ವಿಧ: ಪುಸ್ತಕ ವಿಮರ್ಶೆ
April 25, 2023
ಕೆ.ಶ್ರೀನಿವಾಸ ರೆಡ್ಡಿ ಇವರು ಬರೆದ ವ್ಯಕ್ತಿತ್ವ ವಿಕಸನ ಸಂಬಂಧಿ ಲೇಖನಗಳ ಗುಚ್ಛ ‘ಅನ್ವೇಷಣೆ'. ಆಕರ್ಷಣೀಯ ಮುಖಪುಟವನ್ನು ಹೊಂದಿರುವ ಈ ಕೃತಿಯನ್ನು ಓದಿದ ಬಳಿಕ ಹಲವರ ಬದುಕಿನಲ್ಲಿ ಮಂದಹಾಸ ಮೂಡುವ ಸಾಧ್ಯತೆ ಇದೆ. ಸುಮಾರು ೧೫೦ ಪುಟಗಳ ಈ ಕೃತಿಯ ಬಗ್ಗೆ ಲೇಖಕರಾದ ಕೆ.ಶ್ರೀನಿವಾಸ ರೆಡ್ಡಿಯವರು ತಮ್ಮ ಮಾತಿನಲ್ಲಿ ಬರೆದಿರುವುದು ಹೀಗೆ...
“ಕೆಲವರು ಅಂದುಕೊಂಡಿದ್ದನ್ನು ಮಾಡುತ್ತಾರೆ. ಅವರು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆ ದಾರಿಯಲ್ಲಿ ಅವರು ಬಹುದೂರಕ್ಕೆ ಸಾಗಿಯೇ ಬಿಡುತ್ತಾರೆ.…
ವಿಧ: ಪುಸ್ತಕ ವಿಮರ್ಶೆ
April 22, 2023
‘ಎಲ್ಲರ ಅಂಬೇಡ್ಕರ್’ ಎನ್ನುವ ಕೃತಿಯನ್ನು ಬರೆದಿರುವವರು ಎಚ್ ಟಿ ಪೋತೆ ಎನ್ನುವವರು. ಅಂಬೇಡ್ಕರ್ ಬಗ್ಗೆ ಈಗಾಗಲೇ ಸಾವಿರಾರು ಪುಸ್ತಕಗಳು ಹೊರಬಂದಿವೆ. ಆದರೂ ಈ ೮೮ ಪುಟಗಳ ಪುಟ್ಟ ಪುಸ್ತಕವು ಅಂಬೇಡ್ಕರ್ ಬಗ್ಗೆ ಇನ್ನಷ್ಟು ತಿಳಿಸಿಕೊಡಲಿದೆ ಎನ್ನುವ ವಿಶ್ವಾಸ ಲೇಖಕರದ್ದು. ಅವರು ತಮ್ಮ ನುಡಿಯಲ್ಲಿ ಹೇಳುವುದೇನೆಂದರೆ
‘ಅಂಬೇಡ್ಕರ್' ಎನ್ನುವ ಹೆಸರು ಇದೀಗ ಜಗತ್ತು ನೈಜ ಭಾರತವನ್ನು ಅರಿಯುವ ಬೆಳಕಿಂಡಿಯಾಗಿದೆ. 'ಜೈ ಭೀಮ್' ಎನ್ನುವುದು ಈ ದೇಶದ ಕೋಟ್ಯಾಂತರ ಜನರ ಶಕ್ತಿ ಮಂತ್ರವಾಗಿದೆ. ಅದೇ…
ವಿಧ: ಪುಸ್ತಕ ವಿಮರ್ಶೆ
April 20, 2023
‘ಮಾತೆಂದರೆ ಏನು ಗೂಗಲ್? ಇದು ನೂತನ ದೋಶೆಟ್ಟಿ ಇವರ ಕವನ ಸಂಕಲನ. ೭೮ ಪುಟಗಳ ಈ ಪುಟ್ಟ ಪುಸ್ತಕದ ಬಗ್ಗೆ ನೂತನ ಅವರೇ ಬರೆದ ಮಾತುಗಳು ಇಲ್ಲಿವೆ. ಓದುವಿರಾಗಿ...
