ವಿಧ: ಪುಸ್ತಕ ವಿಮರ್ಶೆ
May 18, 2023
ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯವರ ಸೌಜನ್ಯದಿಂದ ಪ್ರಕಟವಾದ ಪುಸ್ತಕ ‘ಹೊಸಗನ್ನಡ ಕಾವ್ಯಶ್ರೀ’. ಈ ಪುಸ್ತಕದ ಮುದ್ರಣವಾಗಿ ಈಗಾಗಲೇ ಆರು ದಶಕಗಳು ಸಂದಿವೆ. ಆದರೂ ಅಂದಿನ ಕವಿಗಳ ಹೊಸಗನ್ನಡ ಕಾವ್ಯಗಳು ಮನಸ್ಸಿಗೆ ಮುದ ನೀಡುತ್ತಿವೆ. ಅಂದಿನ ಸಮಯದ ಭಾಷಾ ಪ್ರಯೋಗ, ವಿಷಯ ವಸ್ತುಗಳು ಹೊಸ ಕವಿಗಳಿಗೆ ಇನ್ನಷ್ಟು ಕಲಿಯುವ ಹುಮ್ಮಸ್ಸು ಮೂಡಿಸುತ್ತದೆ. ಈ ಕೃತಿಯ ಕವನಗಳನ್ನು ಸಂಗ್ರಹಿಸಿದವರು ‘ವರಕವಿ’ ದ ರಾ ಬೇಂದ್ರೆ ಹಾಗೂ ಸಾಹಿತಿ ಎಂ. ಮರಿಯಪ್ಪ ಭಟ್ ಇವರು.
ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ…
ವಿಧ: ಬ್ಲಾಗ್ ಬರಹ
May 17, 2023
'ಸಿಲ್ವರ್ ಜ್ಯುಬಿಲಿ ಹೀರೊ' ಎಂಬುದಾಗಿ ಹಿಟ್ ಹಿಂದಿ ಚಿತ್ರಗಳಿಗೆ ಹೆಸರುವಾಸಿಯಾಗಿ ಸುಮಾರು ೧೭ ಚಿತ್ರಗಳಲ್ಲಿ ಅಭಿನಯಿಸಿದ ರಾಜೇಶ್ ಖನ್ನಾರನ್ನು ಆರಾಧಿಸುತ್ತಿದ್ದ ಲಲನಾ ಮಣಿಗಳ ಸಾಲಿನಲ್ಲಿ ಹಲವಾರು ಮಂದಿ ವಿವಾಹಿತ ಮಹಿಳೆಯರೂ ನಿಂತಿರುತ್ತಿದ್ದರು, ಎನ್ನುವ ಮಾತುಗಳು ಮೀಡಿಯಾದಲ್ಲಿ ಕೇಳಿ ಬರುತ್ತಿತ್ತು. ಇದು ಸುಮಾರು ೫೦ ವರ್ಷಗಳ ಹಿಂದಿನ ಮಾತು. (ಇದು ನನಗೆ ಹಾಗೂ ನನ್ನಂತಹ ಮಾನಸಿಕ ಸ್ಥಿತಿಯವರಿಗೆ ಅರಗಿಸಿಕೊಳ್ಳಲು ಅಸಾಧ್ಯವಾದರೂ) ರಾಜೇಶ್ ಖನ್ನಾ ಹೃಷಿಕೇಶ ಮುಖರ್ಜಿಯವರ…
ವಿಧ: ಪುಸ್ತಕ ವಿಮರ್ಶೆ
May 16, 2023
‘ಚಾಲುಕ್ಯ ವಿಕ್ರಮ' ಎನ್ನುವ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ ಪ್ರಕಾಶ್ ಹೇಮಾವತಿ ಇವರು. ಕರ್ನಾಟಕದ ಭವ್ಯ ಚರಿತ್ರೆಯಲ್ಲಿ ತಮ್ಮದೇ ವಿಶಿಷ್ಟ ಕೊಡುಗೆಗಳಿಂದ ಅಮರರಾಗಿರುವ ಚಕ್ರವರ್ತಿಗಳಲ್ಲಿ ಕಲ್ಯಾಣಿ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಅದ್ವಿತೀಯ ವ್ಯಕ್ತಿ. ಸುಮಾರು ಐವತ್ತೊಂದು ವರುಷಗಳ ತನ್ನ ದೀರ್ಘ ಆಳ್ವಿಕೆಯಲ್ಲಿ ಬಹುತೇಕ ಶಾಂತಿಯನ್ನು ಕಾಪಾಡಿಕೊಂಡು, ಜನರಿಗೆ ಸುರಕ್ಷತೆ ಒದಗಿಸುವುದರೊಂದಿಗೆ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗಾಧ ಏಳಿಗೆ ಹೊಂದುವುದಕ್ಕೂ ಕಾರಣನಾಗಿದ್ದಾನೆ"…
ವಿಧ: ಪುಸ್ತಕ ವಿಮರ್ಶೆ
May 13, 2023
“ಚಿತ್ರಗುಪ್ತ" ಪತ್ರಿಕೆಯಲ್ಲಿ ನಿರಂಜನರು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ "ಐದು ನಿಮಿಷ”. ಎಪ್ಪತ್ತು ವರುಷಗಳ ಮುಂಚೆ (1953ರಲ್ಲಿ) ಪ್ರಕಟವಾದ ಈ ಪುಸ್ತಕದ ಬರಹಗಳನ್ನು ಓದುವುದೇ ಖುಷಿ.
