ಎಲ್ಲ ಪುಟಗಳು

ವಿಧ: ರುಚಿ
October 11, 2024
ತೊಂಡೆಕಾಯಿಯನ್ನು ತೆಳ್ಳಗೆ ನಾಲ್ಕು ‌ತುಂಡು ಕತ್ತರಿಸಬೇಕು. ರಾತ್ರಿ ಕತ್ತರಿಸಿ ಮಜ್ಜಿಗೆ, ಉಪ್ಪು, ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಇಡಬೇಕು. ಬೆಳಿಗ್ಗೆ ತೊಂಡೆಕಾಯಿಯ ಹೋಳುಗಳನ್ನು ತೆಗೆದು (ಸ್ವಲ್ಪ ನೀರು ಎದ್ದಿರುತ್ತದೆ) ಒಣ ಹಾಳೆಯಲ್ಲಿ ಹಾಕಿ ಬಿಸಿಲಿನಲ್ಲಿ ಒಣಗಿಸಬೇಕು. ೬ ಒಳ್ಳೆಯ ಬಿಸಿಲು ಬೇಕಾಗುತ್ತದೆ. ಗರಿ ಗರಿಯಾಗುವಷ್ಟು ಒಣಗಿಸಿ ಗಾಳಿಯಾಡದಂತೆ ಇಟ್ಟರೆ ಬಹುಕಾಲ ಸಂರಕ್ಷಿಸಿ ಉಪಯೋಗಿಸಬಹುದು. - ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ ‌
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 10, 2024
ಕಥೆಗಾರ, ಉಪನ್ಯಾಸಕ ಡಾ. ಆನಂದ ಗೋಪಾಲ್ ಅವರು ಬರೆದ ‘ಜ್ಞಾನ ಫಕೀರ ಪ್ರೊ. ಎಂ ಕರೀಮುದ್ದೀನ್' ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿಪ್ಪು ಸುಲ್ತಾನ್ ವಂಶಸ್ತನಾಗಿದ್ದುಕೊಂಡು, ಸುಮಾರು ೬ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ಖ್ಯಾತ ನಾಮ ಸಾಹಿತಿಗಳ ಸಾಂಗತ್ಯದಲ್ಲಿದ್ದೂ ಸರಳ, ಸಜ್ಜನಿಕೆಯಿಂದ ಜಾತ್ಯಾತೀತವಾಗಿ ಬದುಕಿದ ಕರೀಮುದ್ದೀನ್ ಅವರ ಪರಿಚಯ ಈ ಕೃತಿಯಲ್ಲಿ ಮಾಡಲಾಗಿದೆ. ಇವರ ಬಗ್ಗೆ ಲೇಖಕರಾದ ಡಾ. ಆನಂದ್ ಅವರು ತಮ್ಮ ಮುನ್ನುಡಿಯಲ್ಲಿ ಬರೆದದ್ದು ಹೀಗೆ… “ ಪ್ರೊ. ಎಂ.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 08, 2024
ಹೊಸ ಬಗೆಯ, ಹೊಸತನದ ಪುಸ್ತಕಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕಾಯಕವನ್ನಾಗಿ ಮಾಡಿಕೊಂಡ ಛಂದ ಪುಸ್ತಕ ಪ್ರಕಾಶನದವರು ‘ಸತ್ತವರ ಸೊಲ್ಲು' ಎಂಬ ನಕ್ಸಲ್ ನಾಡಿನ ಮರೀಚಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಶುತೋಷ್ ಭಾರದ್ವಾಜ್ ಎನ್ನುವ ಪತ್ರಕರ್ತ ಕಂಡ ನಕ್ಸಲ್ ಬದುಕಿನ ಅನಾವರಣವೇ ಈ ಕೃತಿ. ಹಿಂದಿ ಭಾಷೆಯ ಈ ಕೃತಿಯನ್ನು ನೇರವಾಗಿ ಕನ್ನಡಕ್ಕೆ ತಂದಿದ್ದಾರೆ ಉದಯೋನ್ಮುಖ ಬರಹಗಾರರಾದ ಕಾರ್ತಿಕ್ ಆರ್. ಈ ಕೃತಿಗೆ ಬೆನ್ನುಡಿಯನ್ನು ಬರೆಯುವ ಮೂಲಕ ಪ್ರೋತ್ಸಾಹಿಸಿದ್ದಾರೆ ಪದ್ಮನಾಭ…
ಲೇಖಕರು: Kavitha Mahesh
ವಿಧ: ರುಚಿ
