ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಝೆನ್ ಕಥೆ ೩೧: ಚೆಲುವು

ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ.

ಸಂಪದ ಸುದ್ದಿ ಪತ್ರ

ಸಂಪದ ಸುದ್ದಿ ಪತ್ರ ಅಪರೂಪವಾಗಿ ನಿಮ್ಮ ಇನ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಇ-ಪತ್ರ. ಮೊದಲಿಗೆ ತಿಂಗಳಿಗೊಂದು ಕಳುಹಿಸುವುದೆಂದು ಪ್ರಾರಂಭಿಸಿದ್ದಾದರೂ ಇತ್ತೀಚೆಗೆ ಈ ಸುದ್ದಿ ಪತ್ರ ಸದಸ್ಯರಿಗೆ ಏನಾದರೂ ತಿಳಿಸುವ ಔಚಿತ್ಯವಿದ್ದ ಸಮಯಕ್ಕೆ ಮಾತ್ರ ಮೀಸಲಾಗಿ ಮೊಟಕುಗೊಂಡಿದೆ. ಸಂಪದದಲ್ಲಿ ಹಾಗೂ ಸಂಪದದ ಸುತ್ತ ಆಗುತ್ತಿರುವ ಬದಲಾವಣೆಗಳು ಹಾಗೂ ಹೊಸ ಸೇರ್ಪಡೆಗಳ ಬಗ್ಗೆ, ಸುತ್ತ ಮುತ್ತ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಸಂದೇಶ ಕಳುಹಿಸಲು ಈ ಸುದ್ದಿ ಪತ್ರ.

ಈ ಸುದ್ದಿ ಪತ್ರ ನಿಮಗೂ ತಲುಪುವಂತೆ ಕೆಳಗೆ ನಿಮ್ಮ ಇ-ಮೇಯ್ಲ್ ವಿಳಾಸ ನೀಡಿ ನೊಂದಾಯಿಸಿಕೊಳ್ಳಿ.

Enter your email address below:



ಗಮನಿಸಿ: ಎಲ್ಲ ಸದಸ್ಯರಿಗೂ ಈ ಸುದ್ದಿ ಪತ್ರ ತಲುಪುವುದಿಲ್ಲ, ಮೇಲೆ ಇ-ಮೇಯ್ಲ್ ವಿಳಾಸ ನೀಡಿ ನೊಂದಾಯಿಸಿಕೊಂಡವರಿಗೆ ಮಾತ್ರ.

ಆ ಮೌನ..

ಎಳೆಯ ತೊರೆಯ ಮರೆಯ ದಾಟಿ
ಮೂಡಿ ಬಂತು ಮೌನ
ಚಿತ್ತ ಚೈತ್ರ ಚಿಗುರ ಮೀಟಿ
ತೇಲುತಿಹುದು ಗಾನಾ

ಇಂದಿನ ಡೈರಿಯಿಂದ

ಎಂದಿನಂತೆ ಇಂದು ೬.೧೪ರ ಬೊರಿವಿಲಿ ಟ್ರೈನ್‍ನಲ್ಲಿ ಬಂದೆ. ಇವತ್ತೇನೋ ಎಂದಿಗಿಂತ ವಿಪರೀತ ಜನಸಂದಣಿ ಇದ್ದಿತ್ತು. ನನಗೇನೋ ಕುಳಿತುಕೊಳ್ಳಲು ಜಾಗ ಸಿಕ್ಕಿದ್ದಿತು. ಸ್ವಲ್ಪ ಸುಸ್ತಾಗಿದ್ದ ಕಾರಣ, ಈ ಜಗತ್ತಿನ ಪರಿವೆಯೇ ಬೇಡವೆಂಬಂತೆ ಕಣ್ಣು ಮುಚ್ಚಿ ಕುಳಿತಿದ್ದೆ. ಬಾಂದ್ರಾ ಬರುವ ವೇಳೆಗೆ ಕಾಲಿಡಲು ಒಂದಿಂಚೂ ಸ್ಥಳವಿರಲಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು.

ಹೆದ್ದಾರಿ ಡಿವಿಜನ್‍ನಲ್ಲಿ ಸಾವು - ಇನ್ನೊಂದು ಮರೆಯಲಾಗದ ಕತೆ

ಇತ್ತೀಚೆಗೆ 'ಮಯೂರ' ಮಾಸ ಪತ್ರಿಕೆ ಬಲು ವಿಶಿಷ್ಟವಾಗಿ , ಪ್ರತಿಯೊಂದು ಸಂಚಿಕೆಯೂ ಸಂಗ್ರಾಹ್ಯ ಸಂಚಿಕೆಯಾಗಿ ಬರುತ್ತಿದೆ. ಕನ್ನಡವಷ್ಟೇ ಅಲ್ಲದೆ ದೇಶ ವಿದೇಶಗಳ ಸಾಹಿತ್ಯವನ್ನೂ ಪರಿಚಯಿಸುತ್ತಿದೆ. ಇವತ್ತು 'ಮಯೂರ' ಮಾಡುತ್ತಿರುವ ಕೆಲಸವನ್ನು ಪ್ರಾರಂಭದ ಅನೇಕ ವರ್ಷಗಳ ಕಾಲ ೭೦ರ ದಶಕದಲ್ಲಿ 'ತುಷಾರ' ಮಾಡುತ್ತಿತ್ತು . ಅಂದು ಓದಿದ ಒಂದು ಕತೆ ಇಂದಿಗೂ ನನ್ನ ನೆನಪಲ್ಲಿ ಹಸಿರಾಗಿದೆ.

