ವಿಧ: ಪುಸ್ತಕ ವಿಮರ್ಶೆ
June 26, 2023
"ಡುಮಿಂಗ" ಎಂಬ ಕಚಗುಳಿಯಿಕ್ಕುವ ಹೆಸರು ಹೊತ್ತ ಶಶಿ ತರೀಕೆರೆಯವರ ಮೊದಲ ಕಥಾಸಂಕಲನ ಇದು. ಈ ಕತೆಗಳನ್ನು ಓದುವಾಗ ಶಶಿ ತರೀಕೆರೆಯವರು ಕಥೆಗಳಿಗೆ ಹೊಸಬರೆನ್ನುವುದು(?) ನಂಬಲಾಗದ ವಿಷಯ. ಇಲ್ಲಿರುವ ಕತೆಗಳನ್ನು ಹೊಸ ಮನಸ್ಥಿತಿಯಿಂದ ಧ್ಯಾನಿಸಿ ಬರೆದಂತಿವೆ. ಇಂದಿನ ಪೀಳಿಗೆಯ ಮಾನಸಿಕ ತಲ್ಲಣಗಳು ಮತ್ತು ದಿನೇ ದಿನೇ ದ್ವೀಪವಾಗುತ್ತಾ ಜಟಿಲಗೊಳ್ಳುತ್ತಿರುವ ಅವರ ಭಾವನಾಜಗತ್ತಿನ ಇಣುಕು ನೋಟವಿದೆ.
ಈ ಸಂಕಲನದ ಬಗ್ಗೆ ಮೂರು ವಿಷಯಗಳನ್ನು ಹೇಳಬೇಕು. ಒಂದು ಕತೆಗಳ ಭಾಷೆ ಮತ್ತು ನಿರೂಪಣಾ ಶೈಲಿ. ಜೇಡಿ…
ವಿಧ: ಪುಸ್ತಕ ವಿಮರ್ಶೆ
June 24, 2023
“ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಎಂಬ ವಿಭಿನ್ನ ಹೆಸರಿನ ಕಥಾ ಸಂಕಲನವನ್ನು ಹೊರ ತಂದಿದ್ದಾರೆ ಭರವಸೆಯ ಕಥೆಗಾರರಾದ ಮುನವ್ವರ್ ಜೋಗಿಬೆಟ್ಟು ಇವರು. ಸುಮಾರು ೧೧೦ ಪುಟಗಳ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಮತ್ತೊರ್ವ ಕತೆಗಾರ ಕೇಶವ ಮಳಗಿ ಇವರು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮಗಾಗಿ...
“ತಮ್ಮ ‘ಇಶ್ಖಿನ ಒರತೆಗಳು’ ಕವನ ಸಂಕಲನದಿಂದ ಕೆಲವು ಓದುಗರಿಗಾದರೂ ಪರಿಚಿತರಾದ ಮುನವ್ವರ್ ಜೋಗಿಬೆಟ್ಟು ಇದೀಗ ಹೊಸ ಕಥಾ ಸಂಕಲನದ ಮೂಲಕ ಓದುಗರನ್ನು ಮತ್ತೊಮ್ಮೆ…
ವಿಧ: ಪುಸ್ತಕ ವಿಮರ್ಶೆ
June 22, 2023
ಕವಿತಾ ಸಾಲಿಮಠ ಅವರ ಗಝಲ್ ಗಳ ಸಂಗ್ರಹವೇ “ದರ್ದಿಗೆ ದಾಖಲೆಗಳಿಲ್ಲ". ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಹೈದರ್ ಹೈ. ತೋರಣಗಲ್ಲು ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ…
ಭಾವಕ್ಕೆ ಜೀವ ಕೊಟ್ಟ ಕವಿತ
ತನ್ ಉಜಲಾ ಮನ್ ಮೈಲಾ
ಸಾಧು ನಾಮ್ ಅನೇಕ್
ಹಮ್ ಸೆ ತೋ ಕಾಲಾ ಕವ್ವ ಭಲಾ
ಜೋ ಅಂದರ್ ಬಹಾರ್ ಏಕ್
ಶತಮಾನಗಳ ಹಿಂದೆ ಬರೆದ ಸಂತ ಕಬೀರ ದಾಸರ ಈ ದೋಹ ಅಂತರಂಗದ ಮಲೀನತೆಯನ್ನ ತೊಳೆದು ಒಳ ಹೊರದ ಆತ್ಮ ಶುದ್ದಿಗೆ ಅನುವಾಗಲು ಎಚ್ಚರಿಸುವ…
ವಿಧ: ಪುಸ್ತಕ ವಿಮರ್ಶೆ
June 20, 2023
