ಎಲ್ಲ ಪುಟಗಳು

ವಿಧ: ರುಚಿ
August 20, 2024
ಕುಂಡಿಗೆಯ ಹೊರಗಿನ ನಾಲ್ಕು ಸಿಪ್ಪೆಗಳನ್ನು ತೆಗೆಯಿರಿ. ಒಳಗಿರುವ ಬಿಳಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಕೆಂಪು ಮೆಣಸು ಮತ್ತು ಉಪ್ಪು ಹಾಕಿ ಬೇಯಿಸಿ. ಬೆಂದ ಹೋಳುಗಳನ್ನು ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ ಮಜ್ಜಿಗೆ ಬೆರೆಸಿ ಅನ್ನದ ಜೊತೆ ಬಡಿಸಿ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 19, 2024
“ನೀವು ಇಸ್ಲಾಂ ಧರ್ಮದ ಕುರಿತು ಹಲವಾರು ಕಥೆ ಮತ್ತು ಕಾದಂಬರಿಗಳನ್ನು ಓದಿರಬಹುದು. ಅವೆಲ್ಲವನ್ನು ಬರೆದಿರುವುದು ಇಸ್ಲಾಂ ಧರ್ಮದ ಕುರಿತು. ಆದರೆ ಈ ‘ಖದೀಜಾ’ ಕಾದಂಬರಿ ಇಸ್ಲಾಂ ಕುರಿತಾಗಿ ಅಲ್ಲ; ಒಬ್ಬಳು ಮಾನವತಾವಾದಿ, ಹೃದಯವಂತಿಕೆಯುಳ್ಳವರ ಕುರಿತ ಐತಿಹಾಸಿಕ ಕಾದಂಬರಿ. ಈ ಕಾದಂಬರಿ ಸಂಪೂರ್ಣವಾಗಿ 1400 ವರ್ಷಗಳ ಹಿಂದೆ ಅಂದರೆ, ಪ್ರವಾದಿ ಮುಹಮ್ಮದ್ ಪೈಗಂಬರ ಮತ್ತು ಅವರ ಧರ್ಮಪತ್ನಿ ಖದೀಜಾರ ಜೀವನದಲ್ಲಿ ನಡೆದ ಘಟನಾವಳಿಗಳ ಕುರಿತಾದ್ದು. ಒಂದು ಧರ್ಮ ಗ್ರಂಥವನ್ನು ಓದಿ ನನ್ನದೇ ಆದ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
August 18, 2024
ಈಗಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುತ್ತಿದ್ದೇವೆ? ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂದು ಒಂದು ಕ್ಷಣ ಯೋಚಿಸಿ. ಈಗ ಶೇಕಡಾ 80ರಷ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿವೆ. ಅಲ್ಲಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಲು ಅಜ್ಜ-ಅಜ್ಜಿಯರು ಹಾಗೂ ಹಿರಿಯರು ಆ ಕುಟುಂಬಗಳಲಿಲ್ಲ. ಹೆತ್ತವರಿಗಂತೂ ಮನೆಗೆಲಸಗಳ ನಿರ್ವಹಣೆ ಮತ್ತು ವೃತ್ತಿಯ ಒತ್ತಡದಿಂದಾಗಿ ಮಕ್ಕಳ ಜೊತೆ ನಿರಾಳವಾಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಂತೂ ಸಿಲೆಬಸ್ಸಿನಲ್ಲಿ ಕಡ್ಡಾಯ…
ಲೇಖಕರು: Kavitha Mahesh
ವಿಧ: ರುಚಿ
August 18, 2024
ಮಸಾಲೆ ಸಾಮಾನುಗಳನ್ನು ಹುರಿದು ಹುಡಿ ಮಾಡಿ, ಬಾಣಲೆಯಲ್ಲಿ, ಎಣ್ಣೆ ಕಾಯಲು ಇರಿಸಿ, ಸಾಸಿವೆ, ಇಂಗು, ಒಣ ಮೆಣಸಿನಕಾಯಿಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲದ ಹುಡಿ, ಮಸಾಲೆಹುಡಿ, ಒಣಶುಂಠಿ ಹುಡಿ, ಉಪ್ಪು ಹಾಕಿ ಕುದಿಸಿದರೆ ರುಚಿಯಾದ ಜೀರಿಗೆ ಗೊಜ್ಜು ತಯಾರು.
