ವಿಧ: ಪುಸ್ತಕ ವಿಮರ್ಶೆ
October 24, 2024
“ಡಿ. ಎಸ್. ಚೌಗಲೆ ಅವರ ಕಾದಂಬರಿ 'ಸದರಬಜಾರ್' ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್ಕರಂಜಿ, ಅಬ್ದುಲ್ ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು ಇವುಗಳಿಂದ ಬೆಳೆದ ವಿಶಾಲವಾದ ಕಾರ್ಮಿಕರ ಕಾಲನಿಗಳಂತೆ ಬೆಳೆದ ಊರುಗಳು. ఇಲ್ಲಿಗೆ ಕೆಲಸ ಹುಡಿಕೊಂಡು ಬಂದವರು, ಬರಗಾಲದಲ್ಲಿ ಗುಳೆ ಹೊರಟು ಬಂದವರು, ಕುಟುಂಬ ಹಾಗೂ ಸಮಾಜಗಳ ದೌರ್ಜನ್ಯಗಳಿಂದಾಗಿ ಓಡಿ ಬಂದು ಇಲ್ಲಿ ವೇಶೈಯರಾಗಿ ಬದುಕುತ್ತಿರುವವರು- ಇವರಲ್ಲಿ…
ವಿಧ: ರುಚಿ
October 23, 2024
ಬೊಂಬಾಯಿ ರವೆಯನ್ನು ಹೊರತು ಪಡಿಸಿ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಆಮೇಲೆ ಉಂಡೆ (ಚಪಾತಿ ಉಂಡೆಗಾತ್ರ) ಮಾಡಿ ಬೊಂಬಾಯಿ ರವೆಯಲ್ಲಿ ಉರುಳಿಸಿ ತಟ್ಟಿ ಕಾವಲಿಯಲ್ಲಿ೨ ಬದಿ ಬೇಯಿಸ ಬೇಕು. ಸ್ವಲ್ಪ ತುಪ್ಪ ಅಥವಾ ಎಣ್ಣೆ ಬಳಸಬಹುದು. ಚಟ್ನಿ ಅಥವಾ ಟೊಮ್ಯಾಟೊ ಕೆಚಪ್ ನೊಂದಿಗೆ ತಿನ್ನಲು ಬಲುರುಚಿ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧ: ಪುಸ್ತಕ ವಿಮರ್ಶೆ
October 22, 2024
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಾಸಿಯಾದ ಕಿರಣ್ ಉಪಾಧ್ಯಾಯರು ಈಗ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಬಹ್ರೈನ್ ನಿವಾಸಿ. ನಾಟಕ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರತೀ ಸೋಮವಾರ ‘ವಿಶ್ವವಾಣಿ' ಪತ್ರಿಕೆಯಲ್ಲಿ ‘ವಿದೇಶವಾಸಿ’ ಎಂಬ ಅಂಕಣ ಬರೆಯುತ್ತಾರೆ. ಗಲ್ಭ್ ರಾಷ್ಟ್ರಗಳ ಬಗ್ಗೆ ತಿಳಿಸುತ್ತಾ ನಮ್ಮನ್ನು ಜಗತ್ತಿನಾದ್ಯಂತ ಸುತ್ತಿಸುತ್ತಾರೆ, ಭಾರತಕ್ಕೂ ಕರೆತರುತ್ತಾರೆ, ಕೊನೆಗೆ ಕರ್ನಾಟಕದಲ್ಲೂ ಛಾಪು ಮೂಡಿಸುತ್ತಾರೆ. ಕಿರಣ್ ಅವರ ಅಂಕಣ ಬರಹಗಳ ಪ್ಲಸ್ ಪಾಯಿಂಟ್ ಎಂದರೆ…
ವಿಧ: ರುಚಿ
October 20, 2024
ಹಪ್ಪಳಗಳಿಗೆ ಸ್ವಲ್ಪ ಎಣ್ಣೆ ಸವರಿ ಕಾವಲಿಯ ಮೇಲೆ ಹಾಕಿ ತೆಗೆಯಿರಿ. ತಣಿದ ಹಪ್ಪಳಗಳ ಮೇಲೆ ಕ್ರಮವಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಗಳನ್ನು ಸಮನಾಗಿ ಹರಡಿ. ನಂತರ ಮೆಣಸಿನ ಹುಡಿ, ಜೀರಿಗೆ ಹುಡಿ, ಗರಮ್ ಮಸಾಲೆಗಳನ್ನು ಸಮನಾಗಿ ಉದುರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಸಾಲಾ ಪಾಪಡ್ ತಯಾರು. ಸೂಪ್ ನೊಂದಿಗೆ ಸೂಪರ್ ಕಾಂಬಿನೇಶನ್.
