ಮರವಂತೆ
ಕವನ
ಬಿರುಮಳೆ ಸುರಿದರೆ ನದಿಗಳಿಗೌತಣ
ತುಂಬುತ ಹರಿವವು ಮೈಮರೆತು
ಮಣ್ಣದು ಮಿಶ್ರಿತ ಕೆಂಪಿನ ಜಲವಿದು
ನೋಡಲು ಭಯವನು ತರಿಸಿತ್ತು
ಅಡೆತಡೆ ಇಲ್ಲದೆ ಹರಿವವು ರಭಸದಿ
ಆತುರ ಕಡಲಿನ ಸಂಗಮಕೆ
ಕಲುಷಿತ ನೀರನು ಒಲ್ಲದ ಸಾಗರ
ತಡೆಯನು ನೀಡಿತು ಸಂಭ್ರಮಕೆ
ಕಡಲಿನ ಅಲೆಗಳ ನಿಲ್ಲದ ನರ್ತನ
ದಡವನು ಚುಂಬಿಸೆ ಹೆಬ್ಬಯಕೆ
ಶರಧಿಯ ಅಲೆಗಳ ಬಯಕೆಯ ಕೆಣಕಲು
ಉದ್ಧದ ರಸ್ತೆಯು ತಡೆಯದಕೆ
ಅರ್ಧದ ವರ್ತುಲ ಸಾಲಲಿ ನಿರ್ಮಿಸಿ
ಸೆಳೆಯುತಲಿರುವುದು ಮರವಂತೆ
ಕಡಲಿನ ತೆರೆಗಳ ಅಂದವ ಕಾಣುತ
ನೋಡುಗ ಮೈಮನ ಮರೆವಂತೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
