ವಿಧ: ರುಚಿ
November 03, 2023
ಮೊದಲು ಟೊಮೆಟೊ, ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಒಣ ಮೆಣಸಿನಕಾಯಿಯನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ನಂತೆ ಮಾಡಿಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಅದರಲ್ಲಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಹುರಿಯಬೇಕು. ಸಾಸಿವೆ ಸಿಡಿಯುತ್ತಿದ್ದಂತೆ ಅದಕ್ಕೆ ಕರಿಬೇವು ಹಾಕಿ ಬಾಡಿಸಿ. ನಂತರ ರುಬ್ಬಿಟ್ಟ ಪೇಸ್ಟನ್ನು ಬೆರೆಸಿ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ. ೩-೪ ನಿಮಿಷಗಳ ತನಕ ಬೇಯಿಸಿದರೆ ನಿಮ್ಮ ಮಸಾಲಾ ಟೊಮೆಟೊ ಬೆಳ್ಳುಳ್ಳಿ ಚಟ್ನಿ ತಯಾರು.
ಈ ಚಟ್ನಿಯು ಕೇವಲ…
ವಿಧ: ಪುಸ್ತಕ ವಿಮರ್ಶೆ
November 02, 2023
ಕನ್ನಡದಲ್ಲಿ ಇಂತಹ ಪುಸ್ತಕ ಇರೋದು ಕನ್ನಡಿಗರ ಭಾಗ್ಯ. ಯಾಕೆಂದರೆ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಕಾನೂನು ಪುಸ್ತಕಗಳು ಕೆಲವೇ ಕೆಲವು. ಅಂತಹ ಪುಸ್ತಕಗಳಲ್ಲಿ ಇದು ಅತ್ಯಂತ ಉಪಯುಕ್ತ ಪುಸ್ತಕ.
ಇದರ ಲೇಖಕರಾದ ಅಡ್ವೋಕೇಟ್ ಎಸ್. ಆರ್. ಗೌತಮ್ ಪುಸ್ತಕದ ಹಿನ್ನೆಲೆಯ ಬಗ್ಗೆ ಹೀಗೆ “ಅರಿಕೆ" ಮಾಡಿಕೊಂಡಿದ್ದಾರೆ:
“ಈಗ್ಗೆ ಕೆಲವು ವರ್ಷಗಳ ಹಿಂದೆ “ನಿತ್ಯಜೀವನದಲ್ಲಿ ಕಾನೂನು" ಎಂಬ ಶೀರ್ಷಿಕೆಯ ಅಡಿಯಲ್ಲಿ ಎರಡು ಪುಸ್ತಕಗಳನ್ನು ಬರೆದು ಅವುಗಳಲ್ಲಿ ಪೌರ ಕಾನೂನಿನ ಹಲವು ಮುಖಗಳನ್ನು…
ವಿಧ: ಪುಸ್ತಕ ವಿಮರ್ಶೆ
November 01, 2023
ಲೇಖಕರಾದ ನಿತ್ಯಾನಂದ ಶೆಟ್ಟಿ ಇವರು ‘ಮಾರ್ಗಾನ್ವೇಷಣೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಎಸ್ ಗುಂಡೂರ ಇವರು. ನಿತ್ಯಾನಂದ ಬಿ. ಶೆಟ್ಟಿ ಅವರ ಸಂಶೋಧನಾತ್ಮಕ ಕೃತಿ ‘ಮಾರ್ಗಾನ್ವೇಷಣೆ’ಗೆ ಬರೆದ ಅರ್ಥಪೂರ್ಣ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ
-ಶಿಶುನಾಳ ಶರೀಫಜ್ಜ
ಕಂಡದ್ದರ ಬಲದ ಮೇಲೆ ಕಣ್ಣಿಗೆ ಕಾಣದ್ದನ್ನು
ಹುಡುಕುವುದೆಂದರೇ ಸಂಶೋಧನೆ.
