ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊಸ ಸಂಪದ ಚೆನ್ನಾಗಿದೆ

ಹೊಸ ಮುಗುಳ್ನಗೆಯೊಂದಿಗೆ ಬಂದಿರುವ ಸಂಪದ ಚೆನ್ನಾಗಿದೆ. ಸಂಪದದ ಮೊದಲ ಆವೃತ್ತಿಗೆ ನನ್ನ ಮನಸ್ಸು ಹೊಂದಿಕೊಂಡುಬಿಟ್ಟಿದೆಯಾದ್ದರಿಂದ ಸ್ವಲ್ಪ ಕಷ್ಟವೆನ್ನಿಸಿತು. ಆದರೂ ಪರ್ವಾಗಿಲ್ಲ. ಹೊಸ ಆವೃತ್ತಿ ಆಕರ್ಷಕವಾಗಿ ಕಣ್ಣಿಗೆ ತಂಪಾಗಿ ಕಾಣುತ್ತಿದೆ. ಕನ್ನಡದ ಕೈಂಕರ್ಯ ಇನ್ನೂ ಹೆಚ್ಚು ಬಲಯುತವಾಗಿ ಮುಂದುವರೆಯಲಿ. ನಾನು ಒಬ್ಬ ವೃತ್ತಿಪರ ಚಿತ್ರವಿನ್ಯಾಸಕಾರ. ನೀವು ಮಾಡುತ್ತಿರುವ ಭುವನೇಶ್ವರಿಯ ಸೇವೆಯಲ್ಲಿ ಪಾಲ್ಗೊಳ್ಳಲು ನನಗೇದರೂ ಅವಕಾಶವಿದೆಯೇ?

ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು

ಈ ಪುಟವನ್ನು ೩, ಮೇ, ೨೦೧೭ ರಂತೆ ಆರ್ಕೈವ್ ಮಾಡಲಾಗಿದೆ. ಈ ಪುಟದ ಹೊಸ ಆವೃತ್ತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
 

ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.

ಬೆಳ್ದಿಂಗಳು ಮತ್ತು ಕರ್ದಿಂಗಳು

ಬೆಳ್ದಿಂಗಳು ಮತ್ತು ಕರ್ದಿಂಗಳು ನನಗೆ ಗೊತ್ತಿರ್ಲಿಲ್ಲ ; ನಿಮಗೆ ?
ಬೆಳದಿಂಗಳು ಶುಕ್ಲಪಕ್ಷಕ್ಕೆ ಕನ್ನಡ ಪದ ; ಕರ್ದಿಂಗಳು ಕೃಷ್ಣಪಕ್ಷಕ್ಕೆ !

ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರ

ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ.

ತರಂಗ ಯುಗಾದಿ (೨೦೦೬) ವಿಶೇಷಾಂಕ

ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ 'ಆರ್ಯ'ರವರು ಬರೆದ 'ಭಾಷೆ, ಧರ್ಮ, ದೇಶ ಮುಂತಾದ ಗಡಿಗಳನ್ನು ನಯಗೊಳಿಸಿದ' ಒಂದು ಕಥೆ ಇದೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ.

ಕವನ ಬರೆವ ಹವ್ಯಾಸವುಳ್ಳವರಿಗಾಗಿ

ಸದ್ಯದಲ್ಲಿ ಜನರು ಬರೆಯುತ್ತಿರುವ ಕವನಗಳ ಕುರಿತು ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ ಒಂದು ಕವಿತೆ ಇದೆ, ಸುಮತೀಂದ್ರ ನಾಡಿಗರದು . ಕವನ ಬರೆವ ಹವ್ಯಾಸವುಳ್ಳವರು ತಪ್ಪದೇ ಗಮನಿಸಬೇಕು . ಅಲ್ಲಿಯ ಕೆಲವು ಸಾಲುಗಳು ಹೀಗಿವೆ .

ಗಳಿಗೆಗಳಿಗೆಯೂ ಹುಟ್ಟುತ್ತಾವೆ ಅಸಂಖ್ಯ ಕವಿತೆಗಳು
ಅಲ್ಪಾಯುಷಿಗಳಿದ್ದಲ್ಲಿ ಜನನ ಸಂಖ್ಯೆಯು ಜಾಸ್ತಿ .

ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !

ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !
ಸಾರಾಂಷ :
ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ 'ಅನುಸಂಧಾನದ ಪ್ರಮಾಣ,' "ದೈತ್ಯಾಕಾರ," ವಾಗಿರುವುದು ಕಂಡು ಬರುತ್ತದೆ. ೧೯೧೨ ರಲ್ಲಿ, ಡಾ. ಬಾಲ್ಸ್ ನಿಂದ ಆರಂಭವಾಗಿ ಇಂದಿನವರೆಗಿನ ಕಾರ್ಯವಿಧಾನಗಳನ್ನು, ಅಂದರೆ, ನಿರಂತರವಾಗಿ ಬೆಳೆಯುತ್ತಿದ್ದ, ಹತ್ತಿಯ ಮರಗಳನ್ನು ಮೆಳೆಗಳಲ್ಲಿ ಅಥವ ಪೊದೆಗಳಲ್ಲಿ ಪರಿವರ್ತಿಸಿ, ವಾರ್ಷಿಕ ಫಸಲನ್ನಾಗಿಸಿದ್ದು, ಹತ್ತಿಯ ತಂತುಗಳಲ್ಲಿ ತಂದ ಅನೇಕ ಉತ್ತಮ ಗುಣಗಳು, (ತಂತುಶಕ್ತಿ, ತಂತು ಮಹೀನತೆ, ತಂತುಗಳ ಉದ್ದದಲ್ಲಿ ವೃದ್ಧಿ,) ಇತ್ಯಾದಿಗಳು, 'ಸಸ್ಯವಿಜ್ಞಾನ'ದ ಬೆಳವಣಿಗೆಯೆಂದೇ ಗುರುತಿಸಬಹುದು ! 'ವಂಶವಾಹಿನಿ ವಿಜ್ಞಾನ ಶಾಸ್ತ್ರ' ಬೆಳಕಿಗೆ ಬರುವ ಮೊದಲೇ, 'ಅರಿವಿಲ್ಲದೆ ಆದ' ಈ ಎಲ್ಲಾ ಬೆಳವಣಿಗೆಗಳೂ, ಸ್ತುತ್ಯಾರ್ಹ ! ಭಾರತದಲ್ಲಿ ೭೦ ರ ದಶಕದಲ್ಲಿ ರೂಪಗೊಂಡ 'ಹಸಿರು ಕ್ರಾಂತಿ'- ನೀರಾವರಿ, ರಸಗೊಬ್ಬರ, ಕೀಟನಾಶಕಗಳಿಗೆ ಒತ್ತು ಕೊಟ್ಟಿತ್ತು. ಹತ್ತಿಯ ಬೆಳೆಯೂ ಸೇರಿದಂತೆ ಆಹಾರಧಾನ್ಯಗಳಲ್ಲಿ ಆದ ಪ್ರಚಂಡ ಹೆಚ್ಚುವರಿ ಉತ್ಪಾದನೆ ಹೊಸ ಮೈಲಿಗಲ್ಲುಗಳನ್ನು ನಿರ್ಮಾಣಮಾಡಿದುದು ಸರ್ವ ವಿದಿತ. ಆದರೆ ದಿನಕಳೆದಂತೆ, ಮೇಲೆ ತಿಳಿಸಿದ ಬೆಳೆ ಸಂವರ್ಧಕ ಪರಿಕರಗಳನ್ನು ಅನಿರ್ಭಂಧಿತ ಪ್ರಮಾಣದಲ್ಲಿ ಬಳಕೆಮಾಡಿದ್ದರಿಂದ, ಪರಿಸರ ಮಾಲೀನ್ಯವಾಗಿ ಮಣ್ಣಿನಲ್ಲಿ ಕ್ಷಾರತೆ ಜಾಸ್ತಿಯಾಗಿ, ಇಳುವರಿಯಲ್ಲಿ ಗಮನಾರ್ಹ ವೃದ್ಧಿ ಕಾಣಲಿಲ್ಲ. ಕೆಲವು ಕಡೆ ಕಡಿಮೆಯಾದ ಸಂಗತಿಗಳೂ ಬೆಳಕಿಗೆ ಬಂತು. ವಿಜ್ಞಾನಿಗಳು ಇದನ್ನು ಗಮನಿಸುತ್ತಿದ್ದು, 'ಜೈವಿಕ ತಂತ್ರಜ್ಞಾನ'ವನ್ನು ವಿಕಸಿತಗೊಳಿಸಿದರು. ಭಾರತದಲ್ಲಿ ೬ ವರ್ಷಗಳಿಂದ ಪ್ರಚಲಿತವಿರುವ ಈ ತಂತ್ರಜ್ಞಾನದ ಶಿಶು ಅಂಬೆಗಾಲಿಟ್ಟು, ಎದ್ದು ಬಿದ್ದು ನಡೆಯಲು ಕಲಿತು, ಈಗ ಓಡಲು ಸನ್ನದ್ಧವಾಗುತ್ತಿದೆ. ಜೈವಿಕ ತಂತ್ರಜ್ಞಾನದ, ಛತ್ರಛಾಯೆಯ ಅಡಿಯಲ್ಲಿ ಅನುವಂಶಿಕೀ ಅಭಿಯಂತಿಕೆಯನ್ನು ಬಳಸಿ ತಯಾರಿಸಿದ ಸಿದ್ಧ ವಸ್ತುವೇ 'ಬೀ.ಟಿ' ಹತ್ತಿ ! ಹೆಚ್ಚು ಲಾಭ, ಕೀಟನಾಶಕಗಳ ಉಪಯೋಗದಲ್ಲಿ ಉಳಿತಾಯ ! ಈ ಸಂಗತಿಗಳೇ ೯ ರಾಜ್ಯಗಳ ರೈತರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಅವರೇ ಮುಂದೆಬಂದು ಜೈವಿಕ ತಂತ್ರಜ್ಞಾನದ ಕೂಸಾದ, ಬೀ.ಟಿ. ಹತ್ತಿಯನ್ನು ಸ್ವಾಗತಿಸುತ್ತಿದ್ದಾರೆ !

