ಎಲ್ಲ ಪುಟಗಳು

ಲೇಖಕರು: H A Patil
ವಿಧ: ಬ್ಲಾಗ್ ಬರಹ
March 20, 2015
ದಶ ದಿಕ್ಕಿಗೂ ಹರಡಿದ  ಕರಿಯ ಮರಭೂಮಿ ಬಟಾ ಬಯಲಲ್ಲಿ ನಿಂತಿದೆ ಬೃಹತ್ ಕಹಿಬೇವು ಭೂಗರ್ಭದಾಳಕೆ  ತಾಯಿ ಬೇರನು ಇಳಿಸಿ ಅಂತರಾಳದ  ಜಲ ಹೀರಿ ಬೆಳೆದು  ಶೂನ್ಯವನಾವರಿಸಿ ಬೆಳೆದಿದೆ ಗಗನಮುಖಿಯಾಗಿ ಪ್ರಖರ ಬಿಸಿಲಿಗೆ ಕಮರಿ ನಲುಗದೆ ಎಲ್ಲ ಪ್ರತಿಕೂಲತೆಗಳಿಗೆ ಶೆಡ್ಡು ಹೊಡೆದು ಛಲಬಿಡದ ತ್ರಿವಿಕ್ರಮನಂತೆ ಬೆಂಬಿಡಿದು ನೀರ ಸೆಲೆಯರಸಿ ಮುಗುಳುಗಳರಳಿಸಿ ಸವಾಲಿಗೆ ಮೈಯೊಡ್ಡಿ ಬೆಳೆದು ನಿಲ್ಲುವ ಪರಿ   ಋತುರಾಜ ವಸಂತ  ಹರುಷದಿ ತಾ ಬಂದ  ಹಾಡಿದನುದ್ದೀಪನದಿ ಮಧುರ ಪ್ರೇಮದ ರಾಗ ರೆಂಬೆ ಕೊಂಬೆಗಳಲ್ಲಿ …
ಲೇಖಕರು: ravindra n angadi
ವಿಧ: ಬ್ಲಾಗ್ ಬರಹ
March 19, 2015
ಬಾ ಕಾಲ ಬಾ ವಸಂತ ಕಾಲ ನಿನಗಾಗಿ ಕಾಯುತಿದೆ ಮಾಮರಗಳು ಸುಡು ಬಿಸಿಲಿನಲ್ಲಿ ಚಿಗುರುವ ಆಸೆ ಪ್ರಕೃತಿ ಸೌಂದರ್ಯದ ಸೊಬಗು ಹೆಚ್ಚಿಸಲು    ಬಾ ಕಾಲ ಬಾ ವಸಂತ ಕಾಲ   ಕೋಗಿಲೆಯು ಕಾಯುತಿದೆ ನಿನಗಾಗಿ  ನೀ ಬಂದರೆ ತಾನೆ ಹಾಡಿ ಕುಣಿಯುವುದು  ಜನರ ಮನ ತಣಿಸುವದು ರೈತನು ಕಾಯುವನು ನಿನಗಾಗಿ   ಬರಡಾದ  ಭೂಮಿಯನು ಬಲಗೊಳಿಸುಲು    ನಿನ್ನ ಆಗಮನ ನಮಗೆ ಖುಷಿಯಾಗಿದೆ ನಿನ್ನಬರುವಿಕೆಗೆ ಕಾಯುತಿದೆ ಜೀವ ಸಂಕುಲ  ನಿನ್ನಿಂದ ತಾನೆ ಭೂಮಿಯು ಹಚ್ಚ ಹಸಿರು   ಅದರಿಂದ ತಾನೆ ನಮಗೆ ಉಸಿರು ಬಾ ಕಾಲ ಬಾ ವಸಂತ ಕಾಲ     …
ಲೇಖಕರು: lpitnal
ವಿಧ: ಬ್ಲಾಗ್ ಬರಹ
March 06, 2015
ಹೋಳಿ ಇಂದು ಹೋಳಿ ಹಬ್ಬ, ಎಲ್ಲೆಲ್ಲೂ ಬಣ್ಣ ಎರಚಾಟ ಮುಖಗಳಿಗೆಲ್ಲ ಚೆಹರೆ ಮರೆಯಾಗಿಸಿದ ಬಣ್ಣ, ನೆಲಮೊಗಕ್ಕೂ ಬಣ್ಣದೋಕುಳಿಯ ಬಣ್ಣ ಮುಗಿಲಿಗೆ ನೀಲಿ ಬಣ್ಣವಾದರೆ, ಬನಸಿರಿಗೆ ಹಸಿರುಡುಗೆಯ ಬಣ್ಣ ಹೂಗಿಡಗಳಲ್ಲಿ ತರಹೇವಾರು ಬಣ್ಣ ಬಣ್ಣವಿಲ್ಲದ ಬದುಕು ಊಹೆಗೂ ನಿಲುಕದಣ್ಣ ನವಿಲು ಬಣ್ಣಗಳ ಯುವಕ –ಯುವತಿಯರು ಖುಷಿಯಲ್ಲಿ ಮಿಂದ ಕಣ್ಣುಗಳಲ್ಲಿ ರಸ್ತೆಯಂಗಳದಲ್ಲಿ ಹಾಕಿದ ಕಾರಂಜಿ ಸೆಟ್ಟುಗಳಲ್ಲಿ ಸಾವಿರ ಸಾವಿರ ಸಂಖ್ಯೆಗಳಲ್ಲಿ, ಕೈ ಮೇಲೆತ್ತಿ ಸಂಗೀತದ ಬೀಟ್ಸ್ ಗೆ ತಕ್ಕಂತೆ ರೇನ್ ಡ್ಯಾನ್ಸ್ಸ್ ಗೆ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
