ಕವನಗಳು

ವಿಧ: ಕವನ
August 07, 2024
ಗಝಲ್ ೧ ಕತ್ತು ಹಿಸುಕಿ ಕೊಲ್ಲುವವನು ಅರ್ಥವಿರುವ ಗಂಡನೆ ಬೆತ್ತಲಾಗಿ  ನೋಡಿದವನು ಸ್ವಾರ್ಥವಿರುವ ಗಂಡನೆ   ಭೂಮಿಯೀಗ ದುಂಡೊ ತುಂಡೊ ಹಾಗೆ ನೋವ ತಂದೆಯೆ ಭ್ರಾಂತಿತುಂಬಿ  ಪ್ರೀತಿ ಕೊಂದ ಲೋಭವಿರುವ ಗಂಡನೆ   ಅಪ್ಪ ಮದುವೆ ಮಾಡಿ ಬಿಟ್ಟ ಮತ್ತೆಯಿತ್ತ ಸುಳಿಯದೆ ಉಬ್ಬು ತಗ್ಗು ಎಲ್ಲ ಹೋಗೆ ಶೀತವಿರುವ ಗಂಡನೆ   ಬೆತ್ತ ಹಿಡಿದ ಕೈಗಳಿಂದ ಒಲವು ಬರದು ಎಂದಿಗು ಕದ್ದು ಬೆಕ್ಕು ಹಾಲು ಕುಡಿಯೆ ಕಾಯುತಿರುವ ಗಂಡನೆ   ಜೀತ ಮುಕ್ತ ಎನುತ ನಡೆದೆ ನೀತಿ ಇರದ ಈಶನೆ ಚಿತ್ತ ಕಲಕಿ ಹೋದ ಗಳಿಗೆ ಕಾರುತಿರುವ ಗಂಡನೆ…
ವಿಧ: ಕವನ
August 06, 2024
ಅಯ್ಯೋ ಮೂಢಾ  ಎಲ್ಲ ಪಕ್ಷದ ನಾಯಕರಿಗೂ ಸೈಟ್ಗಳ ಹಂಚಿಕೆ ಮಾಡಿದೆ ಮೈಸೂರು ಮೂಡಾ...   ಇದರಲ್ಲಿ ಜನಸಾಮಾನ್ಯರ ಒಂದೂ ಹೆಸರು ಕೇಳಿ ಬರಲಿಲ್ಲವೋ ಮೂಢಾ! *** ರಾಜಾಸ್ಥಾನದಿಂದ ನಾಯಿ ಮಾಂಸ....!  ರಾಜಾಸ್ತಾನದಿಂದ ನಾಯಿಮಾಂಸ ಬಂದಿದೆಯಂತೆ! ಜನ ತಿನ್ನದಂತೆ ಎಚ್ಚರವಹಿಸಿ ನಾಯಕರೇ...   ಕುರಿಗಳಂತೆ ತಲೆ ಬಗ್ಗಿಸಿ ಹೋಗುತ್ತಿದ್ದವರು- ನಾಯಿಗಳಂತೆ ಬೊಗಳಿಯಾರು ತಡೆಯಿರೇ! *** ಪಾದಯಾತ್ರೆ  ಎಲೆಕ್ಷನ್ ಮುಗಿಯಿತೀಗ ಕೊಂಚ ಫ್ರೀ- ಮುಗಿಯಿತು ರಾಜಕೀಯ ಆಡಂಬರದ ಜಾತ್ರೆ...   ದೇಹದ ಕೊಬ್ಬನಿಳಿಸಲು ವೈದ್ಯರ…
ವಿಧ: ಕವನ
August 05, 2024
ಗೋವಿಂದ ಹರಿಗೋವಿಂದ ಹರಿಗೋವಿಂದ   ನಿನ್ನ ನಾಮ ಸ್ಮರಣೆಯಿಂದ ಮನಕಾನಂದ ಹರಿಯೆ ನಿನ್ನ ಕರುಣೆಯಿಂದ ನಮಗಾನಂದ||ಪ||   ಬೇಡಲು ಬಂದಿರುವೆ ಬಾಳಲಿ ನೋವಿಂದ ಕರುಣದಿ ಪರಿಹರಿಸೊ ಹರಿ ಗೋವಿಂದ ಮರೆತೆನು ಬದುಕಿನಲಿ ಗೋವಿಂದ ನೆನೆಯದೆಲೆ ನೀ ಬಂದು ಮನ್ನಿಪುದು ಶ್ರೀ ಗೋವಿಂದ ಕಷ್ಟದಿ ಸಿಲುಕಿರುವೆ ನಿನ್ನಯ ದಯೆ ಇರಲಿ   ದೂರ ತಳ್ಳಿ ನೋಯಿಸದೆ ಬಾ ಒಲವಿಂದ ಹರಿಯೆ ನಿನ್ನ ದಯೆಗಾಗಿ ನಾನಿಂದು ಬಂದೆ||   ಮಾನವ ರೂಪಿಂದ ದೇವಕಿ ಉದರದಲಿ ಧರೆಯೊಳು ಅವತರಿಸಿ ಬಂದೇ ತಂದೆ ಪುನರಪಿ ನೀನಿಲ್ಲಿ ತಾಳೆಯ ಅವತಾರ ಲೋಕವು…
ವಿಧ: ಕವನ
August 04, 2024
ಎದೆಯ ಮೇಲೆ ಮಲಗಿ ಕಂದ ತಂಟೆ ಮಾಡುವೇ ಅಧರದಲ್ಲಿ ಸುರಿಸಿ ಜೇನು ಮತ್ತು ಬರಿಸುವೆ   ಒಂದು ಕ್ಷಣವು ಬಿಡದೆ ನೀನು ನನ್ನ ಕರೆಯುವೆ ಮನೆಯ ಕೆಲಸ ಮಾಡಲೆಂತು ಚಿಂತೆ ಮೂಡಿದೆ   ಮನದ ನೋವು ಸರಿಸಿ ಬಿಡುವೆ ನಗುವ ತರಿಸುವೆ ನಿನ್ನ ನಗುವು ಸೆಳೆವುದೆನ್ನ ದೃಷ್ಟಿ ತೆಗೆಯುವೆ   ಆಟ ಸಾಕು ಜಳಕವಾಡೊ ಸಮಯ ಬಂದಿದೆ ತೊಟ್ಟಿಲಲ್ಲಿ ಮಲಗು ಬಳಿಕ ಲಾಲಿ ಹಾಡುವೆ   ಸುಖದ ನಿದ್ರೆ ಬರಲಿ ನಿನಗೆ ಕೇಳು ಜೋಗುಳ ಕೆಲಸ ಮುಗಿಸಿ ಬರುವೆ ನಾನು ಮುಚ್ಚು ಕಣ್ಗಳ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
August 03, 2024
ಸಣ್ಣನೆ ನಡುವಿನ ಬೆಡಗಿನ ನಾರಿ ಬಣ್ಣದ ಛತ್ರಿಯ ಹಿಡಿದಳು ಪೋರಿ ಕಣ್ಣುಗಳೆರಡು ತಿರುಗುವ ಬುಗುರಿ ಹುಣ್ಣಿಮೆ ಬೆಳಕಿನ ನಗುವನು ಬೀರಿ   ಬೆಂದಿದೆ ಭೂಮಿಯು ಸುಡುತಿದೆ ಧರಣಿ ಚಂದದಿ ಬಿಸಿಲನು ಮರೆಸುತ ತರುಣಿ ಮುಂದಿದೆ ಸಾಲಲಿ ಹಬ್ಬದ ಸರಣಿ ಬಂದಳು ಉಡುಪನು ಕೊಳ್ಳಲು ರಮಣಿ   ಕೊಂಡಳು ಚಂದದ ಬಣ್ಣದ ಉಡುಪು ಬಂದಿತು ಬಾಲ್ಯದಿ ಧರಿಸಿದ ನೆನಪು ತಂದಳು ಮನೆಗದ ತೊಳೆಯುವ ಹುರುಪು ನೊಂದಳು,ಉಡುಪಲಿ ಉಳಿದುದು ಬಿಳುಪು||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
August 02, 2024