October 06, 2024
ಅವಲಕ್ಕಿಯನ್ನು ತೊಳೆದು ಬಸಿದು ಹುಣಸೆ ರಸ, ರಸಮ್ ಪೌಡರ್, ಬೆಲ್ಲದ ತುರಿ ಸೇರಿಸಿ ಚೆನ್ನಾಗಿ ಕಲಕಿ ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ - ಇಂಗಿನ ಒಗ್ಗರಣೆ ಮಾಡಿ. ಕಡಲೇಕಾಯಿ ಬೀಜ, ಕರಿಬೇವಿನ ಸೊಪ್ಪು, ಉಪ್ಪು ಸೇರಿಸಿ ಬಾಡಿಸಿ. ಒಗ್ಗರಣೆಗೆ ನೆನೆಸಿದ ಅವಲಕ್ಕಿ ಮಿಶ್ರಣ ಸೇರಿಸಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿಳಿಸಿ ತೆಂಗಿನತುರಿಯಿಂದ ಅಲಂಕರಿಸಿದರೆ ಗೊಜ್ಜವಲಕ್ಕಿ ರೆಡಿ.
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 06, 2024
ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾಡಿನ ವಿವಿಧ ಮುಖಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕ ಇದು. ಇಂಗ್ಲೀಷಿನಲ್ಲಿ “ವೈಲ್ಡ್ ವುಡ್-ನೋಟ್ಸ್” ಎಂಬ ಶೀರ್ಷಿಕೆ ಹೊಂದಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ಆರ್. ಆನಂದರಾಮಯ್ಯ. ಇದರಲ್ಲಿರುವ 17 ಪುಟ್ಟ ಅಧ್ಯಾಯಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಮೊದಲ ಅಧ್ಯಾಯ “ವನ್ಯ ಆಕರ್ಷಣೆ”, ನಾವೆಲ್ಲರೂ ಮನೆಯಿಂದ ಹೊರಗೆ ವನಭೋಜನ ಅಥವಾ ರಜಾದಿನವನ್ನು ಏಕೆ ಪ್ರೀತಿಸುತ್ತೇವೆ? ಎಂಬ ಪ್ರಶ್ನೆಯಿಂದ ಶುರು. ಇದಕ್ಕೆ ಹಲವು ಉತ್ತರಗಳನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 05, 2024
ತೆಲುಗು ಭಾಷೆಯ ಖ್ಯಾತ ಕತೆಗಾರ್ತಿ ಹಾಗೂ ಪತ್ರಕರ್ತೆ ಕಲ್ಪನಾ ರೆಂಟಾಲಾ ಅವರ ಕಥಾ ಸಂಕಲನವನ್ನು ರಂಗನಾಥ ರಾಮಚಂದ್ರರಾವು ಅವರು ‘ಐದನೇ ಗೋಡೆ ಮತ್ತು ಇತರ ಕಥೆಗಳು' ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಡಾ ಎಚ್ ಎಲ್ ಪುಷ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ... “ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿರುವ ‘ಐದನೇ ಗೋಡೆ’ ಹಲವು ಕಾರಣಕ್ಕೆ ಬಹುಮುಖ್ಯವಾದ ಅನುವಾದಿತ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 03, 2024
