ವಿಧ: ಪುಸ್ತಕ ವಿಮರ್ಶೆ
July 18, 2025
“ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಸುಧಾ, ತರಂಗ, ಮಯೂರ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹನ್ನೆರಡು ಸಣ್ಣ ಕಥೆಗಳಿರುವ ಈ ಸಂಕಲನ “ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ” ಪಡೆದಿದೆ. ಅನು ಬೆಳ್ಳೆ ಅವರಿಗೆ ಪಾತ್ರಗಳು ಮತ್ತು ಸಂದರ್ಭ ಸೃಷ್ಟಿಯ ಕಲೆ…
ವಿಧ: ಪುಸ್ತಕ ವಿಮರ್ಶೆ
July 17, 2025
‘ಕನ್ನಡ ಪತ್ರಿಕಾ ಲೋಕ’ದ ಎರಡೂ ಮಾಲಿಕೆಗಳನ್ನು ಇತ್ತೀಚೆಗೆ ಓದಿದೆನು. ತುಂಬಾ ಖುಷಿಯಾಯಿತು. ಕನ್ನಡ ನಿಯತಕಾಲಿಕಗಳನ್ನು ನಿಯಮಿತವಾಗಿ ಓದುವ ಓದುಗರಿಗೆ ಇವೆರಡೂ ಪುಸ್ತಕಗಳು ‘ಅಮೂಲ್ಯ ರತ್ನಗಳು’ ಎಂದೇ ಹೇಳಬಹುದು. ಈ ಎರಡೂ ಪುಸ್ತಕಗಳಲ್ಲಿ ಒಟ್ಟು ೧೦೪ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಸಂತಸದ ವಿಷಯ. ಪ್ರತಿ ಪತ್ರಿಕೆಯ ಮಾಹಿತಿ ನೀಡುವಾಗ, ಆ ಪತ್ರಿಕೆಯು ಪ್ರಕಟಗೊಳ್ಳುತ್ತಿದ್ದ ಊರು, ಅದರ ಸಂಪಾದಕರು, ಪ್ರಕಾಶಕರು ಮತ್ತು ಅದರ ಮುಖಬೆಲೆ ನೀಡುವುದರ ಜೊತೆಗೆ ಆ ಪತ್ರಿಕೆಯು ಯಾವ ಯಾವ…
ವಿಧ: ಪುಸ್ತಕ ವಿಮರ್ಶೆ
July 16, 2025
ಥ್ರಿಲ್ಲರ್ ಕಾದಂಬರಿಗಳನ್ನು ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ವಾಸುದೇವ್ ಮೂರ್ತಿಯವರ ನೂತನ ಕಾದಂಬರಿ ‘ಹಾವು ಏಣಿ ಆಟ’ ಈ ರೋಚಕ ಕಾದಂಬರಿಯು ಓದಿ ಮುಗಿಸುವ ತನಕ ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿದೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಾಸುದೇವ್ ಮೂರ್ತಿಯವರು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ “ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಥ್ರಿಲ್ಲರ್" ಔಷಧ…
ವಿಧ: ಪುಸ್ತಕ ವಿಮರ್ಶೆ
July 14, 2025
ಡಾ. ಅರುಣಾ ಯಡಿಯಾಳ್ ಬರೆದ ಎರಡು ಪುಟ್ಟ ಕಾದಂಬರಿಗಳ ಸಂಕಲನವೇ ‘ಮನಸೆಂಬ ಮಾಯಾಮೃಗ’. ೧೮೧ ಪುಟಗಳ ಈ ವಿಶಿಷ್ಟ ಜಂಟಿ ಕಾದಂಬರಿಗೆ ಲೇಖಕಿ ಬರೆದ ಮುನ್ನುಡಿಯ ಎರಡು ಸಾಲುಗಳು ಹೀಗಿವೆ…
“ಮನಸ್ಸು ಎಂಬುದೊಂದು ದಟ್ಟ ಕಾನನ. ಅಲ್ಲಿ ವೈವಿಧ್ಯವಾದ ಭಾವ ಜೀವಿಗಳ ವಾಸ. ಕೆಲವೊಮ್ಮೆ ಅದ್ಯಾವುದೋ ವಿಶಿಷ್ಟ ಭಾವನೆ ಮಾಯಾಜಿಂಕೆಯಂತೆ ಮಿಂಚಿ ಮಾಯವಾಗುತ್ತೆ. ಈ ಭಾವನೆಗಳೇ ಅತಿರೇಕವಾಗಿ, ವಿಚಿತ್ರ ರೂಪ ತಾಳಿ, ಮನಸ್ಸೇ ಮಾಯಾಮೃಗವಾಗಿ, ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ವಾಸ್ತವಿಕ ಹಾಗು ನೈತಿಕ ನೆಲೆಗಳ…
