ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಷಟ್ಕರ್ಮ ಪತ್ನೀ/ಪತೀ 

ಆಗ-

ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ-

ಕಾರ್ಯೇಷು ದಾಸಿ

ಕರಣೇಶು ಮಂತ್ರಿ

ಭೋಜ್ಯೇಶು ಮಾತಾ

ರೂಪೇಶು ಲಕ್ಷ್ಮೀ

ಶಯನೇಶು ರಂಭಾ

ಕ್ಷಮಯಾಧರಿತ್ರಿ

ಈಗ-

ಷಟ್ಕರ್ಮಯುಕ್ತಾ ಕುಲಧರ್ಮ ಪತೀ-

ಕಾರ್ಯೇಷು ದಾಸ

ಕರಣೇಶು ಮಂತ್ರಿ

ದುಡಿಮೇಶು ಕೃಷಿಕ

ರೂಪೇಶು ಕೃಷ್ಣ

ಶಯನೇಶು ರಸಿಕ

ಕ್ಷಮೆಯೇಶು ಬಾನು

**

ಧೂರ್ತರೇ....

ಸ್ವಚ್ಛ ಆಡಳಿತ

ಮಾಡಿ

ಎಂದು ಜನ

ಶಕ್ತಿ ಕೇಂದ್ರಕೆ

ಆರಿಸಿ

ಕಳಿಸಿದ್ರೇ...

 

ಹಗರಣಗಳ

ಹಾಲಾಹಲಗಳನೇ

ಸೃಷ್ಟಿಸಿ ಸರ್ಕಾರದ

ಖಜಾನೆ ಲೂಟೀ

ಹೊಡೆಯುತಿರುವಿರಾ

ಧೂರ್ತರೇ!

***

ಮುಗ್ಧರು 

ಮದುವೆ ಮನೆಯಲಿ

ಗಂಡು ಹೆಣ್ಣುಗಳ

ಮಧ್ಯೆ ನಿಂತು

ನಗುತ ಫೋಟೋ

ತೆಗೆಸಿ

ನಲಿಯಿರೋ ಎಂದರೇ...

 

ಮದುವೆಯಾದ

ಜೋಡಿಗಳೆಲ್ಲದರದ್ದೂ

ಸಪ್ಪೆ ಮೋರೆಯೇ;

ನಗುವವರಿಬ್ಬರು 

ಮಾತ್ರ ಆ ಮುಗ್ಧ

ನವ ಜೋಡಿಗಳೇ!

***

ಕೃತಜ್ಞತೆ ಇಲ್ಲದವರು 

ಎಲ್ಲರಿಗೂ

ಆರಿಸಿ

ಹೋಗಲು ಬೇಕು

ನಿರ್ಮಲ

ಸುಸುಂದರ

ಕರ್ನಾಟಕ...

 

ಇದರ

ಋಣ

ತೀರಿಸಲು

ಮಾತ್ರ

ಇಲ್ಲ ಸಲ್ಲದ

ನಾಟಕ!

***

ಮಲತಾಯಿ ಧೋರಣೆ 

ಅಯ್ಯೋ

ಆಂಧ್ರಕ್ಕೆ

ಬಿಹಾರಕ್ಕೆ

ಹಣದೊಳೆಯ

ಮಹಾ

ಪೂರಾ...

 

ಕರ್ನಾಟಕಕೆ

ಭಾರೀ

ಮಳೆಯ

ಬರೀ

ಕೊಚ್ಚೇ

ನೀರಾ?

***

ಏನೀ ಅಸಮಾನತೇ? 

ಅಧಿಕಾರಕ್ಕೆ

ಕೂತ

ಮೇಲೆ

ನೀವು

ಭಾರತದ

ಸರ್ಕಾರ...

 

ತೋರಿರಿ

ಎಲ್ಲಾ

ರಾಜ್ಯಗಳಿಗೂ

ಒಂದೇ

ರೀತಿಯ

ಮಮಕಾರ!

***

ಬಜೆಟ್-24 

ಕೇಂದ್ರದಲಿ;

ರಾಜ್ಯದಲಿ-

ಯಾವ

ಸರ್ಕಾರಗಳೇ

ಇರಲಿ

ಗೆಳೆಯಾ...

 

ಇದು ದುರದೃಷ್ಟ

ಕರ್ನಾಟಕ!

ಎಂದೂ

ಬರೀ ಚೊಂಬೇ

ಎಂಬುದನು

ನೀ ತಿಳಿಯಾ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೇಟ್ ತಾಣ

ಚಿತ್ರ್