ಎಲ್ಲ ಪುಟಗಳು

ಲೇಖಕರು: vijaya kumara gowda
ವಿಧ: ಬ್ಲಾಗ್ ಬರಹ
December 20, 2024
ನಾವು ಕನ್ನಡಿಗರು ಅಲ್ಲದ ಬೇರೆ ಭಾಷೆಯ ಭಾಷಿಕರು ನಮ್ಮ ಭಾಷೆಯನ್ನು ಕನ್ನಡ್ ಎಂದು ಕರೆಯುವುದು ನಾವು ನೋಡಿ ಅದನ್ನು ಸರಿ ಮಾಡಲು ಯತ್ನಿಸುತ್ತೇವೆ ಹಾಗೂ ಸರಿ ಮಾಡಿದವರ ಪರವಾಗಿ ನಿಂತು ಅವರಿಗೆ ಶಭಾಷ್ ಗಿರಿ ಕೊಟ್ಟಿರುತ್ತೇವೆ ಆದರೆ ಅವರು ಕನ್ನಡ್ ಎನ್ನಲು ಕಾರಣ ಯಾರು? ಅವರೇನು ಮೂರ್ಖರ? ಅಥವಾ ನಮ್ಮನು ಕೆಣಕಲು ಈ ರೀತಿಯ ಉದ್ಧಟತನ ತೋರುತಿದ್ದಾರೆಯೇ? ಇದ್ದರು ಇರಬಹುದು. ಆದರೆ ಇದಕ್ಕೆ  ಕಾರಣ ಯಾರು?   ಯಾರು? ಯಾರು?  ಯಾರಿರಬಹುದು ಎಂದು ಆಲೋಚಿಸಿದಾಗ ನನಗೆ ದೊರೆತ ಉತ್ತರ.  ಆ ಮೂರ್ಖರು ನಾವೇ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 20, 2024
‘ದಲಿತರಿಗೆ ಗಾಂಧೀಜಿ ಮಾಡಿದ ಚಾರಿತ್ರಿಕ ವಂಚನೆ’ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡು ಬಂದಿರುವ ‘ಪೂನಾ ಒಪ್ಪಂದ’ ಎನ್ನುವ ಕೃತಿಯು ೧೯೩೨ರ ಸೆಪ್ಟೆಂಬರ್ ೨೪ರಂದು ನಡೆದ ಒಪ್ಪಂದದ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರ ಜೀವನದ ಎರಡು ಪ್ರಮುಖ ಘಟನೆಗಳಾಗಿ ಪೂನಾ ಒಪ್ಪಂದ ಮತ್ತು ಸಂವಿಧಾನ ರಚನೆಯ ಸಂದರ್ಭಗಳನ್ನು ಕಾಣಬಹುದು. ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ, ‘ಅಸ್ಪೃಶ್ಯರು ಹಿಂದೂಗಳಲ್ಲ, ಅವರು ಮುಸ್ಲಿಮರಂತೆ ಪ್ರತ್ಯೇಕ ಅಸ್ಮಿತೆಯುಳ್ಳವರು ಎಂಬುದನ್ನು…
ವಿಧ: ರುಚಿ
December 20, 2024
ಪಪ್ಪಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಹಾಕಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ. ಅನ್ನದ ಜೊತೆ ಕಲಸಿ ತಿನ್ನಿ. -ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 18, 2024
‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ. ಮೊದಲ ಮಹಾಯುದ್ಧಾನಂತರದ ಕಾಲದಲ್ಲಿ ಈ ಕಥೆ ನಡೆಯುವಾಗಿನ ಯುರೋಪಿನ ಪಟ್ಟಣದ ಸ್ಥಿತಿಗತಿಗಳು, ಅಲ್ಲಿ ಬದಲಾಗುತ್ತಿರುವ ಸಾಮಾಜಿಕ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 18, 2024