‘ಕುಟುಂಬ' ಎಂಬ ಕಥಾ ಸಂಕಲನವನ್ನು ಸಂಪಾದಿಸಿದ್ದಾರೆ ಶೈಲಜಾ ಸುರೇಶ್ ಇವರು. ೧೬೦ ಪುಟಗಳ ಈ ಸಂಕಲನದ ಪ್ರಾರಂಭದ ಕತೆಗಳಾದ ಮಮತಾಮಯಿ, ವರ್ಜಿನ್ ಬೇಬಿ ಇಂತಹ ದಿಟ್ಟ ಮನೋಭಾವದ ಮುಟ್ಟುವಿಕೆಯಾಗಿದೆ. ಯೋಧನ ಮಡದಿ, ಕಡಲಿನಾಚೆಯ ಕುಡಿಗಳು... ಮೊದಲಾದವು ಪ್ರಸ್ತುತ ವಿಷಯಗಳೇ, ಉಳಿದ ಕೆಲವು ಕತೆಗಳಲ್ಲೂ ಪ್ರಕೃತಿ ವರ್ಣನೆ ಸೂರೆಯಾಗಿರುವುದನ್ನು ನೋಡಿದರೆ ಮಹಿಳಾ ಸಾಹಿತ್ಯಕ್ಕಿದ್ದ ಒಂದು ಅಪವಾದ ದೂರವಾದಂತೆನಿಸಿತು" ಎನ್ನುತ್ತಾರೆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಲೇಖಕಿ ಎಸ್.ವಿ. ಪ್ರಭಾವತಿ. ಅವರು…
ವಿಧ: ಬ್ಲಾಗ್ ಬರಹ
June 17, 2023
ಏನನ್ನೋ ಹುಡುಕುವಾಗ ಬುಕ್ ಬ್ರಹ್ಮ ವೆಬ್ ತಾಣದಲ್ಲಿ " ಮರಾಠಿ ಲೇಖಕ ನ. ಚಿ. ಕೇಳಕರ್ ಅವರ ಕಾದಂಬರಿಯನ್ನು ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ- ಯೋಗಾಯೋಗ ಅಥವಾ ಕಾಕತಾಳೀಯ ನ್ಯಾಯ. ಜೀವನದ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವ ಸಾಮಾಜಿಕ ಕಾದಂಬರಿ ಇದಾಗಿದೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. " ಎಂಬ ಮಾಹಿತಿ ಇತ್ತು. ಅದರ pdf ಓದಿ ಎಂದು ಇದ್ದ ಕೊಂಡಿ ಕೆಲಸ ಮಾಡುತ್ತಿರಲಿಲ್ಲ . ಅದನ್ನು ಸ್ವಲ್ಪ ತಿದ್ದಿಕೊಂಡು ನೋಡಿದಾಗ https://archive.org/…
ವಿಧ: ಪುಸ್ತಕ ವಿಮರ್ಶೆ
June 17, 2023
‘ನೀ ದೂರ ಹೋದಾಗ’ ಇದು ಫೌಝಿಯಾ ಸಲೀಂ ಅವರ ಕಾದಂಬರಿ. ಕಾದಂಬರಿ ಬರೆಯುವವರೇ ಅಪರೂಪವಾಗಿರುವಾಗ ಇವರು ಬರೆದ ಕಾದಂಬರಿಯು ಹೊಸ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟ ಪಟ್ಟು ದುಡಿದು, ಯಾರ ಸಹಾಯವನ್ನೂ ಕೋರದೆ ಹಣ ಗಳಿಸಿ ದೂರದ ದುಬೈಗೆ ಹೋಗುವ ಸಂಗತಿಯನ್ನು ಕಾದಂಬರಿಯಲ್ಲಿ ರೋಚಕವಾಗಿ ವರ್ಣಿಸಿದ್ದಾರೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಮೋಹನ್ ಕುಮಾರ್ ಟಿ. ಇವರು. ಇವರ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ...
“ಫೌಝಿಯಾ ಸಲೀಂ(ದುಬೈ)ರವರ ನಾಲ್ಕನೆಯ…
ವಿಧ: ಬ್ಲಾಗ್ ಬರಹ
June 16, 2023
ಕೇವಲ, ಪರಿಶ್ರಮ, ಪರಿಶ್ರಮ, ಮತ್ತೂ ಹೆಚ್ಚಿನ ಪರಿಶ್ರಮದಿಂದ !
