“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ ಗ್ರಾಮದಲ್ಲಿದೆ.
ಅಲ್ಲಿ ಅವರ ಕುಟುಂಬದ ಹಿಂದಿನ ಮೂರು ತಲೆಮಾರುಗಳದ್ದು ಬಡತನದ ಬದುಕು. ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ರಾಮ್ ಶರಣ್ ವರ್ಮಾ. ಆದರೆ ಕುಟುಂಬದ ಬಡತನದಿಂದಾಗಿ ಅವರೂ ಕೃಷಿಯಲ್ಲಿ ತೊಡಗಬೇಕಾಯಿತು.

Image

ಬಿಳಿ ಒಂಟೆಮರಿಯಿಂದ ತಾಯಿ ಒಂಟೆಯ ಹುಡುಕಾಟ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜಕುಮಾರ ಮತ್ತೊಬ್ಬ ಶ್ರೀಮಂತ ಒಂದೂರಿನಲ್ಲಿ ವಾಸ ಮಾಡುತ್ತಿದ್ದರು. ರಾಜಕುಮಾರನ ಕುಟುಂಬದೊಂದಿಗೆ ವೈವಾಹಿಕ ಸಂಬಂಧ ಬೆಳೆಸಬೇಕೆಂಬುದು ಶ್ರೀಮಂತನ ಆಶೆ.
ಅದಕ್ಕಾಗಿ ರಾಜಕುಮಾರನಿಗೆ ಒಂದು ನೂರು ಬಿಳಿ ಒಂಟೆಗಳನ್ನು ಉಡುಗೊರೆ ನೀಡಲು ನಿರ್ಧರಿಸಿದ ಶ್ರೀಮಂತ. ಆದರೆ, ಕೊನೆಗೆ ಎಣಿಸುವಾಗ ಅವನಲ್ಲಿದ್ದದ್ದು ತೊಂಬತ್ತೊಂಬತ್ತು ಬಿಳಿ ಒಂಟೆಗಳು. ಹಾಗಾಗಿ, ತನ್ನದೇ ಹೆಣ್ಣು ಬಿಳಿ ಒಂಟೆಯನ್ನು ಸೇರಿಸಿ, ಭರ್ತಿ ಒಂದು ನೂರು ಬಿಳಿ ಒಂಟೆಗಳನ್ನು ಉಡುಗೊರೆಯಾಗಿತ್ತ. ತನ್ನ ಬಿಳಿ ಒಂಟೆಯ ಮರಿಯನ್ನು ತನ್ನ ಮನೆಯಲ್ಲೇ ಉಳಿಸಿಕೊಂಡ.

Image

ನದಿಗಳ ಪುನರುಜ್ಜೀವನ : ತರುಣ್ ಭಾರತ್ ಸಂಘದ ಮಾದರಿ

ವಾರ್ಷಿಕ ೫೩೧ ಮಿಮೀ ಮಳೆ ಸುರಿಯುವ ರಾಜಸ್ಥಾನದಲ್ಲಿ ಆಗಾಗ ಬರಗಾಲ. ೧೯೭೦ರಲ್ಲಿ ಅಳ್ವಾರ್ ಜಿಲ್ಲೆಯ ರಾಜ್‍ಘರ್, ಲಚ್‍ಮನ್‍ಘರ್, ತಾನಘಜಿ ಮತ್ತು ಬಾನ್ಸು – ಈ ನಾಲ್ಕು ತಾಲೂಕುಗಳನ್ನು “ಕಪ್ಪು ಪ್ರದೇಶ”ವೆಂದು ರಾಜ್ಯ ಸರಕಾರ ಘೋಷಿಸಿತು.

Image

ಶೂನ್ಯ ಭಂಡವಾಳ ಸಹಜ ಕೃಷಿ – ಮುಂದೇನು?

ಜುಲಾಯಿ ೨೦೧೭ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, “ಶೂನ್ಯ ಭಂಡವಾಳದ ಸಹಜ ಕೃಷಿ” ವಿಧಾನವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದರು. “ಇಂತಹ ಕ್ರಮಗಳಿಂದ ಭಾರತದ ೭೫ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರೈತರ ಆದಾಯ ಇಮ್ಮಡಿಗೊಳಿಸಲು ಸಹಾಯವಾದಿತು” ಎಂದು ಘೋಷಿಸಿದರು.

