ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೇಮ-ಪ್ರೀತಿ

ಪ್ರೇಮ ಮತ್ತು ಪ್ರೀತಿ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿರುವವರಿದ್ದಾರೆ. ಒಂದೇ ಮಾತಿನಲ್ಲಿ ಹೇಳ ಬೇಕೆಂದರೆ,ಹೆಂಡತಿ ಸತ್ತರೆ ಮರಳಿ ತರಬಹುದು. ಜನ್ಮಕೊಟ್ಟ ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆಕೆಯ ಮನಸ್ಸನ್ನು ನೋಯಿಸಿ ಜಗತ್ತನ್ನೇ ಜಯಿಸಿದರೇನು ಫಲ?... ಒಂಭತ್ತು ತಿಂಗಳು ಹೆತ್ತು ಹೊತ್ತು ಕೈತುತ್ತ ತಿನಿಸಿ ಸಾಕಿದ ಮಮತೆಯ ತಾಯಿ, ಕೈಹಿಡಿದು ನಡೆಸಿ, ವಿದ್ಯೆ ಕಲಿಸಿ, ಬದುಕಿಗೆ ಮಾರ್ಗದರ್ಶನ ಮಾಡಿದ ಪ್ರೇಮದ ತಂದೆ, ಕೆಲವರೇ ಆದರೂ ಪ್ರೀತಿಯ ತೋರುವ ಬಂಧುಗಳು, ಇವರೆಲ್ಲರನ್ನೂ ಬಿಟ್ಟು ದೂರ ಹೋಗಿ ಬದುಕಲಾದೀತೆ; ಅಂತಹ ಬದುಕಿನಲ್ಲಿ ನೆಮ್ಮದಿ ಸಿಕ್ಕೀತೇ... ಇಲ್ಲ, ತಾಯಿ-ತಂದೆಯ ಋಣ ಒಂದೇ ಜನ್ಮದಲ್ಲಿ ತೀರಿಸಲಶ್ಯಕ್ಯವೆನ್ನುತ್ತಾರೆ. ಅವರನ್ನೇ ಕಸಕ್ಕಿಂತ ಕಡೆಯಾಗಿಸಿ ಹೊರಟು ಹೋಗಲುಂಟೇ...? ಅಥವಾ ಅವರನ್ನು ಕೇವಲ ಕರುಣೆಯಿಂದ ನೋಡಿಕೊಳ್ಳುವುದಷ್ಟೇ ತನ್ನ ಕರ್ತವ್ಯವೆಂದು ಭಾವಿಸದೇ, ಅವರೊಂದಿಗೇ ಸಭ್ಯ ಗೃಹಸ್ಥನಾಗಿದ್ದು ತನ್ನ ಹೆಂಡತಿಯೊಡನೆ ಸಂಸಾರ ಸುಖ ಅನುಭವಿಸುತ್ತಲೆ, ಭಾವನಾತ್ಮಕ ಸಂಬಂಧವಿರಿಸಿಕೊಂಡಿರುವುದರಲ್ಲಿಯೆ ಈ ಜಗದ ಪ್ರೇಮ ಜೀವನದ ವೈಶಿಷ್ಟ್ಯವಿದಯೆಲ್ಲವೇ..? ಅದನ್ನು ಬಿಟ್ಟು ಹೆಂಡತಿಕೊಡುವ ದೈಹಿಕ ಸುಖಕ್ಕೆ, ಅವಳ ಮರುಳು ಮಾತಿಗೆ ವಶನಾಗಿ ತನ್ನ ತನ ಕಳೆದು ಕೊಳ್ಳುವುದೇನು?

ಜಾನಪದ ಗಾರುಡಿಗ ಕರೀಂಖಾನ್‌ ಇನ್ನಿಲ್ಲ

ಎಸ್ ಕೆ ಕರೀಂಖಾನ್ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾನಪದ ಗಾರುಡಿಗ, ನಾಡೋಜ, ಕಲಾ ತಪಸ್ವಿ, ಹಿರಿಯ ಗಾಂಧೀವಾದಿ ಡಾ ಎಸ್‌.ಕೆ. ಕರೀಂಖಾನ್‌ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ನಾಡಿನ ಹಳೆಯ ತಲೆಮಾರಿನ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ತೊಂಬತ್ತೆಂಟು ವರ್ಷಗಳ ಸಾರ್ಥಕ ಬಾಳುವೆ ನಡೆಸಿದ ಈ ಬ್ರಹ್ಮಚಾರಿ ಇಂದು(ಜುಲೈ 29) ಬೆಳಿಗ್ಗೆ 11.50 ರ ಸುಮಾರಿಗೆ ಚಿರನಿದ್ರೆಗೆ ಜಾರಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೂನ್ 10ರಂದು ಬೌರಿಂಗ್ ಆಸ್ಪತ್ರೆಯಿಂದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಗಂಟಲಲ್ಲಿ ಉಂಟಾದ ಸೋಂಕಿನಿಂದಾಗಿ ಉಸಿರಾಟದ ತೊಂದರೆಗೆ ಒಳಗಾದರು. ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ವರ್ಗಾಹಿಸಿ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಅಂತ್ಯಕ್ರಿಯೆ ನಗರದ ಹಲಸೂರು ಸ್ಮಶಾನದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ನೆರವೇರಿತು. ಇದಕ್ಕೆ ಮುನ್ನ ಕರೀಂಖಾನ್‌ ಕಿರಿಯ ಸಹೋದರನ ನಿವಾಸದಲ್ಲಿ ಮೃತರಿಗೆ ರಾಜ್ಯವು ಸಕಲ ಸರ್ಕಾರಿ ಗೌರವ ನೀಡಿತು.