“ಕವಿತೆ ನಾನು ಬರೆದದ್ದೋ ಅಥವಾ ಬರೆಸಿಕೊಳ್ಳಲು ನಾನೊಂದು ಮಾಧ್ಯಮವೋ? ಕಾಡುವ ಒಂದು ಪದ, ಒಂದು ಸಾಲು, ಒಂದು ನೋಟವೇ ನೆವವಾಗಿ, ಒಂದು ನಾವು, ಒಂದು ಆಘಾತ, ಒಂದು ಭಯ. ಒಂದು ಆತಂಕ, ಒಂದು ಸಾಲು, ಒಂದು ಅವಮಾನ, ಒಂದು ಸಾವು... ಇಂಥ ಬಹುತೇಕ ಋಣಾತ್ಮಕ ಸ್ವಾಮಿಗಳು ಒಮ್ಮೊಮ್ಮೆ ಒಲೆಯ ಮೇಲಿಟ್ಟ ನೀರಿನಂತೆ ಮರಳಿಸಿ, ಮರಳಿಸಿ, ಕೆಲವೊಮ್ಮೆ…
ವಿಧ: ಪುಸ್ತಕ ವಿಮರ್ಶೆ
April 20, 2023
ಕನ್ನಡದ ಯುವ ಕತೆಗಾರರು ಬರೆದ 14 ಕತೆಗಳ ಸಂಕಲನ ಇದು. ಇಂತಹ ಸಂಕಲನಗಳು ವಿರಳವಾಗುತ್ತಿರುವ ಕಾಲದಲ್ಲಿ, ಇದನ್ನು “ನವಲೇಖನ ಮಾಲೆ"ಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದೆ.
ಕಳೆದ ಒಂದು ನೂರು ವರುಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ ಎಂಬ ಸಾಹಿತ್ಯ ಪ್ರಕಾರ ವಿಸ್ತಾರವಾಗಿ ಬೆಳೆದಿದೆ. ಈ ಬೆಳವಣಿಗೆಗೆ ಮುಖ್ಯ ಕಾರಣ ಇಂಗ್ಲಿಷ್ ಸಾಹಿತ್ಯದ ಪ್ರಭಾವ. ಅದಕ್ಕಿಂತಲೂ ಮುಂಚೆ ಕನ್ನಡದಲ್ಲಿ ಸಣ್ಣ ಕತೆಯಂತಹ ಬರಹಗಳು ಇದ್ದವು. ಆದರೆ ಅವು ನೀತಿಬೋಧನೆಗೆ ಸೀಮಿತವಾಗಿದ್ದವು. ಕಳೆದ ಶತಮಾನದಲ್ಲಿ…
ವಿಧ: ಪುಸ್ತಕ ವಿಮರ್ಶೆ
April 19, 2023
ಕಥೆಯ ಮೂಲಕವೇ ಅನೇಕ ವಿಷಯಗಳ ಮಾಹಿತಿ ನೀಡುವ ಕೆಲಸವನ್ನು ಲೇಖಕಿಯಾದ ಹೆಚ್ ವಿ ಮೀನಾ ಮಾಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಶೇಷ ದಿನಗಳು, ಅವುಗಳ ಮಹತ್ವ , ಪರಿಸರಕ್ಕೆ ಸಂಬಂಧಿಸಿದ ವೃತ್ತಿ ಜೀವನವನ್ನು ಹೇಗೆ ಬೆಳೆಸಬಹುದೆನ್ನುವ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಮಕ್ಕಳಿಗೆ ಶುಚಿತ್ವದ ಮಹತ್ವವನ್ನು ಬೋಧಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ದುಶ್ಚಟಗಳಿಂದ ಆಗುವ ಹಾನಿಗಳನ್ನು ಕಥೆಯ ರೂಪದಲ್ಲಿ ವಿವರಿಸಿದ್ದಾರೆ.
