ಪುಸ್ತಕ ಪರಿಚಯ

ಲೇಖಕರು: ಮಮತಾ ಕಾಪು
January 25, 2013
'ವಸಂತ' ಎಂಬ ಮಾಸಪತ್ರಿಕೆಯನ್ನು ನಡೆಯಿಸತೊಡಗಿದ್ದಾಗ, ವಾಚಕರ ಅಭಿರುಚಿಯನ್ನು ಚಿಗುರಿಸುವ ಸಲುವಾಗಿ ಅದರಲ್ಲಿ ಕಥೆ,ಕಾವ್ಯ,ಕಾದಂಬರಿಗಳನ್ನು ಬರೆದು ತುಂಬಿಸಬೇಕಾಗಿ ಬಂತು. ಹೀಗೆ ಶಿವರಾಮ ಕಾರಂತರಿಗೆ ಬರಹ ಅನಿವಾರ್ಯವಾಗಿತ್ತು. ಅನಂತರ ಪತ್ರಿಕಾರಂಗದ ಉದ್ಯೋಗ ಅವರನ್ನು ಒಂದೇ ಕಡೆ ಕುಳಿತುಕೊಳ್ಳಲು ಬಿಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಒಳಗೂ ಹೊರಗೂ ಅಲೆದಾಡುತ್ತಾ ಸುತ್ತಲಿನ ಜನಜೀವನದೊಂದಿಗೆ ಬೆರೆತು, ಅಲ್ಲಿನ ಜನ, ಆಚಾರ-ವಿಚಾರ, ಪ್ರಾಕೃತಿಕ ಸೌಂದರ್ಯ,ವಿಸ್ಮಯಗಳನ್ನು ಅನುಭವಿಸುವ ಸಂದರ್ಭ ಒದಗಿ…
1
ಲೇಖಕರು: ಮಮತಾ ಕಾಪು
January 22, 2013
ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಕೃತಿ. ಬರಹಗಾರರು ತಾವು ಇಂಥದೇ ಕಾರಣಕ್ಕಾಗಿ ಬರೆಯುತ್ತೇವೆಂದು ನಿರ್ದಿಷ್ಟ ಕಾರಣವನ್ನು ಹೊಂದಿರುವುದು ಕಷ್ಟ ಸಾಧ್ಯ. ವಿಷಯದ ಆಯ್ಕೆಗಳು ಪೂರ್ವಯೋಜಿತವಾಗಿದ್ದರೂ ಬರಹವೂ ಇದೇ ರೀತಿ ಸಾಗಬೇಕೆಂದು ಅಂದುಕೊಂಡಿದ್ದರೂ ಬರವಣಿಗೆ ಸಂದರ್ಭದಲ್ಲಿ ಅವುಗಳ ತಿರುವುಗಳು ಬದಲಾಗಿಯೇ ಆಗುತ್ತವೆ. ಹೀಗೆ ಆದಂತಹ ಬದಲಾವಣೆಗಳು ಯಾವುದೇ ಎಗ್ಗಿಲ್ಲದಂತೆ ಸಾಗಿ ಬರಹಗಾರನ ವಿಚಾರ ಲಹರಿಯನ್ನು ತನ್ನ ಕೃತಿ ಅಥವಾ ಬರಹದಲ್ಲಿ ಅಭಿವ್ಯಕ್ತಗೊಳಿಸುತ್ತದೆ.ಬರಹ ಮುಗಿಸಿದ ಮೇಲೆ ಅಥವಾ…
ಲೇಖಕರು: ಮಮತಾ ಕಾಪು
January 13, 2013
ಬದುಕಿ ತೋರಿಸ್ತೀನಿ ನೋಡೋ, ದೇವರನ್ನು ದಿಕ್ಕರಿಸಿ ಬದುಕ್ತೀನಿ. -ರಂಗನಾಥ. ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ , ದೇವರ ಬಗೆಗಿನ ಆಸ್ತಿಕ ಹಾಗೂ ನಾಸ್ತಿಕ ವಿಚಾರಗಳ ಎರಡು ಮನಸ್ಸಿನ ಗೊಂದಲಗಳು, ನಂಬಿಕೆ, ಸಮಾಜದ ವ್ಯವಸ್ಥೆಗಳನ್ನು ಒಪ್ಪಿಕೊಳ್ಳಲೂ ಆಗದೆ, ಇತ್ತ ಒಪ್ಪದೆ ಇರಲೂ ಆಗದಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಏಕಾಂಗಿಯಾಗಿ ಹೋರಾಡುತ್ತಿರುವ ಎರಡು ಮನಸ್ಸುಗಳ ಕಥೆಯೇ ದೇವರ ಹುಚ್ಚು.  ರಂಗನಾಥ ಹಾಗೂ ರಾಜಶೇಖರ ಈ ಕಾದಂಬರಿಯ ಕೇಂದ್ರ ಬಿಂದುಗಳು. ಈ ಎರಡು ಪಾತ್ರಧಾರಿಗಳ ಸುತ್ತ ಲೇಖಕರು ತಮ್ಮ…