Image

ಮಜಾ ಭಾರತದ ಗುರುವೇ ನಮ್ಮ ಗುರು ಕಿರಣ್

ಮನೆಯಲ್ಲಿ ಕುಳಿತು ದೂರದರ್ಶನ ನೋಡುವವರಿಗೆಲ್ಲ ಮಜಾ ಭಾರತ ಅಚ್ಚು ಮೆಚ್ಚಿನ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಅದರಲ್ಲಿನ ತೀರ್ಪುಗಾರರ ಪೈಕಿ ಓರ್ವವೇ ನಮ್ಮವರೇ ಆದ ಗುರು ಕಿರಣ್. ಗುರು ಕಿರಣ್ ಕಾರ್ಯಕ್ರಮದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿ ಅವರ ಅಭಿನಯದಲ್ಲಿನ ಕುಂದು ಕೊರತೆಗಳನ್ನು ತಿದ್ದುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಅನುಭವ ಅವರಿಗೆ ಬಂದದ್ದಾದರೂ ಹೇಗೆ ಎಂದರೆ ಅವರ ಹಿಂದಿನ ದಿನಗಳು ನೆನಪಾಗುವುದು ಸಹಜ. ಈಗ ಕನ್ನಡ ಚಿತ್ರರಂಗದಲ್ಲಿ ಸಂಗೀತ ಎಂದರೆ ಗುರುಕಿರಣ್ ಎಂದು ಹೆಸರುವಾಸಿಯಾಗಿದೆ. ಗುರು ನಿಜಕ್ಕೂ ಉತ್ತಮ ಸಂಗೀತಗಾರ ಮತ್ತು ಹಾಡುಗಾರರೂ ಹೌದು. ನಟನೆಯಲ್ಲೂ ಸೈ ಅನಿಸಿಕೊಂಡಿದ್ದಾರೆ. 

Image

ಖಾದಿ ಬಟ್ಟೆಯಲ್ಲಿ ಮುದ್ರಿತ ಗಾಂಧೀಜಿ ಅಂಚೆಚೀಟಿ ನೋಡಿರುವಿರಾ?

ಮಾನವನಾಗಿ ಹುಟ್ಟಿದ ಮೇಲೆ ಹವ್ಯಾಸಗಳು ಇರುವುದು ಸಹಜ. ಕೆಲವರಿಗೆ ಕ್ರೀಡೆ, ಇನ್ನು ಕೆಲವರಿಗೆ ಪ್ರವಾಸ, ಹಾಗೇ ಓದು, ನಾಣ್ಯಗಳ ಸಂಗ್ರಹ, ಛಾಯಾಗ್ರಹಣ, ಚಾರಣ ಹೀಗೆ ಹತ್ತು ಹಲವಾರು ಹವ್ಯಾಸಗಳನ್ನು ಬೆಳೆಸಿಕೊಂಡು ಅದನ್ನು ಪೋಷಿಸಿ ತಮ್ಮನ್ನು ತಾವೇ ಮರೆಯುವವರು ಇದ್ದಾರೆ. ಇದೆಲ್ಲಾ ಮನಸ್ಸಿಗೆ ಮುದ ನೀಡುವ ಹವ್ಯಾಸಗಳಾದರೆ ಕೆಲವು ಅತ್ಯಂತ ಅಪಾಯಕಾರೀ ಹವ್ಯಾಸಗಳಿವೆ. ಮದ್ಯಪಾನ, ಧೂಮಪಾನ ಹಾಗೆಯೇ ಮೊಬೈಲ್‌ನಲ್ಲಿ ಅಪಾಯಕಾರೀ ಆಟಗಳನ್ನು ಆಡುವುದು. ಇವೆಲ್ಲ ಹಣದ ಜೊತೆಗೆ ನೆಮ್ಮದಿಯನ್ನೂ ಕಳೆದುಕೊಳ್ಳುವ ಹವ್ಯಾಸಗಳು. ಇವುಗಳಿಂದ ಆದಷ್ಟು ದೂರವಿರುವುದು ಒಳಿತು.

