ವಿಧ: ಪುಸ್ತಕ ವಿಮರ್ಶೆ
December 11, 2023
‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ, ಸುಲಭದಲ್ಲಿ ಸಿಗುವ ಹಣ, ದೊಡ್ದ ವ್ಯಕ್ತಿಗಳ ಸಂಪರ್ಕ ಹೀಗೆ ಹತ್ತು ಹಲವಾರು ಕಾರಣಗಳು ಸಿಕ್ಕೇ ಸಿಗುತ್ತವೆ. ನಮ್ಮ ಸಮಾಜ ವೇಶ್ಯಾವೃತ್ತಿಯನ್ನು ಅತ್ಯಂತ ಕೀಳು ಕೆಲಸವೆಂದು ಹೇಳಿಕೊಂಡರೂ, ಶತಶತಮಾನಗಳಿಂದಲೂ ಇದು ಇನ್ನೂ ನಿವಾರಣೆಯಾಗದೇ ಮುಂದುವರಿದುಕೊಂಡು…
ವಿಧ: ರುಚಿ
December 10, 2023
ತೆಂಗಿನ ತುರಿಗೆ ಎಣ್ಣೆಯೊಂದನ್ನು ಬಿಟ್ಟು ಉಳಿದೆಲ್ಲಾ ಸಾಮಾನುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿದ ಮಿಶ್ರಣವನ್ನು ೨೦ ನಿಮಿಷಗಳವರೆಗೆ ನೆನೆಸಿ. ಕಲಸಿದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬೇಕಾದ ಗಾತ್ರದಲ್ಲಿ ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಸವಿಯಾದ ತೆಂಗಿನಕಾಯಿ ವಡೆ ತಯಾರು.
ವಿಧ: ಪುಸ್ತಕ ವಿಮರ್ಶೆ
December 08, 2023
೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ ನಮ್ಮ ಸ್ವಾತಂತ್ರ್ಯದ ಇತಿಹಾಸದ ಪುಟಗಳಲ್ಲಿ ಅಮರಳಾಗಿ ಸೇರಿಹೋದ ಸಂಗತಿ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ಮಹಿಳೆಯರಲ್ಲಿ ಒಬ್ಬರಾದ ಅಬ್ಬಕ್ಕನ ಬಗ್ಗೆ ಬಹುತೇಕರಿಗೆ ತಿಳಿದಿರುವುದು ಅಲ್ಪವೇ. ಪೋರ್ಚುಗೀಸ್ ಸೈನಿಕರ ವಿರುದ್ಧ…
ವಿಧ: ಪುಸ್ತಕ ವಿಮರ್ಶೆ
December 07, 2023
ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತೋಷ ಅನುಭವಿಸಬೇಕಾದ ಹರಯವನ್ನು ಸಂತೋಷವಿಲ್ಲದೆಯೇ ಕಳೆದ ನಂತರ, ಶಾಂತಿಯಾದರೂ ಸಿಕ್ಕೀತೇ ಎಂದು (ಹಿಂದಿನ ಬಾಗಿಲಿನಿಂದಲೋ? ಮುಖಕ್ಕೆ ಮುಸುಕು ಹಾಕಿಕೊಂಡೋ?) ಸೈಕಾಲಜಿಸ್ಟ್-ರನ್ನು ನೋಡುವ ಜನರೇ ಹೆಚ್ಚು ಇರುವ ಈ ಸಮಾಜದಲ್ಲಿ …. ಎಳೆ ಹರೆಯ ಇನ್ನೂ…
ವಿಧ: ಪುಸ್ತಕ ವಿಮರ್ಶೆ
December 06, 2023
ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮಓದಿಗಾಗಿ...
“ಡಂಕಲ್ಪೇಟೆ' ಒಂದು ಕಲ್ಪನಾ ವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ- ಮಳೆ- ದೂಳು-ಕೆಸರು- ಉಸಿರು- ಬೆವರು- ಜನ- ಭಾಷೆ- ಸಂಸ್ಕೃತಿ- ನಂಬಿಕೆ-ನಿತ್ಯದ ಗೋಳು-ನಗುವಿನ ಅಬ್ಬರ-ಎಲ್ಲವನ್ನೂ…
ವಿಧ: ರುಚಿ
December 06, 2023
ಬಾಳೆಮೂತಿಯನ್ನು ನೀರು ಹಾಕಿ ಒಂದು ಕುದಿ ಬರಿಸಿ ಸೋಸಿಕೊಳ್ಳಿ. ನಂತರ ಒಗ್ಗರಣೆ ಹಾಕಿ ಹುರಿಯಿರಿ. ಒಣಮೆಣಸು, ಸಾಸಿವೆ ಅರ್ಧ ಚಮಚ ಹಾಕಿ ಹುರಿದು ಕಾಯಿಯೊಂದಿಗೆ ಪುಡಿಮಾಡಿ ಹುರಿದ ಬಾಳೆ ಮೂತಿಗೆ ಬೆರೆಸಿ, ಉಪ್ಪು, ಬೆಲ್ಲ, ಹುಣಸೆ ರಸ ಹಾಕಿ, ಚೆನ್ನಾಗಿ ಹುರಿಯಿರಿ.