'ಅಣ್ಣನ ನೆನಪು', 'ಹಸುರು ಹೊನ್ನು'

ಅಣ್ಣನ ನೆನಪು 

ತೇಜಸ್ವಿಯವರೂ ತಮ್ಮ ತಂದೆಯವರಿಗೆ "ಅಣ್ಣ" ಎನ್ನುತ್ತಿದ್ದರಂತೆ. ಅವರ ತಂದೆ ಕುವೆಂಪುರವರ ಕುರಿತ ಅವರ ನೆನಪುಗಳು - 'ಅಣ್ಣನ ನೆನಪು' ಲೇಖನಗಳ ಮಾಲೆ. ಬಹುಶಃ ಅವರು ಇದನ್ನ ಯಾವುದೋ ವೃತ್ತಪತ್ರಿಕೆಗೆ ಬರೆದಿದ್ದರೇನೊ.

ತೇಜಸ್ವಿಯವರು ಬರೆದಿರುವ 'ಅಣ್ಣನ ನೆನಪು' ಪುಸ್ತಕ ಓದುವ ಅವಕಾಶ ದೊರೆತದ್ದು ಮುರಳಿ 'ಹ್ಯಾಪಿ ಬರ್ತ್ ಡೇ' ಎಂದುಕೊಂಡು ಈ ಪುಸ್ತಕವನ್ನು ನನಗೆ ತಂದುಕೊಟ್ಟಿದ್ದರಿಂದ. ಈಗಾಗಲೇ ಓದದೇ ಇಟ್ಟಿರುವ ಪುಸ್ತಕಗಳ ದೊಡ್ಡ ರಾಶಿ ಪ್ರತಿದಿನ ನೋಡುತ್ತಲೇ ಈ ಪುಸ್ತಕವನ್ನು ನಾನು ಈಗಂತೂ ಕೊಂಡುತರುತ್ತಿದ್ದುದು ಬಹುಶಃ ಸಾಧ್ಯವಿರಲಿಲ್ಲ. ಅದ್ಯಾಕೋ ಪುಸ್ತಕದ ಆಕರ್ಷಣೆಯೋ ಅಥವಾ ಕುವೆಂಪುರವರ ಬಗ್ಗೆ ಏನೂ ಹೆಚ್ಚು ತಿಳಿಯದೇ ಇದ್ದದ್ದರಿಂದಲೋ ಅಥವಾ ಹುಟ್ಟಿದ ಹಬ್ಬಕ್ಕೆ ದೊರೆತಿದ್ದ ಉಡುಗೊರೆ ಅಂತಲೊ, ಒಟ್ಟು ಈ ಪುಸ್ತಕವನ್ನು ಸಂಪೂರ್ಣವಾಗಿ ಓದಿಮುಗಿಸಿದ್ದು.

ಈ ಪುಸ್ತಕದಲ್ಲಿ ಕುವೆಂಪುರವರ 'ಸಾಮಾನ್ಯ' ಜೀವನದ ಬಗ್ಗೆ, ತೇಜಸ್ವಿಯವರ ಅಂದಿನ ಲೈಫು, ಕಾರ್ನಾಮೆಗಳು ಇವೆಲ್ಲದರ ಬಗ್ಗೆ ವ್ಯಾಖ್ಯಾನವಿದೆ. ಒಮ್ಮೆ ಸಮಯ ಮಾಡಿಕೊಂಡು ಸಂಪದದಲ್ಲಿ ಈ ಪುಸ್ತಕದ ಬಗ್ಗೆ ವಿವರವಾಗಿ ಬರೆಯುವೆ. :)

ಎತ್ತ ಸಾಗುತಿದೆ ಈ ಪಯಣ..!

ಅತ್ತ ಇತ್ತ ಎತ್ತೆತ್ತಲೋ ಸಾಗಿ ಹೊತ್ತು ಮಾಸುವ ಮುನ್ನ ಇತ್ತ ಬಂದೆ ಎನ್ನುವ ರಾಜಕಾರಣ ಗೌಡರದ್ದಲ್ಲ.ಅವರು ರಾಜಕೀಯದಂತಹ ರಾಜಕೀಯಕ್ಕೆ ರಾಹುಗನ್ನಡಿ ಹಿದಿದಂತೆ,ಅಂತೆ ಕಂತೆಯಾಗಿ ಮುಗಿಯದ ಕಂತು ಕಂತುಗಳ ನಾಟಕದ ಸೂತ್ರದಾರ.ಕಣ್ಣಿಗೆ ಕಾಣುವದೆಲ್ಲ ಸತ್ಯವೆಂದು ನಂಬುವುದಾದರೆ ಇವರು ಈಗ ವಾನಪ್ರಸ್ಥಾಶ್ರಮ ಸೇರಹೊರಟ ಮಹಾರಾಜ.!!!!