ವಿಧ: ಪುಸ್ತಕ ವಿಮರ್ಶೆ
April 04, 2023
ಉಲ್ಲಾಸವಾಗಿ, ಸಂತೋಷವಾಗಿರಲು ಯಾರಿಗೆ ತಾನೇ ಆಸೆಯಿರೋದಿಲ್ಲ? ಕೆಲವೊಂದು ಸರಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ಉಲ್ಲಾಸಮಯ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎನ್ನುತ್ತಾರೆ ‘ಉಲ್ಲಾಸಕ್ಕೆ ದಾರಿ ನೂರಾರು' ಕೃತಿಯ ಲೇಖಕರಾದ ಅಡ್ಡೂರು ಕೃಷ್ಣ ರಾವ್ ಇವರು. ಕೃಷ್ಣ ರಾವ್ ಇವರು ಈಗಾಗಲೇ ತಮ್ಮ 'ಮನಸ್ಸಿನ ಮ್ಯಾಜಿಕ್' ನಂತಹ ಮನೋವೈಜ್ಞಾನಿಕ ಕೃತಿಯ ಮೂಲಕ ಓದುಗರ ಮನ ಗೆದ್ದವರು. ಬರವಣಿಗೆ ಮತ್ತು ಸಂಘಟನೆಯ ಹಾದಿಯಲ್ಲಿ ಬಹುದೂರ ಸಾಗಿ ಬಂದಿರುವ ಶ್ರೀಯುತರು ನಿವೃತ್ತ…
ವಿಧ: ಪುಸ್ತಕ ವಿಮರ್ಶೆ
April 02, 2023
ಶಾರದಾ ಮೂರ್ತಿ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಪಲಾಯನ ಮತ್ತು ಇತರ ಕಥೆಗಳು' ಕೃತಿ. ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಶಾರದಾ ಮೂರ್ತಿ ಅವರ ಕೃತಿಯ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ...
ಶಾರದಾ ಮೂರ್ತಿಯವರ ಪಲಾಯನ ಕಥಾ ಸಂಕಲನ ಆಶಾಡದ ತುಂತುರು ಮಳೆಯ ತಂಪಿನೊಂದಿಗೆ ಲೋಕಾರ್ಪಣೆಯಾಯಿತು. ಕಥೆಗಳನ್ನು ಓದಿದಾಗ ಶಾರದ ಅವರಲ್ಲಿದ್ದ ಲೇಖಕಿ ಪ್ರಬುಧ್ಧಳಾಗಿದ್ದಾಳೆ. ಇಂತಹ ಅನೇಖ ಸಂಕಲನಗಳು ಅವರಿಂದ ಹೊರಬಂದು ಜನ ಮನ್ನಣೆ ಗಳಿಸುವುದೆಂದು ಅವರ ಮೊದಲ ಕಥೆಯ ಶೀರ್ಷಿಕೆ 'ನಂಬಿಕೆ'…
ವಿಧ: ಪುಸ್ತಕ ವಿಮರ್ಶೆ
April 01, 2023
ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ ದುರಾಡಳಿತದ ಒಂದು ಎಳೆ ಗುಪ್ತಗಾಮಿನಿಯಾಗಿದೆ. ಆ ಅಂಶಕ್ಕೆ ಈ ಕಾದಂಬರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನುತ್ತಾರೆ ಲೇಖಕರು. ರುದ್ರಮೂರ್ತಿ ಶಾಸ್ತ್ರಿಯವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿವೆ.…
ವಿಧ: ಪುಸ್ತಕ ವಿಮರ್ಶೆ
March 31, 2023
ಇದ್ದವರಿಗಿಂತ ಇಲ್ಲದವರೇ ತಮಗೆ ಮಾಡಿದ ಸಹಾಯವನ್ನ ನೆನಪಿಡುತ್ತಾರೆ ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ತೀರಿಸುತ್ತಾರೆ. ಇದು ಲೋಕದ ನಿಯಮ ಶಾಂತವ್ವ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಇಂತಹ ಅನೇಕ ಆದರ್ಶ ನುಡಿಗಳನ್ನು ಕಾದಂಬರಿಯ ಉದ್ದಕ್ಕೂ ನೋಡಬಹುದು. "ಮಕ್ಕಳು ಓದಿದ ಟೀಚರ್ ಡೈರಿ" ಒಮ್ಮೇಲೆ ಓದಿಸಿಕೊಂಡು ಹೋಗುವ ಕಾದಂಬರಿ. ವೈ ಜಿ ಭಗವತಿಯವರು ನವರಸಗಳನ್ನು ಬೆರೆಸಿ ಹೆಣೆದ ಮಕ್ಕಳ ಕಾದಂಬರಿ ಇದಾಗಿದೆ. ಈ ಕಾದಂಬರಿಯೂ ಸಮನ್ವಯ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಇದರಲ್ಲಿ ಬರುವ ಪ್ರತಿಯೊಂದು…
ವಿಧ: ಪುಸ್ತಕ ವಿಮರ್ಶೆ
March 31, 2023
ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ ನೀಡಿದ್ದಾರೆ ಹಿರಿಯ ಸಾಹಿತಿ ಬಿ ಎಂ ರೋಹಿಣಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕಿರುನೋಟ ಇಲ್ಲಿದೆ.
