ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂದಿನ ಡೈರಿಯಿಂದ

ಎಂದಿನಂತೆ ಇಂದು ೬.೧೪ರ ಬೊರಿವಿಲಿ ಟ್ರೈನ್‍ನಲ್ಲಿ ಬಂದೆ. ಇವತ್ತೇನೋ ಎಂದಿಗಿಂತ ವಿಪರೀತ ಜನಸಂದಣಿ ಇದ್ದಿತ್ತು. ನನಗೇನೋ ಕುಳಿತುಕೊಳ್ಳಲು ಜಾಗ ಸಿಕ್ಕಿದ್ದಿತು. ಸ್ವಲ್ಪ ಸುಸ್ತಾಗಿದ್ದ ಕಾರಣ, ಈ ಜಗತ್ತಿನ ಪರಿವೆಯೇ ಬೇಡವೆಂಬಂತೆ ಕಣ್ಣು ಮುಚ್ಚಿ ಕುಳಿತಿದ್ದೆ. ಬಾಂದ್ರಾ ಬರುವ ವೇಳೆಗೆ ಕಾಲಿಡಲು ಒಂದಿಂಚೂ ಸ್ಥಳವಿರಲಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು.

ಹೆದ್ದಾರಿ ಡಿವಿಜನ್‍ನಲ್ಲಿ ಸಾವು - ಇನ್ನೊಂದು ಮರೆಯಲಾಗದ ಕತೆ

ಇತ್ತೀಚೆಗೆ 'ಮಯೂರ' ಮಾಸ ಪತ್ರಿಕೆ ಬಲು ವಿಶಿಷ್ಟವಾಗಿ , ಪ್ರತಿಯೊಂದು ಸಂಚಿಕೆಯೂ ಸಂಗ್ರಾಹ್ಯ ಸಂಚಿಕೆಯಾಗಿ ಬರುತ್ತಿದೆ. ಕನ್ನಡವಷ್ಟೇ ಅಲ್ಲದೆ ದೇಶ ವಿದೇಶಗಳ ಸಾಹಿತ್ಯವನ್ನೂ ಪರಿಚಯಿಸುತ್ತಿದೆ. ಇವತ್ತು 'ಮಯೂರ' ಮಾಡುತ್ತಿರುವ ಕೆಲಸವನ್ನು ಪ್ರಾರಂಭದ ಅನೇಕ ವರ್ಷಗಳ ಕಾಲ ೭೦ರ ದಶಕದಲ್ಲಿ 'ತುಷಾರ' ಮಾಡುತ್ತಿತ್ತು . ಅಂದು ಓದಿದ ಒಂದು ಕತೆ ಇಂದಿಗೂ ನನ್ನ ನೆನಪಲ್ಲಿ ಹಸಿರಾಗಿದೆ.

'ಅಣ್ಣನ ನೆನಪು', 'ಹಸುರು ಹೊನ್ನು'

ಅಣ್ಣನ ನೆನಪು 

ತೇಜಸ್ವಿಯವರೂ ತಮ್ಮ ತಂದೆಯವರಿಗೆ "ಅಣ್ಣ" ಎನ್ನುತ್ತಿದ್ದರಂತೆ. ಅವರ ತಂದೆ ಕುವೆಂಪುರವರ ಕುರಿತ ಅವರ ನೆನಪುಗಳು - 'ಅಣ್ಣನ ನೆನಪು' ಲೇಖನಗಳ ಮಾಲೆ. ಬಹುಶಃ ಅವರು ಇದನ್ನ ಯಾವುದೋ ವೃತ್ತಪತ್ರಿಕೆಗೆ ಬರೆದಿದ್ದರೇನೊ.

