ಹಿತನುಡಿ
ನೀನು ತಳಕ್ಕಿಳಿದಾಗ ಪುಟಿದೇಳುವ ನಿನ್ನ ಶಕ್ತಿಯಲ್ಲಿ ನಿನ್ನ ಯಶಸ್ಸು ಅಡಗಿದೆ.
ನೀನು ತಳಕ್ಕಿಳಿದಾಗ ಪುಟಿದೇಳುವ ನಿನ್ನ ಶಕ್ತಿಯಲ್ಲಿ ನಿನ್ನ ಯಶಸ್ಸು ಅಡಗಿದೆ.
ಸುಮ್ಮನೆ ಕುಳಿತು ಸಾಯುವುದಕ್ಕಿಂತ ಯಾವುದಕ್ಕಾದರೂ ಹೋರಾಡುವುದು ಮೇಲು.
ಎಲ್ಲಿ ಮಾನವ ಬದುಕಬಹುದೋ ಅಲ್ಲಿಯೇ ಅವನು ಸುಂದರವಾಗಿಯೂ ಬದುಕಬಹುದು. - ಮಾರ್ಕಸ್ ಔರೇಲಿಯಸ್
ಸಾವಿನ ಕ್ರಿಯೆಯು, ಬದುಕು ಎಂಬ ಮಹಾಕ್ರಿಯೆಯ ಅವಿಭಾಜ್ಯ ಅಂಗ. - ಮಾರ್ಕಸ್ ಔರೇಲಿಯಸ್
ಜೇನು ಗೂಡಿಗೆ ಯಾರು ಶತ್ರುವೋ ಅವರು ಜೇನು ನೊಣಗಳಿಗೂ ಶತ್ರು.
- ಮಾರ್ಕಸ್ ಅರಿಲಿಯಸ್, ಗ್ರೀಕರ ಸೀಸರ್ ಮತ್ತು ದಳಪತಿ
ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವ
ಬಡತನವೇ ಅಪರಾಧಗಳ ತಾಯಿ. - ಮಾರ್ಕಸ್ ಔರೇಲಿಯಸ್
ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.
ಒಬ್ಬರಿಗೋಸ್ಕರ ಮತ್ತೊಬ್ಬರು ಬದುಕುವುದು ಶ್ರೇಷ್ಥ ಮಾನವ ಧರ್ಮ. - ಮಾರ್ಕಸ್ ಔರೇಲಿಯಸ್
ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ. ಕೊಂಚ ಹೊತ್ತಿನ ನಂತರ ಇನ್ನೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯ” ಅಂದ. ಮತ್ತೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯನ ಗೆಳೆಯ” ಅಂದ. ಹೀಗೇ ಗೆಳೆಯನ ಗೆಳೆಯನ...ಎಂದು ಹೇಳಿಕೊಂಡು ಬರುವವರು ಹೆಚ್ಚಾದರು. ಎಲ್ಲರೂ ಊಟಕ್ಕೆ ಬಂದವರೇ ಹೊರತು ಮುಲ್ಲಾಗೆ ಕೊಡಲು ಏನೂ ತಂದಿರಲಿಲ್ಲ. ಎಲ್ಲರಿಗೂ ಊಟಕ್ಕಿಟ್ಟು ಮುಲ್ಲಾನಿಗೆ ಸಾಕಾಗಿಹೋಯಿತು.