ಎಲ್ಲ ಪುಟಗಳು

ಲೇಖಕರು: Kavitha Mahesh
ವಿಧ: ರುಚಿ
July 02, 2025
ಬೇಯಿಸಿ ಮಸೆದ ಆಲೂಗೆಡ್ಡೆ (ಬಟಾಟೆ), ಬಟಾಣಿ, ಜೀರಿಗೆ, ಮೆಣಸಿನ ಹುಡಿ, ಆಮ್ ಚೂರು ಹುಡಿ, ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ (ಸ್ಲೈಸ್) ಮೇಲೆ ಸ್ವಲ್ಪ ನೀರು ಚಿಮುಕಿಸಿ ಎರಡು ಅಂಗೈಗಳ ಮಧ್ಯೆ ಇರಿಸಿ ಅದುಮಿರಿ. ತಯಾರಿಸಿದ ಬಟಾಟೆ ಮಿಶ್ರಣವನ್ನು ಬ್ರೆಡ್ ಹಾಳೆಯ ಒಂದು ಬದಿಯಲ್ಲಿ ಉದ್ದಕ್ಕೆ ಇರಿಸಿ ಚಾಪೆ ಮಡಚುವಂತೆ ಮಡಚಿರಿ. ಬದಿಗಳನ್ನು ಅದುಮಿ ಚೆನ್ನಾಗಿ ಸೀಲ್ ಮಾಡಿ. ಹದವಾಗಿ ಕಾದ ಎಣ್ಣೆಯಲ್ಲಿ ಕೆಂಪಗೆ ಕಾಯಿಸಿ.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 30, 2025
“ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್‌ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು ಬೆಸೆಯುತ್ತದೆ. ಈ ಕಥನವು ಮುಂದಕ್ಕೆ ಚಲಿಸಿದಂತೆ, ಕಮರಿ ಹೋಗಿರುವ ಮಿಜೋರಾಮ್‌ನ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆಗಳು ಶೋಧಗೊಳ್ಳುತ್ತವೆ. ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಈ ನಾಡು ಅಸ್ಸಾಮಿನ ಭಾಗವಾಗಿತ್ತು; ಆಗ ಅಸ್ಸಾಮ್ ರೈಫಲ್ಸ್…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 30, 2025
ಮೊನ್ನ ವನ್ನ--ಎಂಬುದು ಬೆಲ್ಜಿ ಯಂ ದೇಶದ ಮಾರಿಸ್‌ ಮ್ಯಾಟರ್‌ಲಿಂಕ್‌ ಎಂಬ ಕವಿ ಬರೆದಿರುವ ಮೂರು ಅಂಕಗಳ ನಾಟಕ. ಇದರ ಕನ್ನಡ ಅನುವಾದ ಪುಸ್ತಕವು ಮೊನ್ನ ವನ್ನ ಹೆಸರಿನಲ್ಲಿ archive.org ತಾಣದಲ್ಲಿ ಉಚಿತವಾಗಿ ಲಭ್ಯ ಇದೆ. ಇದರ ಮುನ್ನುಡಿ ಮತ್ತು ಮುಖಪುಟದ ಹಿಂದೆ ಹಾಗೂ ಬೆನ್ನು ಪುಟಗಳ ಮೇಲಿನ ಲೇಖನಗಳಲ್ಲಿಯೇ ಬಹಳ ಮಹತ್ವದ ಸಂಗತಿಗಳು ನಮಗೆ ದಕ್ಕುತ್ತವೆ.  ಇದನ್ನು ಬರೆದ ಫ್ರೆಂಚ್ ಕವಿಯ ಕುರಿತಾದ ಮಾಹಿತಿಯನ್ನು ನಾವು ಓದಲೇಬೇಕು. ಬೆಲ್ಜಿಯಂ ದೇಶದ ರಾಷ್ಟ್ರೀಯ ಸಾಹಿತ್ಯಲೋಕದಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 29, 2025
