ಎಲ್ಲ ಪುಟಗಳು

ವಿಧ: ರುಚಿ
December 15, 2024
ಸಣ್ಣಗೆ ಕತ್ತರಿಸಿದ ಗುಜ್ಜೆ ಹೋಳನ್ನು ಉಪ್ಪು, ಮೆಣಸಿನ ಹುಡಿಯೊಂದಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಭಾಗಕ್ಕೆ ನುಣ್ಣಗೆ ಬೀಸಿದ ಹಸಿಕಾಯಿಯನ್ನು ಸೇರಿಸಿ ಕುದಿಸಬೇಕು. ಸಣ್ಣಗೆ ಕುದಿಯಲಾರಂಬಿಸಿದಾಗ ಹುಳಿನೀರು ಸೇರಿಸಿ ಕುದಿಸಬೇಕು. ತುಪ್ಪ, ಮೆಂತೆ, ಸಾಸಿವೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಬೇಕು. ಮೆಂತೆ ಮೇಲಾರ ಸಿದ್ದ. ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧ: ರುಚಿ
December 14, 2024
ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಸೇರಿಸಿ ನೀರುಹಾಕಿ ರುಬ್ಬಿಕೊಳ್ಳಿ. ದಪ್ಪ ಹಲಸಿನ ತೊಳೆಯನ್ನು ತೊಟ್ಟಿನ ಬುಡದಲ್ಲಿ ನಾಜೂಕಾಗಿ ದುಂಡಗೆ ಕತ್ತರಿಸಿ ರುಬ್ಬಿದ ಮಸಾಲೆಯನ್ನು ತುಂಬಿಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು, ಅರಿಶಿನ ಎಲ್ಲಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದರಲ್ಲಿ ತುಂಬಿದ ಹಲಸಿನ ತೊಳೆಯನ್ನು ಇಟ್ಟು – ಮಸಾಲೆ ಮಿಕ್ಕಿದ್ದರೆ ಹಾಕಿ ಬೇಯುವಷ್ಟು ನೀರು ಹಾಕಿ ೧೦ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ಕುಕ್ಕರ್‌ನಲ್ಲಿ ಬೇಯಿಸುವುದಾದರೆ ಒಂದೇ ವಿಷಲ್ ಸಾಕು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 13, 2024
`ಕಟ್ಟು’ ಎಂಬ ಪುಸ್ತಕ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು ೧೫ ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭಾಷೆ) ಸಾಹಿತ್ಯವನ್ನು ವಿವಿದ ಆಯಾಮಗಳಲ್ಲಿ, ಹಲವು ಮಗ್ಗುಲುಗಳಲ್ಲಿ ನೋಡುವ ಕುತೂಹಲದ ಕಣ್ಣನ್ನೂ ಲೇಖಕ ಹೊಂದಿರುವುದನ್ನು ಇಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಅವರ ಆಸಕ್ತಿಯು ಡಾಳಾಗಿ ಕಾಣಿಸುತ್ತದೆ. ಕನ್ನಡ ಸಾಹಿತ್ಯವನ್ನು,…
ಲೇಖಕರು: nannisunil
ವಿಧ: ಬ್ಲಾಗ್ ಬರಹ
December 13, 2024
ಈ ದಿನ ಒಳ್ಳೆಯ ನುಡಿಯೊಂದನ್ನು ಕೇಳಿದೆ. ೧. ಅದೇ ಬೀಸಿನೀರಿನಲ್ಲಿ, ಮೊಟ್ಟೆ ಬೇಯಿಸಲು ಇಟ್ಟರೆ, ತೆಳುವಾದ ಮೊಟ್ಟೆ ಗಟ್ಟಿಯಾಗುತ್ತದೆ. ೨. ಗಟ್ಟಿಯಾದ ಆಲೂಗಡ್ಡೆ, ಮೆತ್ತಗಾಗುತ್ತದೆ. ಅಂದರೆ, ಅದೇ ಪರಿಸರ ಒಂದೇ, ಆದರೆ ಪ್ರತಿಕ್ರಿಯೆಗಳು ಬೇರೆಬೇರೆ. ಹೀಗೆ, ನಮ್ಮ ಸುತ್ತಲಿನ ಪರಿಸರಕ್ಕೆ ಬದಲಾಗದೆ, ನಮ್ಮತನವನ್ನು ಕಂಡುಕೊಳ್ಳಬೇಕು ಎಂಬುದಾಗಿ. ತುಂಬಾ ಅರ್ಥಗರ್ಭಿತವಾಗಿತ್ತು. ಇದೇ ರೀತಿಯ ಒಂದು ಸನ್ನಿವೇಶವನ್ನು ನಾನು ಪಿ.ಯು.ಸಿ ಓದುವಾಗ ಒಬ್ಬರು ನಮ್ಮ ಕಾಲೇಜಿಗೆ ಬಂದಿದ್ದ ಮೆಜಿಶಿಯನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 11, 2024
ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಎರಡು ಅವಧಿಗಳನ್ನು ಮುಗಿಸಿ ಮೂರನೇ ಅವಧಿಯಲ್ಲಿ ಸಾಗುತ್ತಿರುವ ನರೇಂದ್ರ ದಾಮೋದರದಾಸ್ ಮೋದಿಯವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ ನಿತಿನ್ ಅಗರ್ ವಾಲ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯು ‘ನರೇಂದ್ರ ಮೋದಿಯವರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ. ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದವರು ಜಿ.ಎಂ.ಕೃಷ್ಣಮೂರ್ತಿಯವರು. ಈ ಪುಸ್ತಕ ಮಕ್ಕಳಿಗೆ ಓದಲು ಬಹಳ…
