ವಿಧ: ಪುಸ್ತಕ ವಿಮರ್ಶೆ
March 30, 2023
ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು.
ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್ರತಿಯೊಂದು ಚಿತ್ರದ ಘಟನೆಯ ವಿವರಣೆ ಬಲಭಾಗದ 60 ಪುಟಗಳಲ್ಲಿವೆ. ಈ ಚಂದದ ಚಿತ್ರಗಳನ್ನು ಒಂದು ಶತಮಾನದ (1916) ಮುಂಚೆ ರಚಿಸಿದವರು ಭವಾನರಾವ್ ಶ್ರೀನಿವಾಸರಾವ್ ಊರ್ಫ ಬಾಳಸಾಹೇಬ ಪಂಡಿತ ಪಂತ ಪ್ರತಿನಿಧಿ, ಬಿ.ಎ., ಸಂಸ್ಥಾನ ಔಂಧ.
ಇದರ…
ವಿಧ: ಪುಸ್ತಕ ವಿಮರ್ಶೆ
March 28, 2023
ಶ್ರೀಧರ ಬನವಾಸಿ ಇವರು ಸುದ್ದಿ ಹಾಗೂ ಮನರಂಜನಾ ಮಾಧ್ಯಮವಾಗಿ ಬೆಳೆದಿದ್ದ ಟೀವಿ ಉದ್ಯಮದ ಕುರಿತಾದ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿದ್ದಾರೆ. ಒಟ್ಟಾರೆಯಾಗಿ 2007ರಿಂದ 2013ರವರೆಗೆ ಮಾಧ್ಯಮ ಕ್ಷೇತ್ರದಲ್ಲಿ ನೇರ ಹಾಗೂ ಪರೋಕ್ಷವಾಗಿ ದುಡಿಯುತ್ತಿದ್ದ ಸಮಯದಲ್ಲಿ ಬರೆದ ಅಂಕಣಗಳು, ಲೇಖನಗಳಲ್ಲಿ ಇಂದಿನ ಪ್ರಸ್ತುತ ಜಾಯಮಾನದ ಓದುಗರಿಗೆ, ಈ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಬರಹಗಳನ್ನು ಆಯ್ದು “ಲಾಜಿಕ್ ಬಾಕ್ಸ್” ಎಂಬ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಯಲ್ಲಿ…
ವಿಧ: ಪುಸ್ತಕ ವಿಮರ್ಶೆ
March 25, 2023
“ಬೆತ್ತಲೆ ವೃಕ್ಷ ಎಂಬ ಕೃತಿಯನ್ನು ರಚಿಸಿದ್ದಾರೆ ಸಿ.ಜಿ.ಲಕ್ಷ್ಮೀಪತಿ ಅವರು. ಇವರ ಈ ಪ್ರಬುದ್ಧ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿಯಾದ ಎಂ ಎಸ್ ಆಶಾದೇವಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಇಲ್ಲಿವೆ...
“ಎರಡು ದಶಕಗಳ ಹಿಂದೆ ಬೆತ್ತಲೆ ವೃಕ್ಷ ಕೃತಿಯನ್ನು ಓದಿದಾಗ ವಾಸ್ತವದ ಕಟುತ್ವವನ್ನು ನೋಡಿ, ಕೋಪ, ವಿಷಾದ, ವ್ಯಗ್ರತೆಗಳು ಹುಟ್ಟಿದಂತೆಯೇ ಸ್ತ್ರೀ ವಾದವು ಹೇಳುತ್ತಿರುವ ಅಂಶಗಳನ್ನು ಈ ಕೃತಿ ಇನ್ನೊಂದು ದಿಕ್ಕಿನಿಂದ ಸಮರ್ಥಿಸುತ್ತಿದೆಯಲ್ಲವೆ ಎನ್ನುವ…
ವಿಧ: ಪುಸ್ತಕ ವಿಮರ್ಶೆ
March 23, 2023
ಯುವ ಕವಿ ಚೇತನ್ ಕುಮಾರ್ ನವಲೆ ಇವರು ಬರೆದ ಕವನಗಳನ್ನು 'ಭವ್ಯಚೇತನ’ ಎಂಬ ಹೆಸರಿನ ಕವನ ಸಂಕಲನವಾಗಿ ಹೊರತಂದಿದ್ದಾರೆ. ಈ ಸಂಕಲನದ ಬಗ್ಗೆ ಹಿರಿಯ ಸಾಹಿತಿ ಸಾವಿತ್ರಿ ಮುಜುಂದಾರ್ ಇವರು ತಮ್ಮ ಅನಿಸಿಕೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿದ್ದಾರೆ. ಅದರ ಆಯ್ದ ಭಾಗ ನಿಮ್ಮ ಓದಿಗಾಗಿ ಇಲ್ಲಿದೆ...