March 03, 2015
ಅರ್ಜುನ್ ಮೊದಲು ಈ ಪೇಪರ್ ಹೆಡ್ಲೈನ್ಸ್ ಓದಿ. ಸರ್.... ಇದ್ಯಾವುದು ೨೫ ವರ್ಷ ಹಿಂದಿನ ಪೇಪರ್ ಕೊಡುತ್ತಿದ್ದೀರ... ಸರಿ.... ಪ್ರಖ್ಯಾತ ಉದ್ಯಮಿ ವೀರಾಸ್ವಾಮಿ ಮೊದಲಿಯಾರ್ ನಿಗೂಢ ಸಾವು.... ಯಾರು ಸರ್ ಇದು ವೀರಾಸ್ವಾಮಿ ಮೊದಲಿಯಾರ್? ಇದಕ್ಕೂ ಸೆಲ್ವಂಗು ಏನು ಸಂಬಂಧ? ಇದಕ್ಕೂ ನಮ್ಮ ಕೇಸಿಗೂ ಏನು ಸಂಬಂಧ? ಅರ್ಜುನ್.... ಈ ವೀರಾಸ್ವಾಮಿ ಮೊದಲಿಯಾರ್ ಬೇರೆ ಯಾರೂ ಅಲ್ಲ... ಒಂದು ಕಾಲದಲ್ಲಿ ತಮಿಳುನಾಡಿನ ಪ್ರಸ್ತಿದ್ಧ VM Groups ನ ಸಂಸ್ಥಾಪಕ. ಆತನ ಆಸ್ತಿ ಸುಮಾರು ೫೦೦ ಕೋಟಿಗಳಷ್ಟು. ಆತ ಬರೀ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
March 03, 2015
ಮನೆಯಲ್ಲಿ ಮದುವೆಯ ಕೆಲಸಗಳು ಭರದಿಂದ ಸಾಗಿದ್ದವು. ನಾನು ಮಾತು ಜಾನಕಿ ಇಬ್ಬರೂ ಹೆಚ್ಚು ಕಡಿಮೆ ಒಂದು ತಿಂಗಳು ಆಫೀಸಿಗೆ ಸರಿಯಾಗಿ ಹೋಗಿರಲಿಲ್ಲವಾದ್ದರಿಂದ ಮದುವೆಗೆ ಹೆಚ್ಚು ದಿನ ರಜೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ವಾರಾಂತ್ಯವೂ ಸೇರಿ ಐದು ದಿನ ರಜೆ ಮಾತ್ರ ಸಿಕ್ಕಿತ್ತು. ಮದುವೆಯ ಶಾಪಿಂಗ್ ಎಲ್ಲ ಮುಂಚೆಯೇ ಆಗಿದ್ದರಿಂದ ಅದ್ಯಾವುದರ ತಲೆನೋವು ಇರಲಿಲ್ಲ. ಕೇವಲ ಪತ್ರಿಕೆ ಹಂಚುವ ಕೆಲಸ ಒಂದು ಬಾಕಿ ಉಳಿದಿತ್ತು ಅಷ್ಟೇ. ಎರಡು ದಿನ ಕಳೆದು ತ್ರಿವಿಕ್ರಂ ಕರೆ ಮಾಡಿ, ಅರ್ಜುನ್ ಮಿನಿಸ್ಟರ್ ಜೊತೆ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
March 03, 2015
ಬೆಂಗಳೂರಿಗೆ ಬಂದು ಅಪ್ಪನಿಗೆ ಫೋನ್ ಮಾಡೋಣ ಎಂದುಕೊಂಡರೆ, ನಾನು ಅಪ್ಪನಿಗೆ ಹೇಳಿದ್ದ ಮಾತು ನೆನಪಿಗೆ ಬಂತು. ಇನ್ನೊಂದು ವಾರ ಬಿಟ್ಟು ಬರುತ್ತೇನೆ... ನೀವು ಯಾವುದಾದರೂ  ಜಾಗದಲ್ಲಿರಿ ಎಂದು ಹೇಳಿದ್ದು ನೆನಪಾಯಿತು. ಛೇ... ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲವಲ್ಲ... ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ, ಮನೆಯವರು ಆಚೆ ಹೋದಾಗ ಕೀ ಪಕ್ಕದ ಮನೆಯಲ್ಲಿ ಕೊಡುವುದು ವಾಡಿಕೆ ಆದ್ದರಿಂದ ಅದನ್ನೊಮ್ಮೆ ಪ್ರಯತ್ನ ಮಾಡೋಣ ಎಂದು ಮನೆಯ ಬಳಿ ಬಂದು ಪಕ್ಕದ ಮನೆಯಲ್ಲಿ ಕೇಳಿದಾಗ ನಮ್ಮ ಅದೃಷ್ಟಕ್ಕೆ ಕೀ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
February 27, 2015
ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು  ಎಂದು ಬಾಗಿಲು ತೆರೆದಾಗ ತ್ರಿವಿಕ್ರಂ ಮತ್ತು ಭಾಸ್ಕರನ್ ನಿಂತಿದ್ದರು. ನಾನಿನ್ನು ಆಮೇಲೆ ಬರುತ್ತೇನೆ ಎಂದು ಭಾಸ್ಕರನ್ ಹೊರಟು ತ್ರಿವಿಕ್ರಂ ಒಳಬಂದರು. ಜಾನಕಿಯನ್ನು ಅವರಿಗೆ ಪರಿಚಯ ಮಾಡಿಕೊಟ್ಟು ಮಾತಾಡಲು ಶುರುಮಾಡಿದೆವು. ಅರ್ಜುನ್, ಅಂದು ಮುರುಗನ್ ನನ್ನು ಬಂಧಿಸಿದ ಮೇಲೆ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
February 26, 2015
ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆಸೆದು ಬಿಟ್ಟಿದ್ದರು. ಅಷ್ಟರಲ್ಲಿ ಆಟೋ ಸಿಟಿ ಪ್ರವೇಶಿಸಿತು. ಯಾಕೋ ಬಸ್ ಸ್ಟಾಂಡ್ಗೆ ಹೋಗುವುದು ಸೇಫ್ ಎನಿಸಲಿಲ್ಲ. ಬಸ್ ನಿಲ್ದಾಣಕ್ಕೆ ಮುಂಚೆಯೇ ಆಟೋದವನಿಗೆ ನಿಲ್ಲಿಸಲು ಹೇಳಿದೆ. ಅವನು ಇನ್ನು ಬಸ್ ಸ್ಟಾಂಡ್ ವರ್ಲೆಯೇ.... ಎಂಗೆ ಎರಂಗಿನಾಲು ನೂತ್ತಿ ಅಂಬದುದಾ ಎಂದ.…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
February 25, 2015
ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ.  ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ " ಬ್ರಾಹ್ಮಣ " ನಲ್ಲಿ, ಸಕಲರ ಮಾತೆಯಾದ " ಗೋವು ", ಬಲಶಾಲಿಯಾಗಿಯೂ ಸಸ್ಯಾಹಾರಿಯಾಗಿಯೇ ಇರುವ " ಆನೆ " ಸಿಕ್ಕಿದ್ದೆಲ್ಲವನ್ನೂ ತಿನ್ನುವ " ನಾಯಿ", ಅ೦ಥಹ ನಾಯಿಯನ್ನೇ ಕೊ೦ದು ತಿನ್ನುವ ಶ್ವಪಾಕ ಇವೆಲ್ಲರಲ್ಲಿಯೂ ಜ್ಞಾನಿಗಳು ಸಮದೃಷ್ತಿ ಉಳ್ಳವರಾಗಿ ಕೇವಲ ಅವರ/ಅವುಗಳಲ್ಲಿರುವ " ಆತ್ಮ" ವನ್ನು ಮತ್ರವೇ…