“ಕರಾವಳಿ ಲೇಖಕಿಯರ-ವಾಚಕಿಯರ ಸಂಘವು ನೀಡುವ ದತ್ತಿ ಬಹುಮಾನವನ್ನು ಪಡೆದ ಲೇಖನ ಸಂಕಲನವಿದು. ಈ ದತ್ತಿ ಬಹುಮಾನವು ಹಿರಿಯ ಲೇಖಕಿ…
ವಿಧ: ಪುಸ್ತಕ ವಿಮರ್ಶೆ
March 30, 2023
ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು.
ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್ರತಿಯೊಂದು ಚಿತ್ರದ ಘಟನೆಯ ವಿವರಣೆ ಬಲಭಾಗದ 60 ಪುಟಗಳಲ್ಲಿವೆ. ಈ ಚಂದದ ಚಿತ್ರಗಳನ್ನು ಒಂದು ಶತಮಾನದ (1916) ಮುಂಚೆ ರಚಿಸಿದವರು ಭವಾನರಾವ್ ಶ್ರೀನಿವಾಸರಾವ್ ಊರ್ಫ ಬಾಳಸಾಹೇಬ ಪಂಡಿತ ಪಂತ ಪ್ರತಿನಿಧಿ, ಬಿ.ಎ., ಸಂಸ್ಥಾನ ಔಂಧ.
ಇದರ…
ವಿಧ: ಪುಸ್ತಕ ವಿಮರ್ಶೆ
March 28, 2023
ಶ್ರೀಧರ ಬನವಾಸಿ ಇವರು ಸುದ್ದಿ ಹಾಗೂ ಮನರಂಜನಾ ಮಾಧ್ಯಮವಾಗಿ ಬೆಳೆದಿದ್ದ ಟೀವಿ ಉದ್ಯಮದ ಕುರಿತಾದ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿದ್ದಾರೆ. ಒಟ್ಟಾರೆಯಾಗಿ 2007ರಿಂದ 2013ರವರೆಗೆ ಮಾಧ್ಯಮ ಕ್ಷೇತ್ರದಲ್ಲಿ ನೇರ ಹಾಗೂ ಪರೋಕ್ಷವಾಗಿ ದುಡಿಯುತ್ತಿದ್ದ ಸಮಯದಲ್ಲಿ ಬರೆದ ಅಂಕಣಗಳು, ಲೇಖನಗಳಲ್ಲಿ ಇಂದಿನ ಪ್ರಸ್ತುತ ಜಾಯಮಾನದ ಓದುಗರಿಗೆ, ಈ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಬರಹಗಳನ್ನು ಆಯ್ದು “ಲಾಜಿಕ್ ಬಾಕ್ಸ್” ಎಂಬ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಯಲ್ಲಿ…
ವಿಧ: ಪುಸ್ತಕ ವಿಮರ್ಶೆ
March 25, 2023
“ಬೆತ್ತಲೆ ವೃಕ್ಷ ಎಂಬ ಕೃತಿಯನ್ನು ರಚಿಸಿದ್ದಾರೆ ಸಿ.ಜಿ.ಲಕ್ಷ್ಮೀಪತಿ ಅವರು. ಇವರ ಈ ಪ್ರಬುದ್ಧ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿಯಾದ ಎಂ ಎಸ್ ಆಶಾದೇವಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಇಲ್ಲಿವೆ...