Image

ನೀವು ಅರಿಯದ ಶತಾಯುಷಿ, ಸ್ವಾತಂತ್ರ್ಯ ಸೇನಾನಿ ಹಿರಿಯಜ್ಜನ ನೆನಪುಗಳು

ಪಂಡಿತ ಸುಧಾಕರ್ ಚತುರ್ವೇದಿಯವರು ಇನ್ನಿಲ್ಲ ಎಂದು ಎರಡು ದಿನಗಳ ಹಿಂದೆ ದಿನಪತ್ರಿಕೆಯಲ್ಲಿ ಸಣ್ಣ ಸುದ್ದಿಯೊಂದನ್ನು ಗಮನಿಸಿದಾಗ ಅವರ ಸುದೀರ್ಘ ೧೨೩ ವರ್ಷಗಳ ಜೀವನದ ಬಗ್ಗೆ ತಿಳಿಯುವ ಮನಸ್ಸಾಯ್ತು. ಬಹುಷಃ ನಾನು ಮತ್ತು ನನ್ನಂತೆ ಬಹುತೇಕರು ಹುಟ್ಟಿರದ ಕಾಲಘಟ್ಟದಲ್ಲಿ ಜೀವಿಸಿದ (ಜನನ: ಎಪ್ರಿಲ್ ೨೦, ೧೮೯೭) ಈ ಹಿರಿಯ ಶತಾಯುಷಿಯ ಬದುಕೇ ಒಂದು ಸಾಧನೆಯೆಂದರೆ ತಪ್ಪಾಗಲಾರದು. ಇಂದು ಸುಧಾಕರ್ ಚತುರ್ವೇದಿ ಎಂದರೆ ಯಾರಿಗೂ ಪರಿಚಯವಿರಲಾರದು. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯವರ ಅತ್ಯಂತ ನಿಕಟವರ್ತಿಯಾಗಿದ್ದವರು ಇವರು. ಮೂರು ಶತಮಾನಗಳನ್ನು ಅತ್ಯಂತ ಜತನದಿಂದ ಗಮನಿಸಿದ ಹಿರಿಯರು ತಮ್ಮ ಅಂತ್ಯಕಾಲದವರೆಗೂ ಚಟುವಟಿಕೆಯಿಂದ ಬದುಕಿದ್ದರು ಎಂದರೆ ಅಚ್ಚರಿಯೇ ಸರಿ. 

Image

ಮ್ಯಾಜಿಕ್ ಮದ್ದಳೆ

ಒಂದಾನೊಂದು ಕಾಲದಲ್ಲಿ ಜಪಾನಿನಲ್ಲಿ ಗೆನ್‌ಗೊರೊ ಎಂಬ ಹೆಸರಿನವನೊಬ್ಬನಿದ್ದ . ಅವನ ಬಳಿ ಇತ್ತೊಂದು ಮ್ಯಾಜಿಕ್ ಮದ್ದಳೆ.

ಅವನು ಅದರ ಬಲಬದಿ ಬಡಿಯುತ್ತಾ “ಮೂಗು ಉದ್ದವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಉದ್ದವಾಗುತ್ತಿತ್ತು. ಅದರ ಎಡಬದಿ ಬಡಿಯುತ್ತಾ “ಮೂಗು ಗಿಡ್ಡವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಗಿಡ್ಡವಾಗುತ್ತಿತ್ತು. ಆದರೆ, ಈ ಮದ್ದಳೆಯನ್ನು ಮೋಜಿಗಾಗಿ ಬಳಸಬಾರದೆಂಬುದು ನಿಯಮ. ಜನರನ್ನು ಸಂತೋಷ ಪಡಿಸಲಿಕ್ಕಾಗಿ ಮಾತ್ರ ಅದನ್ನು ಬಳಸಬೇಕಾಗಿತ್ತು.

ಯಾರಾದರೂ ಬಂದು ತನ್ನ ಮೂಗನ್ನು ಉದ್ದ ಅಥವಾ ಗಿಡ್ಡ ಮಾಡಬೇಕೆಂದು ವಿನಂತಿಸಿದರೆ, ಗೆನ್‌ಗೊರೊ ಅವರಿಗಾಗಿ ಮದ್ದಳೆ ಬಾರಿಸುತ್ತಿದ್ದ. ಅವರ ಕೋರಿಕೆ ಈಡೇರಿಸಿ ಅವರನ್ನು ಖುಷಿ ಪಡಿಸುತ್ತಿದ್ದ.