ವಿಧ: ರುಚಿ
August 16, 2024
ಎರಡು ನಿಂಬೆ ಹಣ್ಣು ಬೇಯಿಸುವಷ್ಟು ನೀರನ್ನು ಕುಕ್ಕರಿಗೆ ಹಾಕಿ ಐದಾರು ಕೂಗು ( ಶಿಳ್ಳಿ ) ಬರಿಸಿ ಸ್ವಲ್ಪ ಸಮಯದ ನಂತರ ನಿಂಬೆಹಣ್ಣಿನಲ್ಲಿರುವ ಬೀಜಗಳನ್ನು ತೆಗೆದುಹಾಕಿ. ಒಂದು ಸ್ಟೀಲ್ ಬೌಲಿಗೆ ಹಾಕಿ ಚೆನ್ನಾಗಿ ಕಿವುಚಿ. ಈ ಮಿಶ್ರಣಕ್ಕೆ ಉಪ್ಪು, ಗಟ್ಟಿ ಸಿಹಿಮೊಸರು, ಸಕ್ಕರೆ, ಜಜ್ಜಿದ ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಕೂಡಿಸಿ. ಸ್ವಲ್ಪ ಬೆಣ್ಣೆಗೆ ಉದ್ದಿನ ಬೇಳೆ, ಸಾಸಿವೆ ಹಾಕಿ ಚಟಪಟಿ ಕೂಗಿದ ನಂತರ ಒಗ್ಗರಣೆ ಕೊಟ್ಟರೆ ಮೊಸರುಗೊಜ್ಜು ಸಿದ್ಧ. ಮಾರುಕಟ್ಟೆಯಲ್ಲಿ ನಿಂಬೆಹಣ್ಣಿನ ಬೆಲೆ…
ವಿಧ: ರುಚಿ
August 15, 2024
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋದಿ ಹಿಟ್ಟನ್ನು ಹಾಕಿ ಚೆನ್ನಾಗಿ ಪರಿಮಳ ಬರುವವರೆಗೆ ಅಂದರೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ಆರಿದ ನಂತರ ಸಕ್ಕರೆ ಪುಡಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಸೇರಿಸಿ ಉಂಡೆಗಳನ್ನು ಮಾಡಿದರೆ ಗೋದಿ ಲಾಡು ಸವಿಯಲು ರೆಡಿ. ಈ ಲಾಡು ವಾರಗಟ್ಟಲೆ ಉಳಿಯುತ್ತದೆ. ಇದು ಮಕ್ಕಳಿಗೆ ಬಹಳ ಇಷ್ಟವಾಗುವ ಸಿಹಿತಿಂಡಿ. -ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 14, 2024
ಕೆ ಎಂ ಕೃಷ್ಣ ಭಟ್ ಇವರು ‘ರಾಮಾಯಣ ಮತ್ತು ಮಹಾಭಾರತ' ಎನ್ನುವ ಕುತೂಹಲ ಕೆರಳಿಸುವ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ರಾಮಾಯಣ ಹಾಗೂ ಮಹಾಭಾರತದ ಕುರಿತಾದ ಕೆಲವು ಸಂಶಯಗಳು, ದೃಷ್ಟಿಕೋನಗಳು, ಅಭಿಪ್ರಾಯ ಭೇದಗಳನ್ನು ವಿಮರ್ಶೆ ಮಾಡುವ ಪ್ರಯತ್ನ ಈ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ. ಲೇಖಕರು ಸ್ವತಃ ಹಿರಿಯ ನ್ಯಾಯವಾದಿಗಳಾಗಿರುವುದರಿಂದ ಪ್ರತಿಯೊಂದು ವಿಷಯಕ್ಕೂ ಇನ್ನೊಂದು ಬಗೆಯ ತರ್ಕವೂ ಇರಬಹುದು ಎನ್ನುವ ಯೋಚನೆ ಮಾಡಿದ್ದಾರೆ. ಅವರೇ ತಮ್ಮ ‘ಒಂದು ಮಾತು' ಎನ್ನುವ ಬರಹದಲ್ಲಿ ಬರೆದಂತೆ “…