ondishtu baraha

ನನ್ನ ಕನಸಿನಲ್ಲಿ ಅನಂತಮೂರ್ತಿ

ಅನಂತಮೂರ್ತಿ ರಾಜ್ಯ ಸಭೆಯ ಚುನಾವಣೆಗೆ ಸ್ಪರ್ಧಿಸಿದ್ದರಲ್ಲ, ಆಗ ನನಗೊಂದು ಕನಸು ಬಿತ್ತು.ಅವರು ಕೋಲಾರದ ಟೇಕಲ್‌ ರೋಡಿನ ಮೂಲೆಯೊಂದರಲ್ಲಿ, ನಮ್ಮ ಮನೆಯ ಹತ್ತಿರವೇ ಒಂದು ದಿನಸಿ ಅಂಗಡಿ ತೆರೆದಿದ್ದರು.ನನಗೋ ಆ ದೇಶ, ಈ ದೇಶ ಸುತ್ತಿ ಸಾಹಿತ್ಯ, ಸಂಸ್ಕೃತಿ ಮಾತಾಡಿ ಬರೆದುಕೊಂಡಿರುವ ಅನಂತಮೂರ್ತಿ ಇದೇಕೆ ಹೀಗೆ ಮಾಡಿದರು ಅಂತ ಕುತೂಹಲ. ಪಾಪ,ಜಾಗತೀಕರಣದ ವ್ಯಾಪಾರದ ವಿಚಾರ ಮಾತ್ರ ಮಾತಾಡಿ ಗೊತ್ತಿರುವ ಅನಂತಮೂರ್ತಿ ಇಲ್ಲಿ ಏನು ವ್ಯಾಪಾರ ಮಾಡುತ್ತಾರೆ? ಟೋಪಿ ಹಾಕಿಸಿಕೊಂಡು ಮೈಸೂರಿನ ಕುವೆಂಪು ನಗರದ ಮನೆಗೋ ಬೆಂಗಳೂರಿನ ಡಾಲರ್ಸ್ ಕಾಲೋನಿ ಮನೆಗೋ ವಾಪಸ್‌ ಹೋಗ್ತಾರೇನೋ ಅಂತ ದುಃಖ. ಗುರುತಿನ ನನ್ನ ಹಾಗೇ ಅದೂ ಇದೂ ಬರೆಯುವವರಲ್ಲಿ ವಿಚಾರಮಾಡಿದೆ. ಅವರು ನಾವು ಆತ್ಮಸಾಕ್ಷಿ ಇಲ್ಲದ ಅನಂತಮೂರ್ತಿ ಇಟ್ಟಿರೋ ಅಂಗಡೀಲಿ ಏನಾದರೂ ಕೊಳ್ಳೋದಿರಲಿ ಆ ರೋಡಲ್ಲಿ ಹೋಗೋರಿಗೂ ಆ ಕಡೆ ಹೋಗಬೇಡಿ ಅಂತ ಹೇಳ್ತಿದ್ದೀವಿ ಅಂದುಬಿಟ್ಟರು. ಯಾರು ಎತ್ತಲಾದರೂ ಹೋಗಲಿ ಅನಂತಮೂರ್ತಿನ ಕಂಡು ಮಾತಾಡಿಸಿ ಒಂದಿಷ್ಟು ದಿನಸಿ ಸಾಮಾನು ಅಲ್ಲಿಂದಲೇ ತರೋಣ ಅಂತ ಹೆಂಡತೀನ ಕರೆದುಕೊಂಡು ಅಂಗಡೀಗೆ ಹೋದೆ. ಅನಂತಮೂರ್ತಿ ಗಲ್ಲಾದಲ್ಲಿ ಕೂರದೆ ಬಾಗಿಲಲ್ಲಿ ನಿಂತಿದ್ದರು.ಗಿರಾಕಿ ಇರಲಿಲ್ಲ. ಯಾಕೆ ಸಾರ್‌ ಈ ಬಿಸಿನೆಸ್‌ ನಿಮಗೆ ಹೊಂದುತ್ತೋ ಅಂತ, ಬರಕೊಂಡು ದೇಶ ಸುತ್ತಿಕೊಂಡು ಇರದೆ ಈ ವಯಸ್ಸಿನಲ್ಲಿ ಇದೆಂತ ಆಸಕ್ತಿ ಅಂತ ಕೇಳಿದೆ. ಅನಂತಮೂರ್ತಿ ನಕ್ಕು, ಏನಾದರೂ ಹೊಸತು ಮಾಡೋಣ ಅಂತ ಅನ್ನಿಸಿತು.