ಪುನರ್ವಸು, ಚೆನ್ನಭೈರಾದೇವಿ ಮುಂತಾದ ಚಾರಿತ್ರಿಕ ಕಾದಂಬರಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ ಬರಹಗಾರರಾದ ಡಾ ಗಜಾನನ ಶರ್ಮ ಅವರ ನೂತನ ಕಾದಂಬರಿ ‘ರಾಜಮಾತೆ ಕೆಂಪನಂಜಮ್ಮಣ್ಣಿ' ಇತ್ತೀಚೆಗೆ ಬಿಡುಗಡೆಯಾಗಿದೆ. ಮೈಸೂರಿನ ರಾಜ ಮನೆತನದ ಬಗ್ಗೆ ಬರೆದ ಈ ಐತಿಹಾಸಿಕ ಕಾದಂಬರಿಯ ಕುರಿತು ಸ್ವತಃ ಲೇಖಕರು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ... “೨೦೦೨ಕ್ಕೆ ಕರ್ನಾಟಕದ ವಿದ್ಯುತ್ ಇತಿಹಾಸಕ್ಕೆ ನೂರು ವರ್ಷ ತುಂಬಿತ್ತು. ಆ ಸಂದರ್ಭದಲ್ಲಿ ನಾನು, "ಬೆಳಕಾಯಿತು ಕರ್ನಾಟಕ" ಎಂಬ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 01, 2024
ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ಸುಮಾರು ಐದು ದಶಕಗಳ ಕಾಲ ಆಳಿದ ಚೆನ್ನಾಭೈರಾದೇವಿ ಎಂಬ ರಾಣಿಯ ಬಗ್ಗೆ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನಾವು ಶಾಲೆಗಳಲ್ಲಿ ಇಂತಹ ಮಹಾರಾಣಿಯರ ಜೀವನ ಕಥೆಯನ್ನು ಕೇಳಿಯೇ ಇಲ್ಲ, ಕಲಿತೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ ಇದು. ಭಾರತವನ್ನು ಆಕ್ರಮಿಸಿ ಲೂಟಿ ಮಾಡಿದ ಮೊಘಲರು ಮತ್ತು ಹಲವಾರು ಮುಸ್ಲಿಂ ದೊರೆಗಳ ಬಗ್ಗೆ ಬಹಳ ವಿವರವಾಗಿ ಓದಿರುವ ನಾವು, ನಮ್ಮದೇ ದೇಶದ ಹಲವಾರು ರಾಜರ ಬಗ್ಗೆ, ರಾಣಿಯರ ಬಗ್ಗೆ ಓದಿದ್ದು ಕಡಿಮೆ. ಎಲ್ಲೋ ಒಂದೆಡೆ ರಾಣಿ…
ಲೇಖಕರು: Kavitha Mahesh
ವಿಧ: ರುಚಿ
October 01, 2024
ಗೋಧಿ ಹಿಟ್ಟು, ಮೈದಾ ಹಿಟ್ಟುಗಳಿಗೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಹುಡಿ ಮಾಡಿ. ಬಟಾಣಿ ಕಾಳುಗಳು, ಶುಂಠಿ ತುರಿ, ಹಸಿಮೆಣಸಿನಕಾಯಿ, ಇಂಗು ಜೀರಿಗೆ ಹುಡಿ, ಅರಸಿನ, ಗರಮ್ ಮಸಾಲಾ ಹುಡಿ, ಉಪ್ಪು ಎಲ್ಲವನ್ನೂ ಸೇರಿಸಿ ನೀರು ಹಾಕದೆ ಮಸಾಲೆ ರುಬ್ಬಿ. ಬೇಯಿಸಿದ ಆಲೂಗಡ್ಡೆಗೆ ರುಬ್ಬಿದ ಮಸಾಲೆ ಸೇರಿಸಿ ಚೆನ್ನಾಗಿ ಕಲಕಿ. ಕಲಸಿದ ಗೋಧಿ-ಮೈದಾ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಪೂರಿ ಆಕಾರಕ್ಕೆ ಲಟ್ಟಿಸಿ ಆಲೂ ಮಿಶ್ರಣ…
ವಿಧ: ರುಚಿ
September 29, 2024
ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ತಂಬುಳಿ ತಯಾರು. -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