“ಹಸಿರು ಮೂಡಲಿ” ಎಂಬ ಹೆಚ್.ವಿ ಮೀನಾ ಅವರ ಮಕ್ಕಳ ಪುಸ್ತಕ.…
ವಿಧ: ಪುಸ್ತಕ ವಿಮರ್ಶೆ
April 18, 2023
ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವುದರಲ್ಲಿ ಗೌರ ಗೋಪಾಲ ದಾಸ ಇವರದ್ದು ಎತ್ತಿದಕೈ. ಸೊಗಸಾದ ಪುಟ್ಟ ಪುಟ್ಟ ಕಥೆಗಳೊಂದಿಗೆ ಹಿತವಚನಗಳನ್ನು ಬೆರೆಸಿ ಓದುಗರಿಗೆ ಹಾಗೂ ಕೇಳುಗರಿಗೆ ಉಣ ಬಡಿಸುವುದರಲ್ಲಿ ಇವರಿಗೆ ಇವರೇ ಸಾಟಿ. ಗೌರ ಗೋಪಾಲ ದಾಸ ಅವರು ಆಂಗ್ಲ ಭಾಷೆಯಲ್ಲಿ ಬರೆದ “Life’s Amazing Secrets” ಎಂಬ ಪುಸ್ತಕವನ್ನು “ಮಹಾ ವಿಸ್ಮಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ ‘ತಾಷ್ಕೆಂಟ್ ಡೈರಿ’ ಕೃತಿಯ ಖ್ಯಾತಿಯ ಎಸ್ ಉಮೇಶ್ ಇವರು. ಇವರ ಅನುವಾದವೆಂದರೆ ಅದು ಎಲ್ಲೂ ಬೇರೆ ಭಾಷೆಯಿಂದ…
ವಿಧ: ಪುಸ್ತಕ ವಿಮರ್ಶೆ
April 15, 2023
‘ನಮ್ಮ ಸ್ಕೂಲ್ ಡೈರಿ' ಪುಸ್ತಕವನ್ನು ಬರೆದವರು ಖ್ಯಾತ ಲೇಖಕರಾದ ಬೇದ್ರೆ ಮಂಜುನಾಥ ಇವರು. ಇವರು ಸುಮಾರು ೧೭೫ ಪುಟಗಳ ಈ ಪುಸ್ತಕದಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಹಲವಾರು ಚಟುವಟಿಕೆಗಳನ್ನು ಬರೆದಿದ್ದಾರೆ. ಅವರೇ ತಮ್ಮ ಮುನ್ನುಡಿಯಲ್ಲಿ ಬರೆದಂತೆ “ ಇದು ಬೆಳೆಯುವ ಪುಸ್ತಕ! ಜ್ಞಾನ-ವಿಜ್ಞಾನ ಸಂವಾಹಕ!”. ಲೇಖಕರ ಮಾತಿನಿಂದ ಆಯ್ದ ಭಾಗಗಳು ನಿಮಗಾಗಿ...