ವಿಧ: ಪುಸ್ತಕ ವಿಮರ್ಶೆ
October 18, 2024
ಪತ್ರಕರ್ತ ಶ್ರೀಧರ ನಾಯಕ್ ಅವರು ತಮ್ಮ ವೃತ್ತಿ ಜೀವನದಲ್ಲಿನ ಅನುಭವಗಳನ್ನು ಕೃತಿ ರೂಪದಲ್ಲಿ ಹೊರತಂದಿದ್ದಾರೆ. ಅದರ ಹೆಸರೇ ‘ಹೇಳದೇ ಇದ್ದ ವಾಸ್ತವಗಳು'. ಪತ್ರಕರ್ತರು ಕೆಲಸ ಮಾಡುವಾಗ ಬಹಳಷ್ಟು ಸಂಗತಿಗಳು ತಿಳಿದು ಬಂದರೂ ಕೆಲವು ವಿಷಯಗಳನ್ನು ಬರೆಯಲು ಆಗುವುದಿಲ್ಲ. ಆದಕ್ಕೆ ನಾನಾ ಕಾರಣಗಳು ಇರುತ್ತವೆ. ಅಂತಹ ಬರೆಯದೇ ಉಳಿದು ಹೋದ ವಿಚಾರಗಳನ್ನು ‘ಹೇಳದೇ ಇದ್ದ ವಾಸ್ತವಗಳು'ಕೃತಿಯಲ್ಲಿ ಬರೆಯಲು ಮನಸ್ಸು ಮಾಡಿದ್ದಾರೆ. ಈ ಕೃತಿಗೆ ಕನ್ನಡದ ಹಿರಿಯ ಕಥೆಗಾರ, ವಿಮರ್ಶಕ ಎಸ್ ದಿವಾಕರ ಇವರು…
ವಿಧ: ರುಚಿ
October 17, 2024
ಶುದ್ಧೀಕರಿಸಿದ ಬೇವಿನಸೊಪ್ಪುನ್ನು, ಜೀರಿಗೆ ಬೆಣ್ಣೆ ಹಾಕಿ ಹುರಿದು ಕೊಳ್ಳಬೇಕು. ಹುರಿದ ಬೇವಿನಸೊಪ್ಪನ್ನು ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಬೇಕು. ಬೀಸಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು, ಹಾಕಿ ತಕ್ಕಷ್ಟು ನೀರು ಹಾಕಿ ಕುದಿಸಬೇಕು. ಸಣ್ಣಗೆ ಕುದಿಯುವಾಗ ಒಗ್ಗರಣೆ ಹಾಕಿದರೆ ಬೇವಿನಸೊಪ್ಪು ತಂಬುಳಿ ತಯಾರು.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ
ವಿಧ: ಪುಸ್ತಕ ವಿಮರ್ಶೆ
October 16, 2024
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಉಡುಪಿಯ ನಿವಾಸಿ ಡಾ. ಶಶಿಕಿರಣ್ ಶೆಟ್ಟಿ ಇವರು ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆಗಳ ಸಂಗಮ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರ, ಅನಾರೋಗ್ಯಕ್ಕೆ ತುತ್ತಾಗಿರುವವರ, ಆರ್ಥಿಕ ಪರಿಸ್ಥಿತಿ ಹದಗೆಟ್ಟು ದೀನ ಸ್ಥಿತಿಯಲ್ಲಿರುವವರನ್ನು ಪೊರೆಯುವ ಸಾಹಸಿ. ಹೋಮ್ ಡಾಕ್ಟರ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಡಾ. ಶಶಿಕಿರಣ್ ಶೆಟ್ಟಿಯವರು ಬಹಳಷ್ಟು ಮಂದಿಗೆ ಹೊಸ ಬಾಳು ಕೊಡುವಲ್ಲಿ ನೆರವಾಗಿದ್ದಾರೆ. ನೂರಾರು ಮಂದಿ ಇವರ ಹೊಸ ಹೊಸ…
