ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 03, 2024
ಯಶೋದಾ ಮೋಹನ್ ಅವರು ಬರೆದ ಚೊಚ್ಚಲ ಕಥಾ ಸಂಕಲನ ‘ಇಳಿ ಹಗಲಿನ ತೇವಗಳು' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪುಸ್ತಕಕ್ಕಾಗಿ ಬರೆದ ಲೇಖಕಿಯ ಮಾತುಗಳ ಆಯ್ದ ಭಾಗ ಇಲ್ಲಿದೆ… “‘ಇಳಿ ಹಗಲಿನ ತೇವಗಳು' ನನ್ನ ಮೊದಲನೆಯ ಕಥಾ ಸಂಕಲನ ಮತ್ತು ಮೂರನೆಯ ಕೃತಿ. ವಿದ್ಯಾರ್ಥಿ ಜೀವನ ಕಳೆದು ಸುಮಾರು ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಬರವಣಿಗೆಯನ್ನು ಆರಂಭಿಸಲು ಪ್ರೇರಣೆ ಸಿಕ್ಕಿದಾಗ ನನ್ನೊಳಗಿನ ಭಾವಗಳು ಬಿಡುಗಡೆಗೊಂಡ ಹಲವು ಬಗೆಗಳಲ್ಲಿ ಸಣ್ಣ ಕತೆಯೂ ಒಂದು. ಆಗೊಮ್ಮೆ ಈಗೊಮ್ಮೆ ಬರೆದ ಕೆಲವು ಕತೆಗಳು ಈ…
ಲೇಖಕರು: Kavitha Mahesh
ವಿಧ: ರುಚಿ
September 01, 2024
ಕಡಲೆಬೇಳೆಯನ್ನು ಒಂದು ಗಂಟೆ ಕಾಲ ನೆನೆಸಿ ಬಸಿದು ತರಿತರಿಯಾಗಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ತೆಂಗಿನ ತುರಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಇಂಗು, ಮೆಣಸಿನ ಹುಡಿ, ಶುಂಠಿ ತುರಿ, ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಚಟ್ಟಂಬಡೆಯ ಹದಕ್ಕೆ ಗಟ್ಟಿಯಾಗಿ ಕಲಸಿ. ಕಲಸಿದ ಮಿಶ್ರಣದಿಂದ, ಚಿಕ್ಕ ಉಂಡೆ ಮಾಡಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ಚಟ್ಟಂಬಡೆ, ಕಾಯಿ ಚಟ್ನಿಯೊಂದಿಗೆ ಇಲ್ಲವೇ ಮೊಸರಿನಲ್ಲಿ ನೆನೆಯಿಟ್ಟು ತಿನ್ನಲು ಬಹಳ ರುಚಿಕರ.
ವಿಧ: ಪುಸ್ತಕ ವಿಮರ್ಶೆ
September 01, 2024
೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ ಮೆರೆದಿರುವುದು ಗೀತೆಯ ಸಾಲುಗಳಲ್ಲಿ ಪ್ರತಿಧ್ವನಿಸುತ್ತಿದೆ. ‘ಕನ್ನಡದ ಮಕ್ಕಳಿಗಾಗಿಯೇ’ ಬರೆದದ್ದು ಎನ್ನುವ ಮಾತು ತೂಕವುಳ್ಳದ್ದಾಗಿದೆ. ರಾಗ ಹಾಕಿ ಹಾಡು, ನೃತ್ಯ ಮಾಡುವಂತಿದೆ. ಈ ‘ಐಕ್ಯಗಾನ’ ನೋಡಲು ಪುಟ್ಟ ಪುಸ್ತಕವಾದರೂ ಪುಟಗಳ ಬಿಡಿಸುತ್ತಾ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 30, 2024
ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ ವ್ಯಕ್ತಿ ತನ್ನ ಮುಂದಿನ ಪುಸ್ತಕವನ್ನು ರೂಪಿಸಿಕೊಳ್ಳಬಹುದು. ಲೇಖಕರಾದ ನರೇಂದ್ರ ಪೈ ಅವರು ವಿಮರ್ಶೆಗಳ ಸಂಗ್ರಹವನ್ನೇ ಒಂದು ಕೃತಿಯನ್ನಾಗಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ‘ಸಾವಿರದ ಒಂದು ಪುಸ್ತಕ' ಈ ಬಗ್ಗೆ ಲೇಖಕರ ಮನದಾಳದ ಮಾತುಗಳು ಹೀಗಿವೆ... “ನಾವು ನಮ್ಮ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 28, 2024
ತಂತ್ರಜ್ಞಾನ ಬೆಳೆದಂತೆ ವಂಚಕರ ಯೋಚನೆ ಮತ್ತು ಯೋಜನೆಗಳೂ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಸೈಬರ್ ವಂಚನೆ. ಈ ವಂಚಕರು ಎಲ್ಲೋ ಕುಳಿತುಕೊಂಡು ಅಂತರ್ಜಾಲದ ಸಹಾಯದಿಂದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂತವರನ್ನು ಗುರುತಿಸಿ ಶಿಕ್ಷೆ ನೀಡುವುದೂ ಬಹಳಷ್ಟು ಸಲ ಕಷ್ಟವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೃತಿ ‘ಸೈಬರ್ ವಂಚನೆ'. ಇದನ್ನು ಬರೆದಿದ್ದಾರೆ ವಿಕ್ರಮ್ ಜೋಶಿ. ಈ ಅಂತರ ಜಾಲದ ಕರಾಳ ಮುಖವನ್ನು ಬಯಲು ಮಾಡಲು ಲೇಖಕರು ಬಹಳಷ್ಟು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 27, 2024
