ಕೊಡಿಯಾಲ ತೇರು (ಮಂಗಳೂರು ರಥೋತ್ಸವ)

ಮಂಗಳೂರಿನ ಸುಪ್ರಸಿದ್ಧ ವಾರ್ಷಿಕ ಉತ್ಸವ ಕೊಡಿಯಾಲ ತೇರು ಅಥವಾ ಮಂಗಳೂರು ರಥೋತ್ಸವ. ಇದು ಗೌಡಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು (ಕೊಂಕಣಿಗರು) ವರುಷವಿಡೀ ನಿರೀಕ್ಷಿಸುವ ಸಂಭ್ರಮದ ಆಚರಣೆ.

ಇತ್ತೀಚೆಗೆ, ೧ ಫೆಬ್ರವರಿ ೨೦೨೦ರಂದು ಜರಗಿದ ಮಂಗಳೂರು ರಥೋತ್ಸವ ಕೊಂಕಣಿಗರ ಭಾವಭಕ್ತಿ ತುಂಬಿದ ಭಾಗವಹಿಸುವಿಕೆಗೆ ಮಗದೊಮ್ಮೆ ಸಾಕ್ಷಿಯಾಯಿತು. ಶತಮಾನಗಳ ಮುಂಚೆ ತಮ್ಮ ಮೂಲನೆಲೆ ತೊರೆದು ದಕ್ಷಿಣಕ್ಕೆ ಸಾಗಿ ಬಂದ ಈ ಸಮುದಾಯದವರು ಮಂಗಳೂರು ಸಹಿತ ಪಶ್ಚಿಮ ಕರಾವಳಿಯ ಹಲವಾರು ಊರುಗಳಲ್ಲಿ ನೆಲೆಯೂರಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ಎಲ್ಲ ಊರುಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

Image

ಕಲಾಕೃತಿಗಳ ಮಾಯಾಲೋಕಕ್ಕೆ ಜನಸಮುದಾಯದ ಸೇತು: ಉತ್ಸವ್ ರಾಕ್ ಗಾರ್ಡನ್ (ಭಾಗ ೨)

ಉತ್ಸವ್ ರಾಕ್ ಗಾರ್ಡನಿಗೆ ೧೧ ಜನವರಿ ೨೦೧೪ರ ಪೂರ್ವಾಹ್ನ ಭೇಟಿಯಿತ್ತಾಗ, ಅದು ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದರು ಅದರ ಸ್ಥಾಪಕ ತಿಪ್ಪಣ್ಣ ಬಸವಣ್ಯೆಪ್ಪ ಸೊಲಬಕ್ಕನವರ್ (ಭಾಗ ೧ ಓದಿ).

ಅಂದು ಅಪರಾಹ್ನ ಅವರೊಂದಿಗೆ ಸಂವಾದ. ಆ ಸಂದರ್ಭದಲ್ಲಿ, “ಗ್ರಾಮಾಭಿವೃದ್ಧಿಗೆ ನಾವೇನು ಮಾಡಬಹುದು?” ಎಂಬುದರ ಬಗ್ಗೆ ತಮ್ಮ ಚಿಂತನೆಗಳನ್ನು ಅವರು ಹಂಚಿಕೊಂಡಿದ್ದರು. ಅದನ್ನು ಅವರ ಮಾತುಗಳಲ್ಲೇ ಈ ಬರಹದಲ್ಲಿ ದಾಖಲಿಸಿದ್ದೇನೆ:

"ನಾನು ನನ್ನ ಹಳ್ಳಿಗೆ ಮರಳಿ ಬಂದಿದ್ದು - ಎರಡು ಪ್ರಾಜೆಕ್ಟ್ ಇಟ್ಕಂಡು. ಒಂದು ಗ್ರಾಮರಂಗಭೂಮಿ ಸಂಘಟಿಸೋದು; ಅದಕ್ಕೆ “ಥರ್ಡ್ ರಂಗಭೂಮಿ” ಅಂತಾರೆ. ಇನ್ನೊಂದು ಸ್ವಾವಲಂಬಿ ಆಗೋದು.

Image

ಕಲಾಕೃತಿಗಳ ಮಾಯಾಲೋಕಕ್ಕೆ ಜನಸಮುದಾಯದ ಸೇತು: ಉತ್ಸವ್ ರಾಕ್ ಗಾರ್ಡನ್

ಅಲ್ಲಿ ಎತ್ತಕಂಡರತ್ತ ಆಳೆತ್ತರದ ಮಣ್ಣಿನ ಶಿಲ್ಪಗಳು. ಹಳ್ಳಿ ಬದುಕಿನ ಕಾಯಕಗಳು, ಬೇಸಾಯದ ಕೆಲಸಗಳು, ವಿವಿಧ ಗುಡಿಕೈಗಾರಿಕೆಗಳು, ಹತ್ತಾರು ಜಾನಪದ ಕಲಾಭಂಗಿಗಳು - ಇವೆಲ್ಲದರಲ್ಲಿ ನಿರತರಾಗಿರುವ ವ್ಯಕ್ತಿಗಳ ಶಿಲ್ಪಗಳು. ಪ್ರತಿಯೊಂದು ಶಿಲ್ಪವೂ ಜೀವಂತ ಎನಿಸುವಂತಿದೆ!

ಅದುವೇ ಉತ್ಸವ್ ರಾಕ್ ಗಾರ್ಡನ್. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಆರು ವರುಷಗಳ ಮುನ್ನ, ೧೧ ಜನವರಿ ೨೦೧೪ರಂದು ಅಲ್ಲಿನ ಅದ್ಭುತ ಕಲಾಕೃತಿಗಳನ್ನು ನೋಡುತ್ತಾ ನೋಡುತ್ತಾ ಅರ್ಧ ದಿನವೇ ಕಳೆದಿತ್ತು.