ವಿಧ: ಪುಸ್ತಕ ವಿಮರ್ಶೆ
October 14, 2024
ಮುದಗಲ್ಲ ಎಂಬ ಊರು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದಿದೆ. ಈ ಊರಿನಲ್ಲಿ ಕಂಡು ಬರುವ ಶಾಸನಗಳ ಬಗ್ಗೆ ಸವಿವರವಾಗಿ ಡಾ. ಮಹದೇವಪ್ಪ ನಾಗರಾಳ ಅವರು ಮಾಹಿತಿ ನೀಡುತ್ತಿದ್ದಾರೆ ತಮ್ಮ ಕೃತಿ ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು' ಇದರಲ್ಲಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಚನ್ನಬಸವಯ್ಯ ಹಿರೇಮಠ. ಇವರು ತಮ್ಮ ಮುನ್ನುಡಿಯಲ್ಲಿ ಈ ಊರಿನ ಇತಿಹಾಸ ಮತ್ತು ಶಾಸನಗಳ ಬಗ್ಗೆ ಲೇಖಕರು ಎಷ್ಟು ಸೊಗಸಾದ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಅವರ ಮನದಾಳದ ಮಾತುಗಳ ಆಯ್ದ ಭಾಗ ಇಲ್ಲಿದೆ…
ವಿಧ: ರುಚಿ
October 13, 2024
ಕಡಲೆಕಾಳುಗಳನ್ನು ೬ ಗಂಟೆ ನೆನೆಸಿ, ದಾಲ್ಚಿನ್ನಿ, ಲವಂಗ, ಕೊತ್ತಂಬರಿ ಬೀಜ, ಶುಂಠಿ ತುರಿ, ಮೆಣಸಿನ ಹುಡಿ, ಜೀರಿಗೆ ಹುಡಿ, ಸೋಂಪು ಹುಡಿಗಳನ್ನು ಸೇರಿಸಿ ರುಬ್ಬಿ ಮಸಾಲೆ ತಯಾರಿಸಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿ ಮೆಣಸಿನಕಾಯಿ, ಈರುಳ್ಳಿ, ಟೋಮೆಟೊಗಳನ್ನು ಬಾಡಿಸಿ. ಈ ಮಿಶ್ರಣಕ್ಕೆ ಅರೆದ ಮಸಾಲೆ, ತುಪ್ಪ, ಉಪ್ಪು, ಹುಣಸೆರಸ, ಬೇಯಿಸಿದ ಕಡಲೆಕಾಳುಗಳನ್ನು ಹಾಕಿ ಕುದಿಸಿ. ಪುದೀನಾ ಎಳೆಗಳುಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿದರೆ, ಪೂರಿ (ಬಟೂರಾ) ಜೊತೆ ಸವಿಯಲು ಚೋಲೆ ತಯಾರು.
ವಿಧ: ರುಚಿ
October 12, 2024
ಸೌತೆ ಸಿಪ್ಪೆ, ಉಪ್ಪು, ಹುಳಿ, ಕೊತ್ತಂಬರಿ ಹಾಕಿ ಬೇಯಿಸ ಬೇಕು. ಬೇಯಿಸಿದ ಸಾಮಾನು, ತೆಂಗಿನತುರಿಯನ್ನು ಒಟ್ಟಿಗೆ ಹಾಕಿ ಬೀಸಬೇಕು. ಅದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ಗೊಜ್ಜು ತಯಾರು.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