ವಾಹನ – ರೈಲುಗಳಿಂದಾಗುವ ಅಸಹಜ ಸಾವುಗಳ ಇಳಿಕೆಯ ತುರ್ತು

ಸಪ್ಟಂಬರ್ ೨೦೧೪ರಲ್ಲಿ ಕಾಶ್ಮೀರದಲ್ಲಿ ಭೀಕರ ನೆರೆಯಿಂದಾಗಿ ಹಲವರ ಸಾವು. ಅದರಿಂದಾದ ಹಾನಿ ಸಾವಿರಾರು ಕೋಟಿ ರೂಪಾಯಿಗಳೆಂದು ಅಂದಾಜು. ೨೦೧೩ರಲ್ಲಿ ಉತ್ತರಖಂಡದಲ್ಲಿ ಚರಿತ್ರೆಯಲ್ಲೇ ಕಂಡರಿಯದ ಹಠಾತ್ ನೆರೆಯಿಂದಾಗಿ ಸತ್ತವರು ಸುಮಾರು ೫,೦೦೦ ಜನರೆಂದು ಸರಕಾರದಿಂದಲೇ ಘೋಷಣೆ. ೨೦೧೦ರಲ್ಲಿ ಮೇಘಸ್ಫೋಟದಿಂದ ಲೆಹ್‍ನಲ್ಲಿ ಭಾರೀ ಹಾನಿ. ೨೦೧೮ರಲ್ಲಿ ಕೇರಳದಲ್ಲಿ ಶತಮಾನದ ಮಹಾನೆರೆಯಿಂದಾಗಿ ಅಪಾರ ಹಾನಿ. ೨೦೧೮ರ ಆಗಸ್ಟಿನಲ್ಲಿ ಮಹಾಮಳೆಯಿಂದಾಗಿ ಕೊಡಗಿನಲ್ಲಾದ ಅನಾಹುತ ಹಾಗೂ ಜೀವಹಾನಿ ನಮ್ಮ ನೆನಪಿನಿಂದ ಮಾಸಿಲ್ಲ.
ಇವಲ್ಲದೆ, ಹಲವು ಭೂಕಂಪ ಹಾಗೂ ಬಿರುಗಾಳಿಗಳಿಂದಾದ ಹಾನಿಯನ್ನು ನೆನೆದಾಗ ನಮಗನಿಸುತ್ತದೆ: ನಮ್ಮ ದೇಶದಲ್ಲಿ ಮತ್ತೆಮತ್ತೆ ಜರಗುತ್ತಿರುವ ಪ್ರಾಕೃತಿಕ ವಿಕೋಪಗಳಿಂದಾಗಿ ಅಪಾರ ಜೀವಹಾನಿ ಆಗುತ್ತಿದೆ ಎಂದು.

Image

ಬಯಲುಸೀಮೆಯಲ್ಲಿ ಅಡಿಕೆ ಕೃಷಿ ಜೂಜಿನಾಟವೇ?

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ರೈತ ರಾಜು ಸ್ವಾಮಿ ತನ್ನ ನಾಲ್ಕು ಹೆಕ್ಟೇರ್ ಅಡಿಕೆ ತೋಟದಲ್ಲಿ ೧೨ ಕೊಳವೆಬಾವಿ ಕೊರೆಸಿದ್ದಾರೆ. ಒಂದರಲ್ಲೂ ನೀರು ಸಿಕ್ಕಿಲ್ಲ!
ಈಗ, ತನ್ನ ಅಡಿಕೆ ಸಸಿಗಳನ್ನು ಉಳಿಸಲಿಕ್ಕಾಗಿ ಟ್ಯಾಂಕರಿನಲ್ಲಿ ನೀರು ತಂದು ಹಾಕುತ್ತಿದ್ದಾರೆ, ೧೭ ಕಿಮೀ ದೂರದ ಭದ್ರಾ ಕಾಲುವೆಯಿಂದ. ೨೪,೦೦೦ ಲೀಟರ್ ನೀರು ತರುವ ಟ್ಯಾಂಕರಿನ ಒಂದು ಟ್ರಿಪ್ಪಿಗೆ ಅವರು ಪಾವತಿಸುವ ಹಣ ರೂ.೨,೦೦೦. ಪ್ರತಿಯೊಂದು ಹೆಕ್ಟೇರ್ ಅಡಿಕೆ ತೋಟಕ್ಕೆ ವಾರಕ್ಕೆ ಹಾಕಬೇಕಾದ ನೀರು ಕನಿಷ್ಠ ಒಂದು ಲಕ್ಷ ಲೀಟರ್ ಎಂಬುದವರ ಲೆಕ್ಕಾಚಾರ. ೨೦೧೯ರ ಜನವರಿ ಮೂರನೇ ವಾರದಿಂದ ಮೇ ಮಧ್ಯದ ತನಕ ಟ್ಯಾಂಕರಿನಲ್ಲಿ ತೋಟಕ್ಕೆ ನೀರು ತರಿಸಲಿಕ್ಕಾಗಿ ಅವರು ಮಾಡಿರುವ ವೆಚ್ಚ ಬರೋಬ್ಬರಿ ೫.೫ ಲಕ್ಷ ರೂಪಾಯಿ!

