ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 17, 2025
“ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -ವಿಶೇಷತಃ ದೇಶ ಭಾಷೆಗಳಲ್ಲಿ -ಬರೆದಾಗ ಅವರ ನುಡಿಗಳಲ್ಲಿ ‘ಸಂಸ್ಕೃತ ಘಾಟು’ ಹೆಚ್ಚಾಗಿರುವುದೆಂಬುದು ಮತ್ತೊಂದು ಆಕ್ಷೇಪ. ಆದರೆ ಡಾ. ವಿಶ್ವಾಸ ಅವರು ಈ ಎರಡು ಆಕ್ಷೇಪಗಳಿಂದಲೂ ಮುಕ್ತರು. ಅವರ ಸಂಸ್ಕೃತ - ಕನ್ನಡಗಳೆರಡೂ ತುಂಬ ಪ್ರಸನ್ನ ಮಧುರ, ನಿಸರ್ಗ…
ವಿಧ: ರುಚಿ
January 16, 2025
ನೆಲ್ಲಿಕಾಯಿಯ ಬೀಜ ತೆಗೆದು ಬಾಣಲೆಗೆ ಹಾಕಿ ಒಂದು ಚಮಚ ತೆಂಗಿನೆಣ್ಣೆ ಹಾಕಿ ಬಾಡಿಸಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು ಹಾಕಿ ನುಣ್ಣಗೆ ಮಾಡಿ. ನಂತರ ಒಂದು ಪಾತ್ರೆಗೆ ಹಾಕಿ ಸಿಹಿ ಮಜ್ಜಿಗೆ ಸೇರಿಸಿ. ಕೊಬ್ಬರಿ ಎಣ್ಣೆಯಲ್ಲಿ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಕೊಡಿ. ಇದನ್ನೇ ನೆಲ್ಲಿಕಾಯಿ ಬೇಯಿಸಿಯೂ ಮಾಡಬಹುದು. ಮೊಸರನ್ನಕ್ಕೆ ಕಲಸಿ ತಿನ್ನಿ. ಕುಡಿಯಲೂ ಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಆರೋಗ್ಯಕ್ಕೆ ತುಂಬ ಒಳ್ಳೆಯದು. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 15, 2025
‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಎನ್ನುವ ವಿಲಕ್ಷಣ ಶೀರ್ಷಿಕೆಯ ಕವನ ಸಂಕಲನನ್ನು ರಚಿಸಿದ್ದಾರೆ ಟಿ ಪಿ ಉಮೇಶ್. ಇವರ ಕವಿತೆಗಳಿಗೆ ಸ್ಪೂರ್ತಿ (?!) ಯಾಗಿರುವ ಅವರ ಪತ್ನಿ ಟಿ ಬಿ ಅನಿತಾ ಉಮೇಶ್ ಈ ಕವಿತಾ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ಅದರ ಆಯ್ದ ಸಾಲುಗಳು… “ನನ್ನ ಯಜಮಾನರಾದ ಟಿ.ಪಿ.ಉಮೇಶ್ ತುಂಬ ಪ್ರಾಮಾಣಿಕ ವ್ಯಕ್ತಿ. ಬಹಳಷ್ಟು ಶಿಸ್ತು ಸಜ್ಜನಿಕೆ ವ್ಯಕ್ತಿತ್ವ ಹೊಂದಿದ ಇವರು ಅಪಾರ ಅಧ್ಯಯನಶೀಲರು ಮತ್ತು ಸಮರ್ಥ ಶಿಕ್ಷಕರು ಆಗಿದ್ದಾರೆ. ತುಂಬ ಭಾವನಾ ಜೀವಿಯಾದ ಇವರು ತಮ್ಮ ನೋವು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 13, 2025
‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ. ನಡೆಯಲ್ಲಿ ಮಾದರಿಯಾಗಿವೆ. ಕಲಾಮ್ ಅವರು ತಮ್ಮ ನಡೆ ನುಡಿ ಹಾಗೂ ಸರಳ ವ್ಯಕ್ತಿತ್ವದಿಂದ ಭಾರತ ಕಂಡ ಅಪರೂಪದ ರಾಷ್ಟ್ರಪತಿ ಎಂದು ಕರೆಸಿಕೊಂಡವರು. ಇವರು ಕೇವಲ ಒಬ್ಬ ವಿಜ್ಞಾನಿ ಮಾತ್ರವಲ್ಲ. ಒಬ್ಬ ಅತ್ಯುತ್ತಮ ಕೇಳುಗ ಮತ್ತು ಹೊಸ ಬಗೆಯ ಸಂವಹನಗಳ…
ವಿಧ: ರುಚಿ
January 12, 2025
ಎರಡು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಕರಿಬೇವಿನ ಎಸಳನ್ನು ಬಾಡಿಸಿ. ಇದಕ್ಕೆ ತೆಂಗಿನತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿ. ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಜೀರಿಗೆ ಜೊತೆ ಕೊಡಿ. ಮಧುಮೇಹಿಗಳಿಗೆ ಈ ತಂಬುಳಿ ತುಂಬ ಒಳ್ಳೆಯದು. -ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 10, 2025
