ಪುಸ್ತಕ ಪರಿಚಯ

ಲೇಖಕರು: Ashwin Rao K P
October 30, 2021
ಮಹಾಭಾರತದ ಮೂಲ ಬಿಂದು ಶ್ರೀಕೃಷ್ಣ. ಕೃಷ್ಣನ ಪಾತ್ರ ಮಹಾಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ ಹೇಳುತ್ತದೆ. ಈ ಘಟನೆಯ ಸತ್ಯಾಸತ್ಯತೆ ಎಷ್ಟು? ಕೃಷ್ಣನು ನಿಜವಾಗಿಯೂ ಐತಿಹಾಸಿಕ ವ್ಯಕ್ತಿಯೇ? ಅಥವಾ ಕವಿ ನಿರ್ಮಿತ ಕಾವ್ಯದ ಕಥಾನಾಯಕನೇ? ಕೃಷ್ಣ ನಿಜವಾಗಿ ಐತಿಹಾಸಿಕ ವ್ಯಕ್ತಿಯಾಗಿದ್ದರೆ ಆತ ಬದುಕಿದ್ದನೆನ್ನಲಾದ ಕಾಲ ಯಾವುದು? ಯಾವ…
ಲೇಖಕರು: Ashwin Rao K P
October 28, 2021
ಎ.ಎಸ್.ಪ್ರಸನ್ನರ ಕಥಾಸಂಕಲನವೇ ‘ಬಿಡುಗಡೆ' . ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಹೀಗೆ ಬರೆಯುತ್ತಾರೆ “ ಪ್ರಸನ್ನರ ಪ್ರಸ್ತುತ ಕಥಾ ಸಂಕಲನ ಅವರ ಆರನೆಯದು. ಸದಾ ಪ್ರಯೋಗಶೀಲರಾಗಿರುವ ಪ್ರಸನ್ನ ಅವರ ಈ ಸಂಕಲನದ ಕಥೆಗಳು ಹಿಂದಿನ ಸಂಕಲನದ ಕಥೆಗಳಿಗಿಂತ ಭಿನ್ನವಾಗಿವೆ. ಈವರೆಗಿನ ಕಥೆಗಳು ಬಹುಮಟ್ಟಿಗೆ ವ್ಯಕ್ತಿ ಸಮಾಜಗಳ ನಡುವೆ ಇರುವ ಸಂಬಂಧವಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ. ಈ ಸಂಕಲನದ ಕಥೆಗಳು ಸಂಪೂರ್ಣವಾಗಿ ವ್ಯಕ್ತಿಗಳ ಭಾವನೆಗಳು ಹಾಗೂ ಮಾನಸಿಕ ತುಮುಲಗಳಿಗೆ…
ಲೇಖಕರು: addoor
October 28, 2021
ಈಗಿನ ಇಂಟರ್-ನೆಟ್ ಕಾಲಮಾನದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದರೆ ಪ್ರಾಣಿಗಳ ಮತ್ತು ಪರಿಸರದ ಬಗ್ಗೆ ಲಕ್ಷಗಟ್ಟಲೆ ಪುಟಗಳ ಮಾಹಿತಿ ಮತ್ತು ಫೋಟೋಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಆದರೆ ಐವತ್ತು ವರುಷಗಳ ಮುಂಚೆ ಇಂತಹ ಮಾಹಿತಿ ಸಂಗ್ರಹ ಸವಾಲಾಗಿತ್ತು. ಹಾಗಾಗಿ, ನವಂಬರ ೧೯೭೪ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಪ್ರಾಣಿಗಳು ಮತ್ತು ಪರಿಸರದ ಬಗ್ಗೆ ೧೪೪ ಮುದ್ರಿತ ಪುಟಗಳ ಮಾಹಿತಿ ಸಂಗ್ರಹಿಸಿ, ವಿಷಯಾನುಕ್ರಮವಾಗಿ ಸರಳ ಭಾಷೆಯಲ್ಲಿ ಕನ್ನಡದ ಓದುಗರಿಗೆ ಒದಗಿಸಿದ ಕೃಷ್ಣಾನಂದ ಕಾಮತರಿಗೆ ಅಭಿನಂದನೆ…
ಲೇಖಕರು: Ashwin Rao K P
October 26, 2021