ಇವತ್ತು ಹಿಂದೆ ಇಳಿಸಿಕೊಂಡಿದ್ದ 'ಭಾಸನ ಭಾರತ' ಎಂಬ ಸುಮಾರು 100 ಪುಟಗಳ ಪುಸ್ತಕವನ್ನು ಓದಿದೆ.  ಇದನ್ನು ಜಿ. ಪಿ. ರಾಜರತ್ನಂ ಅವರು ಬರೆದಿದ್ದಾರೆ.  ಭಾಸನು ಸಂಸ್ಕೃತದಲ್ಲಿ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆರು ನಾಟಕಗಳು ಮಹಾಭಾರತದ ವಸ್ತುವನ್ನು ಹೊಂದಿವೆ. ಇವುಗಳಲ್ಲಿ ಐದು ಏಕಾಂಕ ನಾಟಕಗಳು. ಅವು ಯಾವುವು ಎಂದರೆ ಮಧ್ಯಮವ್ಯಾಯೋಗ, ದೂತ ವಾಕ್ಯ, ದೂತ ಘಟೋತ್ಕಚ, ಕರ್ಣ ಭಾರ ಮತ್ತು ಊರುಭಂಗ.  ಇವುಗಳಲ್ಲಿ ಕರ್ಣಭಾರವು ನಾವು ಕಲಿಯುವಾಗ ಸಂಸ್ಕೃತ ಪಠ್ಯಪುಸ್ತಕದಲ್ಲಿ ಇತ್ತು. ಈ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 26, 2024
ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ ಎಂಬ ದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಲವು ವರ್ಷಗಳ ಹಿಂದೆ ಸಿಂಗಾಪುರ ಎಂಬುದು ಈಗಿನಂತಿರಲಿಲ್ಲ. ಆದರೆ ಅದು ಬದಲಾದ ಪರಿ ಬಹಳ ಅಚ್ಚರಿ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರಗಣ್ಯ ದೇಶವಾಗಿ ಬದಲಾಗಿದೆ. ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು ಹಲವು ಬಾರಿ ಸಿಂಗಾಪುರಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ಕಂಡ, ಅನುಭವಿಸಿದ ವಿಷಯಗಳನ್ನು ಕೆಲವು ಟಿಪ್ಪಣಿಗಳ ಮೂಲಕ ಪುಸ್ತಕ ರೂಪದಲ್ಲಿ ಓದುಗರಿಗೆ ಉಣಬಡಿಸುವ ಮನಸ್ಸು…
ಲೇಖಕರು: Kavitha Mahesh
ವಿಧ: ರುಚಿ
August 25, 2024
ಬೀಟ್ರೂಟ್ ಹೋಳುಗಳು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಬಿಳಿ ಎಳ್ಳಿನ ಹುಡಿಗಳನ್ನು ಸೇರಿಸಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಕರಿಬೇವಿನ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ, ಹುಣಸೆ ರಸ, ಬೆಲ್ಲದ ಹುಡಿ, ಉಪ್ಪು, ಅರೆದ ಮಿಶ್ರಣ ಹಾಕಿ ಚೆನ್ನಾಗಿ ಕುದಿಸಿ, ಒಲೆಯಿಂದ ಕೆಳಗಿಳಿಸಿ. ರುಚಿಯಾದ ಬೀಟ್ರೂಟ್ ಗೊಜ್ಜು ಸವಿಯಲು ಸಿದ್ಧ. 
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 23, 2024
“ರವಿ ಬೆಳಗೆರೆ ! ಅವರು ಕನ್ನಡಿಗರ ಮನೆ ಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 21, 2024
‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ್ಟ ಜನರ ಬಗ್ಗೆ ಬಹಳ ದುಃಖದಿಂದ ಮಾಹಿತಿ ನೀಡಿದ್ದಾರೆ. ಸ್ವತಃ ವಯನಾಡಿಗೆ ಹೋಗಿ ಈ ದುರಂತವನ್ನು ಕಣ್ಣಾರೆ ಕಂಡ ಆಶಿಕ್ ಮುಲ್ಕಿಯವರು ತಮ್ಮ ಜೊತೆಗೇ ವರದಿಗಾರಿಕೆ ಮಾಡುತ್ತಿದ್ದ ವಿಕ್ರಂ ಕಾಂತಿಕೆರೆಯವರಿಗೆ ಮುನ್ನುಡಿ ಬರೆಯುವ ಹೊಣೆಯನ್ನು ವಹಿಸಿದ್ದಾರೆ. ವಿಕ್ರಂ…