ನಿರಂಜನರು ಕನ್ನಡದ ಪ್ರಸಿದ್ಧ ಕಾದಂಬರಿಕಾರರು ಹಾಗೂ ಸಣ್ಣ ಕತೆಗಳ ಬರಹಗಾರರು. ಜಗತ್ತಿನ 125 ದೇಶಗಳ ಆಯ್ದ ಸಣ್ಣಕತೆಗಳ ಮಾಲಿಕೆ (25 ಸಂಪುಟಗಳಲ್ಲಿ) “ವಿಶ್ವ ಕಥಾಕೋಶ" ಮತ್ತು ಕಿರಿಯರ ವಿಶ್ವಕೋಶ - "ಜ್ನಾನ ಗಂಗೋತ್ರಿ” -ಇವೆರಡು ಅಮೂಲ್ಯ ಪುಸ್ತಕಗಳನ್ನು ಸಂಪಾದಿಸಿ, ಕನ್ನಡದ ಸಾಹಿತ್ಯಭಂಡಾರವನ್ನು…
ವಿಧ: ಪುಸ್ತಕ ವಿಮರ್ಶೆ
May 13, 2023
“ಗುಜರಿ ಬಕೀಟಿನೊಂದಿಗೆ ಶಿವಾಯನಮಹ" ಎಂಬ ವಿಲಕ್ಷಣ ಹೆಸರಿನ ಕೃತಿಯೊಂದನ್ನು ಬರೆದು ಪ್ರಕಟಿಸಿದ್ದಾರೆ ಲೇಖಕರಾದ ಕೃಷ್ಣಮೂರ್ತಿ ಬಿಳಿಗೆರೆ ಇವರು. ಮನುಷ್ಯ ಪಾತ್ರಗಳು ಬಂದರೂ ಅವು ನಿಮಿತ್ತ ಮಾತ್ರ ಇಡಿಯಾದ ನೋಟವನ್ನು ಸಾಧಿಸಿಕೊಂಡಿರುವುದರಿಂದಲೇ ಅವರು ವೈರುಧ್ಯ ಪಾತ್ರಗಳ ಎದಿರು ಬದಿರು ನಿಲ್ಲಿಸಿ ಜಗಳ ಮಾಡಿಸುವುದಿಲ್ಲ. ಭೂಮಿ ತಾಯಿಯ ಸಲುವಾಗಿ ತಾನೇ ಸೇನಾನಿಯಾಗಲು ತೊಡಗುವ ಬರಹಗಳಲ್ಲಿ ಲೇಖಕರು ಮುಳುಗುತ್ತಾರೆ ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಲೇಖಕರಾದ ಮೊಗಳ್ಳಿ ಗಣೇಶ್ ಇವರು. ಇವರು…
ವಿಧ: ಬ್ಲಾಗ್ ಬರಹ
May 12, 2023
ನಮ್ಮ ನೆಚ್ಚಿನ ಹಿಂದಿ ಚಿತ್ರರಂಗದ ಬಹುಮುಖಿ ಕೌಶಲಗಳ ಗಾಯಕ, ಕಿಶೋರ್ ಕುಮಾರ್ ಇನ್ನೂ ಹೆಸರುವಾಸಿಯಾಗದ ಗಾಯಕನಾಗಿದ್ದ ಸಮಯದಲ್ಲಿ ಅವರ ಪ್ರಾವೀಣ್ಯತೆಯನ್ನು ಮೊಟ್ಟಮೊದಲು ಗುರುತಿಸಿ ಬ್ರೇಕ್ ಕೊಟ್ಟು ಸಹಾಯಮಾಡಿದವರು. ಖೇಮ್ ಚಂದ್ ಪ್ರಕಾಶ್ ರು. ಲತಾ ಮಂಗೇಶ್ಕರ್ ಅವರನ್ನು ಮಹಲ್ ಚಿತ್ರದಲ್ಲಿ ಹಾಡಲು ವ್ಯವಸ್ಥೆಮಾಡಿ, ಅವರೊಬ್ಬ ಮೇರುಗಾಯಕಿಯಾಗಿ ಹೊರಹೊಮ್ಮಲು ನೆರವಾದರು. ದುಖಃದ ವಿಷಯವೆಂದರೆ ಖೇಮ್ ಚಂದ್ ಪ್ರಕಾಶರ ಹೆಸರು ಯಾರಿಗೂ ನೆನಪಿನಲ್ಲಿಯೂ ಉಳಿಯದಿರುವುದು. ಅದು ಮೀಡಿಯಾಗಳ…
ವಿಧ: ಪುಸ್ತಕ ವಿಮರ್ಶೆ
May 11, 2023
‘ಸಂಶೋಧನ ಸಂಪದ' ಎನ್ನುವುದು ಕ್ಷಮಾ ವಿ ಭಾನುಪ್ರಕಾಶ್ ಅವರ ನೂತನ ಕೃತಿ. ೧೫೮ ಪುಟಗಳ ಈ ಪುಸ್ತಕವು ಸಂಶೋಧನೆಗಳನ್ನು ನಡೆಸುವ ಅಗತ್ಯತೆ ಮತ್ತು ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ. ಲೇಖಕರಾದ ಟಿ. ಜಿ. ಶ್ರೀನಿಧಿ ಇವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ...
“ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ವೇಗ ಬೆರಗುಗೊಳಿಸುವಂಥದ್ದು…
ವಿಧ: ಪುಸ್ತಕ ವಿಮರ್ಶೆ
May 09, 2023
‘ತುಷಾರ ಹಾರ' ಇದು ಲೇಖಕಿಯಾದ ಶ್ಯಾಮಲಾ ಮಾಧವ ಅವರ ಕಣ್ಣೀರ ಕಥೆ. ಬರೆದೂ ಬರೆದು ನೋವನ್ನು ಹಗುರ ಮಾಡಿ ಕೊಂಡ ತಾಯಿಯ ಕಥೆಯಿದು. ಕಂದನ ನೋವಿನ ನುಡಿ ಹಾರವೇ ಈ ‘ತುಷಾರ ಹಾರ’ ಎನ್ನುತ್ತಾರೆ ಶ್ಯಾಮಲಾ ಮಾಧವ ಇವರು. ತಮ್ಮ ಕೃತಿಗೆ ಅವರು ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ...
“ನನ್ನ ಪಾಲಿಗೆ ಸರ್ವಸ್ವವೂ ಆಗಿದ್ದ ನನ್ನ ಕಂದನನ್ನು ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿ ಹೆಣೆದ ನುಡಿಹಾರವೇ ಈ 'ತುಷಾರ ಹಾರ'. ನೆನೆದಷ್ಟೂ ಗಾಢವಾಗುವ ಈ ನೋವನ್ನು ಬರೆದು ಹಗುರಾಗುವುದೆಂದಿದೆಯೇ? ಎಷ್ಟು…
ವಿಧ: ಪುಸ್ತಕ ವಿಮರ್ಶೆ
May 06, 2023
ವಿವಿಧ ಯಕ್ಷಗಾನ ಪ್ರಕಾರಗಳ ಬಗ್ಗೆ ಮಾಹಿತಿ ನೀಡುವ ‘ಮಣಿಹಾರ' ಎಂಬ ಪುಸ್ತಕವನ್ನು ಬರೆದಿದ್ದಾರೆ ಲೇಖಕರಾದ ಎಸ್ ಎನ್ ಪಂಜಾಜೆ. ಸುಮಾರು ೧೬೦ ಪುಟಗಳ ಈ ಕೃತಿಯು ಯಕ್ಷಗಾನ ಪ್ರೇಮಿಗಳಿಗೆ ಹಾಗೂ ಯಕ್ಷಗಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಜ್ಞಾನಾಸಕ್ತರಿಗೆ ಬಹಳ ಉಪಕಾರಿಯಾಗಿದೆ. “ಯಕ್ಷಗಾನ ಮತ್ತು ಅದರ ಸೋದರ ಕಲೆಗಳನ್ನು ಒಟ್ಟಾಗಿ ಕಂಡು ಅವುಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಕಲಾಸಕ್ತರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಸ್ತುತ ಯಕ್ಷಗಾನ ಕಲೆಯಲ್ಲಿನ ಜಾಗತೀಕರಣದ…
ವಿಧ: ಪುಸ್ತಕ ವಿಮರ್ಶೆ
May 05, 2023
ನಮ್ಮ ದೇಶ ಭಾರತವು ಸ್ವಾತಂತ್ರ್ಯ ಗಳಿಸಿ 75 ವರುಷಗಳು ದಾಟಿವೆ. ಇದೀಗ ಎಪ್ರಿಲ್ 2023ರಲ್ಲಿ ಭಾರತವು (ಚೀನಾವನ್ನು ಹಿಂದಿಕ್ಕಿ) ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಈ ಸನ್ನಿವೇಶದಲ್ಲಿ ಇಂತಹ ಪುಸ್ತಕವೊಂದರ ಅಧ್ಯಯನವು ಭಾರತವು ಹಾದು ಬಂದಿರುವ ಹಾದಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕ. ಯಾಕೆಂದರೆ ಭಾರತದ ವಿವಿಧ ಪ್ರದೇಶಗಳ ಹತ್ತು ಹಳ್ಳಿಗಳ 50 ವರುಷಗಳ ಹಿಂದಿನ ಚಿತ್ರಣವನ್ನು ಈ ಪುಸ್ತಕ ನಮಗೆ ಒದಗಿಸುತ್ತದೆ.
ಪ್ರಸಿದ್ಧ ಸಾಮಾಜಿಕ ಶಾಸ್ತ್ರಜ್ನರಾದ ಲೇಖಕರು ಮುನ್ನುಡಿಯಲ್ಲಿ ಹೀಗೆ…