ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 07, 2024
ಹಳೆಮನೆ ರಾಜಶೇಖರ ಅವರು ಬರೆದ ವಿಭಿನ್ನ ಕಾದಂಬರಿ ‘ಒಡಲುಗೊಂಡವರು’. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಅನುಪಮಾ ಪ್ರಸಾದ್ ಅವರು. ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “ಸ್ನೇಹಮಯಿ ರಾಜಶೇಖರ ಅವರೆ ನೀವು ಬರೆದ ಕಾದಂಬರಿಯ ಹಸ್ತ ಪ್ರತಿ ಓದಿ ಅಭಿಪ್ರಾಯ ಬರೆಯಬೇಕೆಂದು ಕೇಳಿದ ನಿಮ್ಮ ವಿಶ್ವಾಸಕ್ಕೆ ಶರಣು. ನೀವು ಮಿಂಚಂಚೆಯಲ್ಲಿ ಕಾದಂಬರಿ ಕಳುಹಿಸಿದ ಸಮಯದಲ್ಲಿ ನಾನು ಮತ್ತೊಮ್ಮೆ ನನ್ನ ಮನೆ ಬದಲಿಸುವ ತರಾತುರಿಯಲ್ಲಿದ್ದೆ. ಇರಲಿ ಬಿಡಿ. ಮನೆಯ ಸಾಮಗ್ರಿಗಳ ಮಾರಾಪು…
ಲೇಖಕರು: Kavitha Mahesh
ವಿಧ: ರುಚಿ
November 06, 2024
ಜೀರಿಗೆ, ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ ತುರಿ, ಉಪ್ಪುಗಳನ್ನು ಸೇರಿಸಿ, ಪುದೀನಾ ಚಟ್ನಿ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಸೌತೆಕಾಯಿ, ಗರಮ್ ಮಸಾಲೆಗಳನ್ನು ಹಾಕಿ ಬಾಡಿಸಿ. ಒಲೆಯಿಂದ ಕೆಳಗಿಳಿಸಿ. ತಣಿದ ಮೇಲೆ ಮಂಡಕ್ಕಿ, ಖಾರಾ ಸೇವು, ಪುದೀನಾ ಚಟ್ನಿ ಹಾಕಿ ಕಲಸಿದರೆ ಮಕ್ಕಳಿಗೂ ಇಷ್ಟವಾಗುವ ಸ್ವಾದಿಷ್ಟಕರವಾದ ಭೇಲ್ ಪುರಿ ತಯಾರು. 
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 05, 2024
ಅಭಿಮನ್ಯು ದಿ ಗ್ರೇಟ್ ’ ಐತಿಚಂಡ ರಮೇಶ ಉತ್ತಪ್ಪ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಒಂದು ಸಾಕಾನೆ ಜನರ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವೇ ಅನ್ನುವಂತಹ ವಿಚಾರ ಪ್ರಸ್ತಾಪನೆ ಆಗುತ್ತದೆ. ಮಕ್ಕಳಿಂದ ಹಿರಿಯರ ತನಕ ಅಭಿಮನ್ಯುವಿನ ಮೇಲೆ ಇದ್ದಂತಹ ಪ್ರೀತಿಯನ್ನು ಇಲ್ಲಿ ಲೇಖಕರು ಪ್ರಸ್ತಾಪಿಸುತ್ತಾರೆ. ಹುಲಿ ಸೆರೆ ಕಾರ್ಯಚರಣೆಯಲ್ಲಿಯೂ ಈತನ ಧೈರ್ಯಕ್ಕೆ ಸರಿಸಾಟಿ ಇಲ್ಲ. ಕಾರ್ಯಾಚರಣೆಯ ವೇಳೆ ಇತರ ಆನೆಗಳು ಹುಲಿ ವಾಸನೆ ಬರುತ್ತಿದ್ದಂತೆ ಮುಂದೆ ಹೋಗಲು ಅಂಜುತ್ತವೆ. ಆದರೆ, ಅಭಿಮನ್ಯು, ಹುಲಿ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 05, 2024