ಮುನ್ನುಡಿಯಲ್ಲಿ ಹೇಳುವಂತೆ ಇದು ಅವಧೂತ ಮಾರ್ಗದ ಒಂದು ಚರಿತ್ರ ಗ್ರಂಥ.  ಭಗವದ್ ಭಕ್ತರು 'ನಾನು ಇದನ್ನು ಬರೆದಿಲ್ಲ, ಭಗವಂತ ಬರೆಸಿದ ' ಎಂದು ಹೇಳುವಂತೆ ಗಳಗನಾಥರು ಇದನ್ನು ಪರಮಹಂಸರು ಬರೆಸಿದ್ದಾರೆ ಅಂತ ಹೇಳುತ್ತಾರೆ. ಇದು ಎರಡನೇ ಭಾಗವಂತೆ ಆದರೆ ಮೊದಲು ಮುದ್ರಿಸಿದ್ದಂತೆ.  ಅದರ ಪ್ರಾರಂಭದ ಕೆಲವು ಸಾಲುಗಳು ಹೀಗಿವೆ - ಈ ಜಗತ್ತಿನಲ್ಲಿ ದೇವರು ಹಾಗೂ ಅವನ ಸೃಷ್ಟಿ ಎರಡು ಇರುತ್ತವೆ. ದೇವರ ಸ್ವರೂಪ ಕಣ್ಣಿಗೆ ಕಾಣದೆ ಇದ್ದು ಆತನ ಸೃಷ್ಟಿಯು ವ್ಯಕ್ತ ಇರುತ್ತದೆ. ದೇವರು ತನ್ನ ಇಚ್ಛೆಯಂತೆ…
ಲೇಖಕರು: Kavitha Mahesh
ವಿಧ: ರುಚಿ
December 17, 2024
ಮೈದಾ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಕಾರ್ನ್ ಫ್ಲೋರ್ ಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಹೂ ಕೋಸುಗಳನ್ನು ಕಲಸಿದ ಹಿಟ್ಟಿನಲ್ಲದ್ದಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ - ಇಂಗಿನ ಒಗ್ಗರಣೆ ಕೊಡಿ. ಈರುಳ್ಳಿ, ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣವನ್ನು ತಟ್ಟೆಗೆ ಹಾಕಿ ಕರಿದ ಹೂಕೋಸುಗಳು, ಶುಂಠಿ, ಚಿಲ್ಲಿ ಸಾಸ್, ಟೊಮೆಟೋ ಸಾಸ್ ಗಳನ್ನು ಹಾಕಿ ಮೆಲ್ಲಗೆ ಕಲಸಿ,…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 17, 2024
ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ. ಮೊದಲ ಕತೆ ಅಫಘಾನಿಸ್ತಾನದ್ದು: ಗಿಡುಗ ಮತ್ತು ಮರ. ಒಂದೂರಿನಲ್ಲೊಂದು ಮೋಚಿಯ ಸಣ್ಣ ಅಂಗಡಿ. ಆತ ಬೆಳಗ್ಗೆ ಅಂಗಡಿ ತೆರೆದರೆ ಸಂಜೆಯ ವರೆಗೆ ಕೂತಿರುತ್ತಿದ್ದ. ಅವನ ಅಂಗಡಿಗೆ ಪ್ರತಿ ದಿನ ಇಬ್ಬರು ಸೋಮಾರಿಗಳು ಬಂದು ಹರಟೆ ಹೊಡೆಯುತ್ತಾ ಇರುತ್ತಿದ್ದರು. ಅದೊಂದು ದಿನ ಮೋಚಿ ಖಿನ್ನನಾಗಿದ್ದ. ಯಾಕೆಂದು ಕೇಳಿದಾಗ “ನನ್ನ ಗಿಡುಗ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 17, 2024