ಲೇಖಕರು: spr03bt
January 08, 2013
ತೇಜಸ್ವಿ ಅಥವಾ ಪೂರ್ಣಚ೦ದ್ರ ತೇಜಸ್ವಿ ಅ೦ದ ತಕ್ಷಣ ಕನ್ನಡ ಓದುಗ ಪ್ರಪ೦ಚದ ಕಣ್ಣುಗಳಲ್ಲಿ ಒ೦ದು ವಿಶಿಷ್ಟವಾದ೦ಥ ತೇಜಸ್ಸು ಮೂಡುತ್ತದೆ. ೨೦ ನೇ ಶತಮಾನದಲ್ಲಿ ತೇಜಸ್ವಿ, ತಮ್ಮ ಬರಹಗಳು, ವಿಶಿಷ್ಟ ಹವ್ಯಾಸಗಳು ಹಾಗು ರೈತಪರ ಚಳುವಳಿಗಳ ಮೂಲಕ ಜನಸಮಾನ್ಯರ ಮನಗೆದ್ದ೦ಥವರು. ಬಹುಪಾಲು ಜನಕ್ಕೆ ತಿಳಿದ೦ತೆ, ತೇಜಸ್ವಿಯವರದು ಪ್ರೇಮ ವಿವಾಹ ಅದರಲ್ಲೂ, ಅ೦ತರ್ಜಾತಿಯ ವಿವಾಹ. ಆಗಿನ ಕಾಲದಲ್ಲಿ ಇವೇ ಒ೦ಥರಾ ಹುಬ್ಬೇರಿಸುವ ಘಟನೆಗಳಾಗಿದ್ದರೆ, ಇವರು ವಿವಾಹವಾದ "ಮ೦ತ್ರ ಮಾ೦ಗಲ್ಯ೦" ಪದ್ದತಿ ಕೂಡ ಹೊಸತು. ಇದು…
ಲೇಖಕರು: ಮಮತಾ ಕಾಪು
January 04, 2013
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆಯವರ ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಿತ ಕೃತಿ. ೨೦ನೇ ಶತಮಾನದ ಸರ್ವಶ್ರೇಷ್ಠ ಮಕ್ಕಳ ಕತೆಗಳ ಸಾಲಿಗೆ ಸೇರ್ಪಡೆಯಾಗಿದೆ. ಮನುಷ್ಯರಿಗೆ ಕೊಳವೆಬಾವಿಗಳು ಪರಿಚಿತವಾಗುವುದಕ್ಕಿಂತ ಮುಂಚೆ ಕೆರೆಗಳೇ ನೀರಿನಾಧಾರವಾಗಿದ್ದವು. ಜೀವನ ಶೈಲಿ ಬದಲಾಗುತ್ತಿದ್ದಂತೆ ಮನುಷ್ಯರು ಮಾಡುವ ಪರಿಸರ ಮಾಲಿನ್ಯಗಳು ಹೆಚ್ಚಾದುವು. ತೊಂಡೂರಿನ ಜನರ ಜೀವನಾಧಾರವಾಗಿದ್ದ ಹಾಗೂ ಕೆರೆಯಲ್ಲಿ ವಾಸಿಸುತ್ತಿದ್ದ ಅಸಂಖ್ಯಾತ ಜೀವಿಗಳ ವಾಸಸ್ಥಾನವಾದ ತೊಂಡೂರಿನ…
ಲೇಖಕರು: ಮಮತಾ ಕಾಪು
January 01, 2013
ಯಾರೂ ನಮಗೆ ಸೇರಿದವರಲ್ಲ, ಯಾರನ್ನಾದರೂ ಹುಡುಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವೆನ್ನುವ ಭ್ರಮೆಯಲ್ಲಿ ಬೀಳುತ್ತೇವೆ. ಕಥಾ ನಾಯಕ ಸಣ್ಣವನಿದ್ದಾಗಲೇ ತನ್ನಿಂದ ದೂರಾದ ತಮ್ಮನನ್ನು ಹುಡುಕಹೊರಟು ಭಾವಾವೇಶಕ್ಕೆ ಒಳಗಾಗಿ ತನ್ನ ಸಹೋದ್ಯೋಗಿಯ ಕಣ್ಣುಗಳಲ್ಲಿ ಆತನ ಬಿಂಬವನ್ನು ಕಂಡು ಭ್ರಮಾಲೋಕಕ್ಕೆ ಹೋಗುತ್ತಾನೆ. ನಂತರ ತನ್ನ ತಮ್ಮನಂತೆಯೇ ಆತನನ್ನು ಕಾಣುತ್ತಾನೆ. ಅದಕ್ಕೆ ತಾಳೆಯಾಗುವಂತೆ ಛಾಯಾಚಿತ್ರಕಾರನೊಬ್ಬ ತನ್ನ ಚಿತ್ರಗಳಲ್ಲಿ"ಎಲ್ಲೋ ದೂರದ ದ್ವೀಪವ ಬಯಸಿ" ಏನನ್ನೋ ಹುಡುಕ ಹೊರಟ ಚಿತ್ರಣ.…