ವಿಧ: ಪುಸ್ತಕ ವಿಮರ್ಶೆ
August 09, 2024
‘ನಿನಗಾಗಿ ಬರೆದ ಕವಿತೆಗಳು' ಎಚ್.ಎಸ್.ಮುಕ್ತಾಯಕ್ಕ ಅವರ ಹೊಸ ಸಂಕಲನ. ಈ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸಿದೆ. ಇದು ಪ್ರೇಮ ಪದ್ಯಗಳ ಸಂಕಲನ. ಈ ಪದ್ಯಗಳು ಓದುತ್ತ ಗಾಢ ಪ್ರೇಮದ ಹೂದೋಟದಲ್ಲಿ ಕಳೆದು ಹೋಗುವಂತೆ ಮಾಡುತ್ತವೆ. ಈ ಸಂಕಲನ ಪ್ರೇಮಿಗಳ ಉಸಿರಾಟದ ಪಲುಕುಗಳಂತಿವೆ. ಪ್ರತಿ ಪುಟದಲ್ಲಿಯೂ ಆವರಿಸಿರುವ ಪ್ರೇಮ ಪದ್ಯಗಳು ನಮ್ಮವೇ ಅನ್ನಿಸುತ್ತವೆ. ಕವಯತ್ರಿ ಎಚ್ ಎಸ್ ಮುಕ್ತಾಯಕ್ಕ ೧೯೮ ಪುಟಗಳ ಈ ಕೃತಿಗೆ ತಮ್ಮ ಮನದಾಳದ ಮಾತುಗಳನ್ನು ಬರೆದಿದ್ದಾರೆ. ಅದರಲ್ಲಿ ವ್ಯಕ್ತ ಪಡಿಸಿದ ಭಾವನೆಗಳ…
ವಿಧ: ಪುಸ್ತಕ ವಿಮರ್ಶೆ
August 07, 2024
ಸಾವಯವ ಕೃಷಿಕ ಗ್ರಾಹಕ ಬಳಗ ಇವರು ಪ್ರಕಟಿಸುತ್ತಿರುವ ಕೃಷಿಕರಿಗೆ ಮಾರ್ಗದರ್ಶಿ ಪುಸ್ತಕಗಳ ಮಾಲಿಕೆಯಲ್ಲಿ ನಾಲ್ಕನೇ ಕೃತಿ ಸರೋಜಾ ಪ್ರಕಾಶ್ ಅವರು ಬರೆದ ‘ನಮ್ಮ ಕೈತೋಟ - ನಮ್ಮ ಹೆಮ್ಮೆ'. ಈ ಕೃತಿಯು ಕೈತೋಟ ಮಾಡುವವರಿಗೆ ಮತ್ತು ತರಬೇತಿ ನೀಡುವವರಿಗೆ ಬಹಳ ಮಾಹಿತಿ ಪೂರ್ಣವಾಗಿದೆ. ಈ ಅಂಗೈ ಅಗಲದ (ಪಾಕೆಟ್ ಬುಕ್) ೨೬ ಪುಟಗಳ ಪುಸ್ತಕದಲ್ಲಿ ಬಹಳಷ್ಟು ಆಸಕ್ತಿದಾಯಕ ಮಾಹಿತಿಗಳನ್ನು ನೀಡಲಾಗಿದೆ.
ಈ ಕೃತಿಯ ಬಗ್ಗೆ ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷರಾದ ಜಿ ಆರ್ ಪ್ರಸಾದ್ ಅವರು ತಮ್ಮ ಅಧ್ಯಕ್ಷರ…
ವಿಧ: ರುಚಿ
August 07, 2024
ಪುನರ್ಪುಳಿ ಸಿಪ್ಪೆ, ಕಾಯಿತುರಿ, ಜೀರಿಗೆ, ಬೆಲ್ಲ, ಉಪ್ಪು ಎಲ್ಲ ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿದರೆ ತಂಬುಳಿ ತಯಾರಾಯಿತು. ಇದಕ್ಕೆ ಮಜ್ಜಿಗೆ ಸೇರಿಸಲು ಇಲ್ಲ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
August 05, 2024
'ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು’ ಕೃತಿಯು ಡಾ. ಎ.ಓ. ಆವಲ ಮೂರ್ತಿ ಅವರ ಭೌತವಿಜ್ಞಾನ ಚರಿತ್ರೆಯ ಒಂದು ಇಣುಕುನೋಟವಾಗಿದೆ. ಭೌತವಿಜ್ಞಾನದ ೧೪೫ ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ಸರಪಳಿಯಿದ್ದಂತೆ. ಜಗತ್ಪಸಿದ್ಧ ಸಾಧನೆಗಳು ಒಬ್ಬನೇ ವಿಜ್ಞಾನಿಯದೆಂದು ಕಿರೀಟ ತೊಡಿಸುವಂತಿಲ್ಲ. ಆ ಸಂಶೋಧನೆಗೆ ಹಿಂದಿನ ವಿಜ್ಞಾನಿಗಳು ತಳಪಾಯ ಹಾಕಿರುತ್ತಾರೆ. ಅವರೆಲ್ಲ ಶೇಖರಿಸಿದ್ದ ಮಾಹಿತಿಯನ್ನು ಜರಡಿ ಹಿಡಿದು…
ವಿಧ: ರುಚಿ
August 04, 2024
ಅಕ್ಕಿ ರವೆ, ಅವಲಕ್ಕಿಗಳನ್ನು ಪ್ರತ್ಯೇಕವಾಗಿ ಒಂದು ಗಂಟೆ ನೆನೆಸಿ ನೀರು ಬಸಿಯಿರಿ. ಬಸಿದ ಅವಲಕ್ಕಿಗೆ ಹಸಿಮೆಣಸಿನ ಕಾಯಿ, ಶುಂಠಿ ಸೇರಿಸಿ ತರಿತರಿಯಾಗಿ ಅರೆದು, ಬದಿಗಿಸಿರಿದ ಅಕ್ಕಿ ರವೆ, ಕಾಳು ಮೆಣಸಿನ ಹುಡಿ, ಜೀರಿಗೆ ಹುಡಿ ಮತ್ತು ಇಡ್ಲಿ ಮಿಶ್ರಣದ ಹದಕ್ಕೆ ಮೊಸರು ಬೆರೆಸಿ, ಕಲಕಿ ೨-೩ ಗಂಟೆ ಹುದುಗಲು ಇಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ, ಕಡಲೆ ಬೇಳೆ, ಉದ್ದಿನ ಬೇಳೆಗಳ ಒಗ್ಗರಣೆ ಮಾಡಿ. ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಉಪ್ಪು ಸೇರಿಸಿ, ಚೆನ್ನಾಗಿ ಕಲಕಿ.…