ಕನ್ನಡದ ಹೆಸರುವಾಸಿ ಸಾಹಿತಿ ಬೀchi ಅವರ 26ನೆಯ ಪುಸ್ತಕ ಇದು. ಹಾಸ್ಯ ಸಾಹಿತಿ ಹಾಗೂ ವಿಡಂಬನಾ ಸಾಹಿತಿ ಎಂದೇ ಅವರು ಜನಪ್ರಿಯರು. ಇದು ಅವರ 108 ಪುಟ್ಟ ಬಿಡಿ ಬರಹಗಳ ಸಂಕಲನ. ಎಂಟರಿಂದ ಹದಿನೈದು ಸಾಲುಗಳ ಹಲವು ಬರಹಗಳು ಇದರಲ್ಲಿವೆ. ಅದಲ್ಲದೆ, ಪ್ರತಿಯೊಂದು ಬರಹದ ಪುಟದ ಕೆಳಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಚಿಂತನೆಗೆ ಹಚ್ಚುವ ಇನ್ನೊಂದು ಚುಟುಕು ಬರಹವೂ ಇದೆ. ಇವು ಓದಿ ಮರೆಯಬಹುದಾದ ಬರಹಗಳಲ್ಲ ಎಂಬುದೇ ಇವುಗಳ ವಿಶೇಷತೆ. ಓದಿದಾಗ ಕಚಗುಳಿ ಇಡುವ ಈ ಬರಹಗಳು ಅನಂತರ ನಮ್ಮನ್ನು ಚಿಂತನೆಗೆ…
ವಿಧ: ರುಚಿ
November 03, 2024
ಟೊಮೇಟೋ ಹೆಚ್ಚಿ ಬೇಯಿಸಿಕೊಳ್ಳಿ, ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಉದ್ದಿನ ಬೇಳೆ, ಮೆಣಸು, ಎಳ್ಳು, ಸಾಸಿವೆ ೧/೪  ಚಮಚ ಹಾಕಿ ಕಾಯಿತುರಿ ಉಪ್ಪು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಇದಕ್ಕೆ ಎಣ್ಣೆ ಉದ್ದಿನ ಬೇಳೆ, ಸಾಸಿವೆ ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಿಸಿ. ಹುಳಿಯಾಗದಿದ್ದಲ್ಲಿ ಮೊಸರು ಸ್ವಲ್ಪ ಸೇರಿಸಬಹುದು. ಅನ್ನದ ಜೊತೆ ಮಾವಿನ ಕಾಯಿ ಬೂತಗೊಜ್ಜಿನಂತೆ ಚೆನ್ನಾಗಿರುತ್ತದೆ. -ಕಲ್ಪನಾ ಪ್ರಭಾಕರ ಹೆಗಡೆ ಸೋಮನಳ್ಳಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 31, 2024
ಕೆ. ಷರೀಫಾ ಅವರು ಬರೆದ ‘ಮುಸ್ಲಿಮರ ತಲ್ಲಣಗಳು' ಎನ್ನುವ ಕೃತಿ ಸ್ವಾತಂತ್ರೋತ್ತರ ಭಾರತದ ಮುಸ್ಲಿಮರ ಸ್ಥಿತಿ-ಗತಿಯನ್ನು ವಿವರವಾಗಿ ಮಂಡಿಸುತ್ತದೆ. ಕಳೆದ ಎಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗಿವೆ. ದುರ್ಬಲ ವರ್ಗ, ಪರಿಶಿಷ್ಟ  ಜಾತಿ, ಬುಡಕಟ್ಟು, ಧಾರ್ಮಿಕ ಅಲ್ಪಸಂಖ್ಯಾತರು ಬೌದ್ಧಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆಯೆ? ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುತ್ತಿದೆಯೆ? ಅದರಲ್ಲೂ ಮುಸ್ಲಿಮರ ಸಮಸ್ಯೆಗಳೇನು? ಅವರ ತಲ್ಲಣಗಳೇನು? ಅವರ ಆತಂಕಗಳೇನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 29, 2024
ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಪ್ರೊ.ಒ ಎನ್ ವಿ ಕುರುಪ್ ಅವರು ಬರೆದ ಕೃತಿಯನ್ನು ‘ಅಕ್ಷರ' ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಸುಷ್ಮಾ ಶಂಕರ್. ಈ ೧೦೨ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...   “ಸಣ್ಣ ಸಣ್ಣ ವಿವರಗಳಲ್ಲಿಯೇ ರೂಪಕಗಳನ್ನು ಹೆಣೆಯುತ್ತ ಕವನ ಕಟ್ಟುವ ಅಪರೂಪದ ಕಲೆ ಶ್ರೀ ಒ.ಎನ್. ವಿ ಕುರುಪ್ ಅವರ…
ವಿಧ: ರುಚಿ
October 29, 2024
ಟೊಮೇಟೋ ಹಣ್ಣನ್ನು ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ ಇದಕ್ಕೆ ಹುರಿದ ಎಳ್ಳು ಜೀರಿಗೆ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮಜ್ಜಿಗೆ ಹಾಕಿ ಬೇಕಾದಲ್ಲಿ ನೀರು, ರುಚಿಗೆ ಉಪ್ಪು, ಬೆಲ್ಲ ಸೇರಿಸಿ ತಂಬುಳಿ ಹದಕ್ಕೆ ಮಾಡಿಕೊಳ್ಳಿ. ಇದಕ್ಕೆ ಎಣ್ಣೆ, ಒಣಮೆಣಸಿನ ಚೂರುಗಳು, ಸಾಸಿವೆ, ಇಂಗು ಕರಿಬೇವು ಹಾಕಿ ಒಗ್ಗರಣೆ ಮಾಡಿದರೆ ರುಚಿಯಾದ ಟೊಮೇಟೋ ಕಾಯಿ ತಂಬುಳಿ ಊಟದ ಜೊತೆ ಬಳಸಬಹುದು. -ಕಲ್ಪನಾ ಪ್ರಭಾಕರ ಹೆಗಡೆ, ಸೋಮನಳ್ಳಿ
ಲೇಖಕರು: Kavitha Mahesh
ವಿಧ: ರುಚಿ
October 27, 2024
ಆಲೂಗೆಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ. ಹುರಿದ ಆಲೂಗೆಡ್ಡೆಗಳನ್ನು ತಟ್ಟೆಯಲ್ಲಿ ಜೋಡಿಸಿ ಮೊಸರು, ಉಪ್ಪು, ಸಿಹಿ ಚಟ್ನಿ, ಜೀರಿಗೆ ಹುಡಿ, ಕಾಳುಮೆಣಸಿನ ಹುಡಿ, ಚಾಟ್ ಮಸಾಲೆ, ಕೊತ್ತಂಬರಿ ಸೊಪ್ಪು, ಮೊಳಕೆ ಬರಿಸಿದ ಕಾಳುಗಳು, ಖಾರಾ ಸೇವ್ ಹಾಕಿದರೆ ರುಚಿ ರುಚಿಯಾದ ಆಲೂ ದಹಿ ಚಾಟ್ ಸವಿಯಲು ರೆಡಿ. ಸಿಹಿ ಚಟ್ನಿ ಇಲ್ಲವಾದರೆ ಟೊಮೆಟೋ ಸಾಸ್ ಬಳಸಬಹುದು. (ಸಣ್ಣ ಗಾತ್ರದ ಬೇಬಿ ಪೊಟಾಟೋ (ಆಲೂಗೆಡ್ಡೆ) ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 26, 2024
ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಎಸ್. ನಿತ್ಯಾನಂದ ಪಡ್ರೆ. ಇವರು ತಮ್ಮ ಬರಹದಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕೆಲವು ಸಾಲುಗಳು… ಪ. ರಾಮಕೃಷ್ಣ ಶಾಸ್ತ್ರಿಯವರ ಹೆಸರು ಕನ್ನಡ ಪತ್ರಿಕಾ ರಂಗದ ಓದುಗರಿಗೆಲ್ಲ ಚಿರಪರಿಚಿತ. ಕಳೆದ ಹಲವು ವರ್ಷಗಳಿಂದ ಕನ್ನಡದ…