“ಚೇತನ್ ಕುಮಾರ್ ನವಲೆ ಅವರ 30 ಕವನಗಳ ಸಂಕಲನ 'ಭವ್ಯಚೇತನ ಯುವ ಕವಿಯಲ್ಲಿ ಇರಬಹುದಾದ ಸಹಜ ಪ್ರೀತಿ ಪ್ರೇಮದ ಹಂಬಲ, ರೀತಿ-ನೀತಿಗಳ ಅನುರಣನ, ಆದರ್ಶ ನೈತಿಕತೆಗಳ ಅಪೇಕ್ಷೆ, ಸಮಾಜದ ಕಡು ವಾಸ್ತವದ…
ವಿಧ: ಪುಸ್ತಕ ವಿಮರ್ಶೆ
March 22, 2023
ಕನ್ನಡ ಸಾಹಿತ್ಯಕ್ಕೆ ಹೊಸ ಲೋಕವೊಂದನ್ನು, ಹೊಸ ತರಹದ ಬರವಣಿಗೆಯನ್ನು ಪರಿಚಯಿಸಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ “ಪರಿಸರದ ಕತೆ". ಇದರ ಇಪ್ಪತ್ತಕ್ಕಿಂತ ಅಧಿಕ ಮರುಮುದ್ರಣಗಳೇ ಇದರ ಜನಪ್ರಿಯತೆಗೆ ಪುರಾವೆ.
ಇದರಲ್ಲಿರುವ 14 ಅಧ್ಯಾಯಗಳು ಒಂದಕ್ಕಿಂತ ಒಂದು ಕುತೂಹಲಕಾರಿ. ಕಾಡಿಗೆ ನಾವು ಹೋಗಿ ನೋಡಿದರೂ ನಮಗೆ ಕಾಣಿಸದ ಹಲವಾರು ನೋಟಗಳನ್ನು, ಸೂಕ್ಷ್ಮ ವಿವರಗಳನ್ನು ಇದರಲ್ಲಿ ದಾಖಲಿಸಿದ್ದಾರ ತೇಜಸ್ವಿಯವರು - ತಮ್ಮದೇ ಹಾಸ್ಯಭರಿತ ಶೈಲಿಯಲ್ಲಿ. ಹಾಗೆಯೇ ತಮ್ಮ ಒಡನಾಟಕ್ಕೆ ಬಂದ ಮಾಸ್ತಿ, ಬೈರ,…
ವಿಧ: ಪುಸ್ತಕ ವಿಮರ್ಶೆ
March 21, 2023
ಪತ್ರಿಕೆಗಳಲ್ಲಿ ವಿಜ್ಞಾನ ಸಂಬಂಧಿ ಲೇಖನಗಳನ್ನು ಬರೆಯುತ್ತಿರುವ ಕ್ಷಮಾ ಭಾನುಪ್ರಕಾಶ್ ಅವರು ತಮ್ಮ ಬರಹಗಳಿಗೆ ಪುಸ್ತಕರೂಪ ನೀಡಿದ್ದಾರೆ. ಪರಿಸರ ಮತ್ತು ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಸರಳ ಲೇಖನಗಳನ್ನು ಎರಡು ಸಂಪುಟಗಳಲ್ಲಿ ಹೊರ ತಂದಿದ್ದಾರೆ. ಈ ಪುಸ್ತಕಕ್ಕೆ ಖ್ಯಾತ ವಿಜ್ಞಾನ ಲೇಖಕರಾದ ಕೊಳ್ಳೇಗಾಲ ಶರ್ಮ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಮುನ್ನುಡಿಯಲ್ಲಿ ವಿಜ್ಞಾನ ಲೇಖಕರಾಗುವ ಸವಾಲುಗಳು, ಜನರಿಗೆ ವಿಷ್ಯದ ವಸ್ತುವನ್ನು ಮನನ ಮಾಡುವ ಸಂಕಷ್ಟಗಳ ಬಗ್ಗೆ ಬರೆದಿದ್ದಾರೆ. ಮುನ್ನುಡಿಯ ಆಯ್ದ…
ವಿಧ: ಪುಸ್ತಕ ವಿಮರ್ಶೆ
March 18, 2023
ಲೇಖಕರಾದ ಎಂ ಆರ್ ಆನಂದ ಅವರು ಬರೆದ ಸುಮಾರು ನಾಲ್ಕುನೂರು ಚಿಲ್ಲರೆ ಪುಟಗಳ ಸರಳ ಶೈಲಿಯ ಕೃತಿಯೇ ‘ಸ್ತ್ರೀಯಾನ'. ಇಲ್ಲಿ “ವೈದೇಹಿ ಮತ್ತು ಮಾನಸಿಯರಂತೂ ನಿಜವಾದ ಅರ್ಥದಲ್ಲಿ ಶೋಷಿತರು. ಶಿಕ್ಷಣ ಮತ್ತು ಉದ್ಯೋಗವಿದ್ದರೂ ಇವರಿಬ್ಬರು ತಮಗಾದ ಅನ್ಯಾಯ ಮತ್ತು ಮಾನಭಂಗಗಳನ್ನು ಪ್ರತಿಭಟಿಸದೇ ಮೌನವಾಗಿ ಪುರುಷ ದಬ್ಬಾಳಿಕೆಯನ್ನು ಸಹಿಸಿ ಕಣ್ಣೀರು ಹಾಕುತ್ತಾರೆ. ಕಾದಂಬರಿಯ ಆ ಕಾಲಮಾನವೇ ಹಾಗೆ: 'ಪ್ರಾಣಕ್ಕಿಂತ ಮಾನ ದೊಡ್ಡದು' ಎಂಬುದು ಆಗಿನ ಮೌಲ್ಯವಾಗಿತ್ತು,” ಎನ್ನುವುದು ಕಾದಂಬರಿಗೆ ಮುನ್ನುಡಿಯನ್ನು…