Image

ನೀರುಳಿಸುವ ಪಾಠ ಮನೆಯಲ್ಲೇ ಶುರುವಾಗಲಿ

ಹೈದರಾಬಾದಿಗೆ ಹೋಗಿದ್ದಾಗ, ಮಹಾನಗರದ ಕೇಂದ್ರ ಭಾಗದಲ್ಲಿದ್ದ ಹೋಟೆಲಿನಲ್ಲಿ ತಂಗಿದ್ದೆ. ಅಲ್ಲಿಯ ಬಾತ್‍ರೂಂನ ಬೇಸಿನ್‍ನ ಮೇಲ್ಗಡೆ ಗೋಡೆಯಲ್ಲಿ ದೊಡ್ಡ ಕನ್ನಡಿ. ಅದರ ಪಕ್ಕದಲ್ಲಿ ಕಣ್ಣಿಗೆ ರಾಚುವಂತೆ ಒಂದು ಭಿತ್ತಿಪತ್ರ.

Image

ಪರಿಸರಸ್ನೇಹಿ ಮಣ್ಣಿನ ಟೀ ಕಪ್ ಕಥನ

ಇತ್ತೀಚೆಗೆ ಬದರಿನಾಥಕ್ಕೆ ಹೋಗಿದ್ದಾಗ, ಅಲ್ಲಿ ಬಾದಾಮಿ ಹಾಲನ್ನು ನಮಗೆ ಕುಡಿಯಲು ಕೊಟ್ಟದ್ದು ಮಣ್ಣಿನ ಲೋಟದಲ್ಲಿ. ಆಗ ನೆನಪಾಯಿತು ಕೊಲ್ಕತಾದ ಮಣ್ಣಿನ ಟೀ ಕಪ್. ಅಲ್ಲಿ ಈಗಲೂ ಟೀ ಷಾಪ್‍ಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಲಭ್ಯ.
ಅದೊಂದು ಕಾಲವಿತ್ತು, ಉತ್ತರ ಭಾರತದಲ್ಲೆಲ್ಲ ಮಣ್ಣಿನ ಕಪ್‍ನಲ್ಲೇ ಟೀ ಕುಡಿಯುತ್ತಿದ್ದ ಕಾಲ. ಆದರೆ ಕಾಲ ಸರಿದಂತೆ ಆ ಅಭ್ಯಾಸ ನಿಂತೇ ಹೋಯಿತು. ಮಣ್ಣಿನ ಕಪ್‍ಗಳ ಸ್ಥಾನವನ್ನು ಬಳಸಿ-ಎಸೆಯುವ ಪ್ಲಾಸ್ಟಿಕ್ ಮತ್ತು ಕಾಗದದ ಕಪ್‍ಗಳು ಆಕ್ರಮಿಸಿಕೊಂಡವು.

Image

ಚಂಚಲ ಮನಸ್ಸು

ಎರಡು ಗುರುಕುಲಗಳಿದ್ದವು: ಪೂರ್ವ ಮತ್ತು ಪಶ್ಚಿಮ. ಅಲ್ಲಿನ ಶಿಷ್ಯರೊಳಗೆ ಯಾವಾಗಲೂ ಪೈಪೋಟಿ. ಅದೊಂದು ದಿನ, ಮಾರುಕಟ್ಟೆಗೆ ಹೋಗುವ ಹಾದಿಯಲ್ಲಿ ಪೂರ್ವ ಗುರುಕುಲದ ಒಬ್ಬ ಶಿಷ್ಯ ಮತ್ತು ಪಶ್ಚಿಮ ಗುರುಕುಲದ ಇನ್ನೊಬ್ಬ ಶಿಷ್ಯನ ಮುಖಾಮುಖಿ.

Image

ನೀರಿಂಗಿಸಿದರೆ ಸಾಲದು, ಮಣ್ಣಿನ ಸಾವಯವಾಂಶ ಹೆಚ್ಚಿಸಬೇಕು

ಚಿಕ್ಕಮಗಳೂರಿನಿಂದ ಕೆ.ಬಿದರೆಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ಪ್ರಯಾಣ. ಕಡೂರಿನಲ್ಲಿ ಬಸ್ ಬದಲಾಯಿಸಿ ಅಂದು ಕೆ.ಬಿದರೆ ತಲಪಿದಾಗ ಬಿಸಿಲೇರುತ್ತಿತ್ತು. ಹಿರಿಯರಾದ ಟಿ.ಬಿ. ಕುಮಾರಪ್ಪ ನಮಗಾಗಿ ಕಾದಿದ್ದರು.

