ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೧೬೦)- ಕರ್ಮ

ಭಗವಂತ ನಗುತ್ತಿದ್ದಾನೆ ಈ ಮನುಜನ ಕಂಡು. ಆತನ ಆಲೋಚನೆ ನಾನು ತುಂಬಾ ತೊಂದರೆ ಮೋಸ ಅನ್ಯಾಯ ಮಾಡಿದರೂ ನನಗೇನೂ ಸಮಸ್ಯೆ ಆಗಿಲ್ಲ, ಆಗೋದಿಲ್ಲ. ಕರ್ಮ ಅನ್ನೋದು ಸುಳ್ಳು, ಅದ್ಯಾವುದೂ ತಿರುಗಿ ಬರೋದಿಲ್ಲ. ಈಗ ಬದುಕಬೇಕು. ಅಷ್ಟೇ ಬದುಕು.

Image

ಸಿಹಿ ಗೆಣಸಿನ ಮಿಲ್ಕ್ ಶೇಕ್

Image

ಮಸೆದ ಸಿಹಿ ಗೆಣಸಿಗೆ ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿದರೆ ಸಿಹಿ ಗೆಣಸಿನ ಸವಿಯಾದ ಮಿಲ್ಕ್ ಶೇಕ್ ತಯಾರು.

ಬೇಕಿರುವ ಸಾಮಗ್ರಿ

ಸಿಪ್ಪೆ ತೆಗೆದು ಬೇಯಿಸಿ ಮಸೆದ ಸಿಹಿ ಗೆಣಸು ೧ ಕಪ್, ಹಾಲು ೨ ಕಪ್, ಸಕ್ಕರೆ ೧/೨ ಕಪ್, ಏಲಕ್ಕಿ ಪುಡಿ ೧/೨ ಚಮಚ.

ಜಪಾನಿನ ಬುಲೆಟ್ ಟ್ರೈನಿನ ಶಿಷ್ಟಾಚಾರಗಳು

ನಮಗೆ ಜಪಾನ್ ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವುದು ಅಣು ಬಾಂಬ್ ದಾಳಿ ಮತ್ತು ಬುಲೆಟ್ ಟ್ರೈನ್ ಗಳು. ವಾಯು ವೇಗದಲ್ಲಿ ಚಲಿಸುವ ಬುಲೆಟ್ ರೈಲುಗಳು ಬಹಳ ಆಕರ್ಷಣೀಯ. ಭಾರತದಲ್ಲೂ ವೇಗದ ರೈಲುಗಳಿಗೆ ಶ್ರೀಕಾರ ಮಾಡಿದ್ದಾರೆ. ಆದರೆ ಅಲ್ಲಿಯ ವೇಗಕ್ಕೆ ಸಾಟಿಯಾಗಲು ನಮಗೆ ಇನ್ನಷ್ಟು ಸಮಯದ ಅಗತ್ಯ ಇದೆ ಎಂದು ಅನಿಸುತ್ತಿದೆ.

Image

ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತೇಜನ ; ಮೂಲಸೌಕರ್ಯಕ್ಕೂ ಸಿಗಲಿ ಆದ್ಯತೆ

ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುವ ದಿಸೆಯಲ್ಲಿ ರಾಜ್ಯ ಸರಕಾರ ಕ್ರೀಡಾ ವಿದ್ಯಾರ್ಥಿಗಳಿಗೆ ಶೇ. ೨೫ರಷ್ಟು ಹಾಜರಾತಿ ರಿಯಾಯಿತಿ ಮತ್ತು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಶೇ. ೧೦ರಷ್ಟು ಕೃಪಾಂಕಗಳನ್ನು ನೀಡಲು ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

Image

ಸಾಮಾಜಿಕ ಬದುಕಿನ ಒಳಪುಟ...

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ನಗು ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು, ಹೃದಯ ತಟ್ಟುವವರು ಇದ್ದಾರೆ, ಬೆನ್ನಿಗೆ ಇರಿಯುವವರೂ ಉಂಟು, ಧೈರ್ಯ ತುಂಬುವವರು, ಭಯ ಪಡಿಸುವವರು, ಜೊತೆಯಾಗುವವರು, ದೂರ ಸರಿ

Image

ಇನ್ನೊಂದು ಸಂತೆ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀನಿವಾಸ ವೈದ್ಯ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ. 100/-

ಶ್ರೀನಿವಾಸ ವೈದ್ಯರು ಧಾರವಾಡದಲ್ಲಿ ಎಂ.ಎ. ಪದವಿ ಗಳಿಸಿದ ನಂತರ, 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಮುಂಬಯಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ 37 ವರುಷ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ 1996ರಲ್ಲಿ ಬೆಂಗಳೂರಿನಲ್ಲಿ ನಿವೃತ್ತರಾದರು. ಈ ಸೇವಾವಧಿಯ ಹಲವಾರು ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಎಂಟು ಪುಸ್ತಕಗಳನ್ನು ಬರೆದಿರುವ ಶ್ರೀನಿವಾಸ ವೈದ್ಯರು “ಹಳ್ಳ ಬಂತು ಹಳ್ಳ” ಕಾದಂಬರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು.

ಸ್ಟೇಟಸ್ ಕತೆಗಳು (ಭಾಗ ೧೧೫೯)- ಸರಿ ತಪ್ಪು

ತಪ್ಪುಗಳ‌ ಮೂಟೆಗಳನ್ನ ಹೊತ್ತುಕೊಂಡವ ನೀನು. ಬೇರೆಯವರ ಭಾರದ ಬಗ್ಗೆ ಯೋಚನೆ ಯಾಕೆ? ನಿನ್ನ ಕಾರ್ಯಕ್ಕೆ ಸಮಯ ಮಾಡಿಕೊಂಡು ಜೊತೆಯಾದವರು ಹಲವರು, ಅವರ ನಿಜದ ಸ್ಥಿತಿ ನಿನಗೆ ಗೊತ್ತಿಲ್ಲ. ನಿನಗೆ ಅವರಿಂದ ಉಪಯೋಗವೂ ಆಗಿದೆ ಆದರೆ ಅವರಿಗೆ ನಿನ್ನಿಂದ ದೊರಕಿರುವುದು ಏನು? ನಿನಗೀಗ ಅವರ ಅಗತ್ಯಕ್ಕೆ‌ನೀಡಲು ಸಮಯವೂ ನಿನ್ನಲ್ಲಿಲ್ಲ. ನೀನೀಗ‌ ಪರಿಸ್ಥಿತಿಗಳನ್ನ ದೂರುತ್ತಿದ್ದೀಯಾ? ಇದು‌ ಸರಿಯಾ?

Image

ನನ್ನ ಹಕ್ಕು

ಸಂವಿಧಾನವನ್ನು ದೇವರಂತೆ ಪೂಜಿಸುವ ದೇಶ ನಮ್ಮದು. ಬಡವನೆ ಇರಲಿ, ಶ್ರೀಮಂತನೆ ಆಗಿರಲಿ ತನ್ನ ಹಕ್ಕನ್ನು ತಾನು ಚಲಾಯಿಸುವ ಸ್ವತಂತ್ರ ಇರುವ ಸಮಾಜ ನಮ್ಮದಾಗಿದೆ. ಹೀಗಿರುವಾಗ ಇದೆ ವಿಚಾರಕ್ಕೆ ಸಂಬಂಧ ಪಡುವಂತಹ ಘಟನೆ ಒಂದು ತರಗತಿಯಲ್ಲಿ ನಡೆಯಿತು. 

Image