Image

ದಕ್ಷಿಣ ಕನ್ನಡದ ಚಿಟ್ಟೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ದೀಪಕ್ ನಾಯ್ಕ್, ವಿಶ್ವಾಸ, ದೇವಿಪ್ರಸಾದ್ ಕೆ.ಯನ್.
ಪ್ರಕಾಶಕರು
ನೇಚರ್ ಕ್ಲಬ್, ವಿವೇಕಾನಂದ ಕಾಲೇಜು, ನೆಹರುನಗರ, ಪುತ್ತೂರು
ಪುಸ್ತಕದ ಬೆಲೆ
ರೂ. 450/-

ಚಿಟ್ಟೆಗಳು ವಿಭಿನ್ನವಾದ ದೇಹ ರಚನೆಯಿಂದಾಗಿ ತುಂಬಾ ಆಕರ್ಷಣೀಯ ವಾಗಿರುತ್ತವೆ. ಪ್ರಾಣಿಜಗತ್ತಿನ ಅಪೂರ್ವ ಜೀವಿಗಳಿವು. ಹೂವಿಗೂ ಚಿಟ್ಟೆಗೂ ಪ್ರಕೃತಿಯಲ್ಲಿ ಅವಿನಾಭಾವ ಸಂಬಂಧ. ಹತ್ತಾರು ವಿಧದ ಹೂಗಳನ್ನು ಮನೆಯ ಸುತ್ತ ನೆಟ್ಟು ಬೆಳೆಸಿದರೆ ಚಿಟ್ಟೆಗಳು ಹೂಗಳಿಗೆ ಆಕರ್ಷಿತವಾಗುತ್ತವೆ. ಆಗ ಹತ್ತಿರದಿಂದ ನೋಡಲು ಅಂದ.
ನಿಸರ್ಗದ ಆಹಾರ ಸರಪಳಿಯಲ್ಲಿ ಚಿಟ್ಟೆಗಳಿಗೆ ವೈಶಿಷ್ಟ್ಯವಾದ ಪಾತ್ರ. ಇವುಗಳಿಗೆ ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಮಹತ್ತರ ಜವಾಬ್ದಾರಿ. ಚಿಟ್ಟೆ ವೀಕ್ಷಣೆ, ಅವುಗಳ ಅಧ್ಯಯನ, ದಾಖಲೀಕರಣಗಳಲ್ಲಿ ತೊಡಗಿಸಿಕೊಂಡರೆ ಪರೋಕ್ಷವಾಗಿ ಚಿಟ್ಟೆಗಳನ್ನು ಸಂರಕ್ಷಿಸಿದಂತಾಗುತ್ತದೆ.

ಬರಪೀಡಿತ ಜಿಲ್ಲೆ ಹಸುರಾಗಿಸಲು ಮಳೆಕೊಯ್ಲು – ಜಲ ಸಂರಕ್ಷಣೆ

ಸಂಭಾಜಿ ನೆಹರ್‍ಕರ್ ಅವರ ಜಮೀನು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿದೆ. ಬರಗಾಲದಿಂದಾಗಿ ಅವರು ಬವಣೆ ಪಟ್ಟಿದ್ದ ವರುಷಗಳು ಹಲವು. ಯಾಕೆಂದರೆ, ಅಲ್ಲಿನ ಸರಾಸರಿ ವಾರ್ಷಿಕ ಮಳೆ ಕೇವಲ ೬೬೬ ಮಿಮೀ. ೨೦೧೪-೧೫ರಲ್ಲಿ ಮರಾಠವಾಡ ಪ್ರದೇಶದಲ್ಲಿ ದಿನನಿತ್ಯದ ಬಳಕೆಗೂ ನೀರಿನ ತತ್ವಾರ ಆಗಿತ್ತು; ಕೃಷಿಗೆ ನೀರಿಲ್ಲವಾಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ರೈತರು ಊರು ಬಿಟ್ಟು ಗುಳೇ ಹೋಗಬೇಕಾಗುತ್ತದೆ. ೨೦೧೮ರಲ್ಲಿಯೂ ಇಂತಹದೇ ಪರಿಸ್ಥಿತಿ ಬೀಡ್‍ನಲ್ಲಿ ಎದುರಾಗಿತ್ತು. ಆದರೆ ಈ ವರುಷ ಹಾಗಾಗಿಲ್ಲ. ಅಲ್ಲಿನ ಬಾವಿಗಳು, ರೈತರ ಬೆಳೆಗಳು ಒಣಗಿಲ್ಲ.

Image