ಕರ್ಣಾಟಕದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಹೇಳುವ ಹಾಡುಗಳು !

೧೯೩೫ ರಲ್ಲಿ ನಮ್ಮ ತಾಯಿಯವರು ಬರೆದಿಟ್ಟ, ಅವರು ಹೇಳುತ್ತಿದ್ದ ಹಾಡುಗಳ ಸಂಗ್ರಹದಿಂದ :

ಅವರು ನೂರಾರು ಹಾಡುಗಳನ್ನು ಪುಸ್ತಕ ನೋಡದೆ, ಬಾಯಿನಲ್ಲೇ ಹೇಳುತ್ತಿದ್ದರು. ಒಂದು ಉದಾಹರಣೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದು 'ನಳಚರಿತ್ರೆ'ಯ ಪ್ರಸಂಗ.

ಅನುವಾದಕ ಜೋಡಿ

ಇದು ನಾನು ಕೇಳಿದ್ದು. ಪೂನಾದಲ್ಲಿ ಒಂದು ದಂಪತಿ. ಮೂಲ ಊರು ಬೆಳಗಾಂವ. ಪೂನಾದಲ್ಲಿ ಬಹಳ ವರ್ಷಗಳಿಂದ ವಸತಿ. ಇಬ್ಬರೂ ಕನ್ನಡ ಹಾಗೂ ಮರಾಠಿ ಮಾತಾಡುತ್ತಾರೆ. ಆದರೆ, ಗಂಡನಿಗೆ ಮರಾಠಿ ಓದಲು, ಬರೆಯಲು ಅಷ್ಟೇನೂ ಚೆನ್ನಾಗಿ ಬರದು. ಹೆಂಡತಿಗೆ ಕನ್ನಡ ಓದಲು, ಬರೆಯಲು ಅಷ್ಟಾಗಿ ಬರದು. ಗಂಡ ಕನ್ನಡ ಓದಿ ಅವಳಿಗೂ, ಹೆಂಡತಿ ಮರಾಠಿ ಓದಿ ಅವನಿಗೂ ಹೇಳುತ್ತಾರೆ. ಹೀಗೆ ಇಬ್ಬರೂ ಎರಡೂ ಭಾಷೆಯ ಸಾಹಿತ್ಯವನ್ನು ಬಲುವಾಗಿ ಓದಿಕೊಂಡಿದ್ದಾರೆ.

ಏಕಾಂಗಿತನದ ವಿರಾಟ್ ರೂಪ

ನೀವು ಭಾರತೀಯರಾಗಿದ್ದರೆ ಈಗ ಮತ್ತೊಂದು ಅಸಾಧ್ಯ ಕಲ್ಪನೆಗೆ ಮುಂದಾಗಿ. ಹೀಗೆ ಹೇಳಿದನೆಂದು ಸಿಟ್ಟಾಗದಿರಿ. ಕನ್ನಡ ಓದಿಯೂ ಭಾರತೀಯನಲ್ಲದವರಾಗಿದ್ದರೆ ನೀವು ಎನ್.ಆರ್.ಐಗಳೇ ಇರಬೇಕು. ಅಂತಹವರಿಗೆ ಘಟ್ಟವೇಕೆ, ಬೆಂಗಳೂರು, ಮೈಸೂರೂ ಮಜ ಎನ್ನಿಸುತ್ತದೆ-ಏಕೆಂದರೆ, ತಾವು ಎಂದಿದ್ದರೂ ಯುರೋಪ್, ಯು.ಎಸ್.ಆಫ್ ಎಗೆ ಹಿಂದಿರುಗುತ್ತೇವೆ ಎಂಬ ನಂಬಿಕೆಯಿಂದಾಗಿ.

ಇಲ್ಲೊಂದು ಕಲ್ಲುಸಕ್ಕರೆ -

ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಬಹುಶ್ರುತರಾಗುವುದರ ಲಾಭ ಅದು . ( ನಾನು ಈ ಭಾಷೆಯ ಚಿತ್ರ ನೋಡುವದಿಲ್ಲ , ಈ ಕುರಿತು ತಿಳಿದುಕೊಳ್ಳಲೊಲ್ಲೆ ಎಂದರೆ ನಷ್ಟ ಯಾರಿಗೆ ? ನಮಗೇ ತಾನೆ?)

ಕನ್ನಡದ ಚರ್ಚೆ

ಕಳೆದ ಹಲವಾರು ದಿನಗಳಿಂದ ಸಂಪದ ಪುಟಗಳನ್ನು ಓದುತ್ತಿದ್ದೇನೆ. ಸ್ವಾರಸ್ಯಕರವಾದ ಅನೇಕ ಬರಹಗಳನ್ನು ಓದಿದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿ ಇದೆಯಾದ್ದರಿಂದ ಆ ಕುರಿತ ಬ್ಲಾಗ್ ಗಳು, ಲೇಖನಗಳು ಇಷ್ಟವಾದವು. ವಿಶೇಷವಾಗಿ, ಓಎಲ್ ನಾ ಸ್ವಾಮಿ ಹಾಗೂ ಅನಂತಮೂರ್ತಿಯವರ ಪುಟಗಳು. ಪರಾಗ ಎಂಬ ಬೇಂದ್ರೆ ಕವನದ ವಿಶ್ಲೇಷಣೆ (ಸ್ವಾಮಿ) ತುಂಬ ಚೆನ್ನಾಗಿದೆ.

ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು ?

ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಇಲ್ಲದಿದ್ದರೆ ನಮಗೆ ಎಷ್ಟೋ ವಿಷಯಗಳು ತಿಳಿಯದೇ ಹೋಗುವವು.