ವಿಧ: ಪುಸ್ತಕ ವಿಮರ್ಶೆ
July 11, 2025
ಖ್ಯಾತ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಆತ್ಮ ಕಥೆ ‘ಪತ್ರಕರ್ತನ ಪಯಣ’ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಕರ್ತರಾಗಿ ತಾವು ಕಂಡ, ಅನುಭವಿಸಿದ ಘಟನೆಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಮಹನೀಯರಾದ ಪ್ರೊ. ಓಂಕಾರ ಕಾಕಡೆ ಮತ್ತು ಡಾ. ಬಿ.ಕೆ.ರವಿ ಅವರು ಲಕ್ಷ್ಮಣ ಕೊಡಸೆ ಅವರ ಬಗ್ಗೆ ಅಭಿಪ್ರಾಯಗಳನು ತಿಳಿಸಿದ್ದಾರೆ. “ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು…
ವಿಧ: ಬ್ಲಾಗ್ ಬರಹ
July 09, 2025
ಇತ್ತೀಚೆಗೆ ಗೆಳೆಯರೊಬ್ಬರು ವ್ಯಾಸನ ಬಗೆಗೆ ಒಂದು ಪ್ರಶ್ನೆ ಕೇಳಿದರು. ಆಗ ಹಿಂದೆ archive.org ತಾಣದಿಂದ ಇಳಿಸಿಕೊಂಡ ಮಹಾಭಾರತದ ಆದಿಪರ್ವ ಓದಲಾರಂಭಿಸಿದೆ. ಈ ಆದಿ ಪರ್ವವು ಸುಮಾರು 350+ 350 ಪುಟಗಳ ಎರಡು ಭಾಗಗಳಲ್ಲಿ ಇದ್ದು ಇದನ್ನು ಪಂಡಿತ ದೇವಶಿಖಾಮಣಿ ಅಳಸಿಂಗಾಚಾರ್ಯರು ಬರೆದಿದ್ದಾರೆ. ಮೊದಲ ಭಾಗವನ್ನು ಓದುವಾಗ ನಾನು ಮಾಡಿಕೊಂಡ ಟಿಪ್ಪಣಿಗಳು ಇಲ್ಲಿವೆ.
ನೈಮಿಷಾರಣ್ಯದಲ್ಲಿ ಶೌನಕನು ಒಂದು ಯಾಗ ಮಾಡುತ್ತಿದ್ದನು. ಅಲ್ಲಿಗೆ ಸೂತ ಪೌರಾಣಿಕನು ಹೋದಾಗ ಅವನು ಅಲ್ಲಿನ ಋಷಿಗಳಿಗೆ…
ವಿಧ: ಪುಸ್ತಕ ವಿಮರ್ಶೆ
July 09, 2025
ದಾದಾಪೀರ್ ಜೈಮನ್ ಅವರ “ಜಂಕ್ಷನ್ ಪಾಯಿಂಟ್” ಎಂಬ ಅಂಕಣ ಬರಹಗಳ ಸಂಗ್ರಹವು ಒಂದು ಕಾಲದ ಚಿತ್ರಣವಷ್ಟೇ ಅಲ್ಲ, ಒಂದು ಸಮಾಜದ, ವ್ಯಕ್ತಿಗಳ, ಭಾವನೆಗಳ, ಕಷ್ಟ ಕೋಟಲೆಗಳ ಕನ್ನಡಿಯಾಗಿದೆ. ಕೋವಿಡ್ ಕಾಲದ ದುಗುಡ ದುಮ್ಮಾನಗಳು, ಅಕಾಲಿಕ ಮಳೆಯಿಂದ ಕವಿದ ಮೋಡದ ವಾತಾವರಣ, ಯುದ್ಧ, ದೌರ್ಜನ್ಯ, ಕೊಲೆ ಸರಣಿಗಳಂತಹ ಸುದ್ದಿಗಳ ನಡುವೆ, ಈ ಬರಹಗಳು ಓದುಗರ ಮನಸ್ಸಿನಲ್ಲಿ ಒಂದು ಭಾವನಾತ್ಮಕ ಜಂಕ್ಷನ್ ರಚಿಸುತ್ತವೆ. ಇದೊಂದು ಕೇವಲ ಕತೆಯ ಸಂಗ್ರಹವಲ್ಲ, ಬದುಕಿನ ಹಲವು ದಾರಿಗಳು ಕೂಡುವ, ಬೇರ್ಪಡುವ, ಒಡದು…
ವಿಧ: ರುಚಿ
July 08, 2025
ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಉಪ್ಪು ಸೇರಿಸಿರಿ. ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕಡಲೆಬೇಳೆ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಗೇರುಬೀಜದ ತುಂಡುಗಳನ್ನು ಸೇರಿಸಿ ನಸುಗೆಂಪಾಗುವಷ್ಟು ಹುರಿದು ಮೊಸರಿನ ಮೇಲೆ ಹಾಕಿರಿ.
ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಹಾಲು ಚಿಮುಕಿಸಿ ಅಂಗೈಯಿಂದ ಮೃದುವಾಗಿ ಮಸೆದು ಬ್ರೆಡ್ ವಡಾ ಆಕಾರಕ್ಕೆ ತನ್ನಿ. ಬಿಸಿ ಕಾವಲಿಯ ಮೇಲೆ ತಯಾರಿಸಿದ ಬ್ರೆಡ್ ವಡಾ ಇಡಿ. ಮೇಲಿನಿಂದ ತಯಾರಿಸಿದ…
ವಿಧ: ಪುಸ್ತಕ ವಿಮರ್ಶೆ
July 07, 2025
ಮಕ್ಕಳಿಗಾಗಿ ಪುಸ್ತಕಗಳು ಬರುವುದು ಅಪರೂಪವೇ ಆಗಿರುವ ಸಮಯದಲ್ಲಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಇವರು ಮಕ್ಕಳ ಕಥಾ ಸಂಕಲನ ‘ನೋಟ್ ಬುಕ್’ ಹೊರತಂದಿದ್ದಾರೆ. ಈ ಕಥಾ ಸಂಕಲನಕ್ಕೆ ತಮ್ಮ ಅನಿಸಿಕೆಗಳನ್ನು ಬರೆದ್ದಾರೆ ಕಿರಣ್ ಭಟ್. ಅವರು ತಮ್ಮ ಅನಿಸಿಕೆಯಲ್ಲಿ “ಬಹುಷ: ನಾವು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು.ಅದಕ್ಕೆ ಮುಚ್ಚಲು ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ…
ವಿಧ: ಪುಸ್ತಕ ವಿಮರ್ಶೆ
July 04, 2025
ಜಗತ್ತಿನ ಅತ್ಯಂತ ಪ್ರಾಚೀನ ಕತೆಯಾದ 'ಗಿಲ್ಗಮೆಶ್ ಮಹಾಗಾಥೆ' ಹೊಸ ಗದ್ಯರೂಪದ ಅನುವಾದ ಪ್ರಕಾರದಲ್ಲಿ ಪ್ರಕಟವಾಗಿದೆ . ಮೆಸೊಪೊಟೇಮಿಯಾದ ಈ ಮಹಾಗಾಥೆ ಎಲ್ಲ ಕಾಲ, ದೇಶ, ಭಾಷೆಗಳನ್ನು ಮೀರಿದ ವಿಚಾರಗಳಾದ ಗೆಳೆತನ, ಹುಟ್ಟು ಸಾವಿನ ನಡುವಿನ ಬದುಕಿನ ಅರ್ಥ ಅರಸುವ ಹಂಬಲ, ಸಾವಿನ ಅಂಜಿಕೆ ಹಾಗೂ ಸಾವನ್ನು ಗೆಲ್ಲಬೇಕೆನ್ನುವ ನಿರಂತರ ಪ್ರಯತ್ನಗಳ ಸುಂದರ ಕಾವ್ಯಾತ್ಮಕ ನಿರೂಪಣೆಯಾಗಿದೆ. ಸಾವಿನ ಹೆದರಿಕೆ ಹಾಗೂ ಹೇಗಾದರೂ ಅದನ್ನು ಗೆಲ್ಲಬೇಕು, ಅಮರತ್ವ ಸಾಧಿಸಬೇಕೆಂದು ಹೊರಡುವ ಗಿಲ್ಗಮೆಶ್ನ ಚಡಪಡಿಕೆ…