ವಿಧ: ಪುಸ್ತಕ ವಿಮರ್ಶೆ
May 14, 2025
“ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡು ಮಾಡಿಕೊಳ್ಳುವುದರ ಜೊತೆಗೆ ಮನಸನ್ನು ಮೌನವಾಗುವ ಪ್ರಶ್ನೆಗಳಾಗಿ ಉಳಿದುಕೊಂಡಿರುತ್ತವೆ. ಈ ಕಥೆಯಲ್ಲಿ ಬರುವ ಸನ್ನಿವೇಶಗಳು ಹೃದಯದ ಅಂತರಂಗಕ್ಕೆ ಹೋಗಿ ಬಡಿಯುವ ಅಲೆಗಳಂತಿವೆ. ಓದುಗರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುವ ಪಾತ್ರಗಳು ಯೋಚನೆ ಮಾಡದೆ ತೆಗೆದುಕೊಂಡ ನಿರ್ಧಾರ ಅಂತ್ಯದ ದಾರಿಗೆ ಹತ್ತಿರ…
ವಿಧ: ರುಚಿ
May 13, 2025
ಎರಡು ಚಮಚದಷ್ಟು ಗಟ್ಟಿ ತುಪ್ಪವನ್ನು ಕಡಾಯಿಗೆ ಹಾಕಿ ಬಿಸಿ ಮಾಡಿ. ಅದರಲ್ಲಿ ರವೆ, ಮೈದಾ ಹಾಕಿ ಮಂದಾಗ್ನಿಯ ಮೇಲಿಟ್ಟು ಹುರಿಯಿರಿ. ಕಮ್ಮಗೆ ಹುರಿದ ಮೇಲೆ ಕೆಳಗಿಳಿಸಿ. ಬಿಸಿ ಇರುವಂತೆಯೇ ಅದರಲ್ಲಿ ಮುಕ್ಕಾಲು ಲೋಟ ಸಕ್ಕರೆ, ತುರಿದ ಕೊಬ್ಬರಿ ಹಾಗೂ ಪ್ರತ್ಯೇಕವಾಗಿ ಖೋವಾ ಹಾಕಿ. ಮಂದಾಗ್ನಿಯ ಮೇಲಿರಿಸಿ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಿ. ನಂತರ ಕೆಳಗಿಳಿಸಿ. ಆರಿದ ಮೇಲೆ ಎಷ್ಟು ತೆರನಾದ ಬಣ್ಣಗಳಿವೆಯೋ ಈ ಸಾಮಗ್ರಿಯನ್ನು ಅಷ್ಟು ಭಾಗಗಳನ್ನಾಗಿ ಮಾಡಿ. ಒಂದೊಂದು ಭಾಗಕ್ಕೂ ಒಂದೊಂದು ಬಣ್ಣ ಸೇರಿಸಿ…
ವಿಧ: ಬ್ಲಾಗ್ ಬರಹ
May 12, 2025
ಈ ಪುಸ್ತಕವು archive.org ತಾಣದಲ್ಲಿದ್ದು ಇದನ್ನು pustaka.sanchaya.net ಜಾಲತಾಣದಲ್ಲಿ 'ಸೀತಾ ರಾಮ' ಎಂದು ಹುಡುಕುವ ಮೂಲಕ ಪಡೆಯಬಹುದು.
ಇದನ್ನು ಫ.ಗು. ಹಳಕಟ್ಟಿ ಅವರು ಬರೆದಿರಬಹುದು. ಬರೆದಿರಬಹುದು ಅಂತ ಯಾಕೆ ನಾನು ಹೇಳುತ್ತಿದ್ದೇನೆ ಅಂದರೆ ಈ ಪುಸ್ತಕದಲ್ಲಿ ಆ ಬಗ್ಗೆ ಮಾಹಿತಿ ಇಲ್ಲ. ಆದರೆ pustaka.sanchaya.net ತಾಣದಲ್ಲಿ ಲೇಖಕ ಫ. ಗು. ಹಳಕಟ್ಟಿ ಅಂತ ಒಂದು ಕಡೆ ಹೇಳಿದ್ದಾರೆ ಮತ್ತು ಹಳಕಟ್ಟೆಯವರ ಹೆಸರು ನಾವು ಕೇಳಿದ್ದೀವಿ.
