ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 10, 2025
ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು ವಿಧಗಳಿವೆ. ಪ್ರತಿಯೊಂದು ಕನ್ನಡದ ಸೊಗಡೇ ಅದ್ಭುತ. ಕುಂದಾಪ್ರ ಕನ್ನಡದಲ್ಲಿನ ಪದಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಕನ್ನಡ ನಿಘಂಟನ್ನು ಖ್ಯಾತ ವ್ಯಂಗ್ಯ ಚಿತ್ರಕಾರರಾದ ಪಂಜು ಗಂಗೊಳ್ಳಿಯವರು ಸಂಪಾದಿಸಿದ್ದಾರೆ. ‘ಕುಂದಾಪ್ರ ಕನ್ನಡ ನಿಘಂಟು’ ಈ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 07, 2025
ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು … “ಮನುಷ್ಯ ಸೂಕ್ಷ್ಮವಾಗುತ್ತಾ ಆಗುತ್ತಾ ಅಸೂಕ್ಷ್ಮವನ್ನು ಗ್ರಹಿಸಬಲ್ಲವನಾಗುತ್ತಾನೆ. ಬೇಕಿದ್ದರೆ ಸುಮ್ಮನೇ ಯೋಚನೆ ಮಾಡಿ, ಒಬ್ಬ ಸೂಕ್ಷ್ಮ ವ್ಯಕ್ತಿಗೆ ಎಲ್ಲವೂ ಕಾಣಿಸತೊಡಗುತ್ತದೆ. ತೀರಾ ನಾಟಕೀಯತೆಯನ್ನೂ, ಕ್ರೌರ್ಯ ಮರೆಸಿ ತೋರುವ ಕಪಟ ಮಾನವತೆಯನ್ನೂ ಗ್ರಹಿಸಬಲ್ಲ.…
ವಿಧ: ರುಚಿ
March 07, 2025
ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ ಸಕ್ಕರೆ, ಏಲಕ್ಕಿ ಪುಡಿ ಎಲ್ಲ ಹಾಕಿ ಚೆನ್ನಾಗಿ ಕದಡಿ. ಫ್ರಿಜ್‌ನ ಫ್ರೀಜರ್‌ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ. ಬಹಳ ರುಚಿಯಾಗಿರುವ ಈ ಐಸ್‌ಕ್ರೀಮನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 05, 2025
ಅದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಸಂಕಲಿಸಿದ ‘ಪುರಾಣ ಕಥಾಕೋಶ’ ಎನ್ನುವ ಕೃತಿಯನ್ನು ರಚಿಸಿದ್ದಾರೆ ಮೋಹನ ಕುಂಟಾರ್. ಪುರಾಣದ ಕಥೆಗಳ ಬಗ್ಗೆ ಎಷ್ಟೇ ತಿಳಿದುಕೊಂಡರೂ ಇನ್ನಷ್ಟು ತಿಳಿಯಲು ಇದ್ದೇ ಇರುತ್ತದೆ. ಪುರಾಣದ ಯಾವುದೇ ಪಾತ್ರವನ್ನು ಬೇಕಾದರೂ ನೀವು ತೆಗೆದುಕೊಳ್ಳಿ, ಅದಕ್ಕೊಂದು ಸೂಕ್ತವಾದ ಹಿನ್ನಲೆ, ಕಥೆ ಇದ್ದೇ ಇರುತ್ತದೆ. ಈ ರೀತಿಯ ಪುರಾಣ ಕಥೆಗಳನ್ನು ಓದಲು ಬಹಳ ಚೆನ್ನಾಗಿರುತ್ತದೆ. ಈ ಕೃತಿಯ ಬಗ್ಗೆ ಖ್ಯಾತ ಬರಹಗಾರ ಹಾಗೂ ವಿಮರ್ಶಕ ಡಾ. ತಾರಾನಾಥ ವರ್ಕಾಡಿಯವರು ಸೊಗಸಾದ…
ವಿಧ: ರುಚಿ
March 05, 2025
ಬಾಳೆಹಣ್ಣಿನ ತಿರುಳಿಗೆ ಉಪ್ಪು, ಸಕ್ಕರೆ, ೧ ಚಮಚ ಎಣ್ಣೆ, ಚಿಟಿಕೆ ಸೋಡಾ, ಮೈದಾ ಸೇರಿಸಿ ಚೆನ್ನಾಗಿ ಕಲಸಿ. ೭-೮ ಗಂಟೆ ಬಿಟ್ಟು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ. ಇದನ್ನು ಯಾವುದೇ ಸಾಂಬಾರ್ ಜೊತೆ ತಿನ್ನಬಹುದು. ಅಥವಾ ಟೀ, ಕಾಫಿ ಜೊತೆ ಹಾಗೆಯೇ ತಿನ್ನಲೂ ಚೆನ್ನಾಗಿರುತ್ತದೆ. ಇದು ಕರಾವಳಿ ಜನರ ಅಚ್ಚುಮೆಚ್ಚಿನ ತಿಂಡಿ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 03, 2025
ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ. ಯಶಸ್ಸಿನ ಹಾದಿಯಲ್ಲಿ ಎದುರಿಸಿದ ಕಷ್ಟಗಳಿರಬಹುದು, ಪಡೆದ ಯಶಸ್ಸಿನ…
ಲೇಖಕರು: Kavitha Mahesh
ವಿಧ: ರುಚಿ
March 03, 2025
ಬ್ರೆಡ್ ಹುಡಿ ಮತ್ತು ಹಾಲನ್ನು ಚೆನ್ನಾಗಿ ಬೆರೆಸಿ. ಸಕ್ಕರೆ ಮತ್ತು ಕಾಯಿತುರಿಯನ್ನು ಸಣ್ಣ ಉರಿಯಲ್ಲಿ ಏಳೆಂಟು ನಿಮಿಷ ಹುರಿಯಿರಿ. ಬಳಿಕ ಬ್ರೆಡ್ ಹುಡಿ ಮಿಶ್ರಣವನ್ನು ಸೇರಿಸಿ, ಬೆರೆಸಿ. ಮಿಶ್ರಣವು ಬದಿ ಬಿಡಲು ಆರಂಭಿಸಿದಾಗ ಎರಡು ಚಮಚ ತುಪ್ಪ ಸೇರಿಸಿ ಕೈಯಾಡಿಸಿ. ಒಂದು ಸ್ಟೀಲ್ ತಾಟಿಗೆ ಉಳಿದ ತುಪ್ಪ ಸವರಿ ತಯಾರಿಸಿದ ಮಿಶ್ರಣವನ್ನು ಸುರಿದು ಚೆನ್ನಾಗಿ ಸೆಟ್ ಮಾಡಿರಿ. ತಣಿದ ಬಳಿಕ ಫ್ರಿಡ್ಜ್ ನಲ್ಲಿಡಿ. ಸೆಟ್ ಆದ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿರಿ.
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 28, 2025
“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು. ಬಹುಮುಖ ಪ್ರತಿಭೆಯ ದೇವುಡು (1896-1962) ಅವರು ಕನ್ನಡನಾಡಿನಲ್ಲಿ ಮನೆಮಾತಾಗಿರುವುದು ಅವರ “ಮಹಾ…” ಸರಣಿಯ ಈ ಮೂರು ಬೃಹತ್ ಕಾದಂಬರಿಗಳಿಂದಾಗಿ: “ಮಹಾಕ್ಷತ್ರಿಯ”, ಮಹಾಬ್ರಾಹ್ಮಣ” ಮತ್ತು “ಮಹಾದರ್ಶನ”. ಇವು ಭಾರತದ ವೈದಿಕ ಸಂಸ್ಕೃತಿಯ ಮೂಲವನ್ನು…
ವಿಧ: ರುಚಿ
February 28, 2025
ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಕೂವೆ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ನಂತರ ಸಕ್ಕರೆ ಹಾಕಿ ಕದಡಿ. ಆಮೇಲೆ ಏಲಕ್ಕಿ ಪುಡಿ ಹಾಕಿ. ಹಲ್ವ ತಳ ಬಿಟ್ಟುಕೊಂಡು ಬರುವಾಗ ಎರಡು ಚಮಚ ತುಪ್ಪ ಹಾಕಿ ಕದಡಿ. ಬೆಂದ ಹಲ್ವವನ್ನು ತುಪ್ಪ ಸವರಿದ ಬಟ್ಟಲಿಗೆ ಸುರುವಿ ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ಸವಿಯಾದ ಕೂವೆ ಹಲ್ವ ಮೆಲ್ಲಲು ರೆಡಿ. -ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 27, 2025
ಇದೀಗ ಮಯೂರ ಮಾಸಿಕದ ಮಾರ್ಚ್ 2025ರ ಸಂಚಿಕೆಯನ್ನು ತಿರುವಿ ಹಾಕಿದೆ. ಕೆಲವು ಕಥೆಗಳನ್ನು ಓದಿದೆ. ಕಥೆಗಳನ್ನು ಓದುವುದರ ಲಾಭ ಎಂದರೆ  ಬೇರೆಯವರ ಜೀವನದ ಪರಿಸ್ಥಿತಿಯನ್ನು ಅದರ ನೋವಿಲ್ಲದೆ ನಾವು  ತಿಳಿದಂತಾಗುತ್ತದೆ. ಪದ್ದಮ್ಮನ ಮೂಗುತಿ ಎಂಬ ಕತೆಯಲ್ಲಿ ಒಂದು ಸಾವಿನ ಸಂಪೂರ್ಣ ಸಂಗತಿ ಇದೆ. ಹಾಗೆಯೇ ಅಪ್ಪಂದಿರ ದಿನಾಚರಣೆ ಎಂಬ ಕತೆಯಲ್ಲಿ ಟಿವಿ ಕಾರ್ಯಕ್ರಮವೆಂದರೆ ಹಿನ್ನೆಲೆಯಲ್ಲಿ ಒಬ್ಬ ಅಂದುಕೊಳ್ಳುವುದು ಏನೆಂದರೆ 'ಇವರೆಲ್ಲ ನನ್ನಪ್ಪ ಹಾಗೆ ಹೀಗೆ ಎಂದು ಹೋಗಳುತ್ತಿದ್ದಾರೆ. ನನಗೋ ನನ್ನಪ್ಪನು…