ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀವು ಕೇಳಿರಲಿಕ್ಕಿಲ್ಲದ ಆಯ್ದ ಗಾದೆ ಮಾತುಗಳ ಕಡೆಯ ಕಂತು

ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.

ಇನ್ನೇನಿನ್ನೇನು ?

ನೀವು ಪುರಂದರದಾಸರ 'ಹರಿದಾಸರ ಸಂಗ ದೊರಕಿತು ಎನಗೆ , ಇನ್ನೇನಿನ್ನೇನು ? ' ಹಾಡನ್ನು ಕೇಳಿದ್ದೀರಾ? . ನಾನು ಬಾಲಮುರಳಿಕೃಷ್ಣ ಅವರ ಧ್ವನಿಯಲ್ಲಿ ಕೇಳಿದ್ದೇನೆ.

ಹಬ್ಬದ ದಿನವೂ ಹಳೇ ಗಂಡನೇ ?

ಕಾಸಿಗೆ ತಕ್ಕ ಕಜ್ಜಾಯ
ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು
ಅಡುಗೆ ಮಾಡಿದವಳಿಗಿಂತ ಬಡಿಸಿದವಳೆ ಮೇಲು

ನಾನು ಶ್ರೀನಿಧಿ, ಸಂಪದ ದ ಗೊಂಚಲಿನ ಹೀಚು ಕಾಯಿ.....

ಎಲ್ಲರಿಗೂ ನಮಸ್ತೆ....

ನಾನು ಸಂಪದ ದ ಸದಸ್ಯನಾಗಿ ಒಂದು ತಿಂಗಳಾಯ್ತು.... ಇನ್ನೂ ಪರಿಚಯಿಸಿಕೊಂಡಿರಲಿಲ್ಲ.. ಕಾರಣ, ಸೋಮಾರಿತನ ! ನಾನು ಸಾಹಿತ್ಯಾಸಕ್ತ,ಬರಹಗಾರ. ಕತೆ , ಕವನಗಳು, ನನಗೆ ಖುಷಿ ಕೊಡುವ ಪ್ರಕಾರಗಳು.ಈವರೆಗೆ ಅಲ್ಪ-ಸ್ವಲ್ಪ ಬರೆದು, ಹಾಗೇ ಇಟ್ಟಿದ್ದೇನೆ. ಇನ್ನಾದರೂ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಸಂಪದ ದ ಗೊಂಚಲಿನ ಹೀಚುಕಾಯಿ ನಾನು,ನೀವು ಬೆಳೆಯಲು ಪ್ರೋತ್ಸಾಹಿಸುತ್ತೀರಿ ಎಂಬ ವಿಶ್ವಾಸದೊಂದಿಗೆ,

ಕನ್ನಡಕ್ಕೂ ಸಂದ ಗೌರವ: ತುಂಗಾ ಫಾಂಟನ್ನು ಪರಿಷ್ಕರಿಸಲು ಮುಂದೆ ಬಂದಿರುವ ಮೈಕ್ರೋಸಾಫ್ಟ್

 ಗೆಳೆಯರೆ,

 Personal Computing  ಗೆ ಅಗತ್ಯ ತಂತ್ರಾಂಶಗಳನ್ನು ಪೂರೈಸುವ ಅಗ್ರಗಣ್ಯ ಸಂಸ್ಥೆ, ಮೈಕ್ರೋಸಾಫ್ಟಿನ ಜನಪ್ರಿಯ ಆಪರೇಟಿಂಗ್ ಸಿಸ್ಟಂ ವಿಂಡೋಸ್ XP. ಇದರಲ್ಲಿ ಇತ್ತೀಚೆಗೆ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳನ್ನು ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಕನ್ನಡದ ಒಂದು ಆವೃತ್ತಿ ಬಿಡುಗಡೆಯಾಗಿದೆ. ಹಿಂದೆ ಕನ್ನಡವನ್ನು ಬಳಸಲು ಪರಿಮಿತ ಸೌಲಭ್ಯವಿತ್ತು. ಆದರೆ ಈಗಿನ ಆವೃತ್ತಿಯಲ್ಲಿ ಹೆಚ್ಚಿನ ಸೌಲಭ್ಯಗಳು ಇವೆ ಎಂದು ಬೀಗುತ್ತ, 'ತುಂಗಾ' ಫಾಂಟಿನಲ್ಲಿಯ ದೋಷಗಳನ್ನು ಅವರು ಕಡೆಗಣಿಸಿದ್ದರು...ಒಂದು ರೀತಿಯ ಉದಾಸೀನತೆಯಿಂದ....ಈ ಸಂದರ್ಭದಲ್ಲಿ ಕನ್ನಡಸಾಹಿತ್ಯ.ಕಾಂ ನ ಶೇಖರ್‍ಪೂರ್ಣರವರು ಇತ್ತೀಚೆಗೆ ಹುಟ್ಟುಹಾಕಿದ ಸಂವಾದಕ್ಕೆ ಪ್ರತಿಯಾಗಿ ಮೈಕ್ರೋಸಾಫ್ಟಿನವರು 'ತುಂಗೆ'ಯನ್ನು ಪರಿಷ್ಕರಿಸಿ ಎಲ್ಲ ಅಧಿಕೃತ XP ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುವ ಭರವಸೆಯೊಂದಿಗೆ ಮುಂದೆ ಬಂದಿದ್ದಾರೆ. ಈ ದಿನದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಇದರ ಕುರಿತಾದ ಲೇಖನ ಪ್ರಕಟವಾಗಿದೆ. ಇದರ ಕೊಂಡಿಯನ್ನು ಕೆಳಗೆ ಕೊಟ್ಟಿದ್ದೇನೆ.

ಇನ್ನಷ್ಟು ಗಾದೆಗಳು

ಆರಿದ್ರ ವೇಳೆಗೆ ಆದೋನೇ ಗ೦ಡ! (ಚಿಟಿ ಚಿಟಿ ಮಳೆ ಬಿಡದೇ ಸುರಿಯುತ್ತಿದಾಗ, ಮನೆ ಬಿಟ್ಟು ಎಲ್ಲೂ ಹೊರಗೆ ಹೋಗದೇ ಇರುವಾಗ, ನಡೆದಿರಬಹುದಾದ ಚಟುವಟಿಕೆಯ ಕಥೆ ಹೇಳುತ್ತಾ ಇದು?, ಎ೦ದು ರಸಿಕರ ಪ್ರಶ್ನೆ!)

'೧೮ ಎಪ್ರಿಲ್ ೨೦೦೬' ರ ನನ್ನ ಓದು

ಪ್ರಜಾವಾಣಿ (೧೮ ಎಪ್ರಿಲ್ ೨೦೦೬) ರಲ್ಲಿ ನಾನು ಗಮನಿಸಿದ ವಾರ್ತೆಗಳು.
೧. ಕನ್ನಡದ ಆದಿಕವಿ ಪಂಪ ಅಲ್ಲ ಎಂದು ಚರ್ಚೆ ನಡೆದಿದೆ ; ದೇವರ ದಾಸಿಮಯ್ಯ , ಜೇಡರ ದಾಸಿಮಯ್ಯ ಇಬ್ಬರೂ ಒಬ್ಬನೇ ವ್ಯಕ್ತಿ ಎಂಬ ವಾದವೂ ಇದ್ದು ಈ ಪಟ್ಟ ಅವರಿಗೆ ಸಲ್ಲಬೇಕು ಎಂದು ವಾಚಕರವಾಣಿಯಲ್ಲಿ ಪತ್ರ ಬರೆದಿದ್ದಾರೆ .