“ಎರಡು ದಶಕಗಳ ಹಿಂದೆ ಬೆತ್ತಲೆ ವೃಕ್ಷ ಕೃತಿಯನ್ನು ಓದಿದಾಗ ವಾಸ್ತವದ ಕಟುತ್ವವನ್ನು ನೋಡಿ, ಕೋಪ, ವಿಷಾದ, ವ್ಯಗ್ರತೆಗಳು ಹುಟ್ಟಿದಂತೆಯೇ ಸ್ತ್ರೀ ವಾದವು ಹೇಳುತ್ತಿರುವ ಅಂಶಗಳನ್ನು ಈ ಕೃತಿ ಇನ್ನೊಂದು ದಿಕ್ಕಿನಿಂದ ಸಮರ್ಥಿಸುತ್ತಿದೆಯಲ್ಲವೆ ಎನ್ನುವ…
ವಿಧ: ಪುಸ್ತಕ ವಿಮರ್ಶೆ
March 23, 2023
ಯುವ ಕವಿ ಚೇತನ್ ಕುಮಾರ್ ನವಲೆ ಇವರು ಬರೆದ ಕವನಗಳನ್ನು 'ಭವ್ಯಚೇತನ’ ಎಂಬ ಹೆಸರಿನ ಕವನ ಸಂಕಲನವಾಗಿ ಹೊರತಂದಿದ್ದಾರೆ. ಈ ಸಂಕಲನದ ಬಗ್ಗೆ ಹಿರಿಯ ಸಾಹಿತಿ ಸಾವಿತ್ರಿ ಮುಜುಂದಾರ್ ಇವರು ತಮ್ಮ ಅನಿಸಿಕೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿದ್ದಾರೆ. ಅದರ ಆಯ್ದ ಭಾಗ ನಿಮ್ಮ ಓದಿಗಾಗಿ ಇಲ್ಲಿದೆ...
“ಚೇತನ್ ಕುಮಾರ್ ನವಲೆ ಅವರ 30 ಕವನಗಳ ಸಂಕಲನ 'ಭವ್ಯಚೇತನ ಯುವ ಕವಿಯಲ್ಲಿ ಇರಬಹುದಾದ ಸಹಜ ಪ್ರೀತಿ ಪ್ರೇಮದ ಹಂಬಲ, ರೀತಿ-ನೀತಿಗಳ ಅನುರಣನ, ಆದರ್ಶ ನೈತಿಕತೆಗಳ ಅಪೇಕ್ಷೆ, ಸಮಾಜದ ಕಡು ವಾಸ್ತವದ…
ವಿಧ: ಪುಸ್ತಕ ವಿಮರ್ಶೆ
March 22, 2023
ಕನ್ನಡ ಸಾಹಿತ್ಯಕ್ಕೆ ಹೊಸ ಲೋಕವೊಂದನ್ನು, ಹೊಸ ತರಹದ ಬರವಣಿಗೆಯನ್ನು ಪರಿಚಯಿಸಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ “ಪರಿಸರದ ಕತೆ". ಇದರ ಇಪ್ಪತ್ತಕ್ಕಿಂತ ಅಧಿಕ ಮರುಮುದ್ರಣಗಳೇ ಇದರ ಜನಪ್ರಿಯತೆಗೆ ಪುರಾವೆ.
ಇದರಲ್ಲಿರುವ 14 ಅಧ್ಯಾಯಗಳು ಒಂದಕ್ಕಿಂತ ಒಂದು ಕುತೂಹಲಕಾರಿ. ಕಾಡಿಗೆ ನಾವು ಹೋಗಿ ನೋಡಿದರೂ ನಮಗೆ ಕಾಣಿಸದ ಹಲವಾರು ನೋಟಗಳನ್ನು, ಸೂಕ್ಷ್ಮ ವಿವರಗಳನ್ನು ಇದರಲ್ಲಿ ದಾಖಲಿಸಿದ್ದಾರ ತೇಜಸ್ವಿಯವರು - ತಮ್ಮದೇ ಹಾಸ್ಯಭರಿತ ಶೈಲಿಯಲ್ಲಿ. ಹಾಗೆಯೇ ತಮ್ಮ ಒಡನಾಟಕ್ಕೆ ಬಂದ ಮಾಸ್ತಿ, ಬೈರ,…