ಬಿರುಮಳೆ ಸುರಿದರೆ ನದಿಗಳಿಗೌತಣ ತುಂಬುತ ಹರಿವವು ಮೈಮರೆತು ಮಣ್ಣದು ಮಿಶ್ರಿತ ಕೆಂಪಿನ ಜಲವಿದು ನೋಡಲು ಭಯವನು ತರಿಸಿತ್ತು   ಅಡೆತಡೆ ಇಲ್ಲದೆ ಹರಿವವು ರಭಸದಿ ಆತುರ ಕಡಲಿನ ಸಂಗಮಕೆ ಕಲುಷಿತ ನೀರನು ಒಲ್ಲದ ಸಾಗರ ತಡೆಯನು ನೀಡಿತು ಸಂಭ್ರಮಕೆ   ಕಡಲಿನ ಅಲೆಗಳ ನಿಲ್ಲದ ನರ್ತನ ದಡವನು ಚುಂಬಿಸೆ ಹೆಬ್ಬಯಕೆ ಶರಧಿಯ ಅಲೆಗಳ ಬಯಕೆಯ ಕೆಣಕಲು ಉದ್ಧದ ರಸ್ತೆಯು ತಡೆಯದಕೆ   ಅರ್ಧದ ವರ್ತುಲ ಸಾಲಲಿ ನಿರ್ಮಿಸಿ ಸೆಳೆಯುತಲಿರುವುದು ಮರವಂತೆ ಕಡಲಿನ ತೆರೆಗಳ ಅಂದವ ಕಾಣುತ ನೋಡುಗ ಮೈಮನ ಮರೆವಂತೆ||   -ಪೆರ್ಮುಖ…
ವಿಧ: ಕವನ
August 01, 2024
ಷಟ್ಕರ್ಮ ಪತ್ನೀ/ಪತೀ  ಆಗ- ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ- ಕಾರ್ಯೇಷು ದಾಸಿ ಕರಣೇಶು ಮಂತ್ರಿ ಭೋಜ್ಯೇಶು ಮಾತಾ ರೂಪೇಶು ಲಕ್ಷ್ಮೀ ಶಯನೇಶು ರಂಭಾ ಕ್ಷಮಯಾಧರಿತ್ರಿ ಈಗ- ಷಟ್ಕರ್ಮಯುಕ್ತಾ ಕುಲಧರ್ಮ ಪತೀ- ಕಾರ್ಯೇಷು ದಾಸ ಕರಣೇಶು ಮಂತ್ರಿ ದುಡಿಮೇಶು ಕೃಷಿಕ ರೂಪೇಶು ಕೃಷ್ಣ ಶಯನೇಶು ರಸಿಕ ಕ್ಷಮೆಯೇಶು ಬಾನು ** ಧೂರ್ತರೇ.... ಸ್ವಚ್ಛ ಆಡಳಿತ ಮಾಡಿ ಎಂದು ಜನ ಶಕ್ತಿ ಕೇಂದ್ರಕೆ ಆರಿಸಿ ಕಳಿಸಿದ್ರೇ...   ಹಗರಣಗಳ ಹಾಲಾಹಲಗಳನೇ ಸೃಷ್ಟಿಸಿ ಸರ್ಕಾರದ ಖಜಾನೆ ಲೂಟೀ ಹೊಡೆಯುತಿರುವಿರಾ ಧೂರ್ತರೇ! ***…
ವಿಧ: ಕವನ
July 31, 2024
ತಂದೆಯ ಅಗಲಿಕೆ ತಂದಿತು ಸಂಕಟ ಹರಿಸಿತು ಬಳಗದಿ ಕಣ್ಣೀರಾ ಉದರದ ಪೋಷಣೆ ತಾಯಿಯ ಹೆಗಲಿಗೆ ಬಡತನದಲ್ಲಿದೆ ಸಂಸಾರ   ಅನುದಿನ ಮೊಗ್ಗನು ಆರಿಸಿ ತರುವಳು ಮಲ್ಲಿಗೆ ಮಾಲೆಯ ಹೆಣೆಯುವಳು ಪಟ್ಟಣಕೊಯ್ಯುತ ಮಾರಲು ಮಾಲೆಯ ಕಂದನ ಕರದಲಿ ನೀಡುವಳು   ದೇವರ ಪೂಜೆಗೆ, ನಾರಿಯ ತುರುಬಿಗೆ ಉದಯದಿ ಹೂವನು ಬಯಸುವರು ಕೊಳ್ಳುವ ಮಂದಿಯು ಬೆಳಗಿನ ವೇಳೆಗೆ ಉತ್ಸುಕರಾಗಿಯೆ ಕೊಳ್ಳುವರು   ಚಳಿಯಲಿ ಬೆಚ್ಚಗೆ ಹೊದಿಕೆಯ ಒಳಗಡೆ ನಿದ್ರೆಯಲಿರುತಿರೆ ಎಳೆ ಕಂದ ಅಮ್ಮನು ಕರೆದಿರೆ ಅರೆಬರೆ ಎಚ್ಚರ ಹೊರಟನು ತಕ್ಷಣ ಮನೆಯಿಂದ  …
ವಿಧ: ಕವನ
July 30, 2024
ಕಾಗೆ ಕಟ್ಟಿದ ಗೂಡನರಸುತ ಹಾರಿ ಬಂದಿತು ಕೋಗಿಲೆ ಕಾಗೆ ಇರಿಸಿದ ಮೊಟ್ಟೆ ಜೊತೆಯಲಿ ತನ್ನದಿರಿಸಿತು ಆಗಲೆ   ನಡೆಸಿ ಕೋಗಿಲೆ ತಂತ್ರಗಾರಿಕೆ ಅರಿಯದಾಯಿತು ಕಾಗೆಗೆ ಕಾವು ಕೊಟ್ಟಿತು ಮರಿಯ ಮಾಡಿತು ತುತ್ತನಿತ್ತಿತು ಜೊತೆಯಲೆ   ರೆಕ್ಕೆ ಬಲಿಯಲು ಪಿಕದ ಮರಿಗಳು ಗೂಡು ತೊರೆದವು ಹಾಡುತ ಕೇಳಿ ಮಂದಿಯ ಹೊಗಳು ನುಡಿಗಳು ಕಾಗೆ ತ್ಯಾಗವ ಮರೆಯುತ   ಕಾಗೆ ಇಲ್ಲದೆ ಎಲ್ಲಿ ಕೋಗಿಲೆ? ಪಿಕದ ಮೊಟ್ಟೆಗಳೊಡೆಯದು ಅದರ ಜನ್ಮಕೆ ಕಾಗೆ ಕಾರಣ ಹೆಸರು ಮರೆಯಲಿ ಉಳಿದುದು||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ…
ವಿಧ: ಕವನ
July 29, 2024
ಕಟ್ಟಿಹರೆ ಅಣೆಕಟ್ಟು ಆಕಾಶದೊಡಲಲ್ಲಿ ಬಿಟ್ಟಿಹರೆ ಕೆಲವೊಂದು ತೂಬು ತೆಗೆದು ಕೆಲವೊಂದು ಜಾಗದಲಿ ಅತಿವೃಷ್ಟಿ ಯಾಗುತಿದೆ ಸಿಲುಕಿಹರು ಕೆಲಮಂದಿ ಗುಡ್ಡ ಕುಸಿದು   ಭಗವಂತ ಅರಿತಿರುವ ಮಾನವನು ಬಿಡಲಾರ ಜಲಕಾಗಿ ಅರಸುವನು ಭೂಮಿ ಬಗೆದು ಬುವಿಯೊಡಲು ಬರಿದಾಗಿ ಕಳೆದಿಹುದ ತುಂಬಿಸಲು  ಭೂಮಾತೆ ಕೇಳಿದಳೆ ಹರಿಯ ನೆನೆದು   ನದಿ ನೀರು ಗಡಿದಾಟಿ ನೆರೆಯಾಗಿ ಪರಿಣಮಿಸಿ ತೆಗೆಯುತಿದೆ ನೆಲ ಬೆಳೆಯ ಆಪೋಶನ ಭಗವಂತ ಕನಿಕರಿಸು ಹಿತವಾಗಿ ನೀ ಸುರಿಸು ತೊಡಕಿರದೆ ನಡೆದಿರಲಿ ಜನಜೀವನ||   -ಪೆರ್ಮುಖ ಸುಬ್ರಹ್ಮಣ್ಯ ಭಟ್…