ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತೆರೆದಿದೆ ಮನೆ ಓ ಬಾ ಅತಿಥಿ - ಸಾಹಿತ್ಯ

ಕುವೆಂಪು ಅವರ ಗೀತೆ "ತೆರೆದಿದೆ ಮನೆ ಓ ಬಾ ಅತಿಥಿ"
ಈ ಹಾಡಿನಲ್ಲಿ ಎರಡು ಪದಗಳು ನಮಗೆ ಆಸಕ್ತಿ, ಕುತೂಹಲವನ್ನುಂಟು ಮಾಡಿದೆ.
ಕುತೂಹಲದ ಪರಿಹಾರಕ್ಕಾಗಿ ಈ ಪ್ರಯತ್ನ :)

ನೇಸರುದಯದೊಳು ಬಹಿಯಾ ಬಾ
ತಿಂಗಳಂದದಲಿ ಬಹಿಯಾ ಬಾ

ಪ್ರಶ್ನೆ:
೧. ಇದು 'ಬಹೆಯಾ' ನೋ? ಅಥವಾ 'ಬಹೆಯಾ' ನೋ? ಅಥವಾ ಮತ್ತಾವುದಾದರು ಪದವೆ?
೨. ಆ ಪದದ ಅರ್ಥವೇನು?

ಮುಂದಿನದು:
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೩)

*****ಭಾಗ ೧೩

ಜಾಲಂಧರ ಬಿಟ್ಟು ಅಪಾಯಕಾರಿಯಾದ ಪರ್ವತ ಮಾರ್ಗವಾಗಿ ಸುಮಾರು ೩೫೦ ಕ್ರ್‍ಓಶಗಳ ದೂರ ಪ್ರಯಾಣದ ನಂತರ ಕುಲೂತ ದೇಶವನ್ನು ಸೇರಿದೆವು. ನನ್ನ ಮಿತ್ರ ಉದ್ದಕ್ಕೂ ತನ್ನ ತಾಳೇಗರಿಗಳಂತಹ ಪತ್ರಗಳ ಮೇಲೆ ಏನನ್ನೋ ಬರೆಯುತ್ತಲೇ ಇದ್ದ. ಕುಲೂತ ದೇಶವನ್ನು ಬಿಟ್ಟು ಸುಮಾರು ೩೫೦ ಕ್ರೋಶಗಳು ದಕ್ಷಿಣದಿಕ್ಕಿನಲ್ಲಿ ನಡೆದ ನಂತರ ಶತಾದ್ರು ನದಿಯ ತೀರದಲ್ಲಿದ್ದ ಶತಾದ್ರು ದೇಶವನ್ನು ತಲುಪಿದೆವು. ಶತಾದ್ರು ಬಿಟ್ಟು ನಋತ್ಯ ದಿಕ್ಕಿನಲ್ಲಿ ೪೦೦ ಕ್ರ್‍ಓಶಗಳ ದೂರ ಸವೆಸಿದ ನಂತರ ಪಾರ್ಯಾತ್ರ ದೇಶವನ್ನು ಸೇರಿ, ಬಳಿಕ ಪೂರ್ವ ದಿಕ್ಕಿನಲ್ಲಿ ೨೫೦ ಕ್ರ್‍ಓಶಗಳ ಪಯಣದ ನಂತರ ಮಥುರಾನಗರಿಯನ್ನು ಸೇರಿದೆವು.

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೪)

