ವಿಧ: ಬ್ಲಾಗ್ ಬರಹ
August 27, 2024
ಇವತ್ತು ಹಿಂದೆ ಇಳಿಸಿಕೊಂಡಿದ್ದ 'ಭಾಸನ ಭಾರತ' ಎಂಬ ಸುಮಾರು 100 ಪುಟಗಳ ಪುಸ್ತಕವನ್ನು ಓದಿದೆ.
ಇದನ್ನು ಜಿ. ಪಿ. ರಾಜರತ್ನಂ ಅವರು ಬರೆದಿದ್ದಾರೆ.
ಭಾಸನು ಸಂಸ್ಕೃತದಲ್ಲಿ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆರು ನಾಟಕಗಳು ಮಹಾಭಾರತದ ವಸ್ತುವನ್ನು ಹೊಂದಿವೆ. ಇವುಗಳಲ್ಲಿ ಐದು ಏಕಾಂಕ ನಾಟಕಗಳು. ಅವು ಯಾವುವು ಎಂದರೆ ಮಧ್ಯಮವ್ಯಾಯೋಗ, ದೂತ ವಾಕ್ಯ, ದೂತ ಘಟೋತ್ಕಚ, ಕರ್ಣ ಭಾರ ಮತ್ತು ಊರುಭಂಗ.
ಇವುಗಳಲ್ಲಿ ಕರ್ಣಭಾರವು ನಾವು ಕಲಿಯುವಾಗ ಸಂಸ್ಕೃತ ಪಠ್ಯಪುಸ್ತಕದಲ್ಲಿ ಇತ್ತು.
ಈ…
ವಿಧ: ಪುಸ್ತಕ ವಿಮರ್ಶೆ
August 26, 2024
ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ ಎಂಬ ದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಲವು ವರ್ಷಗಳ ಹಿಂದೆ ಸಿಂಗಾಪುರ ಎಂಬುದು ಈಗಿನಂತಿರಲಿಲ್ಲ. ಆದರೆ ಅದು ಬದಲಾದ ಪರಿ ಬಹಳ ಅಚ್ಚರಿ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರಗಣ್ಯ ದೇಶವಾಗಿ ಬದಲಾಗಿದೆ. ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು ಹಲವು ಬಾರಿ ಸಿಂಗಾಪುರಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ಕಂಡ, ಅನುಭವಿಸಿದ ವಿಷಯಗಳನ್ನು ಕೆಲವು ಟಿಪ್ಪಣಿಗಳ ಮೂಲಕ ಪುಸ್ತಕ ರೂಪದಲ್ಲಿ ಓದುಗರಿಗೆ ಉಣಬಡಿಸುವ ಮನಸ್ಸು…
ವಿಧ: ರುಚಿ
August 25, 2024
ಬೀಟ್ರೂಟ್ ಹೋಳುಗಳು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಬಿಳಿ ಎಳ್ಳಿನ ಹುಡಿಗಳನ್ನು ಸೇರಿಸಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಕರಿಬೇವಿನ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ, ಹುಣಸೆ ರಸ, ಬೆಲ್ಲದ ಹುಡಿ, ಉಪ್ಪು, ಅರೆದ ಮಿಶ್ರಣ ಹಾಕಿ ಚೆನ್ನಾಗಿ ಕುದಿಸಿ, ಒಲೆಯಿಂದ ಕೆಳಗಿಳಿಸಿ. ರುಚಿಯಾದ ಬೀಟ್ರೂಟ್ ಗೊಜ್ಜು ಸವಿಯಲು ಸಿದ್ಧ.
ವಿಧ: ಪುಸ್ತಕ ವಿಮರ್ಶೆ
August 23, 2024
“ರವಿ ಬೆಳಗೆರೆ ! ಅವರು ಕನ್ನಡಿಗರ ಮನೆ ಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ…
ವಿಧ: ಪುಸ್ತಕ ವಿಮರ್ಶೆ
August 21, 2024
‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ್ಟ ಜನರ ಬಗ್ಗೆ ಬಹಳ ದುಃಖದಿಂದ ಮಾಹಿತಿ ನೀಡಿದ್ದಾರೆ. ಸ್ವತಃ ವಯನಾಡಿಗೆ ಹೋಗಿ ಈ ದುರಂತವನ್ನು ಕಣ್ಣಾರೆ ಕಂಡ ಆಶಿಕ್ ಮುಲ್ಕಿಯವರು ತಮ್ಮ ಜೊತೆಗೇ ವರದಿಗಾರಿಕೆ ಮಾಡುತ್ತಿದ್ದ ವಿಕ್ರಂ ಕಾಂತಿಕೆರೆಯವರಿಗೆ ಮುನ್ನುಡಿ ಬರೆಯುವ ಹೊಣೆಯನ್ನು ವಹಿಸಿದ್ದಾರೆ. ವಿಕ್ರಂ…
ವಿಧ: ರುಚಿ
August 20, 2024