-ಕೀರ್ತಿನಾಥ ಕುರ್ತಕೋಟಿ…
ವಿಧ: ಪುಸ್ತಕ ವಿಮರ್ಶೆ
October 30, 2023
ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಅವರು ಬರೆದ ‘ದೇವ್ರು' ಪುಸ್ತಕದ ಬಗ್ಗೆ ಖುದ್ದು ಲೇಖಕರೇ ತಮ್ಮ ಮಾತುಗಳಲ್ಲಿ ಹೇಳಿರುವುದು ಹೀಗೆ..."ಇದನ್ನು ಬರೆಯಲು ಕೂಡುವ ಹೊತ್ತಿಗೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡ್ತಿ ನದಿ ಉಕ್ಕಿ, ನನ್ನೂರಿಗೂ ಹೊರಜಗತ್ತಿಗೂ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ನಡುಮಧ್ಯ ಮುರಿದು ಬಿದ್ದಿದೆ. ಪ್ರತಿವರ್ಷ ಹೊಳೆ ಬಂದಾಗ ಆ ಸೇತುವೆ ಮೇಲೆ ನಿಂತು ನೋಡುವುದು, ಅದರ ಕಂಭಕ್ಕೆ ಹೊಳೆಯಲ್ಲಿ ತೇಲಿಬಂದ ದಿಮ್ಮಿಗಳು ಬಡಿದು ಕಂಪಿಸಿದಾಗ ಭಯಭೀತ ರಾಗುವುದು...…
ವಿಧ: ಪುಸ್ತಕ ವಿಮರ್ಶೆ
October 27, 2023
ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉಪಯುಕ್ತ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿನಲ್ಲಿ ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್ ಅವರು ಬರೆದ ‘ಉದಯವಾಯಿತು ವಿಜಯನಗರ' ಪುಸ್ತಕ ನಿಲ್ಲುತ್ತದೆ. ಈ ಪುಸ್ತಕಕ್ಕೆ ಹೆಸರಾಂತ ಕಾದಂಬರಿಕಾರರಾದ ಸದ್ಯೋಜಾತ ಭಟ್ಟ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಾದ ‘ಕನ್ನಡಿಗ ಕುಲಕೆ ರತ್ನ ಕನ್ನಡಿ' ಎನ್ನುವ ಬರಹದಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ…
“ಭಾರತಕ್ಕೆ ವಿದೇಶಿಗರ ಆಗಮನವೇ ಹಾಗೆ. ಯಾವುದೋ ಕಲ್ಪನೆಯಲ್ಲಿ ಬಂದವರಿಗೆ ಇಲ್ಲಿನ…
ವಿಧ: ಪುಸ್ತಕ ವಿಮರ್ಶೆ
October 26, 2023
ಮೈಸೂರಿನ ಪ್ರಸಿದ್ಧ ಕೌನ್ಸಿಲರ್ ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಹತ್ತು ಸಮಸ್ಯಾವರ್ತನೆಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. 1996ರಲ್ಲಿ ನಾನು ಓದಿದ್ದ ಈ ಪುಸ್ತಕವನ್ನು ಓದಬೇಕೆಂದು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾವಿರಾರು ಜನರಿಗೆ ನಾನು ಶಿಫಾರಸ್ ಮಾಡಿದ್ದೇನೆ. ಯಾಕೆಂದರೆ, ಪುಸ್ತಕದ ಶೀರ್ಷಿಕೆ, “ಈ ವರ್ತನೆಗಳು ನಿಮ್ಮಲ್ಲಿ ಇವೆಯೇ?” ಎಂದು ಕೇಳುತ್ತಿಲ್ಲ, ಬದಲಾಗಿ “... ಎಷ್ಟಿವೆ?” ಎಂದು ಕೇಳುತ್ತಿದೆ.