ಕನ್ನಡದ ನೆಲದಲ್ಲಿ ಬೆಳೆಯೋದನ್ನ, ತಯಾರಾಗೋದನ್ನ ಕನ್ನಡದ ಜನಕ್ಕೆ ಕೊಡೋಣ ಅಂತ ಯೋಚನೆ ಬಂತು ಅದಕ್ಕೆ ಇದು ಅಂದರು. ಒಳಗೆ ಹೋಗಿ ನೋಡಿದೆ. ಎಲ್ಲ ಚಿಕ್ಕಂದಿನಲ್ಲಿ ಕಂಡ ಮಾಲೂರಿನ ಅಶ್ವತ್ಥಶೆಟ್ಟಿ ಅಂಗಡಿ ಹಾಗೆ.ಬೆಲೇನೂ ಹಾಗೇ ಸಲೀಸು.ಆದರೆ ಹೆಂಡತಿ ಮಾತ್ರ ಏನೇನೂ ಚೆನ್ನಾಗಿಲ್ಲ. ಎಲ್ಲ ಜಿನುಗು ಜಿನುಗು. ಒಂದರಲ್ಲೂ ಚಾಯಿಸ್‌ ಇಲ್ಲ.ಫುಡ್‌ವರ್ಲ್ಡ್ ತರಾನೆ ಇರೋ ಅಂಗಡಿ ಎಂ.ಜಿ.ರೋಡಲ್ಲಿ ಓಪನ್‌ ಆಗಿದೆ. ಎಲ್ಲಾ ಪ್ರಾವಿಶನ್‌ ಐಟಂಸ್‌ ಸಿಕ್ಕುತ್ತೆ.ಇದಕ್ಕಿಂತ ಅಲ್ಲಿ ಬಯ್‌ ಒನ್‌ ಟೇಕ್‌ ಒನ್‌ ಫ್ರೀ ಆಫರ್‌ಗಳು ಬೇರೆ ಇರುತ್ತವೆ. ಆ ಅಂಗಡಿಯೋನು ಹೋದ ಕೂಡಲೇ ಕೂಲ್‌ ಡ್ರಿಂಕ್ ಕೊಡ್ತಾನೆ. ಕೊನೆಯಲ್ಲಿ ಒಂದು ಅಂಕಲ್‌ ಚಿಪ್ಸ್ ಇಲ್ಲ ಹಲ್ದಿರಾಂಸ್‌ ನಮ್ಕೀನ್‌ ಕಾಂಪ್ಲಿಮೆಂಟ್ ಕೊಡ್ತಾನೆ.ಅದನ್ನ ಬಿಟ್ಟು ಅನಂತಮೂರ್ತಿ ಅಂಗಡಿ ಇಟ್ಟಕೂಡಲೆ ಇಲ್ಲಿರೋದೇ ತರ್ತೀನಿ ಅಂತೀರಲ್ಲ, ನಿಮ್ಮ ಬುದ್ಧಿಗೆ ಅದೇನು ಕೊಡಬೇಕೋ.ನೀವು ತಾನೇ ಏನು ಮಾಡ್ತೀರಿ, ಆ ಅನಂತಮೂರ್ತಿ ತರಾನೆ ನಿಮ್ಮದೂ ಕಾಮನ್‌ ಸ್ಕೂಲ್‌ ಬುದ್ಧಿ ಅಂದಳು. ಆಚೆ ಬರೋವಾಗ ಅನಂತಮೂರ್ತಿ ಕೇಳಿದರು, ಏನನ್ನಿಸುತ್ತೆ ಅಂತ. ಭಾಳ ಒಳ್ಳೆ ಪ್ರಯತ್ನ ಅಂದೆ, ನಮ್ಮ ಬರೀ ಕೈ ನೋಡಿದ ಅವರ ದೃಷ್ಟಿ ತಪ್ಪಿಸಿ. ಆಮೇಲೆ ಅಂತ ನನ್ನ ಗಮನ ಸೆಳೆದು ಅನಂತಮೂರ್ತಿ ಹೇಳಿದರು: “ನಿನ್ನೆ ನಂಗಲಿ ಚಂದ್ರಶೇಖರ್‌ ಬಂದಿದ್ದರು. ‘ಭಾಳ ಒಳ್ಳೆ ಪ್ರಯತ್ನ. ನೀವು ಇದರ ಜೊತೆ ಶತಾವರಿ, ಮಂಗುರುಳ್ಳಿ, ಇಲಿಕಿವಿ ಸೊಪ್ಪು, ಸೊಗದೇಬೇರು ಮುಂತಾದವನ್ನೆಲ್ಲ ಇಡಿ. ಬೆಟ್ಟದ ಮೇಲೆ ನನ್ನ ಗುರುತಿನೋರು ಇದಾರೆ, ತಂದುಕೊಡ್ತಾರೆ’ಅಂದರು. ನೀವೇನಂತೀರಿ?”

