ಪುಸ್ತಕ ಪರಿಚಯ

ಲೇಖಕರು: Ashwin Rao K P
September 25, 2021
ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇವರ ಪ್ರಕಾರ “ ಕಾಯಾ ಕಾದಂಬರಿ ಬಗೆದು ತೋರಲು ಹೊರಟಿರುವುದು ಮನುಷ್ಯ ಬಾಳ್ವೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ…
ಲೇಖಕರು: Ashwin Rao K P
September 23, 2021
ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ  ಆಶಾರಘು  ಅವರ ಹೊಸ ಕಾದಂಬರಿ  "ಮಾಯೆ ". ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್ ಗಣೇಶಯ್ಯ ಅವರು ಬೆನ್ನುಡಿ ಬರೆದಿದ್ದಾರೆ. “ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ ಹಿಂದೆ ಬಿದ್ದ ಜೀವಕ್ಕೆ ಆ ಸುಖವು ಎಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದು ಚಿರಪರಿಚಿತ ಬೋಧನೆಯಷ್ಟೇ ಅಲ್ಲದೆ ಮಾನವನ ಚರಿತ್ರೆಯುದ್ದಕ್ಕೂ ಪುನರಾವರ್ತಿತವಾಗಿ ಗೋಚರಿಸುವ ಸತ್ಯ ಕೂಡ, ಇದರ  ಇನ್ನೊಂದು ಮಗ್ಗುಲಾಗಿ ನೆಲೆಯಾಗಿರುವ ಮತ್ತೊಂದು…
ಲೇಖಕರು: Ashwin Rao K P
September 21, 2021
ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಿಗಂತೂ ವಸುಮತಿಯವರ ಕತೆಗಳೆಂದರೆ ಪಂಚಪ್ರಾಣ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ‘ಬಂದನಾ ಹುಲಿರಾಯ', ‘ಅಗ್ನಿ…
ಲೇಖಕರು: Ashwin Rao K P
September 18, 2021
‘ಮಿಹಿರಕುಲಿ' ಎನ್ನುವ ವಿಶಿಷ್ಟ ಹೆಸರನ್ನು ಹೊಂದಿರುವ ಈ ಪುಸ್ತಕವನ್ನು ಬರೆದವರು ಸದ್ಯೋಜಾತ ಭಟ್ಟ ಇವರು. ಇವರ ಹಾಗೂ ಈ ಪುಸ್ತಕದ ಬಗ್ಗೆ ಎಸ್.ಎನ್.ಸೇತುರಾಮ್ ಇವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ಸದ್ಯೋಜಾತ ಭಟ್ಟರ ಹೊಸ ಪುಸ್ತಕ ‘ಮಿಹಿರಕುಲಿ', ಮೊದಲ ಮೂರು ಪುಸ್ತಕಗಳಾದ ‘ಶಿಲೆಯಲ್ಲಡಗಿದ ಸತ್ಯ', ‘ನಾಸತ್ಯ' ಮತ್ತು ‘ಕಾಲಯಾನ' ಕೆದಕಿ ಬಿಟ್ಟಂತಹ ಭಾವಗಳಿಗೆ, ಈ ಪುಸ್ತಕ ಮೂರ್ತರೂಪ ಕೊಟ್ಟಿದೆ. ಓದಿ ಮುಗಿಸಿದಾಗ ಮೊದಲು ಕಾಡುವ ಭಾವ ವಿಷಾದ. ಭಾರತದ ಪ್ರಜೆಯಾದ ನನಗೆ, ದೇಶ ನನ್ನ…
ಲೇಖಕರು: Ashwin Rao K P
September 16, 2021
ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂತ್ ಕಾಯ್ಕಿಣಿಯವರು ‘ಅನಾರ್ಕಲಿಯ ಸೇಫ್ಟಿಪಿನ್' ಕಥಾಸಂಕಲನದಲ್ಲಿ ನೀಡಿದ್ದಾರೆ. ತಮ್ಮ ಮುನ್ನುಡಿಯಾದ ‘ಅರಿಕೆ’ಯಲ್ಲಿ ಅವರು ಬರೆದದ್ದು ಹೀಗೆ “ಸುಗ್ಗಿ ಹಬ್ಬದ ‘ಹಗರಣ'ದ ಹುಣ್ಣಿಮೆಯ ದಿನ. ರಥಬೀದಿಯಲ್ಲಿ ಮರಕಾಲು ಕಟ್ಟಿಕೊಂಡ ವೇಷಗಳು ಮೆರವಣಿಗೆಯಲ್ಲಿ ಬರುತ್ತಿದ್ದವು.…
ಲೇಖಕರು: Ashwin Rao K P
September 14, 2021
ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ ಈ ಪುಸ್ತಕದ ಅನುವಾದ ಮಾಡಿದ ವಿಶ್ವೇಶ್ವರ ಭಟ್ ಇವರು. ಮೂಲತಃ ಉದ್ಯಮಿಯಾದ ಅವಿ ಯೋರಿಶ್ ಅವರ ಈ ಕೃತಿ ವಿಶ್ವದ ನಲ್ವತ್ತಕ್ಕೂ ಅಧಿಕ ಭಾಷೆಗೆ ಅನುವಾದವಾಗಿರುವುದು ಈ ಪುಸ್ತಕದ ಹೆಗ್ಗಳಿಕೆ.  ಈ ಪುಸ್ತಕವು ಇಸ್ರೇಲ್ ಎಂಬ ಪುಟ್ಟ ದೇಶದ ಬಗ್ಗೆ…