80ನೇ ವರ್ಷಕ್ಕೆ ಕಾಲಿಟ್ಟಿರುವ ಮಿಲೇನಿಯಂನ ಸ್ಟಾರ್ ಅಮಿತಾಬ್ ಬಚ್ಚನ್, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬಹುಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರತಿಭೆಯ ಶಕ್ತಿಕೇಂದ್ರ, ನಟನಾಗಿ ಅವರ ವ್ಯಾಪ್ತಿಯು ಉತ್ತಮವಾಗಿದೆ ಮತ್ತು ನಿಜವಾಗಿಯೂ ನಮೂದಿಸಲು ಯೋಗ್ಯವಾಗಿದೆ. ಅವರು 1969 ರಲ್ಲಿ ಸಾತ್ ಹಿಂದೂಸ್ತಾನಿ ಎನ್ನುವ ಚಿತ್ರದಲ್ಲಿ ಸದ್ದಿಲ್ಲದೆ ಪಾದಾರ್ಪಣೆ ಮಾಡಿದ ನಂತರ ಅವರ ಐತಿಹಾಸಿಕತೆಯ ಬಗ್ಗೆ ಹೆಚ್ಚಿನ ವಿವಾದಗಳಿಲ್ಲ.…
ವಿಧ: ಪುಸ್ತಕ ವಿಮರ್ಶೆ
June 15, 2023
ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ೧೦೪ ಪುಟಗಳ ಈ ಪುಟ್ಟ ಕಥಾ ಸಂಕಲನದ ಎಲ್ಲಾ ಕತೆಗಳು ಓದುವಂತಿವೆ.
'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ…
ವಿಧ: ಬ್ಲಾಗ್ ಬರಹ
June 14, 2023
ಈ ಪುಸ್ತಕವು archive.org ತಾಣದಲ್ಲಿದೆ. ಇದರ ಕೊಂಡಿಯನ್ನು pustaka.sanchaya.net ತಾಣದಲ್ಲಿ 'ಚಂದ್ರಗುಪ್ತ ಚಕ್ರವರ್ತಿ' ಎಂದು ಹುಡುಕುವ ಮೂಲಕ ಪಡೆಯಬಹುದು.
ನಾನು ಈ ಪುಸ್ತಕವನ್ನು ಸ್ವಲ್ಪ ವಿವರವಾಗಿ, ಸ್ವಲ್ಪ ಹಾರಿಸಿ ಹಾರಿಸಿ ಓದಿದೆ.
ಇದು ತೆಲುಗಿನ ಪುಸ್ತಕವೊಂದರ ಅನುವಾದ. ಇದು ಕತೆ ಅಥವಾ ಕಾದಂಬರಿ ಏನಲ್ಲ, ಆದರೆ ಇತಿಹಾಸ ದೃಷ್ಟಿಯಿಂದ 'ಚಂದ್ರಗುಪ್ತ ಚಕ್ರವರ್ತಿ'ಯ ಕುರಿತು ಇದೆ. ಚಂದ್ರಗುಪ್ತ ,ಚಾಣಕ್ಯರ ಬಗ್ಗೆ ನಾವು ಓದಿರುತ್ತೇವೆ , ತಿಳಿದಿರುತ್ತೇವೆ. ಆದರೆ ಆ ಸಂಗತಿಗಳ ಮೂಲ ಏನು…
ವಿಧ: ಪುಸ್ತಕ ವಿಮರ್ಶೆ
June 13, 2023
ಖ್ಯಾತ ಕತೆಗಾರ ಅಬ್ದುಲ್ ರಶೀದ್ ಮತ್ತೊಮ್ಮೆ ತಮ್ಮ ಕಥಾ ಸಂಕಲನದ ಜೊತೆ ಬಂದಿದ್ದಾರೆ. ಈ ಬಾರಿ ಅವರು ಅದಕ್ಕೊಂದು ವಿಲಕ್ಷಣ ಹೆಸರನ್ನೂ ನೀಡಿದ್ದಾರೆ. ‘ಅಂತರಾಷ್ಟ್ರೀಯ ಕುಂಬಳಕಾಯಿ' ಎನ್ನುವ ಶೀರ್ಷಿಕೆಯೇ ಕಥಾ ಸಂಕಲನವನ್ನು ಓದುವಂತೆ ಪ್ರೇರೇಪಿಸುತ್ತದೆ. ೯೬ ಪುಟಗಳ ಪುಟ್ಟ ಕಥಾ ಸಂಕಲನ. ಮುನ್ನುಡಿಯನ್ನು ಬರೆದಿದ್ದಾರೆ ಕನ್ನಡದ ಮತ್ತೊರ್ವ ಖ್ಯಾತ ಕತೆಗಾರ ಎಸ್ ದಿವಾಕರ್ ಇವರು. ಇವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“ಕನ್ನಡದಲ್ಲಿ ಸಣ್ಣಕತೆಗೆ ಪುನಃಶ್ಚೈತನ್ಯವನ್ನು ತಂದುಕೊಡುವ ಹೊಸ…