ಕೇವಲ ನಾಲ್ಕು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಲೇಡ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸುಮಾರು 20 ಕೋಟಿಗೂ ಹೆಚ್ಚು ಹಣ ವಂಚನೆಯಾಗಿದೆ. ಹಣ ದ್ವಿಗುಣ, ಹೆಚ್ಚಿನ ಬಡ್ಡಿ ಮತ್ತು ಲಾಭದ ದುರಾಸೆಯಿಂದ ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಘಟನೆಗಳನ್ನು ನಾವು ಬಹಳ ಹಿಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ ಮತ್ತು ಈಗಲೂ ಸಹ...
ಡಿಜಿಟಲ್ ಇಂಡಿಯಾದತ್ತ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಈ ವಂಚಕ ಸಂಸ್ಥೆಗಳ ಅವ್ಯವಹಾರಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವುದು ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಾಗಿ ಎಲ್ಲಾ ಮಾಹಿತಿಗಳು ನಮ್ಮ ಕಣ್ಣ ಮುಂದೆ, ಬೆರಳ ತುದಿಯಲ್ಲಿ ಇರುವಾಗ, ಬ್ಯಾಂಕಿಂಗ್ ವ್ಯವಸ್ಥೆ ವ್ಯಾಪಕವಾಗಿ ಹರಡಿರುವಾಗ, ಕಾನೂನಿನ ಕಣ್ಗಾವಲು ಎಲ್ಲವನ್ನೂ ಸುತ್ತುವರಿದಿರುವಾಗ ಈಗಲೂ ಜನ ಸಮೂಹಗಳಿಗೆ ಮೋಸವಾಗುತ್ತಿದೆ ಎಂದರೆ ಜನರು ಮುಗ್ಧತೆಗೆ, ಮೂರ್ಖತನಕ್ಕೆ ಮತ್ತು ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ನಾವೇ ತಲೆ ತಗ್ಗಿಸಬೇಕಾಗಿದೆ.
ಇಲ್ಲಿ ಜನರ ಅಜ್ಞಾನ, ಅತಿಯಾಸೆ, ತಿಳಿವಳಿಕೆಯ ಕೊರತೆಯನ್ನು ದೂಷಿಸುವುದು ಒಂದು ನೆಪ ಅಥವಾ ಕಾರಣ ಮಾತ್ರ. ಯಾರೋ ಹೇಳುವಂತೆ ಭಾರತ ಮುಂದುವರಿದ ಶ್ರೀಮಂತ ರಾಷ್ಟ್ರವಲ್ಲ. ವಿಶ್ವಗುರುವೂ ಅಲ್ಲ. ಆಂತರ್ಯದಲ್ಲಿ ನಮ್ಮ ದೇಶ ಬಡತನ, ಅಜ್ಞಾನ, ರೋಗ ರುಜಿನಗಳಿಂದ ನರಳುತ್ತಿದೆ. ಇಲ್ಲಿನ ಜನರನ್ನು ಬಹುಬೇಗ ದೇವರ, ಧರ್ಮದ, ಹಣದ, ಜಾತಿಯ ಆಮಿಷ ತೋರಿಸಿ ಯಾಮಾರಿಸಬಹುದು. ಪೋಲೀಸ್ ಮತ್ತು ಕಾನೂನು ವ್ಯವಸ್ಥೆ ಮೋಸ ಹೋದ ನಂತರವೇ ಪ್ರವೇಶಿಸುತ್ತದೆ. ಅಲ್ಲದೆ ನಿಯಮಗಳು, ನ್ಯಾಯಾಲಯಗಳು ವಂಚಕರಿಗೆ ಹೆಚ್ಚಿನ ಅನುಕೂಲಕರ ವಾತಾವರಣ ಕಲ್ಪಿಸಿದೆ.
ಅಮಾಯಕರು, ನಿರಪರಾಧಿಗಳು ನ್ಯಾಯ ಪಡೆಯಲು ತುಂಬಾ ತುಂಬಾ…
ಮುಂದೆ ಓದಿ...