ವಿಧ: ರುಚಿ
December 11, 2024
ಒಣಮೆಣಸು, ಕೊತ್ತಂಬರಿ, ಇಂಗು ಹುರಿದು ಕೊಳ್ಳಬೇಕು. ಹುರಿದ ಸಾಮಗ್ರಿ ಗಳನ್ನು ಮಿಕ್ಸಿಯಲ್ಲಿ ಹುಡಿ ಮಾಡಿಕೊಂಡು ಅದಕ್ಕೆ ಕಾಯಿತುರಿ ಬೆಲ್ಲ ಚೂರು ನೀರು ಹಾಕಿ ಬೀಸ ಬೇಕು. ಆ ಮಿಶ್ರಣಕ್ಕೆ ಮೆಣಸು, ಸಾಸಿವೆ, ಒಗ್ಗರಣೆ ಹಾಕಿದರೆ ಕೇನೆ ಸಿಪ್ಪೆ ಗೊಜ್ಜು ರೆಡಿ. -ಅಶ್ವಿನಿ ಮೂರ್ತಿ, ಸುಳ್ಯ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 09, 2024
‘ಅಲೆದಾಟದ ಅಂತರಂಗ’ ಎನ್ನುವುದು ನವೀನಕೃಷ್ಣ ಎಸ್ ಉಪ್ಪಿನಂಗಡಿ ಇವರ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಊರಿನ ವಿಶೇಷತೆಗಳನ್ನು ರೋಚಕವಾಗಿ ಹರಡುವ ನವೀನಕೃಷ್ಣ ಅವರ ಪ್ರವಾಸಕಥನಗಳು ಓದಲು ಬಹಳ ಸೊಗಸಾಗಿರುತ್ತವೆ. ಅವರೊಂದಿಗೆ ನಾವೂ ಪ್ರವಾಸ ಮಾಡುತ್ತಿದ್ದೇವೆ ಎನ್ನುವಷ್ಟು ಹಿತವಾಗಿರುತ್ತದೆ. ಈ ಪ್ರವಾಸ ಕಥನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ವಿವೇಕಾನಂದ ಕಾಲೇಜು ಪುತ್ತೂರು ಇದರ ಕುಲ ಸಚಿವರಾದ ಡಾ. ಶ್ರೀಧರ್ ಎಚ್ ಜಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕೆಲವು…
ವಿಧ: ರುಚಿ
December 08, 2024
ಅಕ್ಕಿಯನ್ನು ೨ ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ. ನಂತರ ಅಪ್ಪದ ಕಾವಲಿ ಗುಳಿಗೆ ತುಪ್ಪ ಹಾಕಿ, ಬಿಸಿಯಾದಾಗ ಹಿಟ್ಟು ಹಾಕಿ. ಬೆಂದು ತಳ ಬಿಟ್ಟಾಗ ಅಪ್ಪದ ಕಡ್ಡಿಯಿಂದ ಚುಚ್ಚಿ ಕವುಚಿ ಹಾಕಿ ಬೇಯಿಸಿ. ಕೆಂಪಗೆ ಆದಾಗ ತೆಗೆದು ಪಾತ್ರೆಗೆ ಹಾಕಿ.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 06, 2024
ರೇವಣ ಸಿದ್ದಯ್ಯ ಹಿರೇಮಠ ಇವರು ‘ಶ್ರೀಗುರು ವಚನಾಮೃತ’ ಎನ್ನುವ ಸೊಗಸಾದ ವಚನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಗೆ ಡಾ. ರಾಮಚಂದ್ರ ಗಣಾಪುರ ಅವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಸುದೀರ್ಘವಾದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ… ಗಾನಕೋಗಿಲೆ ರೇವಣಸಿದ್ದಯ್ಯ ಹಿರೇಮಠರವರ| 'ಶ್ರೀಗುರು ವಚನಾಮೃತ'ದ ಸುಧೆಯೊಳಗೆ ಈ ಜೀವನ ದೇವರು ನಮಗೆ ನೀಡಿದ ವರದಾನ ಹಾಗೂ ಹಲವು ವಿಸ್ಮಯಗಳ ಆಗರ. ಈ ಭುವಿಗೆ ಬಂದ ಮನುಷ್ಯ ತನ್ನ ಸಾರ್ಥಕ ಕೊಡುಗೆಯನ್ನು ಸಮಾಜಕ್ಕೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 04, 2024
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಕೃತಿಗಳು ಹೊರಬಂದಿವೆ. ನಿತಿನ್ ಅಗರ್ ವಾಲ್ ಅವರು ಆಂಗ್ಲಭಾಷೆಯಲ್ಲಿ ಬರೆದ ಪುಸ್ತಕವೊಂದು ‘ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಅನುವಾದ ಮಾಡಿದವರು ಖ್ಯಾತ ಲೇಖಕರಾದ ಬೆ. ಗೋ. ರಮೇಶ್ ಅವರು. ಈ ಕೃತಿಯು ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ. ಇದಕ್ಕೆ ಬಳಸಿದ ಅಕ್ಷರಗಳ ಆಕಾರ ದೊಡ್ಡದಾಗಿದ್ದು, ಪುಟ ಪುಟಗಳಲ್ಲೂ ರೇಖಾ ಚಿತ್ರಗಳಿವೆ. ಮಕ್ಕಳಿಗೆ ಓದಿ ಮನನ ಮಾಡಲು ಸುಲಭವಾಗಿದೆ.  ‘ಸ್ವಾಮಿ…