“ಅದು ಯಾಕೆ?" ಎಂಬುದನ್ನು ಲೇಖಕರು ಮುನ್ನುಡಿಯಲ್ಲಿ…
ವಿಧ: ಪುಸ್ತಕ ವಿಮರ್ಶೆ
October 25, 2023
ಖ್ಯಾತ ಇಟಾಲಿಯನ್ ಸಾಹಿತಿ ಒರಿಯಾನಾ ಪಲಾಚಿ ಅವರ ಕಾದಂಬರಿ “LETTER TO A CHILD NEVER BORN” ಎಂಬ ಪುಟ್ಟ ಕಾದಂಬರಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ ಜಾನ್ ಶೆಪ್ಲಿ ಎಂಬವರು. ಈ ಇಂಗ್ಲೀಷ್ ಕಾದಂಬರಿಯನ್ನು ಮೂಲಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ ಲೇಖಕಿ ಸುಧಾ ಆಡುಕಳ. ಅವರು ತಮ್ಮ ಅನುವಾದಿತ ‘ಎಂದೂ ಹುಟ್ಟದ ಮಗುವಿಗೆ ಪತ್ರ’ ಕೃತಿಯ ಕುರಿತು ವ್ಯಕ್ತ ಪಡಿಸಿದ ಭಾವ ಹೀಗಿದೆ...
“ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರವನ್ನು…
ವಿಧ: ಪುಸ್ತಕ ವಿಮರ್ಶೆ
October 23, 2023
ಫಕೀರ ಕಾವ್ಯನಾಮದ ಶ್ರೀಧರ ಬನವಾಸಿ ಇವರು ಬರೆದ ಕವನ ಸಂಕಲನ ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಎಂಬ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಪ್ರದೀಪಕುಮಾರ್ ಹೆಬ್ರಿ ಇವರು. ಇವರು ಶ್ರೀಧರರ ಕವನಗಳನ್ನು ಬಹಳ ಸೊಗಸಾಗಿ ಅನಾವರಣ ಮಾಡುತ್ತಾ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಗಿ…
ತಮ್ಮ ಕೃತಿಗಳ ಮೂಲಕ ಕನ್ನಡನಾಡಿನ ಓದುಗರಿಗೆ ಈಗಾಗಲೇ ಪರಿಚಿತರಾಗಿರುವ ಕವಿ ಶ್ರೀಧರ ಬನವಾಸಿ ಅವರು ತಮ್ಮ `ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಕ್ಕೆ…
ವಿಧ: ರುಚಿ
October 22, 2023
ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ತೆಗೆದಿಡಬೇಕು. ಮೆಂತೆ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗಡ್ಡೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ಈಗ ಒಂದು ಚಿಕ್ಕ ಬಾಣಲೆಗೆ ೪-೫ ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಇಂಗು ಮತ್ತು ಮೊದಲೇ ಮಾಡಿಟ್ಟ ಮೆಂತೆ, ಸಾಸಿವೆ ಪೇಸ್ಟ್ ಹಾಕಿ ಸ್ವಲ್ಪ ಉಪ್ಪು ಹಾಕಬೇಕು. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಹಾಕಿ ೫-೬…
ವಿಧ: ಪುಸ್ತಕ ವಿಮರ್ಶೆ
October 20, 2023
ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಬಹಳ ಅಪರೂಪ. ಕೆಲವರು ಸಚಿವರು ಮತ್ತು ಮುಖ್ಯಮಂತ್ರಿಗಳಾಗಿರುವವರು ತಾವು ಅಧಿಕಾರದಲ್ಲಿದ್ದ ಸಮಯದಲ್ಲಿ ತಮ್ಮ ಇಲಾಖೆಯ, ಸರಕಾರದ ಸಾಧನೆಗಳನ್ನು ಡಂಗೂರ ಸಾರಲು ಬೇರೆ ಲೇಖಕರಿಂದ ಲೇಖನಗಳನ್ನು ಬರೆಯಿಸಿ ಪತ್ರಿಕೆಗಳಿಗೆ ರವಾನಿಸುತ್ತಾರೆ. ಆದರೆ ರಾಜಕಾರಣಿಯಾಗಿ, ಮಹತ್ವದ ಹುದ್ದೆಗಳಲ್ಲಿ ಇರುವ ಕೆಲವೇ ಕೆಲವು ಅಪರೂಪದ ಬರಹಗಾರರು ನಮ್ಮ ನಡುವೆ ಇದ್ದಾರೆ. ಅದರಲ್ಲಿ ಪ್ರಮುಖರಾದವರು ಪ್ರಸ್ತುತ ಗೋವಾದ ರಾಜ್ಯಪಾಲರಾಗಿರುವ ಪಿ…