ಇತ್ತೀಚೆಗೆ ಸಿ ಪಿ ನಾಗರಾಜ್ ಅವರು ಬರೆದ 'ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಓದು- ಸೀತಾ ಪರಿತ್ಯಾಗ ಪ್ರಸಂಗ' ಎಂಬ ಪುಸ್ತಕವು Archive.org  ತಾಣದಲ್ಲಿ ಪುಕ್ಕಟೆಯಾಗಿ ಸಿಕ್ಕಿತು. ಅದನ್ನು ಪುಟ ತಿರುಗಿ ಹಾಕಿದೆನು. ಈ ಪುಸ್ತಕದಲ್ಲಿ ಸೀತಾ ಪರಿತ್ಯಾಗ ಪ್ರಸಂಗದ ಪಠ್ಯವು ಲಕ್ಷ್ಮೀಶ ಕವಿಯ  ಜೈಮಿನಿಭಾರತ ಕಾವ್ಯದಲ್ಲಿ ಇದ್ದಂತೆ ಇದ್ದು ಅದನ್ನು ಆಧಾರಿಸಿದ ನಾಟಕವನ್ನು ಈ ಲೇಖಕರು ಬರೆದಿದ್ದು ಅದರ ಪಠ್ಯವೂ ಅದರ ಪದ ವಿಂಗಡಣೆ ಮತ್ತು ತಿರುಳು ಈ ಪುಸ್ತಕದಲ್ಲಿ ಇದೆ ಜೈಮಿನಿ ಭಾರತ ಎಂದರೆ ಲಕ್ಷ್ಮೀಶ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 27, 2025
“ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ.  ಖ್ಯಾತ ಲೇಖಕರು, ವಿಮರ್ಶಕರಾದ ಟಿ. ಎ. ಎನ್. ಖಂಡಿಗೆ ಪ್ರಕಾರ “ ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 25, 2025
ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು… “ಆಧುನಿಕ ಕನ್ನಡ ಸಾಹಿತ್ಯದ ಅರುಣೋದಯ ಕಾಲದಲ್ಲಿ ಹುಟ್ಟಿದ ರಮ್ಯ ದಾಂಪತ್ಯದ ತುಣುಕೊಂದು ಮುದ್ದಣ ಮನೋರಮೆಯರ ಸಲ್ಲಾಪದಲ್ಲಿ ಸಿಗುತ್ತದೆ. ಮುದ್ದಣ, ಆಧುನಿಕ‌ ಕನ್ನಡ ಸಾಹಿತ್ಯದ ಮುಂಗೋಳಿಯೆಂದೇ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 24, 2025
345)ಮೂಲ ಹಾಡು : ಸುಬಹ ಸೆ ಲೇಕರ ಶಾಮಕಕ ನನ್ನ ಅನುವಾದ:  ಬೆಳಗಿನಿಂದ ಸಂಜೆಯವರೆಗೆ ಸಂಜೆಯಿಂದ ರಾತ್ರಿವರೆಗೆ ರಾತ್ರಿಯಿಂದ ಬೆಳಗಿನವರೆಗೆ ಬೆಳಗಿನಿಂದ ಮತ್ತೆ ಸಂಜೆಯವರೆಗೆ ನನ್ನ ಪ್ರೀತಿಸು ನನ್ನ ಪ್ರೀತಿಸು 346)ಮೂಲ ಹಾಡು : ದೇಖಾ ಹೈ ತೇರೀ ಆಂಖೋ ಮೆ ನನ್ನ ಅನುವಾದ:  ನೋಡಿರುವೆ ನಿನ್ನ ಕಣ್ಣಲ್ಲಿ ಪ್ರೀತಿ ಅಪಾರವ ಕಂಡಿರುವೆ ನಿನ್ನ ಮಾತಲ್ಲಿ ಪ್ರೀತಿ ಅಪಾರವ 347)ಮೂಲ ಹಾಡು : ಉತರಾ ನ ದಿಲ ಮೇ ಕೋಯಿ ನನ್ನ ಅನುವಾದ:  ಇಳಿದಿಲ್ಲ ಯಾರು ಎದೆಗೆ ಇವಳ ಬಳಿಕ ನೋಡಿ ತುಟಿಯಲ್ಲಿ ಇವಳದೇ ಹೆಸರು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 24, 2025