ಅಗ್ರಹಾರ ಕೃಷ್ಣಮೂರ್ತಿಯವರು ಬರೆದ ವಿಮರ್ಶೆಗಳ ಸಂಕಲನ ‘ಕಾಲ್ದಾರ್’. ಈ ಕೃತಿಗೆ ಖ್ಯಾತ ವಿಮರ್ಶಕ ರಾಜೇಂದ್ರ ಚೆನ್ನಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯ ಕಂಡ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “ಅಗ್ರಹಾರ ಕೃಷ್ಣಮೂರ್ತಿಯರದು ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವ. ಅನೇಕಾನೇಕ ಕಾರಣಗಳಿಂದಾಗಿ ಕಳೆದ ನಾಲ್ಕು ದಶಕಗಳಲ್ಲಿ ಕರ್ನಾಟಕದಲ್ಲಿ ನಡೆದ ಬಹುಮುಖ್ಯ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಅಥವಾ ಸಾಕ್ಷಿಯಾಗಿದ್ದಾರೆ. ಪ್ರೊಫೆಸರ್ ಎಂ.ಡಿ.ಎನ್. ಅವರ ಸಲಹೆ ಮೇರೆಗೆ…
ವಿಧ: ರುಚಿ
January 10, 2025
ಪಪ್ಪಾಯಿ ಹಣ್ಣಿನ ತಿರುಳು, ನೀರು, ಹಾಲು, ಸಕ್ಕರೆ ಮಿಕ್ಸಿಯಲ್ಲಿ ಹಾಕಿ ತಿರುವಿ. ಈಗ ಸವಿಯಾದ ಪಪ್ಪಾಯಿ ಹಣ್ಣಿನ ಮಿಲ್ಕ್ ಶೇಕ್ ಸಿದ್ಧ. ಬೇಕಿದ್ದರೆ ಮಂಜುಗೆಡ್ಡೆ ಸೇರಿಸಬಹುದು. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 08, 2025
‘ನಾಡವರ್ಗಳ್’ ಸಂಪನ್ನರ ನಡೆನುಡಿ ಎನ್ನುವ ನೂತನ ಕೃತಿಯನ್ನು ಅಗ್ರಹಾರ ಕೃಷ್ಣಮೂರ್ತಿಯವರು ಹೊರತಂದಿದ್ದಾರೆ. ಈ ಮೂಲಕ ತಾವು ನಡೆದು ಬಂದ ದಾರಿಯಲ್ಲಿ ದಾರಿದೀಪಗಳಂತಿದ್ದ ಗುರು ಹಿರಿಯರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ ಡಾ. ಬಂಜಗೆರೆ ಜಯಪ್ರಕಾಶ್. ಇವರ ‘ನಲ್ನುಡಿ’ ಯಲ್ಲಿ ಕಂಡ ಸಾಲುಗಳು…  “ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದ್ದ 'ನೀರು ಮತ್ತು ಪ್ರೀತಿ' ಕಾದಂಬರಿ ಓದಿದ ಕಾಲದಿಂದಲೂ ಅಗ್ರಹಾರ ಕೃಷ್ಣಮೂರ್ತಿ ನನ್ನ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
January 07, 2025
ಮಲಯಾಳಂ ಭಾಷೆಯ ಪ್ರಮುಖ ಕಥೆಗಾರ ಟಿ. ಪದ್ಮನಾಭನ್ ಅವರ 12 ಕಥೆಗಳ ಸಂಕಲನವಿದು. ಡಾ. ಅಶೋಕ್ ಕುಮಾರ್ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪದ್ಮನಾಭನ್ ಅವರ ಕತೆಗಳಲ್ಲಿ ಶೋಷಿತರ, ನೊಂದವರ, ಅಸಹಾಯಕರ ಬದುಕಿನ ಚಿತ್ರಣವಿದೆ. ಕತೆಗಳ ಸನ್ನಿವೇಶ, ಪಾತ್ರಚಿತ್ರಣ, ಸಂವಾದ ಹಾಗೂ ಭಾವತೀವ್ರತೆ ಓದುಗರ ಮನತಟ್ಟುತ್ತವೆ. ಟಿ. ಪದ್ಮನಾಭನ್ ಅವರ ಜನನ 1931ರಲ್ಲಿ ಕೇರಳದ ಕಣ್ಣೂರಿನಲ್ಲಿ. ಮಂಗಳೂರಿನ ಸರಕಾರಿ ಕಲಾ ಕಾಲೇಜಿನಿಂದ           1952ರಲ್ಲಿ ಬಿ. ಎ. ಪದವಿ ಮತ್ತು ಮದ್ರಾಸಿನ ಕಾನೂನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 06, 2025
‘ಸತ್ಯಮೇವ ಜಯತೆ’ ಮೇ ೨೦೧೨ರಿಂದ ಅಕ್ಟೋಬರ್ ೨೦೧೪ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ೨೫ ಎಪಿಸೋಡುಗಳ ಅತ್ಯಂತ ಜನಪ್ರಿಯವಾದ ಒಂದು ಟಾಕ್ ಶೋ ಆಗಿತ್ತು. ದೇಶವನ್ನು ಕಾಡುತ್ತಿರುವ ಹಲವಾರು ವಿಷಯಗಳ ಕುರಿತು ಈ ಸರಣಿಯು ಆಳವಾದ ಸಂಶೋಧನೆ ಸಾಕ್ಷ್ಯ ಮತ್ತು ಸಂಬಂಧಿತ ಜನರ ಭಾಗವಹಿಸುವಿಕೆಯನ್ನು ಒಳಗೊಂಡಿತ್ತು. ಈ ಸರಣಿಯ ಸೀಸನ್ ೧, ಎಪಿಸೋಡ್ ೮ರ ‘ವಿಷಯುಕ್ತ ಆಹಾರ’ ಎನ್ನುವ ಕಾರ್ಯಕ್ರಮವು ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕೀಟನಾಶಕಗಳು, ರೈತರು ಅವುಗಳನ್ನು ಬಳಸಲೇ…