ವಾಹನ – ರೈಲುಗಳಿಂದಾಗುವ ಅಸಹಜ ಸಾವುಗಳ ಇಳಿಕೆಯ ತುರ್ತು
ಸಪ್ಟಂಬರ್ ೨೦೧೪ರಲ್ಲಿ ಕಾಶ್ಮೀರದಲ್ಲಿ ಭೀಕರ ನೆರೆಯಿಂದಾಗಿ ಹಲವರ ಸಾವು. ಅದರಿಂದಾದ ಹಾನಿ ಸಾವಿರಾರು ಕೋಟಿ ರೂಪಾಯಿಗಳೆಂದು ಅಂದಾಜು. ೨೦೧೩ರಲ್ಲಿ ಉತ್ತರಖಂಡದಲ್ಲಿ ಚರಿತ್ರೆಯಲ್ಲೇ ಕಂಡರಿಯದ ಹಠಾತ್ ನೆರೆಯಿಂದಾಗಿ ಸತ್ತವರು ಸುಮಾರು ೫,೦೦೦ ಜನರೆಂದು ಸರಕಾರದಿಂದಲೇ ಘೋಷಣೆ. ೨೦೧೦ರಲ್ಲಿ ಮೇಘಸ್ಫೋಟದಿಂದ ಲೆಹ್ನಲ್ಲಿ ಭಾರೀ ಹಾನಿ. ೨೦೧೮ರಲ್ಲಿ ಕೇರಳದಲ್ಲಿ ಶತಮಾನದ ಮಹಾನೆರೆಯಿಂದಾಗಿ ಅಪಾರ ಹಾನಿ. ೨೦೧೮ರ ಆಗಸ್ಟಿನಲ್ಲಿ ಮಹಾಮಳೆಯಿಂದಾಗಿ ಕೊಡಗಿನಲ್ಲಾದ ಅನಾಹುತ ಹಾಗೂ ಜೀವಹಾನಿ ನಮ್ಮ ನೆನಪಿನಿಂದ ಮಾಸಿಲ್ಲ.
ಇವಲ್ಲದೆ, ಹಲವು ಭೂಕಂಪ ಹಾಗೂ ಬಿರುಗಾಳಿಗಳಿಂದಾದ ಹಾನಿಯನ್ನು ನೆನೆದಾಗ ನಮಗನಿಸುತ್ತದೆ: ನಮ್ಮ ದೇಶದಲ್ಲಿ ಮತ್ತೆಮತ್ತೆ ಜರಗುತ್ತಿರುವ ಪ್ರಾಕೃತಿಕ ವಿಕೋಪಗಳಿಂದಾಗಿ ಅಪಾರ ಜೀವಹಾನಿ ಆಗುತ್ತಿದೆ ಎಂದು.
- Read more about ವಾಹನ – ರೈಲುಗಳಿಂದಾಗುವ ಅಸಹಜ ಸಾವುಗಳ ಇಳಿಕೆಯ ತುರ್ತು
- Log in or register to post comments