ಈ ಪುಸ್ತಕವನ್ನು ನಾನು archive.org ತಾಣದಿಂದ ಪುಕ್ಕಟೆ ಇಳಿಸಿಕೊಂಡಿದ್ದೆ . ಆದರೆ ಇದರ ಕೊಂಡಿಯನ್ನು ನಾನು ಈಗ ಕೊಡಲಾರೆ. ಕ್ಷಮಿಸಿ.  ಇದು ಹೊಸ ಪುಸ್ತಕವಾಗಿದ್ದು ಸುಮಾರು 160 ಪುಟಗಳಲ್ಲಿ ಸುಮಾರು ಹತ್ತು ಕಥೆಗಳಿವೆ. ಇದರ ಮುನ್ನುಡಿಯಲ್ಲಿ ಕಥೆ ಎಂದರೇನು ಎಂಬ ವಿವೇಚನೆ ಇದೆ. ಓದಲು ತಕ್ಕದಾಗಿದೆ.  ಕಥೆಗಳಿಂದ ನಾವು ಸ್ವತಃ ಅನುಭವಿಸದೆ ಇದ್ದುದನು ತಿಳಿಯಬಹುದು. ಇಲ್ಲಿನ ಕಥೆಗಳು ಹಾಗೆ ಇವೆ. ಬಹುತೇಕ ಮಧ್ಯಮ ವರ್ಗದ ಅಥವಾ ಮೇಲಿನ ವರ್ಗದ ಹಿನ್ನೆಲೆಯನ್ನು ಹೊಂದಿವೆ.  ಇದರಿಂದ ನಾನು ಮಾಡಿಕೊಂಡ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 16, 2024
ವಿದ್ಯಾ ಭರತನಹಳ್ಳಿ ಬರೆದ ‘ಬೇಸೂರ್’ ಎನ್ನುವ ಚೊಚ್ಚಲ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಈ ಕಥಾ ಸಂಕಲನದ ಕುರಿತಾಗಿ ಲೇಖಕಿ ಹೇಳುವುದು ಹೀಗೆ… “ನಾನು ನನ್ನೊಳಗೇ ಕಥೆ ಬರೆದುಕೊಳ್ಳುತ್ತಿದ್ದೆ. ಮನೆಯ ಬಾಗಿಲಲ್ಲಿ ಗೇಟಿಗೆ ತಲೆಯಾನಿಸಿ ಮಗಳು ಬರುವುದನ್ನು ಕಾಯುತ್ತ ಇರುವಾಗ, ಗಂಡನೊಂದಿಗೆ ವಾಕಿಂಗ್ ಮಾಡುವಾಗ, ಅರಳಿದ ಹೂವಿನೊಳಗೆ ಕಣ್ಣಿಗೆ ಕಾಣಿಸದ ಹುಳ ಹೊಕ್ಕಿದ್ದನ್ನು ತೆಗೆಯುವಾಗ, ಫಕ್ಕನೆ ಯಾವುದೋ ನೆನಪಾಗಿ ಕಣ್ಣು ತುಂಬಿ ತುಳುಕುವಾಗ. ಸುತ್ತೆಲ್ಲ ಹರವಿಕೊಂಡ ಇತಿಹಾಸ, ವರ್ತಮಾನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 16, 2024
ಈ ಪುಸ್ತಕದಿಂದ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳು ಇಲ್ಲಿವೆ. ಇಲ್ಲಿನವು ಭಾರತದ ಹಿತಕಾರಕ ರಹಸ್ಯಗಳು. ಧರ್ಮಕ್ಕೆ ಅಂತರಂಗ ಬಹಿರಂಗ ಎಂಬ ಎರಡು ಅಂಗಗಳು ಇರುವವು. ಧರ್ಮದ ಅಂತರಂಗವು ಜಗದ್ ಕಾರಣನಾದ ದೇವರ ಪ್ರೀತಿಗೆ ಸಂಬಂಧ ಇರುವುದು. ಧರ್ಮದ ಬಹಿರಂಗವು ಜಗತ್ತಿನ ಸುಖದ ಪ್ರಾಪ್ತಿಗೆ ಸಂಬಂಧಿಸಿದ್ದಾಗಿರುವುದು. ಧರ್ಮದ ಅಂತರಂಗವು ಶಾಶ್ವತವಾಗಿ ಇರುವುದು. ಜಗತ್ತು ಯಾವಾಗಲೂ ರೂಪಾಂತರ ಹೊಂದತಕ್ಕದ್ದಾಗಿದ್ದು ಈ ಜಗತ್ತು ಚಂಚಲವಾಗಿರುವುದರಿಂದ ಜಗತ್ತಿನ ಸುಖದ ಪ್ರಾಪ್ತಿಗೆ ಕಾರಣವಾದ ಲೌಕಿಕ ಆಚಾರ…