ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೨೮೫) - ಯಾವುದಾಯ್ಕೆ?

ಆಗಾಗ ಜೀವನ ಪಾಠವನ್ನ ಯಾರಾದರೂ ಮಾಡುತ್ತಾನೇ ಇರಬೇಕು ಇಲ್ಲದಿದ್ದರೆ ನನ್ನ ತಲೆಗಂತೂ ಏನೂ ಹೋಗೋದಿಲ್ಲ . ಒಂದು ಸಲ ಕೇಳಿದ್ದನ್ನ ಜೀವನಪೂರ್ತಿ ನೆನಪಿಟ್ಟುಕೊಳ್ಳುವಷ್ಟು ಶಕ್ತಿಯೂ ನನ್ನಲ್ಲಿಲ್ಲ. ಇದು ಗೊತ್ತಿದ್ದ ನನ್ನ ಮೇಷ್ಟ್ರು ಆಗಾಗ ನನಗೆ ಕಣ್ಣ ಮುಂದೆ ಕಾಣೋ ಘಟನೆಗಳನ್ನ ತೋರಿಸಿ ಬದುಕಿನ ಪಾಠ ಹೇಳುತ್ತಿದ್ದರು. ಅವತ್ತು ಮೂರು ಜನ ಬಿಲ್ಲುಗಾರರ ಬಳಿಗೆ ನನ್ನನ್ನು ಕರೆದುಕೊಂಡು ಹೋದರು.

Image

ನರಿ ಮತ್ತು ಮೊಲ (ನೀತಿ ಕಥೆ 2025)

ಚಿತ್ರ

ಒಂದು ಕಾಡಿನಲ್ಲಿ ಎರಡು ಮೊಲಗಳು ತುಂಬಾ ದಿನಗಳಿಂದ ಆಕಸ್ಮಿಕವಾಗಿ ಸಿಕ್ಕಿ ಸ್ನೇಹಿತರಾಗಿದ್ದವು. ಅದರಲ್ಲಿ ಒಂದು ಮೊಲ ಗಾತ್ರದಲ್ಲಿ ಸ್ವಲ್ಪ ಚಿಕ್ಕದಿತ್ತು(ಶುಜಿ) ಇನ್ನೊಂದು ಮೊಲ ಸ್ವಲ್ಪ ಮೊಲದ ಆಕಾರದಲ್ಲಿ ವಿಶೇಷವಾಗಿ ವಿಚಿತ್ರವಾಗಿ ಇತ್ತು(ಬಿಜಿ).  ಶುಜಿಗೆ ಬಿಜಿಯ ಮಾತು ನಡಿಗೆ ಪ್ರೀತಿ ,ಆರೈಕೆ ಎಲ್ಲವನ್ನು ಕಂಡು ಇಬ್ಬರು ಒಟ್ಟಿಗೆ ಬದುಕಬೇಕೆಂಬ ಆಸೆಯಿಂದ ಮದುವೆಯಾಗಿದ್ದರು.

ಚಂದ್ರನ ಚೂರು

ಪುಸ್ತಕದ ಲೇಖಕ/ಕವಿಯ ಹೆಸರು
ಆಲೂರು ದೊಡ್ಡನಿಂಗಪ್ಪ
ಪ್ರಕಾಶಕರು
ಬೀಟೆಲ್ ಬುಕ್ ಶಾಪ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ಆಲೂರು ದೊಡ್ಡನಿಂಗಪ್ಪನವರು ಬರೆದ ‘ಚಂದ್ರನ ಚೂರು’ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ…”ಆಲೂರು ದೊಡ್ಡನಿಂಗಪ್ಪನವರ 'ಚಂದ್ರನ ಚೂರು' ಕಾದಂಬರಿಯ ಶಕ್ತಿ ಇರುವುದೇ ವರ್ತಮಾನದ ಕೇಡುಗಳನ್ನು ಎದುರು ಹಾಕಿಕೊಂಡಿರುವುದರಲ್ಲಿ.

ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೧)

ದ್ರಾಕ್ಷಿಯ ದೇಹ ಪೋಷಣೆಗೆ ಬೇಕಾದ ಅವಶ್ಯ ಪೋಷಕಾಂಶಗಳನ್ನು ಒದಗಿಸಬಲ್ಲ ಹೆಚ್ಚು ರುಚಿಕರವಾದ ಹಣ್ಣಿನ ಬೆಳೆಯಾಗಿದ್ದು, ಇದು ಸುಲಭವಾಗಿ ಜೀರ್ಣವೂ ಆಗುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಮುಂತಾದ ಖನಿಜಾಂಶಗಳು ಇವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೮೪) - ಬೆಲೆ

ಮನೆಗಿಂತ ಒಂದು ಪರ್ಲಾಂಗು ದೂರದಲ್ಲಿ ಒಂದು ಸಣ್ಣ ಗದ್ದೆ. ಅದು ನಮ್ಮದಲ್ಲ ಯಾರಿಗೂ ಆ ಗದ್ದೆ ಬಗ್ಗೆ ತಿಳಿದು ಇಲ್ಲ. ಆದರೆ ಅಲ್ಲಿ ನೆಟ್ಟ ಎರಡು ಮಾವಿನ ಮರಗಳ ಬಗ್ಗೆ ಇಡೀ ಊರಲ್ಲಿ ಮಾತನಾಡಿಕೊಳ್ಳುತ್ತಾರೆ. ಒಂದು ಎತ್ತರವಾಗಿ ಬೆಳೆದು ನಿಂತದ್ದು ಇನ್ನೊಂದು ಕೈಗೆಟುಕುವಂತದ್ದು. ಎರಡು ಮಾವಿನ ಮರಗಳು ಹೂ ಬಿಟ್ಟು ಹಣ್ಣುಗಳನ್ನು ಕೊಡುತ್ತಾ ಬಂದಿದೆ.

Image

ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು

ವಿಷದ ಹಾಲಿಗೆ ಅಮೃತ ಸಿಂಚನ, ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ, ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು, ರಾಮ ರಹೀಮರ ಹೆಣಕ್ಕೆ, ತಾಯಿ ಕರುಳೇ ಪಣಕ್ಕೆ, ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡವರೇ, ಒಂದೇ ಬಳ್ಳಿಯ ಹೂವುಗಳು, ಒಂದೇ ತಾಯಿಯ ಮಕ್ಕಳು, ಒಂದೇ ದೋಣಿಯ ಪಯಣಿಗರು.

Image

ವಸ್ತು ಸಂಗ್ರಹಿಸುವುದಕ್ಕಾಗಿ ಅಲ್ಲ, ಬಳಕೆಗಾಗಿ

ಇದು ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ ಕಥೆ. ಒಂದು ಊರಲ್ಲಿ ಒಬ್ಬ ಶ್ರೇಷ್ಠ ಸನ್ಯಾಸಿ ಇದ್ದನು. ಆತನಿಗೆ ಇಬ್ಬರು ಶಿಷ್ಯಂದಿರು ಇದ್ದರು. ಆ ಇಬ್ಬರೂ ತರುಣರಾಗಿದ್ದರು. ಆಗ ಆ ಸಂತನಿಗೆ ಪ್ರವಾಸ ಹೋಗಬೇಕೆಂಬ ಇಚ್ಛೆಯಾಯಿತು. ಆಗ ಶಿಷ್ಯರನ್ನು ಕರೆದು ಹೇಳಿದರು, " ನೋಡಿ ಶಿಷ್ಯರೇ, ನಾನು 10 ರಿಂದ 15 ವರ್ಷ ಪ್ರವಾಸ ಹೋಗುತ್ತಾ ಇದ್ದೇನೆ. ನೀವು ಆನಂದವಾಗಿ ಇರಿ ಎಂದರು.

Image

ಬಣ್ಣ ಕುರುಡುತನ - ಭಯ ಬೇಡ

ಕಳೆದ ವಾರ ಕೆಲವೊಂದು ಪ್ರಾಣಿಗಳು ಬಣ್ಣಗಳನ್ನು ಗುರುತಿಸಲಾರವು ಎನ್ನುವುದನ್ನು ತಿಳಿದೆವು. ಮನುಷ್ಯನಲ್ಲಿ ಹೀಗೇನಾದರೂ ಇದೆಯೇ ನೋಡೋಣ. ಆದರೆ ಮಾನವನಲ್ಲಿ ಹೀಗೆ ಆಗುವ ಸಾಧ್ಯತೆಗಳಿಲ್ಲ. ಏಕೆಂದರೆ ಮಾನವನ ಕಣ್ಣಿನಲ್ಲಿರುವ ಮೂರು ರೀತಿಯ ಶಂಕು ಕೋಶಗಳು (cones) ನೀಲಿ, ಹಸಿರು ಮತ್ತು ಕೆಂಪು ಬಣ್ಣಗಳ ಹತ್ತಿರದ ತರಂಗಾಂತರಗಳನ್ನು ಗುರುತಿಸುತ್ತವೆ.

Image