ಕುಂಡಿಗೆಯ ಹೊರಗಿನ ನಾಲ್ಕು ಸಿಪ್ಪೆಗಳನ್ನು ತೆಗೆಯಿರಿ. ಒಳಗಿರುವ ಬಿಳಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಕೆಂಪು ಮೆಣಸು ಮತ್ತು ಉಪ್ಪು ಹಾಕಿ ಬೇಯಿಸಿ. ಬೆಂದ ಹೋಳುಗಳನ್ನು ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ ಮಜ್ಜಿಗೆ ಬೆರೆಸಿ ಅನ್ನದ ಜೊತೆ ಬಡಿಸಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
August 19, 2024
“ನೀವು ಇಸ್ಲಾಂ ಧರ್ಮದ ಕುರಿತು ಹಲವಾರು ಕಥೆ ಮತ್ತು ಕಾದಂಬರಿಗಳನ್ನು ಓದಿರಬಹುದು. ಅವೆಲ್ಲವನ್ನು ಬರೆದಿರುವುದು ಇಸ್ಲಾಂ ಧರ್ಮದ ಕುರಿತು. ಆದರೆ ಈ ‘ಖದೀಜಾ’ ಕಾದಂಬರಿ ಇಸ್ಲಾಂ ಕುರಿತಾಗಿ ಅಲ್ಲ; ಒಬ್ಬಳು ಮಾನವತಾವಾದಿ, ಹೃದಯವಂತಿಕೆಯುಳ್ಳವರ ಕುರಿತ ಐತಿಹಾಸಿಕ ಕಾದಂಬರಿ. ಈ ಕಾದಂಬರಿ ಸಂಪೂರ್ಣವಾಗಿ 1400 ವರ್ಷಗಳ ಹಿಂದೆ ಅಂದರೆ, ಪ್ರವಾದಿ ಮುಹಮ್ಮದ್ ಪೈಗಂಬರ ಮತ್ತು ಅವರ ಧರ್ಮಪತ್ನಿ ಖದೀಜಾರ ಜೀವನದಲ್ಲಿ ನಡೆದ ಘಟನಾವಳಿಗಳ ಕುರಿತಾದ್ದು. ಒಂದು ಧರ್ಮ ಗ್ರಂಥವನ್ನು ಓದಿ ನನ್ನದೇ ಆದ…
ವಿಧ: ಪುಸ್ತಕ ವಿಮರ್ಶೆ
August 18, 2024
ಈಗಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುತ್ತಿದ್ದೇವೆ? ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂದು ಒಂದು ಕ್ಷಣ ಯೋಚಿಸಿ. ಈಗ ಶೇಕಡಾ 80ರಷ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿವೆ. ಅಲ್ಲಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಲು ಅಜ್ಜ-ಅಜ್ಜಿಯರು ಹಾಗೂ ಹಿರಿಯರು ಆ ಕುಟುಂಬಗಳಲಿಲ್ಲ. ಹೆತ್ತವರಿಗಂತೂ ಮನೆಗೆಲಸಗಳ ನಿರ್ವಹಣೆ ಮತ್ತು ವೃತ್ತಿಯ ಒತ್ತಡದಿಂದಾಗಿ ಮಕ್ಕಳ ಜೊತೆ ನಿರಾಳವಾಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಂತೂ ಸಿಲೆಬಸ್ಸಿನಲ್ಲಿ ಕಡ್ಡಾಯ…
ವಿಧ: ರುಚಿ
August 18, 2024
ಮಸಾಲೆ ಸಾಮಾನುಗಳನ್ನು ಹುರಿದು ಹುಡಿ ಮಾಡಿ, ಬಾಣಲೆಯಲ್ಲಿ, ಎಣ್ಣೆ ಕಾಯಲು ಇರಿಸಿ, ಸಾಸಿವೆ, ಇಂಗು, ಒಣ ಮೆಣಸಿನಕಾಯಿಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲದ ಹುಡಿ, ಮಸಾಲೆಹುಡಿ, ಒಣಶುಂಠಿ ಹುಡಿ, ಉಪ್ಪು ಹಾಕಿ ಕುದಿಸಿದರೆ ರುಚಿಯಾದ ಜೀರಿಗೆ ಗೊಜ್ಜು ತಯಾರು.
ವಿಧ: ರುಚಿ
August 16, 2024
ಎರಡು ನಿಂಬೆ ಹಣ್ಣು ಬೇಯಿಸುವಷ್ಟು ನೀರನ್ನು ಕುಕ್ಕರಿಗೆ ಹಾಕಿ ಐದಾರು ಕೂಗು ( ಶಿಳ್ಳಿ ) ಬರಿಸಿ ಸ್ವಲ್ಪ ಸಮಯದ ನಂತರ ನಿಂಬೆಹಣ್ಣಿನಲ್ಲಿರುವ ಬೀಜಗಳನ್ನು ತೆಗೆದುಹಾಕಿ. ಒಂದು ಸ್ಟೀಲ್ ಬೌಲಿಗೆ ಹಾಕಿ ಚೆನ್ನಾಗಿ ಕಿವುಚಿ. ಈ ಮಿಶ್ರಣಕ್ಕೆ ಉಪ್ಪು, ಗಟ್ಟಿ ಸಿಹಿಮೊಸರು, ಸಕ್ಕರೆ, ಜಜ್ಜಿದ ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಕೂಡಿಸಿ. ಸ್ವಲ್ಪ ಬೆಣ್ಣೆಗೆ ಉದ್ದಿನ ಬೇಳೆ, ಸಾಸಿವೆ ಹಾಕಿ ಚಟಪಟಿ ಕೂಗಿದ ನಂತರ ಒಗ್ಗರಣೆ ಕೊಟ್ಟರೆ ಮೊಸರುಗೊಜ್ಜು ಸಿದ್ಧ. ಮಾರುಕಟ್ಟೆಯಲ್ಲಿ ನಿಂಬೆಹಣ್ಣಿನ ಬೆಲೆ…