ತೇಜಸ್ವಿಯವರು ಬರೆದಿರುವ 'ಅಣ್ಣನ ನೆನಪು' ಪುಸ್ತಕ ಓದುವ ಅವಕಾಶ ದೊರೆತದ್ದು ಮುರಳಿ 'ಹ್ಯಾಪಿ ಬರ್ತ್ ಡೇ' ಎಂದುಕೊಂಡು ಈ ಪುಸ್ತಕವನ್ನು ನನಗೆ ತಂದುಕೊಟ್ಟಿದ್ದರಿಂದ. ಈಗಾಗಲೇ ಓದದೇ ಇಟ್ಟಿರುವ ಪುಸ್ತಕಗಳ ದೊಡ್ಡ ರಾಶಿ ಪ್ರತಿದಿನ ನೋಡುತ್ತಲೇ ಈ ಪುಸ್ತಕವನ್ನು ನಾನು ಈಗಂತೂ ಕೊಂಡುತರುತ್ತಿದ್ದುದು ಬಹುಶಃ ಸಾಧ್ಯವಿರಲಿಲ್ಲ. ಅದ್ಯಾಕೋ ಪುಸ್ತಕದ ಆಕರ್ಷಣೆಯೋ ಅಥವಾ ಕುವೆಂಪುರವರ ಬಗ್ಗೆ ಏನೂ ಹೆಚ್ಚು ತಿಳಿಯದೇ ಇದ್ದದ್ದರಿಂದಲೋ ಅಥವಾ ಹುಟ್ಟಿದ ಹಬ್ಬಕ್ಕೆ ದೊರೆತಿದ್ದ ಉಡುಗೊರೆ ಅಂತಲೊ, ಒಟ್ಟು ಈ ಪುಸ್ತಕವನ್ನು ಸಂಪೂರ್ಣವಾಗಿ ಓದಿಮುಗಿಸಿದ್ದು.

ಈ ಪುಸ್ತಕದಲ್ಲಿ ಕುವೆಂಪುರವರ 'ಸಾಮಾನ್ಯ' ಜೀವನದ ಬಗ್ಗೆ, ತೇಜಸ್ವಿಯವರ ಅಂದಿನ ಲೈಫು, ಕಾರ್ನಾಮೆಗಳು ಇವೆಲ್ಲದರ ಬಗ್ಗೆ ವ್ಯಾಖ್ಯಾನವಿದೆ. ಒಮ್ಮೆ ಸಮಯ ಮಾಡಿಕೊಂಡು ಸಂಪದದಲ್ಲಿ ಈ ಪುಸ್ತಕದ ಬಗ್ಗೆ ವಿವರವಾಗಿ ಬರೆಯುವೆ. :)

ಎತ್ತ ಸಾಗುತಿದೆ ಈ ಪಯಣ..!

ಅತ್ತ ಇತ್ತ ಎತ್ತೆತ್ತಲೋ ಸಾಗಿ ಹೊತ್ತು ಮಾಸುವ ಮುನ್ನ ಇತ್ತ ಬಂದೆ ಎನ್ನುವ ರಾಜಕಾರಣ ಗೌಡರದ್ದಲ್ಲ.ಅವರು ರಾಜಕೀಯದಂತಹ ರಾಜಕೀಯಕ್ಕೆ ರಾಹುಗನ್ನಡಿ ಹಿದಿದಂತೆ,ಅಂತೆ ಕಂತೆಯಾಗಿ ಮುಗಿಯದ ಕಂತು ಕಂತುಗಳ ನಾಟಕದ ಸೂತ್ರದಾರ.ಕಣ್ಣಿಗೆ ಕಾಣುವದೆಲ್ಲ ಸತ್ಯವೆಂದು ನಂಬುವುದಾದರೆ ಇವರು ಈಗ ವಾನಪ್ರಸ್ಥಾಶ್ರಮ ಸೇರಹೊರಟ ಮಹಾರಾಜ.!!!!

ರಜತೋತ್ಸವ ಭಾಗ ೪

ಭಾಗ - ೪

ಮರು ದಿನ ಅಂದರೆ ಎರಡನೆಯ ದಿನ ಕೆಲಸ ಸ್ವಲ್ಪ ಸುಲಭವಾಗಿತ್ತು. ಅಂದು ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗಿದ್ದೆವು ಮತ್ತು ಸಂಜೆ ೫ ಘಂಟೆಗೆ ಸರಿಯಾಗಿ ಕೆಲಸವೂ ಮುಗಿದಿತ್ತು.