ಇರಲಿ. ಈ ಪುಸ್ತಕದ ವಿಶೇಷವೇನು ಅದನ್ನು ನೋಡೋಣ.…
ವಿಧ: ಪುಸ್ತಕ ವಿಮರ್ಶೆ
May 12, 2025
ಚೆನ್ನಭೈರಾದೇವಿ, ಪುನರ್ವಸು ಅಂತಹ ಕಾದಂಬರಿಗಳನ್ನು ರಚಿಸಿದ ಅದ್ಭುತ ಕಾದಂಬರಿಕಾರ ಡಾ ಗಜಾನನ ಶರ್ಮ ಅವರು ಮಹಾಮಾಪನದ ಅಪೂರ್ವ ಕಥನವನ್ನು ‘ಪ್ರಮೇಯ’ ಎನ್ನುವ ಕಾದಂಬರಿ ಮೂಲಕ ಹೇಳಲು ಹೊರಟಿದ್ದಾರೆ. ಗಜಾನನ ಶರ್ಮ ಅವರು ಬರೆಯುವ ಕಾದಂಬರಿಗಳು ಇತಿಹಾಸದ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಸತ್ಯ ಕಥೆಯನ್ನು ಕಾಲ್ಪನಿಕವಾಗಿ ಚಿತ್ರಿಸುತ್ತಾ ಬರುತ್ತವೆ. ಇದೇ ಅವರ ಹೆಗ್ಗಳಿಕೆ. ಈ ಕಾರಣದಿಂದ ಅವರು ಬರೆಯುವ ಕಾದಂಬರಿಗಳು ಕೇವಲ ಅಂಕಿ ಅಂಶಗಳ ಪ್ರಬಂಧವಾಗದೇ, ಸ್ವಾರಸ್ಯಕರವಾದ ಕಾದಂಬರಿಯಾಗುತ್ತದೆ. ಇದೇ…
ವಿಧ: ಪುಸ್ತಕ ವಿಮರ್ಶೆ
May 09, 2025
ತಮ್ಮ ವಾಯು ಸೇನೆಯಲ್ಲಿನ ಸೇವೆಯ ದಿನಗಳನ್ನು ಪೂರ್ಣಿಮಾ ಮಾಳಗಿಮನಿಯವರು ‘ಆಕಾಶ ಇಷ್ಟೇ ಯಾಕಿದೆಯೋ’ ಎನ್ನುವ ಆತ್ಮ ಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಕೃತಿಗೆ ಹೆಸರಾಂತ ಅಂಕಣಕಾರ, ಲೇಖಕ ‘ಜೋಗಿ’ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಜೋಗಿಯವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ವೃತ್ತಿ ಜೀವನದ ನೆನಪುಗಳು ಗಾಢವಾಗಿರುತ್ತವೆ. ಅದರಾಚೆಗಿನ ಬದುಕಿನ ಘಟನೆಗಳಲ್ಲಿ ಅಂಥ ವೈಶಿಷ್ಟವೇನೂ ಇರುವುದಿಲ್ಲ. ಹುಟ್ಟು, ಸಾವುಗಳ ನಡುವೆ ಬಂದುಹೋಗುವ ಗೆಳೆಯರು, ಕುಟುಂಬಸ್ಥರು,…
ವಿಧ: ಪುಸ್ತಕ ವಿಮರ್ಶೆ
May 07, 2025
“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ ಪುಸ್ತಕಗಳನ್ನ ಕೈಲಿಡ್ದು “ ಅಣ್ಣೋ ತೇಜಸ್ವಿಯವರ್ದು ಕರ್ವಾಲೋ, ಮಾದ್ಹೇವಣ್ಣಂದು ಎದೆಗೆ ಬಿದ್ದ ಅಕ್ಷರ, ಕುವೆಂಪುರವರದ್ದು ಮಂತ್ರ ಮಾಂಗಲ್ಯ, ಬೇಂದ್ರೆ ಅಜ್ಜಂದು ನಾಕುತಂತಿ. ಇವೆಲ್ಲಾ ಕನ್ನಡ ಪುಸ್ತಕಗಳು ಕಣಣ್ಣ, ಒಂದೇ ಒಂದ್ ಪುಸ್ತಕ ತಗೋ ಬಾ…
ವಿಧ: ಪುಸ್ತಕ ವಿಮರ್ಶೆ
May 05, 2025