ಲೇಖಕರು: Kavitha Mahesh
ವಿಧ: ರುಚಿ
August 13, 2024
ಮಸಾಲೆ ಪದಾರ್ಥಗಳನ್ನು ಹುರಿದು ಹುಡಿ ಮಾಡಿ. ಬದನೆಕಾಯಿಗಳನ್ನು ಒಲೆಯ ಮೇಲಿರಿಸಿ ಕಪ್ಪಾಗುವವರೆಗೆ ಬಿಸಿ ಮಾಡಿ. ತೊಟ್ಟು ಮತ್ತು ಸಿಪ್ಪೆಗಳನ್ನು ತೆಗೆದು ಬದನೆಯನ್ನು ಮಸೆದು ಬಿಡಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಮಾಡಿ. ಈರುಳ್ಳಿ ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಹುಣಸೆ ರಸ, ಮಸಾಲೆ ಹುಡಿ, ಮಸೆದ ಬದನೆಕಾಯಿ, ಉಪ್ಪು ಹಾಕಿ ಕೈಯಾಡಿಸಿ ಒಲೆಯಿಂದ ಕೆಳಗಿರಿಸಿ. ತೆಂಗಿನಕಾಯಿ - ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 12, 2024
‘ಪೀಜಿ’ ಸುಶೀಲ ಡೋಣೂರ ಅವರ ಕಾದಂಬರಿಯಾಗಿದೆ. ಇದಕ್ಕೆ ರಾಗಂ ಬೆನ್ನುಡಿ ಬರಹವಿದೆ; ಕಾಡುವ ಕಥೆ ತಟ್ಟನೆ ಬರೆಯಿಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ. ಪ್ರೇಮ್ ಚಂದ್, ಅಲೆಕ್ಸಾಂಡರ್ ಪುನ್, ಕಾಮುಗಳ ಕಾದಂಬರಿಗಳು ಘಟಿಸಿದ್ದೇ ಹೀಗೆ. ಘನ ಗಂಭೀರ ಕಾರ್ಮೋಡಗಳು ಆಕಾಶ ತುಂಬಿದಂತೆ ತಟ್ಟನೆ ಮಳೆ ಸುರಿಯುವುದಿಲ್ಲ. ಓಡಾಡುತ್ತವೆ, ಕಾಡುತ್ತವೆ ಕೊನೆಗೊಮ್ಮೆ ಸುರಿದುಬಿಟ್ಟರೆ ನಿಂತ ನೆಲದ ಗತಿ ಏನಾದೀತು ಎನ್ನುವ ಭಯ…
ವಿಧ: ರುಚಿ
August 11, 2024
ಪೇರಳೆ ಚಿಗುರು ಮತ್ತು ಜೀರಿಗೆಯನ್ನು ಒಟ್ಟಾಗಿ ಬೇಯಿಸಿ. ಉಪ್ಪು, ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಮಜ್ಜಿಗೆ ಹಾಕಿದರೆ ತಂಬುಳಿ ರೆಡಿ. ಮಕ್ಕಳಿಗೆ ಅಜೀರ್ಣದಿಂದ ಬೇಧಿಯಾದರೆ ಇದು ಒಳ್ಳೆಯ ಮದ್ದು. ದೊಡ್ಡವರಿಗೂ ಉತ್ತಮ. - ಸಹನಾ ಕಾಂತಬೈಲು, ಮಡಿಕೇರಿ