***** ಭಾಗ ೧೪

ಸೃಘ್ನ, ಮಾತೀಪುರ, ಬ್ರಹ್ಮಪುರ, ಗೋವಿಶನ, ಅಹಿಕ್ಷೇತ್ರ, ವಿರಸನ ದೇಶಗಳ ಸಂದರ್ಶನದ ನಂತರ ಕಪೀಥ ದೇಶವನ್ನು ತಲುಪಿದೆವು. ನನ್ನ ಮಿತ್ರನಿಗಿಲ್ಲಿ ಸ್ವಲ್ಪ ಸಮಾಧಾನವಾಯಿತು. ಇಲ್ಲಿ ಬೌದ್ಧ ಧರ್ಮ ಅನುಯಾಯಿಗಳು ಹೆಚ್ಚು ಸಂಖ್ಯೆಯಲ್ಲಿದ್ದು ಅವನನ್ನು ಸ್ವಾಗತಿಸಿದರು. ನಮ್ಮ ದೇವಾಲಯಗಳೂ ಸುಮಾರು ಸಂಖ್ಯೆಯಲ್ಲಿದ್ದು, ಈ ಪ್ರದೇಶದ ಇಷ್ಟದೇವ ಮಹೇಶ್ವರನಾಗಿದ್ದ. ಈ ಸ್ಥಳದಲ್ಲಿದ್ದ ಒಂದು ಸುಂದರವಾದ ಸ್ತೂಪದೊಳಗೆ ತಥಾಗಥ ಬುದ್ಧನ ಹಲವಾರು ದಂತಕತೆಗಳು ಕೇಳಿಬಂದವು. ಇವೆಲ್ಲವನ್ನೂ ನನ್ನ ಮಿತ್ರ ಸಿಹಿ ಕಂಡ ಎಳೆ ಕೂಸಿನ ಮುದಿತದಿಂದ ಕೇಳಿ, ಸಮಸ್ಥವನ್ನೂ ಬರೆದುಕೊಂಡನು.

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೫)

*****ಭಾಗ ೧೫

ಕನ್ಯಾಕುಬ್ಜವನ್ನು ಸೇರಿ ಹಲವು ದಿನಗಳ ಕಾಲ ನಾನು ದೇವಾಲಯವೊಂದರಲ್ಲಿ ತಂಗಿದ್ದು ಆಚೆಯೇ ಬರಲಿಲ್ಲ. ನನ್ನ ಮಿತ್ರ ಬಂದಾಗಲೆಲ್ಲ ಅಸ್ವಸ್ಥನಾಗಿರುವೆ ಎಂದು ಹೇಳಿ ಕಳುಹಿಸಿಬಿಡುತ್ತಿದ್ದೆ. ಸುತ್ತ-ಮುತ್ತಲಿನ ಜನರ ಬಳಿ ನನ್ನನ್ನು ಹುಡುಕಿಕೊಂಡು ಯಾರಾದರೂ ಬಂದಿದ್ದರೇ ಎಂದು ಕೇಳಿ, ನನ್ನ ಮಿತ್ರನನ್ನು ಬಿಟ್ಟು ಯಾರೂ ಬಂದಿಲ್ಲವೆಂದು ಕೇಳಿ ಸ್ವಲ್ಪ ಧೈರ್ಯ ಹೆಚ್ಚಾಯಿತು. ಕೊನೆಗೆ ಆಗೊಮ್ಮೆ ಈಗೊಮ್ಮೆ ಆಚೆ ಬರಲು ಆರಂಭಿಸಿದೆ.

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೬)

*****ಭಾಗ ೧೬

ಹರ್ಷರಾಜನ ಧಾರ್ಮಿಕ ಸಮಾವೇಷದ ಸಮಯವಾಗಿತ್ತು. ಗಜಾರೋಹಣ ಮಾಡುತ್ತ, ನಗಾರಿಗಳ ಬಡಿತ ಹಾಗು ಕಹಳೆಗಳ ನಾದಗಳೊಂದಿಗೆ ಹರ್ಷರಾಜ ಕನ್ಯಾಕುಬ್ಜದ ಬಳಿ ಗಂಗಾ ನದಿಯ ಪಶ್ಚಿಮ ತೀರಕ್ಕೆ ಆಗಮಿಸಿದ. ಅವನ ಆಜ್ಞೆಯ ಮೇರೆಗೆ ಇಪ್ಪತ್ತು ಸಾಮಂತರು ಸುತ್ತ ಮುತ್ತಲಿನ ಪ್ರದೇಶಗಳಿಂದ ಬಂದು ನೆರೆದಿದ್ದರು. ಅವರೊಂದಿಗೆ ಮೂರು ಸಹಸ್ರ ಬ್ರಾಹ್ಮಣರು, ಮೂರು ಸಹಸ್ರ ಬೌದ್ಧ ಶ್ರಮಣರಲ್ಲದೆ ಮೇಧಾವಿಗಳು, ಶ್ರೀಮಂತರು ಮತ್ತಿತರರು ಅಲ್ಲಿಗೆ ಆಗಮಿಸಿದ್ದರು. ಎಲ್ಲರಿಗೂ ತಂಗಲು ಅಲ್ಲಿಯೇ ವಿಹಾರಗಳನ್ನು ನಿರ್ಮಿಸಲಾಗಿತ್ತು.