“ವೈಚಿತ್ರ್ಯಗಳಿಂದ ಕೂಡಿದ ಬದುಕೇ ಒಂದು ಬವಣೆಯ ಯಾತ್ರಾ-ಅಯನದಂತೆ! ಅಲಿಯುವುದು, ಅರಸುವುದು, ತೊಳತೊಳಲಿ ನೆಲೆಗಾಣದೇ ಅಂತಿಮ ಅಳಿದು ಹೋಗುವುದು. ಪ್ರಾಯಶಃ ಇದುವೇ ಜೀವನಕ್ರಮವೇ! ಅಥವಾ ಜೀವಿತಾವಧಿಗೆ ಹಿಡಿದ ಕೈಗನ್ನಡಿಯ ಮಾದರಿಯೇ? ಅರ್ಥವಾಗದ ನಿರೀಕ್ಷಣವಿದು. ಕೇಳಲು ತಾತ್ವಿಕ ವಿಷಯ ವಾದರೂ; ಯಾಂತ್ರಿಕ ಗುಣಧರ್ಮದಲ್ಲಿನ ಮನುಷ್ಯ-ಪಾತ್ರವು ಕೇವಲ ತೃಣು-ಅಣು- ಕಣವಾಗಿಯೇ ಇರಿಸಿ, ನಶಿಸಿ ಅಸುನೀಗಿಸುವುದು. ಇದು ಪ್ರಾಕೃತಿಕ-ವಿಕಲ್ಪವಲ್ಲದಿದ್ದರೂ ಸುಕೃತದೊಳಗಿನ ಸೂಕ್ಷ್ಮ ಸಂವೇದನೆಯ ವೈರುಧ್ಯವೂ ಹೌದು…
ವಿಧ: ರುಚಿ
May 05, 2025
ಮೈದಾ ಮತ್ತು ಕಡಲೆ ಹಿಟ್ಟಿಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ನಾದಬೇಕು. ಕಲಸಿದ ಹಿಟ್ಟನ್ನು ಹತ್ತು ನಿಮಿಷ ನೆನೆದ ನಂತರ ಚಪಾತಿಯ ಆಕಾರದಲ್ಲಿ ಲಟ್ಟಿಸಿ ಎಣ್ಣೆ ಹಾಕಿ ಬೇಯಿಸಿ. ರುಚಿಯಾದ ಮೆಂತ್ಯೆಸೊಪ್ಪು ತಾಲಿಪಟ್ಟು ತಿನ್ನಲು ತಯಾರು. ಇದನ್ನು ಆಲೂಗಡ್ಡೆ ಪಲ್ಯ ಅಥವಾ ಉಪ್ಪಿನಕಾಯಿ ಜೊತೆ ತಿನ್ನಲು ಬಹಳ ರುಚಿಕರ.
ವಿಧ: ಪುಸ್ತಕ ವಿಮರ್ಶೆ
May 02, 2025
ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ, ವಾಸ್ತವಿಕ ಐತಿಹಾಸಿಕ ತಳಹದಿಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು ಜೀವಂತವಾಗಿರಿಸುವ ಎಲ್ಲಾ ಯತ್ನಗಳು ಮಂಜುನಾಥ ಅವರಿಂದ ನಡೆದಿದೆ. ಸುಮಾರು ಏಳು ವರ್ಷಗಳ ನಿರಂತರ ಅಧ್ಯಯನ ಪ್ರವಾಸ ಕಲಿಕೆಯ ಮೂಲಕ ಗಂಡು ಮೆಟ್ಟಿನ ರಾಣಿ ದಿಟ್ಟ ಚೆನ್ನಮ್ಮನ ಗಟ್ಟಿ ಕಥೆ ಹೊರಹೊಮ್ಮಿದೆ. ಇಲ್ಲಿಯವರೆಗಿನ ಕಿತ್ತೂರು ಇತಿಹಾಸ ಸಂಶೋಧನೆಯ…
ವಿಧ: ಪುಸ್ತಕ ವಿಮರ್ಶೆ
April 30, 2025
ಸರ್ ಆರ್ಥರ್ ಕಾನನ್ ಡಾಯ್ಲ್ ತನ್ನ ಪತ್ತೇದಾರಿ ಕಾದಂಬರಿಗೋಸ್ಕರ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಎನ್ನುವ ಪತ್ತೇದಾರನ ಪಾತ್ರವನ್ನು ಕಾಲ್ಪನಿಕ ಪಾತ್ರ ಎಂದು ಓದುಗರು ನಂಬಲೇ ಇಲ್ಲ. ಅಂತಹ ಒಂದು ಕಾಲ್ಪನಿಕ ಪಾತ್ರ ಬಿಡಿಸಿದ ೭ ರೋಚಕ ಸಾಹಸ ಕಥೆಗಳು ಈ ಕೃತಿಯಲ್ಲಿವೆ.
ಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು, ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕರವಸ್ತ್ರಕ್ಕಂಟಿದ ಕಣ್ಣೀರು- ನಾವೆಲ್ಲ…