Image

ಟೊಮೆಟೊ ಬೆಲೆ ಕುಸಿತ: ಚೀನಾದಿಂದ ಆಮದಿನ ಆಘಾತ

ಆಂಧ್ರ ಪ್ರದೇಶದ ಚಿತ್ತೂರು ಮತ್ತು ಸುತ್ತಮುತ್ತಲಿನ ಟೊಮೆಟೊ ಬೆಳೆಗಾರರಿಗೆ ಖುಷಿಯೋ ಖುಷಿ. ಯಾಕೆಂದರೆ “ಒಂದು ಜಿಲ್ಲೆ ಒಂದು ಉತ್ಪನ್ನ” (ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ – ಒಡಿಒಪಿ) ಯೋಜನೆಯ ಜ್ಯಾರಿಗಾಗಿ ಕೇಂದ್ರ ಸರಕಾರ ಆಯ್ಕೆ ಮಾಡಿದ ಜಿಲ್ಲೆಗಳಲ್ಲಿ ಚಿತ್ತೂರು ಸಹ ಸೇರಿತ್ತು.

Image

ಕದ್ರಿ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ

ಮಂಗಳೂರಿನ ವಾರ್ಷಿಕ “ಹಬ್ಬ”ಗಳಲ್ಲೊಂದು ಜನವರಿ ತಿಂಗಳ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಕದ್ರಿ ಉದ್ಯಾನದಲ್ಲಿ ಏರ್ಪಡಿಸಲಾಗುವ “ಫಲಪುಷ್ಪ ಪ್ರದರ್ಶನ.”
೨೦೨೦ರ ಫಲಪುಷ್ಪ ಪ್ರದರ್ಶನ ಮೂರು ದಿನ (ಜನವರಿ ೨೪ರಿಂದ ೨೬ರ ವರೆಗೆ) ಜರಗಿತು. ಪ್ರತಿ ವರುಷದಂತೆ ಈ ವರುಷವೂ ಹೂಗಳಿಂದ ರಚಿಸಿದ ವಿಶೇಷ ಕಲಾಕೃತಿಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದವು. ಕೇಸರಿ ಸೇವಂತಿಗೆ ಹೂಗಳಿಂದ ಸ್ವಾಮಿ ವಿವೇಕಾನಂದರ ಮೂರ್ತಿ, ಬಿಳಿ ಸೇವಂತಿಗೆ ಹೂಗಳಿಂದ ಹಾರುವ ಪಾರಿವಾಳದ ಕಲಾಕೃತಿ ಮತ್ತು ಕೆಂಪು ಗುಲಾಬಿಗಳಿಂದ ಐಸ್‍ಕ್ರೀಮ್ ಕೋನ್ ರಚಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳೊಂದಿಗೆ ಸೆಲ್ಫೀ ತೆಗೆಯುವುದೆಂದರೆ ಹಲವರಿಗೆ ಖುಷಿಯೋ ಖುಷಿ.

Image

ಬದಲಿಮೇವಿನ ಸಂಶೋಧನೆಗೆ ೫೦ ವರುಷ! ಆದರೂ ಮೇವು ಕೊರತೆ ನಿರಂತರ

ತಮಿಳ್ನಾಡಿನ ೨೦೧೬-೧೭ರ ಬರಗಾಲವನ್ನು ಶತಮಾನದ ಅತ್ಯಂತ ದಾರುಣ ಬರಗಾಲ ಎನ್ನಲಾಗಿದೆ. ಆಗ, ತೂತುಕುಡಿಯ ಮಂಗಳಗಿರಿ ಗ್ರಾಮದ ಡಿ. ಕಿಂಗ್ಸ್ ಲೇ ಅವರಿಗೆ ತಮ್ಮ ೧೫ ದನಗಳಿಗೆ ಮೇವು ಒದಗಿಸುವುದು ಹೇಗೆಂಬುದೇ ಚಿಂತೆಯಾಗಿತ್ತು.

Image

ಜಮೀನು ರೈತರಿಗೆ ವಾಪಾಸ್: ಚತ್ತಿಸ್ ಘರ್ ಸರಕಾರದ ದಿಟ್ಟ ಕ್ರಮ

ಚತ್ತಿಸ್‍ಘರ್ ರಾಜ್ಯದ ಬುಡಕಟ್ಟು ಜಿಲ್ಲೆ ಬಸ್ತಾರಿನ ಸಾವಿರಾರು ರೈತರಿಗೆ ಸಂಭ್ರಮ. ಪ್ರತಿ ದಿನವೂ ಲೊಹಾಂಡಿಗುಡ ಮತ್ತು ತಾಕರ್‍ಗುಡ ತಾಲೂಕುಗಳ ಹತ್ತಾರು ರೈತರಿಂದ ಪಂಚಾಯತ್ ಕಚೇರಿಗೆ ಭೇಟಿ – ತಮ್ಮ ಭೂದಾಖಲೆಗಳ ಪರಿಶೀಲನೆಗಾಗಿ.

Image

ಏಳು ವರುಷ ಕೃತಕ ಹಾಲು ಮಾರಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ!

ಲೀಟರಿಗೆ ಕೇವಲ ಆರು ರೂಪಾಯಿ ವೆಚ್ಚದಲ್ಲಿ ಉತ್ಪಾದಿಸಿದ ಕೃತಕ ಹಾಲನ್ನು ಲೀಟರಿಗೆ ೨೫ ರೂಪಾಯಿಗೆ ಏಳು ವರುಷ ಮಾರಾಟ ಮಾಡಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಇಬ್ಬರು ಸೋದರರು!

Image