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೭)

*****ಭಾಗ ೧೭

ಕೆಲವೇ ಕ್ಷಣಗಳು ಕಳೆದಿರಬೇಕು; ನನಗೆ ಪುನಃ ಜ್ಞಾನ ಬಂದಾಗ ನಾನಿನ್ನೂ ಅಲ್ಲಿಯೇ ಬಿದ್ದಿದ್ದೆ, ಆದರೆ ನನ್ನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ನನ್ನನ್ನು ಸುತ್ತುವರಿದ ಭಟರು ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಂತಿತ್ತು. ನನಗೂ ಕಣ್ಣು ಬಿಡಲು ಸಾಧ್ಯವಾಗಲಿಲ್ಲ; ಶಿರವು ನೋವಿನಿಂದ ಸಿಡಿದುಹೋಗುತ್ತಿದ್ದಂತಿತ್ತು. ಅಲುಗಾಡದೆ ಹಾಗೆಯೇ ಬಿದ್ದಿದ್ದೆ.

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೮)

*****ಭಾಗ ೧೮

ಕಾರಾಗೃಹದ ದಾರಿ ಕಲ್ಲು ಬಂಡೆಗಳ ಮೇಲೆ ಹಾಯ್ದು ಹೋಗುತ್ತಿತ್ತು. ಒಂದು ತಿರುವಿನಲ್ಲಿ ಎತ್ತರದ ಕಡಿದಾದ ಬಂಡೆಗಳು; ಬಂಡೆಗಳ ಮೇಲೆ ಒಂದು ಕಟ್ಟಡ ಕಾಣಿಸಿತು. ಕಟ್ಟಡಲ್ಲಿ ಕೆಲವೊಂದು ಬೆಳಕಿಂಡಿಗಳು ಕಾಣಿಸುತ್ತಿದ್ದವು. ಅವೇ ಕಾರಾಗೃಹ ಹಿಂಭಾಗದಲ್ಲಿರುವ ಸೆರೆ ಕೋಣೆಗಳಿರಬೇಕೆಂದು ಊಹಿಸಿದೆ. ಕಾರಾಗೃಹದ ಮುಂದೆ ಕೋಟೆಯಂತಹ ಭದ್ರತೆ. ಒಳಗೆ ಸೇರಿಸಿ ಬಾಗಿಲನ್ನು ಮುಚ್ಚಿದರೆ ಸೊಳ್ಳೆಯೂ ಹೊರ ಹೋಗಲಾರದು! ಈ ದುರ್ಗದಂತಹ ಕಾರಾಗೃಹಕ್ಕೆ ನನ್ನನ್ನು ಕರೆದೊಯ್ದರು. ಕುದುರೆಯಿಂದ ಕೆಳಗಿಳಿಸಿ ಮೊಗಸಾಲೆಗಳಲ್ಲಿ ಎಳೆದುಕೊಂಡು ಹೋದರು. ಮೊಗಸಾಲೆಯ ಕೊನೆಯಲ್ಲಿ ಆಕಾಶ-ತಾರೆಗಳು ಕಾಣಿಸುತ್ತಿದ್ದವು; ತಣ್ಣನೆಯ ಗಾಳಿಯೂ ಬೀಸುತ್ತಿತ್ತು. ಮೊಗಸಾಲೆಯ ಒಂದು ಬದಿಯಲ್ಲಿ ಒಂದೆರಡು ಮುಚ್ಚಿದ್ದ ಬಾಗಿಲುಗಳನ್ನು ಹಾಯ್ದು ಹೋಗಿ, ಒಂದು ತೆರೆದಿದ್ದ ಬಾಗಿಲಲ್ಲಿ ನನ್ನನ್ನು ತಳ್ಳಿ ಬಾಗಿಲು ಮುಚ್ಚಿದರು.