ಮಿಂಚಿ ಮಾಯವಾಯಿತು)
ಸದಸ್ಯರೆಲ್ಲರ ಗಮನಕ್ಕೆ,
'joshsatish' ಎಂಬ ಐಡಿಯಿಂದ ಲಾಗಿನ್ ಆಗುತ್ತಿರುವವರು ಸಂಪದದ ಇತರ ಸದಸ್ಯರ ಬ್ಲಾಗ್ ಬರಹಗಳನ್ನು ಹಾಗೂ ಲೇಖನಗಳನ್ನು ಕಾಪಿ ಹೊಡೆದು ತಮ್ಮ ಬ್ಲಾಗಿನಲ್ಲಿ ಸೇರಿಸಿಕೊಳ್ಳುತ್ತಿರುವುದರಿಂದ ಈ ಐಡಿಯನ್ನು ಬಹಿಷ್ಕರಿಸಲಾಗಿದೆ.
ಹೌದು ಜೀವಿಸಬಹುದು, ಜೀವಿಸುತ್ತಿದ್ದಾರೆ, ಮುಂಬೈ ನಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವ ಸಂಗತಿ.
ನಿನ್ನೆ ನಾನು ರಜೆಯ ಮೇಲಿದ್ದು ಸ್ವಲ್ಪ ಸಮಯ ಹೊಂದಿಸಿಕೊಂಡು ಇಲ್ಲಿ ( ಮುಂಬಯಿ)ಯಲ್ಲಿನ ದಾದರ್ ಹತ್ತಿರ ಇರುವ ಭಾರತೀಯ ಸಾಹಿತ್ಯ ಅಕಾಡೆಮಿ ಕಛೇರ್ಇಗೆ ಹೋದೆ . ಸಾಹಿತ್ಯ ಅಕಾಡೆಮಿ ಭಾರತೀಯ ಭಾಷೆಗಳ ಶ್ರೇಷ್ಠ ಪುಸ್ತಕಗಳನ್ನು ಭಾರತದ ಇಪ್ಪತ್ತೈದು ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುತ್ತದೆ. ಎಲ್ಲ ಭಾಷೆಗಳ ಪುಸ್ತಕಗಳೂ ಇಲ್ಲಿ ಲಭ್ಯವಿದ್ದವು . ( ಬೆಂಗಳೂರಿನಲ್ಲಿ ಅವರ ಶಾಖೆ ಅಂಬೇಡ್ಕರ್ ಬೀದಿಯಲ್ಲಿದೆ). ಸರಕಾರದ ಸಂಸ್ಥೆಯಾಗಿದ್ದರಿಂದ ಬೆಲೆಯೂ ಕಡಿಮೆ; ಶೇ. ೨೫ ರಷ್ಟು ರಿಯಾಯಿತಿಯನ್ನು ಕೊಟ್ಟಿದ್ದರಿಂದ ನಾನು ಇಪ್ಪತ್ತೊಂದು ಪುಸ್ತಕ ಒಂದು ಸಾವಿರದ ಐವತ್ತು ರೂಪಾಯಿಗಳಿಗೆ ಖರೀದಿಸಲು ಸಾಧ್ಯ ಆಯಿತು . ಅಲ್ಲಿ ಸಿಬ್ಬಂದಿ ವರ್ಗ ಚೆನ್ನಾಗಿ ವ್ಯವಹರಿಸಿದರು. ಮತ್ತೆ ಬರುವೆ ಎಂದು ಹೇಳಿ ಬಂದೆ. ಹಾಗೆಯೇ ಇಲ್ಲಿ ಸರಕಾರದ್ದೇ ಇನ್ನೊಂದು ಸಂಸ್ಥೆಯಾದ ನ್ಯಾಶನಲ್ ಬುಕ್ ಟ್ರಸ್ಟ್ ಕಚೇರಿಯೂ ಹತ್ತಿರವೇ ಇದೆ . ಮತ್ತೆಂದಾದರೂ ಹೋಗಬೇಕು.
ನನ್ನ ತಮ್ಮ.
ಹುಡುಕಿ ಹುಡುಕಿ ಸಾಕಾಗಿದೆ
ಹುಡುಗಿ ನಮಗೆ ಬೇಕಾಗಿದೆ
ನನ್ನ ತಮ್ಮ ವೆಂಕಟ
ಇವನಿಗಿಲ್ಲ ಸಂಕಟ
ಇವನ ಮಾತು ಪಟಪಟ
ನಮ್ಮ ಮನೆಯ ಗೊಮ್ಮಟ
ನಮ್ಮ ದೇಶದಲ್ಲಿ ಬಹಳವಾಗಿ ಉಕ್ತವಾಗುವ ಮಾತೆಂದರೆ 'ಮೇರಾ ಭಾರತ್ ಮಹಾನ್'. ನಾನು ಅದಕ್ಕೆ ಇನ್ನೊಂದನ್ನು ಸೇರಿಸಬಯಸುವೆ, ಮೇರಾ ಸೋಪ್ ಹಮಾಮ್. ಏಕೆಂದರೆ ಈ ಎರಡೂ ಚಿರಂಜೀವಿಗಳು (ನನ್ನ ಮಟ್ಟಿಗೆ). ಸ್ವತಂತ್ರ ಬಂದು ೬೦ ವರುಷಗಳಾಗುತ್ತಿದ್ದರೂ ನಮ್ಮ ದೇಶದ ಜನಸಂಖ್ಯೆ ಒಂದೇ ಮೇಲೇರುತ್ತಿರುವುದು. ಇದೊಂದು ದೃಷ್ಟಿಯಿಂದ ನಮ್ಮ ದೇಶ ಎಂದಿಗೂ ಮಹಾನ್. ಹಾಗೆಯೇ ಹಮಾಮ್ ಸೋಪನ್ನು ಉಪಯೋಗಿಸುವವರು ಅದನ್ನೇ ಉಪಯೋಗಿಸುತ್ತಿದ್ದಾರೆ (ನನ್ನಂತಹವರು - ಅಪ್ಪ ಹಾಕಿದ ಹಳೆಯ ಆಲದ ಮರಕ್ಕೇ ಜೋತು ಬೀಳುವಂತಹವರು).