ಡಾ.ಎಚ್.ಬಿ.ಚಂದ್ರಶೇಖರ್ ಬರೆದ ‘ಯಶೋ ತೋಷ' ಸಾಧಕರಿಗೊಂದು ಕೈಪಿಡಿ ಎಂಬ ಪುಸ್ತಕಕ್ಕೆ ಡಾ.ಚಂದ್ರಶೇಖರ್ ದಾಮ್ಲೆ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಮಾನವ ಜನ್ಮ ದೊಡ್ದದು ಎಂಬುವುದು ದಾಸವಾಣಿ. ಅಂದರೆ ಬದುಕನ್ನು ಅರ್ಥಪೂರ್ಣಗೊಳಿಸಲು ಮಾನವರಿಗೆ ದೊಡ್ದ ಅವಕಾಶಗಳಿವೆ. ಅವನ್ನು ನಾವೇ ಉಪಯೋಗಿಸಬೇಕು. ಹಾಗಾಗಿ ದಾಸರು ಹೇಳುತ್ತಾರೆ ‘ಜೀವನವನ್ನು ವ್ಯರ್ಥಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ’ ಎಂದು. ನಮ್ಮನ್ನು ಯಶಸ್ಸಿನ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುವ ಸಂದೇಶ…
October 25, 2021
ಕೆನ್ನಾಯಿಯ ಜಾಡಿನಲ್ಲಿ ಒಂದು ಪಯಣ.... ಪರಿಸರದ ಕಾಳಜಿ ಹಾಗೂ ವನ್ಯಜೀವಿಗಳ ಕುರಿತು ಬರೆಯುವ ಹಾಗೂ ಛಾಯಾಚಿತ್ರ, ವಿಡಿಯೋ ಮೂಲಕ ನಮ್ಮಲ್ಲೊಂದು ಪರಿಸರದ ಕುರಿತು ಅಕ್ಕರೆ ಮೂಡಿಸುವ ಕನ್ನಡದ ಕೆಲವೇ ಕೆಲವು ಅಪರೂಪದ ಬರಹಗಾರರಲ್ಲಿ ಕೃಪಾಕರ-ಸೇನಾನಿಯವರು. ನಮ್ಮ ನಾಡಿನ ಹೆಮ್ಮೆ ಇವರು.  ಯಾವುದೇ ಪ್ರಚಾರ, ಕೀರ್ತಿ, ತೋರಿಕೆಗಳು ಏನೊಂದನ್ನೂ ಬಯಸದೇ ತಮ್ಮ ಪಾಡಿಗೆ ತಾವು ಪರಿಸರ, ವನ್ಯಜೀವಿಗಳಿಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರಲ್ಲ ಅದೇ ನನಗೆ ಅತ್ಯಂತ ಪ್ರಿಯವಾದುದು. ಇಡೀ ಜೀವನವನ್ನೇ…
ಲೇಖಕರು: Ashwin Rao K P
October 23, 2021
‘ನೆಲೆ ನಿಂತ ನೆಲವ ನೀ ಬೆಳಗು' ಪುಸ್ತಕವನ್ನು ಬರೆದವರು ಡಾ.ಎಚ್.ವಿ.ಚಂದ್ರಶೇಖರ್ ಇವರು. ಪುಸ್ತಕದ ಮುನ್ನುಡಿಯಲ್ಲಿ “ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೇ? ಮಕ್ಕಳು ಶಾಲೆಗೆ ಹೋಗಬೇಕೇ? ಅವರಿಗೆ ಯಾವ ತರಹದ ಶಿಕ್ಷಣ ಬೇಕು? ಈ ತರಹದ ಪ್ರಶ್ನೆಗಳು ಸಮಾಜದ ಎಲ್ಲ ಚಿಂತಕರನ್ನು ದಶಕಗಳಿಂದ ಕಾಡಿವೆ. ಶಿಕ್ಷಣ ಎಂದರೆ ಪ್ರಮಾಣಪತ್ರವೇ? ಪ್ರಮಾಣ ಪತ್ರ ಪಡೆದವರೆಲ್ಲ ಶಿಕ್ಷಿತರೇ? ಸುತ್ತಮುತ್ತ ನೋಡಿದರೆ ಹಾಗೆ ಕಾಣುವುದಿಲ್ಲ. ಸಾಮಾನ್ಯವಾಗಿ ಜನ ಹೇಳುತ್ತಾರೆ. ನಿರಕ್ಷರತೆಯಿಂದ ಭಾರತಕ್ಕೆ ಹಿನ್ನಡೆಯಾಗುತ್ತಿದೆ,…