ವಿಧ: ಪುಸ್ತಕ ವಿಮರ್ಶೆ
March 16, 2023
ಜ್ಯೋತಿ ಇ.ಹಿಟ್ನಾಳ್ ಇವರು ಬರೆದ ಪುಟ್ಟ ಮಹಿಳೆಯರ ಆರೋಗ್ಯ ಸಂಬಂಧಿ ಪುಸ್ತಕ “ಮುಟ್ಟು ಮತ್ತು ಆರೋಗ್ಯ" ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. "ಇತ್ತೀಚಿನ ದಿನಗಳಲ್ಲಿ ಮುಟ್ಟನ್ನು ಕುರಿತು ಇದ್ದ ಅನೇಕ ಪೂರ್ವಗ್ರಹಗಳು ನಗರಗಳಲ್ಲಿ ಮರೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಆರೋಗ್ಯದ ಹಿನ್ನೆಲೆಯಲ್ಲಿ ಮನೆಮದ್ದು, ವೈದ್ಯಕೀಯ ನೆರವು ಕುರಿತು ಮುಕ್ತ ಮಾತುಕತೆಯಾಗುತ್ತಿದೆ. ಮುಟ್ಟಾದ ಹೆಣ್ಣುಮಕ್ಕಳೊಡನೆ ಹೇಗೆ ನಡೆದುಕೊಳ್ಳಬೇಕು, ಮುಟ್ಟಾದ…
ವಿಧ: ಪುಸ್ತಕ ವಿಮರ್ಶೆ
March 16, 2023
ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗೌಡನ ಆನೆ” ಕತೆ ಹಲವು ಭಾಷೆಗಳಿಗೆ ಅನುವಾದವಾಗಿದೆ.
ಮಲೆನಾಡಿನ ಮೂಲೆಯ ಹಳ್ಳಿ ಕಿರಗೂರು. ಅಲ್ಲಿನ ಆಗುಹೋಗುಗಳ ಕಥನ “ಕಿರಗೂರಿನ ಗಯ್ಯಾಳಿಗಳು”. ತೇಜಸ್ವಿಯವರು ಮೂಡಿಗೆರೆಯ ಹತ್ತಿರ ಕಾಫಿ ಎಸ್ಟೇಟಿನಲ್ಲಿ ವಾಸಿಸುತ್ತಾ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದವರು…
ವಿಧ: ಪುಸ್ತಕ ವಿಮರ್ಶೆ
March 15, 2023
ದಾಸರ ಕೀರ್ತನೆ ಬಗ್ಗೆ ನಾನು ಬರೆದ ಕೀರ್ತನೆಗಳ ಸಂಕಲನ ‘ದಾಸರ ದಾರಿಯಲ್ಲಿ' ಶ್ರೇಷ್ಟಮಟ್ಟದ ದಾಸರ ಕೃಷಿ ವಿಶ್ವವ್ಯಾಪಿಯಾಗಿ, ಪ್ರಮುಖವಾಗಿ ಪುಂರಂದರ ದಾಸರು ಮತ್ತು ಕನಕದಾಸರು ಹಾಗೂ ಜಗನ್ನಾಥ ದಾಸರ ಕೀರ್ತನೆಗಳಿಂದ ಜನಪ್ರೀಯತೆ ಪಡೆದ ಈ ಸಾಹಿತ್ಯವು ಅಕ್ಷರಸ್ಥರಿಂದ ಹಿಡಿದು ಅನಕ್ಷರಸ್ಥರವರೆಗೂ ಪರಿಚಯ. ತನ್ನ ಅರ್ಥಗರ್ಭಿತ ಸಂದೇಶ ಮತ್ತು ಸಂಗೀತ ಸಂಯೋಜನೆಗೆ ಒಳಪಡುವ ಸಾಹಿತ್ಯವಾದುದರಿಂದ ಸಾರ್ವತ್ರಿಕ ಮನ್ನಣೆ ಪಡೆದಿದೆ ಎನ್ನುವುದು ನನ್ನ ಅಭಿಪ್ರಾಯ. ‘ದಾಸರ ದಾರಿಯಲ್ಲಿ’ ಕೀರ್ತನೆಗಳಿಗೆ ಬರೆದ…