“ಮಾಹಿತಿ ಮಹಾಪೂರ ಹರಿದು ಬಂದಂತೆಲ್ಲಾ ಈ ಪುಸ್ತಕದ ಗಾತ್ರವೂ ಹಿಗ್ಗುತ್ತದೆ. ಹೊಸ ವಿಷಯಗಳನ್ನು ತಿಳಿಯುವ ತವಕ ಹೆಚ್ಚುತ್ತದೆ.…
ವಿಧ: ಪುಸ್ತಕ ವಿಮರ್ಶೆ
April 13, 2023
ಉಪನ್ಯಾಸಕರಾದ ಸುರೇಶ ಮುದ್ದಾರ ಇವರು ‘ಅರಮನೆಯಿಂದ ಅರಿವಿನರಮನೆಗೆ' ಎಂಬ ಸೊಗಸಾದ ಪುಟ್ಟ (೮೮ ಪುಟಗಳು) ಪುಸ್ತಕವನ್ನು ರಚಿಸಿದ್ದಾರೆ. ಗ್ರಾಮೀಣ ಬದುಕಿನ ತಲ್ಲಣಗಳು, ಬಡತನ, ಮಾನವೀಯ ಮೌಲ್ಯಗಳು, ಪೂರಕವಾದ ಪರಿಸರ, ಸುತ್ತ ಮುತ್ತ ಘಟಿಸುವ ಘಟನೆಗಳು, ಲೋಕವನ್ನು ಹೀಗೂ ನೋಡಿ ಎಂದು ತೋರಿಸುವಂತಹ ಕವನಗಳು ಇಲ್ಲಿವೆ. ಸುರೇಶ ಮುದ್ದಾರ ಅವರು ಮೌಲ್ಯವಾದ ಸಂದೇಶವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕೆನ್ನುವ ಕಳಕಳಿ ಉಳ್ಳವರು. ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ ಅಕ್ಷತಾ ಕೃಷ್ಣಮೂರ್ತಿ ಇವರು…
ವಿಧ: ಪುಸ್ತಕ ವಿಮರ್ಶೆ
April 13, 2023
“ಅಡಿಕೆ ಪತ್ರಿಕೆ” ಮಾಸಪತಿಕೆಯಲ್ಲಿ ಪ್ರಕಟಗೊಂಡ ಉಪಯುಕ್ತ ಆಯ್ದ ಮಾಹಿತಿ ತುಣುಕುಗಳ ಸಂಗ್ರಹವಾದ “ಹನಿಗೂಡಿ ಹಳ್ಳ” ಒಂದು ಅಪರೂಪದ ಪುಸ್ತಕ. ಆ ಪತ್ರಿಕೆಯ “ಹನಿಗೂಡಿ ಹಳ್ಳ” ಅಂಕಣದಿಂದ ಆಯ್ದ ೫೧ ಪುಟ್ಟ ಬರಹಗಳು ಇದರಲ್ಲಿವೆ. ಇದರ ಬಹುಪಾಲು ಬರಹಗಳು ರೈತರ ಅನುಶೋಧನೆಗಳು. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ರೈತರೇ ಕಂಡುಕೊಂಡ ಈ ಅನುಭವ ಆಧಾರಿತ ವಿಧಾನಗಳನ್ನು ಇತರ ರೈತರು ಅಳುಕಿಲ್ಲದೆ ಬಳಸಬಹುದು.
“ಒಕ್ಕಲುತನದಲ್ಲಿ ಎದುರಾಗುವ ಬೇರೆಬೇರೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ರೈತರ ಅನುಶೋಧನೆ ಹಾಗೂ…
ವಿಧ: ಪುಸ್ತಕ ವಿಮರ್ಶೆ
April 11, 2023
ಲೇಖಕ ಡಾ. ಗಜಾನನ ಶರ್ಮ ಅವರ ಕಾದಂಬರಿ-ಪುನರ್ವಸು. ಭಾರಂಗಿ ಎಂಬುದು ಲೇಖಕರ ಊರು. ಲಿಂಗನಮಕ್ಕಿಯಲ್ಲಿ ಶರಾವತಿಗೆ ಅಣೆಕಟ್ಟು ಕಟ್ಟುವಾಗ ಮುಳುಗಿದ ಭಾರಂಗಿ ಊರವರ ಬದುಕಿನ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶರಾವತಿಯ ಹಿನ್ನೀರನ್ನು ಊರವರು ಶರಾವತಿ ಎಂದು ಕರೆಯುವುದಿಲ್ಲ ಬದಲಾಗಿ ‘ಮುಳುಗಡೆ ಹೊಳೆ’ ಎಂದೇ ಕರೆಯುವುದು. ಪ್ರಾಯಶಃ ತಮ್ಮವರ ಬದುಕನ್ನು ಮುಳುಗಿಸಿದ ಸಾತ್ತ್ವಿಕ ಸಿಟ್ಟು, ಅದಕ್ಕೆಂದೇ ಊರವರು ಹೀಗೆ ಮಾತನಾಡುತ್ತಾರೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಆಣೆಕಟ್ಟು…