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು !

ಈ ತಿಂಗಳ ೨೪ ರಂದು ಡಾ. ರ್‍ಆಜ್ ಕುಮಾರ್ ಹುಟ್ಟಿದಹಬ್ಬ. ೭೭ ವರ್ಷಗಳು ತುಂಬಿ ೭೮ ಕ್ಕೆ ಕಾಲಿರಿಸುತ್ತಾರೆ. ಕನ್ನಡದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅವರು ನಟ ರಾಜ್ ಆಗಿ ಮೆರೆದ ವರ್ಷಗಳು ಅನನ್ಯ. ಅವರೀಗ ಭೌತಿಕವಾಗಿ

ಮನಸೆಳೆದ ಸುಚರಿತ್ರಾ

ಹಾಲು ಚೆಲ್ಲಿದಂತಿದ್ದ ವಿಶಾಲವಾದ ಅಂಗಳ. ತಾಯಿಯ ನೀಲಿ ಸೀರೆಯ ಹಿಂದೆ ಅಡಗಿಕೊಳ್ಳುವ ಮುದ್ದು ಮಗುವಿನಂತೆ ಕಾರ್ಮೋಡಗಳಡೆಯಿಂದ ಬೆಳದಿಂಗಳನ್ನು ಚೆಲ್ಲುತ್ತಿರುವ ಹುಣ್ಣಿಮೆ ಚಂದ್ರ. ಈ ಸನ್ನಿವೇಶದಲ್ಲಿ ನನಗೇ ಗೊತ್ತಿಲ್ಲದಂತೆ ನನ್ನ ಕಿವಿ-ಮನಸ್ಸುಗಳನ್ನು ಅವಳು ಸೂರೆಗೊಂಡಳು. ನಂತರ ತಿಳಿಯಿತು ಅವಲ ಹೆಸರು ಸುಚರಿತ್ರಾ ಎಂದು.