Image

"ನಮ್ಮ ಅಜ್ಜಿಗೆ ಒಪ್ಪಿಗೆ ಆದೀತೇ ನಮ್ಮ ಆಹಾರ?"

"ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ?” ಇದು ಅಮೇರಿಕದಿಂದ ಮಹಾರಾಷ್ಟ್ರದ ಹಳ್ಳಿಗೆ ಮರಳಿದ ಗಾಯತ್ರಿ ಭಾಟಿಯಾ ಕೇಳುವ ನೇರ ಪ್ರಶ್ನೆ. ತಾವು ಖರೀದಿಸುವ ಹಣ್ಣು, ತರಕಾರಿ, ಧಾನ್ಯ ಸಹಿತ ಎಲ್ಲ ಆಹಾರದ ಬಗ್ಗೆಯೂ ಗ್ರಾಹಕರು ಈ ಪ್ರಶ್ನೆ ಕೇಳಲೇ ಬೇಕೆಂಬುದು ಅವರ ಆಗ್ರಹ.   

Image

ಕುಡಿಯುವ ನೀರಿಗಾಗಿ ಜಗಳ - ಕೊಲೆಯಲ್ಲಿ ಅವಸಾನ

ನೀರಿಗಾಗಿ ಪರದಾಟದ ಕತೆಗಳನ್ನು ಕೇಳಿದ್ದೇವೆ; ಹೋರಾಟದ ಕತೆಗಳನ್ನೂ ಕೇಳಿದ್ದೇವೆ. ನೀರಿಗಾಗಿ ಕೊಲೆ ಮಾಡಿದ ಕತೆ ಗೊತ್ತೇ?

ಈ ಕರಾಳ ಪ್ರಕರಣ ನಡೆದದ್ದು ಭೋಪಾಲದ ಷಹಜೇಹಾನ್‍ಬಾದ್ ಪ್ರದೇಶದಲ್ಲಿ, ೧೩ ಮೇ ೨೦೦೯ರಂದು. ಅಲ್ಲಿನ ಸಂಜಯನಗರ ಬಸ್ತಿಯಲ್ಲಿ ಕುಡಿಯುವ ನೀರಿಗಾಗಿ ಆರಂಭವಾದ ಜಗಳ ಅವಸಾನವಾದದ್ದು ಚೂರಿ ಇರಿತದಿಂದ ಒಂದೇ ಕುಟುಂಬದ ತಂದೆ-ತಾಯಿ-ಮಗನ ಕೊಲೆಯಲ್ಲಿ! ಕೊಲೆಯಾದವರು ಜೀವನ್ ಮಾಳವೀಯ (೪೩ ವರುಷ), ಅವರ ಪತ್ನಿ ಸವಿತಾ ಮತ್ತು ಮಗ ರಾಜು (೧೯ ವರುಷ). ಕೊಲೆ ಮಾಡಿದವರು ದೀನೂ ಮತ್ತು ಅವನ ಸಂಗಡಿಗರು.

Image

ಬಿದಿರಿನ ನೀರಿನ ಬಾಟಲಿ

ಬಿದಿರಿನ ನೀರಿನ ಬಾಟಲಿ
                 -ಅಡ್ಡೂರು ಕೃಷ್ಣ ರಾವ್
ಇಪ್ಪತ್ತು ವರುಷಗಳ ಹಿಂದಿನ ಮಾತು. ಧೃತಿಮಾನ್ ಬೋರಾ ತನ್ನ ವಿದ್ಯಾವಂತ ಹೆತ್ತವರಿಗೆ ಹೇಳಿದ ಮಾತು: ಹನ್ನೆರಡನೆಯ ತರಗತಿಯ ನಂತರ ನಾನು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ.
ವಿದ್ಯಾಲಯದಲ್ಲಿ ಕಲಿಯುವ ಬದಲಾಗಿ, ಧೃತಿಮಾನ್ ಬಿದಿರಿನ ಪೀಠೋಪಕರಣಗಳು ಮತ್ತು ಅಡುಗೆ ಹಾಗೂ ಕೃಷಿ ಸಲಕರಣೆಗಳನ್ನು ತಯಾರಿಸಲು ಶುರು ಮಾಡಿದರು. ಹೀಗೆ ಆರಂಭವಾಯಿತು ಡಿಬಿ ಇಂಡಸ್ಟ್ರೀಸ್ ಎಂಬ ಬಿದಿರಿನ ಸಾಧನಗಳ ಪುಟ್ಟ ತಯಾರಿಕಾ ಘಟಕ.

Image