ದೇವತೆಗಳು - ಅನಿಮೇಷರು - ಬಿಡುಗಣ್ಣರು

ನಿಮಗೆ ಗೊತ್ತಿರಬಹುದು -ದೇವತೆಗಳು ಕಣ್ಣು ಪಿಳುಕಿಸುವದಿಲ್ಲ - ಮನುಷ್ಯರ ಹಾಗೆ . ಅದಕ್ಕೆ ಅವರಿಗೆ ಸಂಸ್ಕೃತದಲ್ಲಿ ಅನಿಮೇಷ ಎನ್ನುತ್ತಾರೆ.

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ -

ಮರ್ಕಟ ಮನ

ಮನಸ್ಸು ಎಲ್ಲಿಂದ ಎಲ್ಲಿಗೆ ಹೇಗೆ ಹಾರುತ್ತೆ ನೊಡಿ.

ಆರ್ಥರ್ ಸಿ. ಕ್ಲಾರ್ಕ್‌ ಅವರ "3001: The Final Odyssey" ಪುಸ್ತಕದಲ್ಲಿನ ಒಂದು ಸಂದರ್ಭ. ೨೦೦೧ನೆಯ ಇಸವಿಯಲ್ಲಿ ಭೂಮಿಯಿಂದ ಗುರುಗ್ರಹಕ್ಕೆ ನೌಕೆಯನ್ನು ಕಳುಹಿಸಿರುತ್ತಾರೆ. ಅದರಲ್ಲಿನ ನಾವಿಕರಲ್ಲಿ ಒಬ್ಬ, ಫ್ರ್ಯಾಂಕ್ ಪೂಲ್, ಕಾರಣಾಂತರಗಳಿಂದ ನೌಕೆಯಿಂದ ಹೊರ ಬೀಳುತ್ತಾನೆ. ಅವನ ಕಥೆ ಮುಗಿಯಿತು ಎಂದು ಎಲ್ಲರೂ ಅವನ ಕೈ ಬಿಡುತ್ತಾರೆ. ೩೦೦೧ರಲ್ಲಿ ನೆಪ್ಚೂನ್ ಗ್ರಹದ ಆಚೆ ಕೆಲಸದದಲ್ಲಿರುವ ಭೂಮಿಯ ನೌಕೆಯವರು ಅವನನ್ನು ಹಿಡಿಯುತ್ತಾರೆ. ೧೦೦೦ ವರ್ಷಗಳ ಕಾಲ ಸೂರ್ಯನ ಸುತ್ತು ಅಂತರಿಕ್ಷದಲ್ಲಿ ಸುತ್ತುತ್ತಿದ್ದರೂ ನಿದ್ರೆಯಿಂದ ಎದ್ದವನಂತೆ ಪೂಲ್ ಮಹಾಶಯ ಎಚ್ಚರವಾಗುತ್ತಾನೆ. ಅವನನು ಭೂಮಿಗೆ ಕರೆತಂದಾಗ ವೈದ್ಯರು ಪರೀಕ್ಷೆ ಮಾಡುತ್ತ ತಲೆಗೆ ತಂತುಗಳನ್ನು ಜೋಡಿಸುತ್ತಾರೆ. "ಇದೇನು, ಎಲೆಕ್ಟ್ರೋ ಎನ್ಸೆಫಲೋಗ್ರಾಮೆ?" ಎಂದು ಪೂಲ್ ಕೇಳಿದಾಗ ವೈದ್ಯನಿಗೆ ತಕ್ಷಣ ಅರ್ಥವಾಗುವುದಿಲ್ಲ. ಆಮೇಲೆ ಸಾವರಿಸಿಕೊಂಡು "ಹೌಧ್ಹೌದು, ಈಗ ಅದಕ್ಕೆ ಬ್ರೈನ್ ಸ್ಕ್ಯಾನ್ ಅಂತೀವಿ" ಎನ್ನುತ್ತಾನೆ.