-ಶೃತಿ ಗದ್ದೆಗಲ್, ಉ.ಕ.
ವಿಧ: ರುಚಿ
December 05, 2023
ಕಡ್ಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಒಣಮೆಣಸು, ಕಾಲು ಚಮಚ ಜೀರಿಗೆ ಹಾಕಿ ಹುರಿದುಕೊಂಡು. ಪುಡಿಮಾಡಿ ಅಕ್ಕಿಯನ್ನು ಹಾಕಿ ತರಿತರಿಯಾಗಿ ರುಬ್ಬಿ ಹುಣಸೆರಸ, ಉಪ್ಪು, ಬೆಲ್ಲ ಹಾಗೂ ಹೆಚ್ಚಿದ ಬಾಳೆ ಮೂತಿ ಹಾಕಿ ಕಲಸಿ ತಟ್ಟೆಗೆ ಹಾಕಿ ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಬೇಕು. ನಂತರ ಎಣ್ಣೆ ಹಾಕಿ ಒಗ್ಗರಣೆ ಮಾಡಿ ಬೇಯಿಸಿದನ್ನು ಪುಡಿ ಮಾಡಿ ಹಾಕಿ ಚೆನ್ನಾಗಿ ಹುರಿದು ಕಾಯಿತುರಿ ಹಾಕಿದರೆ ಬಿಸಿಬಿಸಿ ಪತ್ರೊಡೆ ಸಿದ್ಧ.
-ಶೃತಿ ಗದ್ದೆಗಲ್, ಉ.ಕ.
ವಿಧ: ಪುಸ್ತಕ ವಿಮರ್ಶೆ
December 04, 2023
ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರೆತದ್ದು ಕಡಿಮೆ. ಈ ಕೊರತೆಯನ್ನು ನೀಗಿಸಲು ಲೇಖಕರಾದ ಡಿ ಆರ್ ಬಳೂರಗಿ ಅವರು “ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದ ಲೇಖಕರ ಮಾತಿನಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ...
“ಕ್ರಿಸ್ತಪೂರ್ವದಲ್ಲಿಯೇ…
ವಿಧ: ರುಚಿ
December 03, 2023
ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಎರಡು ಚಮಚ ಬಿಸಿ ಎಣ್ಣೆ, ಸ್ವಲ್ಪ ನೀರು ಹಾಕಿ, ವಡೆಯ ಹದಕ್ಕೆ ಕಲಸಿಡಿ. ಹಿಟ್ಟಿನ ಮಿಶ್ರಣದಿಂದ ವಡೆಗಳನ್ನು ತಟ್ಟಿ. ಇಡ್ಲಿ ತಟ್ಟೆಯಲ್ಲಿ ಬೇಯಿಸಿ. ನಂತರ, ಬೇಯಿಸಿದ ವಡೆಗಳನ್ನು ಎಣ್ಣೆ ಸವರಿದ ಕಾಯಿಸಿದ ತವಾಕ್ಕೆ ವರ್ಗಾಯಿಸಿ. ಎರಡೂ ಬದಿಗಳನ್ನು ಬೇಯಿಸಿದರೆ, ರುಚಿಯಾದ ಕೊತ್ತಂಬರಿ ಸೊಪ್ಪಿನ ವಡೆ ಸವಿಯಲು ಸಿದ್ಧ.
ವಿಧ: ಪುಸ್ತಕ ವಿಮರ್ಶೆ
December 03, 2023
"ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮುಂದೆ ಬರಕ್ಕೆ ಶುರು ಆದ್ವು. ಹತ್ರತ್ರ 14 ವರ್ಷ ಆಗಿತ್ತು ಈ ಥರ ಕೂತು ಬುಕ್ ಓದದೇ. ಅಡುಗೆನೂ ಮಾಡದೇ ಕೂತು ಓದಿ ಮುಗಿಸಿದೆ,''
ಇವರು ನನಗೆ ಪರಿಚಯ ಆಗಿ 6- 7 ವರ್ಷ ಆಗಿರಬಹುದು. 5 ವರ್ಷದ ಹಿಂದೆ, ನಾನು ಇಲ್ಲಿಗೆ ಬರುವ ಮೊದಲೂ ಈ ಬುಕ್ ತೊಗೊಬೇಕು ಅಂದುಕೊಂಡು, ಅದು…