  335)ಮೂಲ ಹಾಡು : ಇಸ್ ಪ್ಯಾರ್ ಸೇ ಮೇರಿ ತರಫ ನ ದೇಖೋ ನನ್ನ ಅನುವಾದ: ಇಷ್ಟು ಪ್ರೀತಿಯಿಂದ ನೀನು ನನ್ನ ಕಡೆಗೆ ನೋಡ್ಬೇಡ ಪ್ರೀತಿ ಆಗಿ ಬಿಟ್ಟಿತು ಈ ಪ್ರೀತಿ ಆಗಿ ಬಿಟ್ರೆ ನಿನ್ನ ಹೃದಯ ಚೂರು ಆಗಿಬಿಟ್ಟೀತು 336)ಮೂಲ ಹಾಡು :  ದಿಲ್ ತೋ ಖೋಯಾ ಹೈ ತೂ  ಜರಾ  ಬತಾದೇ ನನ್ನ ಅನುವಾದ: ಗಂ : ಹೃದಯ ಕಳೆದು ಹೋಗಿದೆ ಇಲ್ಲೆ ಎಲ್ಲಿಯೋ ನೀನು ಬಲ್ಲೆಯಾ? ಹೆ : ನಿನ್ನ ಹೃದಯ ಸಡಿಲು ಬಹಳ ನಾನೇನು ಬಲ್ಲೆನು? 337)ಮೂಲ ಹಾಡು : ಪಿಂಜರೇ ಕೇ ಪಂಛೀ ರೇ ನನ್ನ ಅನುವಾದ: ಪಂಜರದಾ ಗಿಣಿಯೇ ನಿನ್ನ ನೋವನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 24, 2025
315) ಮೂಲ ಹಾಡು : ತೇರೆ ಪಾಸ ಆನೆ ಸೆ ಮೇರಾ ವಕ್ತ ಗುಜರ ಜಾತಾ ಹೈ  ನನ್ನ ಅನುವಾದ:  ನಿನ್ನ ಬಳಿಗೆ ನಾನು ಬರಲು ನನ್ನ ಸಮಯ ಕಳೆದು ಹೋಗುವದು ಆ ಎರಡು ಗಳಿಗೆ ದುಃಖ ಹೋಗುವುದು ಎಲ್ಲಿ ನಾ ಅರಿಯೆ 316)ಮೂಲ ಹಾಡು : ಇಶ್ಕ ಛುಪ್ತಾ ನಹೀ‌ ಛುಪಾನೇ‌ಸೇ ನನ್ನ ಅನುವಾದ:  ಪ್ರೀತಿ ಮರೆಯಾಗದು ಮರೆಮಾಚಿದರೂ ನಿನ್ನ ಪ್ರೇಮಿ ನಾ ಬಹುಕಾಲದಿಂದ ನೀ ತಡೆಯಬೇಡ ನಾ ಸನಿಯ ಬರುವುದನು 317) ಮೂಲ ಹಾಡು : ಮತ ಪೂಛೋ ಮೇರೆ ಮೆಹಬೂಬ ಸನಮ್ ನನ್ನ ಅನುವಾದ:  ಕೇಳಿದೆ ಇರು ನೀ ನನ್ನ ನಲ್ಲೆ ನಾ ಪ್ರೀತಿಸುವೆ ನಿನ್ನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 23, 2025
ಭಯಂಕರ ಹೆದರಿಕೆ ಹುಟ್ಟಿಸುವ ಕಥೆಗಳನ್ನು ಓದಬೇಕೆಂದು ಬಯಸುವವರಿಗಾಗಿಯೇ ಅನುಭವಿಸಿದವರ ಅನಿಸಿಕೆಗಳನ್ನು ಕೇಳಿ, ತಮ್ಮದೇ ಆದ ಕಲ್ಪನೆಯಲ್ಲಿ ಬರೆದಂತಹ ಕಥೆಗಳು ‘ಶಿರಾಡಿ ಘಾಟ್’ ನಲ್ಲಿವೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ತಮ್ಮ ಅನುಭವದಲ್ಲಿ ಕಂಡುಬಂದ ದೆವ್ವಗಳಿಗೆ ಒಂದಿಷ್ಟು ಕಥಾರೂಪ ಕೊಟ್ಟು ಬರೆದ ಕಥೆಗಳು ಭಯಂಕರವಾಗಿವೆ. ಹಗಲಿನಲ್ಲಿ ಓದುವಾಗ ಸರಾಗವಾಗಿಯೇ ಓದಿಸಿಕೊಂಡು ಹೋಗುವ ಈ ಕಥೆಗಳು ರಾತ್ರಿಯ ನೀರವತೆಯಲ್ಲಿ ಓದಿದಾಗ ಮಾತ್ರ ಸಕತ್ ಭಯ ಹುಟ್ಟಿಸುತ್ತವೆ. ಅದರಲ್ಲೂ ಜೋರಾದ ಮಳೆ, ಗಾಳಿ ಬರುವ…