ಜನ ಮರುಳೋ ಜಾತ್ರೆ ಮರುಳೋ!

ಜನ ಮರುಳೋ ಜಾತ್ರೆ ಮರುಳೋ!

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಹೇಳಿಕೆ "Say no to Bangalore and yes to Buffello" ಭಾರತದಲ್ಲಿ ಅದರಲ್ಲೂ ಬೆಂಗಳೂರಿನ ಐಟಿ ಉದ್ಯಮದಲ್ಲಿ ಸಂಚಲನವನ್ನೇ ಮೂಡಿಸಿದೆ .
ಇದೇನು ಒಬಾಮ ಏಕಾ ಏಕಿ ಸಿಡಿಸಿದ ಬಾಂಬ್ ಅಲ್ಲ . ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೇ ಒಬಾಮ ಹೊರಗುತ್ತಿಗೆ ವಿರುಧ್ಧ ಸತತ ವಾಗಿ ಟೀಕಿಸುತ್ತಲೇ ಇದ್ದರು . ಆಗೆಲ್ಲ ನಾವು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಒಮ್ಮೆ ನೆನಪು ಮಾಡಿಕೊಳ್ಳಿ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರ ಉತ್ತುಂಗದಲ್ಲಿದ್ದಾಗ ನಮ್ಮ ಮಾಧ್ಯಮಗಳು ವರ್ತಿಸಿದ ರೀತಿಯನ್ನು. ಒಬಾಮ ಸೀನಿದರು ಸುದ್ದಿಯೇ ಹೂ... ಬಿಟ್ಟರೂ ಸುದ್ದಿಯೇ. ಖಾಸಗಿ ಪ್ರಸಾರಕ್ಕಾಗಿ ಇರುವ ಪತ್ರಿಕೆ ಗಳಿಂದ ಹಿಡಿದು ರಾಜ್ಯ - ರಾಷ್ಟ್ರ ಮಟ್ಟದ ಪತ್ರಿಕೆಗಳು ಎನ್ನಿಸಿಕೊಂಡವು ಪ್ರತಿದಿನ ಮುಖಪುಟದಲ್ಲಿ ಒಬಾಮ ಸುದ್ದಿ ಪ್ರಕಟಿಸಿ. ಟಿವಿ ಚಾನೆಲ್ ನವರದ್ದು ಬೇರೆಯೇ ಕಥೆ. ಅವರು ಮುಖಕ್ಕೆ ಎರಡು ಇಂಚು ಬಣ್ಣ ಬಳಿದುಕೊಂಡು ರಾಯ್ಟರ , ಎಪಿ ನಂಥ ಸುದ್ದಿಸಂಸ್ಥೆ ಗಳು ಕಳಿಸಿದ ಕ್ಲಿಪ್ಪಿಂಗ್ ಗಳನ್ನೇ ಕಣ್ಣಿಗೊತ್ತಿಕೊಂಡು ತಮ್ಮದೇ ಮನೆಯ ಸುದ್ದಿಯೇನೋ ಎಂಬಂತೆ ಪ್ರಚಾರ ಮಾಡಿ ಕೃತಾರ್ಥರಾದರು.

ಹಾಗಾದರೆ ಸುದ್ದಿಯನ್ನು ಪ್ರಸಾರ ಮಾಡಬಾರದೇ ಎಂದು ಕೆಲವರು ವಾದಿಸಬಹುದು. ಅಂಥವರಿಗೆ, ಈ ಪಾಟಿ ಪ್ರಚಾರ ಅಗತ್ಯವಿತ್ತೆ ಎಂಬುದು ನನ್ನ ಪ್ರಶ್ನೆ.

ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಲ ಬೆಂಗಳೂರು ಎಂದು ಹೇಳಿಕೊಂಡು ಕಲಾಸಿಪಾಳ್ಯವನ್ನು ಗಬ್ಬು ನಾರಲು ಬಿಟ್ಟಿರುವುದು , ಕೊಡ ನೀರಿಗಾಗಿ ಮೈಲುಗಟ್ಟಲೆ ನಡೆದು ಹೋಗುವ ನಮ್ಮ ಉತ್ತರ ಕರ್ನಾಟಕದ ಹೆಣ್ಣುಮಕ್ಕಳು , ಯಾವ ಬೆಳೆ ಬೆಳೆದರು ನಷ್ಟವನ್ನೇ ಅನುಭವಸಿ ಕಣ್ಣೀರು ಕೊಡಿ ಹರಿಸುತ್ತಿರುವ ರೈತ , ಐದು ಸಾವಿರ ರೂಪಾಯಿ ಕಕ್ಕಿದರೂ ನಾಲ್ಕು ಜನ ಕಾಲು ಚಾಚಬಹುದಾದ ಮನೆ ಸಿಗದೇ ಪರದಾಡುತ್ತಿರುವ ಮಧ್ಯಮ ವರ್ಗ ನಮ್ಮ ಮಾಧ್ಯಮದವರಿಗೆ ಕಾಣುವುದಿಲ್ಲ ; ನೋಡಲು ಇವರಿಗೆ ಇಷ್ಟವೂ ಇಲ್ಲ! ಏಕೆಂದರೆ ಬರೀ ಸ್ಥಳೀಯ ಸುದ್ದಿಗಳನ್ನು ಪ್ರಕಟಿಸಿದರೆ ಎಲ್ಲಿ ನಮ್ಮದು ಲೋಕಲ್ ಪತ್ರಿಕೆಯಾಗಿ ಬಿಡುತ್ತದೋ ಎಂಬ ಭೀತಿ!

ಹಾಗಾದರೆ "No to bangalore" ಎಂದು ಒಬಾಮ ಗುಡುಗಿದ್ದು ತಪ್ಪಾ? ಖಂಡಿತ ಅಲ್ಲ.

ಆತ ಅಮೆರಿಕದ ಪ್ರಜೆಗಳಿಂದ ಆಯ್ಕೆಯಾಗಿದ್ದಾರೆಯೇ ಹೊರತು ಭಾರತೀಯರಿಂದಲ್ಲ . ಅಲ್ಲಿನ ಜನರ ಹಿತ ಕಾಪಾಡುವುದು ಆತನ ಕರ್ತವ್ಯ .

ಒಬಾಮ ಹೇಳಿಕೆಯಿಂದ ಭಾರತೀಯರು ತಲ್ಲಣಗೊಂಡಿರುವುದು ನಮ್ಮ ಗುಲಾಮಗಿರಿಯನ್ನು ತೋರಿಸುತ್ತದೆ . ಅರವತ್ತು ವರ್ಷಗಳ ಹಿಂದೆ ನಾವು ಬ್ರಿಟೀಷರ ದಾಸ್ಯದಲ್ಲಿದ್ದರೆ ಇಂದು ಅಮೆರಿಕದ ಗುಲಾಮರಾಗಿದ್ದೇವೆ . ಅಮೆರಿಕಾ ಒಮ್ಮೆ ಸೀನಿದರೆ ಸಾಕು ನಮ್ಮ ಮೂಗಿನಲ್ಲಿ ಸಿಂಬಳ ಧಾರಾಕಾರವಾಗಿ ಹರಿಯುತ್ತದೆ!

ಕೂಲಿಗಾಗಿ ಕಾಳು! :
ಇನ್ನೊಬ್ಬರ ಕೂಲಿಗಾಗಿ ಕಾಯ್ದು ಹೊಟ್ಟೆ ಹೊರೆದುಕೊಳ್ಳುತ್ತಿರುವ ಭಾರಿ ಜನಸಂಪನ್ಮೂಲದ ದೇಶ ಎಂದು ಹೇಳಿಕೊಳ್ಳುವ ನಾವು ಸ್ವಂತ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳದೆ ಇದ್ದುದು ಯಾರ ತಪ್ಪು?
ಇಂಥ ಆಲೋಚನೆಗಳನ್ನು ಮಾಡುವುದನ್ನು ಬಿಟ್ಟು ಒಬಾಮ ನನ್ನು ಅಂದು ವೈಭವೀಕರಿಸಿದ ಮಾಧ್ಯಮಗಳೇ ಇಂದು ಖಳನಾಯಕನಂತೆ ಬಿಂಬಿಸುತ್ತಿವೆ . ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗಿದ್ದನ್ನೇ ನಂಬುವ ನಮ್ಮ ಜನ ಸರಿ / ತಪ್ಪುಗಳ ವಿಶ್ಲೇಷಣೆ ಮಾಡುವುದನ್ನು ಬಿಟ್ಟು ಒಬಾಮ ಗೆ ಹಿಡಿಶಾಪ ಹಾಕುತ್ತಿದ್ದಾರೆ?

ಜನ ಮರುಳೋ ಜಾತ್ರೆ ಮರುಳೋ...!

__________________________________________
Please visit: http://www.vishwaputa.blogspot.com/

Rating
Average: 4 (1 vote)

Comments