ವಿಧ: ರುಚಿ
August 03, 2024
ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ ಬಿಸಿಯಾದಾಗ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಬಾಡಿಸಿ ನಂತರ ರುಬ್ಬಿ ಗೋಧಿ ಹಿಟ್ಟಿಗೆ ಹಾಕಿ. ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಬೆರೆಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿ ಉಂಡೆ ಮಾಡಿ ಚಪಾತಿ ಲಟ್ಟಿಸಿ. ತವಾಕ್ಕೆ ಹಾಕಿ ಎರಡೂ ಬದಿ ಬೇಯಿಸಿ ತೆಗೆಯಿರಿ. ಬಿಸಿಬಿಸಿ ತಿನ್ನಲು ಬಹು ರುಚಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
August 02, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭೦ನೇ ಪುಸ್ತಕವೇ ಲಕ್ಕಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲಕ್ಕಿ ಎಂಬ ಸಸ್ಯವನ್ನು ಎಲ್ಲರೂ ನೋಡಿರುತ್ತೀರಿ. ಆದರೆ ಅದರ ಹೆಸರು ಲಕ್ಕಿ ಎನ್ನುವ ಬಗ್ಗೆ ಕಲ್ಪನೆ ಇರುವುದು ಕಡಿಮೆ. ಅದರ ಉಪಯೋಗಗಳ…
ವಿಧ: ರುಚಿ
August 01, 2024
ಒಂದು ಪಾತ್ರೆಯಲ್ಲಿ ಮಾವಿನ ತುರಿ, ಹೆಸರುಕಾಳು, ಕ್ಯಾರೆಟ್ ತುರಿ, ತೆಂಗಿನತುರಿ, ಕಾಳುಮೆಣಸಿನ ಪುಡಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಸು ಎಲ್ಲವನ್ನೂ ಮಿಶ್ರ ಮಾಡಿ. ನಂತರ ಕರಿಬೇವು ಸೊಪ್ಪಿನ ಒಗ್ಗರಣೆ ಕೊಟ್ಟರೆ ಕೋಸಂಬರಿ ತಿನ್ನಲು ರೆಡಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
July 31, 2024
‘ಯೋಗ ಸಂಗೀತ' - ಮೈಸೂರು ಪರಂಪರೆ ಎನ್ನುವ ಮಾಹಿತಿಪೂರ್ಣ ಪುಸ್ತಕವನ್ನು ಬರೆದವರು ಐತಿಚಂಡ ರಮೇಶ್ ಉತ್ತಪ್ಪ. ಈ ಕೃತಿಗೆ ಅಂತರಾಷ್ಟ್ರೀಯ ಖ್ಯಾತಿಯ ಯೋಗ ಪಟುವಾದ ಡಾ. ಗಣೇಶ್ ಕುಮಾರ್ ಮತ್ತು ಮೈಸೂರು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಎ ಪಿ ನಾಗೇಶ್ ಇವರು ಬೆನ್ನುಡಿಯನ್ನು ಬರೆದಿದ್ದು, ಮೈಸೂರಿನ ರವಿ ಪಿ. ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ...
“ಯೋಗ ಹಾಗೂ ಸಂಗೀತದ ತವರು ಮನೆ ಮೈಸೂರು ಎಂದು…
ವಿಧ: ಪುಸ್ತಕ ವಿಮರ್ಶೆ
July 29, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೯ನೇ ಪುಸ್ತಕವೇ ಲಕ್ಸ್ಮಣ ಫಲ ಮತ್ತು ಸೀತಾಫಲ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲಕ್ಸ್ಮಣ ಫಲ, ಸೀತಾಫಲ, ರಾಮಫಲ ಮುಂತಾದುವುಗಳು ಬಹು ಆರೋಗ್ಯಕರ ಹಾಗೂ ರುಚಿಕರ ಹಣ್ಣುಗಳು ಎನ್ನುವುದರಲ್ಲಿ…