ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 19, 2024
‘ಆ ಲಯ ಈ ಲಯ’ ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಕೃತಿಯ ಮೂಲ ಲೇಖಕ ಲೂಯಿ ನಕೋಸಿ. ಎಚ್. ಎಸ್. ಶಿವಪ್ರಕಾಶ್ ಅವರು ಕೃತಿಯ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ- “ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ ಬಡಗಿಗಳಲ್ಲ; ಅಥವಾ ರಂಗಭೂಮಿಯ ಕಸುಬಿಗರಲ್ಲ. ಬರವಣಿಗೆ ಅವರ ಮಟ್ಟಿಗೆ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಒಳಹೊರಗಿನ ದೀರ್ಘಕಾಲೀನ ಹೋರಾಟ, ವೊಲೆ ಶೋಯಿಂಕಾನ ಪ್ರಕಾರ ಆಫ್ರಿಕನ್ ಕಲಾಪ್ರತಿಭೆ ವರ್ತಮಾನದ ಅತ್ಯಂತ ತುರ್ತಿನ ಆದ್ಯತೆಗಳ ನಿರೂಪ. ವರ್ಣಭೇದೀಯ…
ವಿಧ: ರುಚಿ
September 19, 2024
ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ, ಹಸಿಮೆಣಸು ಸಿಗಿದು ಹಾಕಿ ಒಗ್ಗರಣೆ ಮಾಡಿಕೊಂಡು ಅನ್ನ ಹಾಕಿ ಮಗುಚಿ ಬೇಕಷ್ಟು ಉಪ್ಪು ಹಾಕಿ ನಂತರ ಸಣ್ಣಗೆ ಹೆಚ್ಚಿದ ಬಾಳೆಹಣ ್ಣನ ಹೋಳುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಬನಾನ ರೈಸ್ ತಿನ್ನಲು ರೆಡಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 17, 2024
ಮಹಿ ಎಂಬ ಆನೆಯ ಕುರಿತಾದ ಮಕ್ಕಳ ಕಥೆಯನ್ನು ಹೇಳ ಹೊರಟಿದ್ದಾರೆ ಆನಂದ್ ನೀಲಕಂಠನ್. ಇವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ರತೀಶ್ ಬಿ ಆರ್. ಈ ಕೃತಿಯ ಲೇಖಕರ ಮಾತಿನಲ್ಲಿ ಆನಂದ್ ನೀಲಕಂಠನ್ ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ... “ಮಕ್ಕಳಿಗಾಗಿ ನಾನು ಬರೆಯುತ್ತಿರುವ ಮೊದಲ ಸರಣಿ ಪುಸ್ತಕ ಇದು. ಆದರೆ ಈ ಕತೆಯನ್ನು ದೊಡ್ಡವರೂ ಓದಿ ಮನರಂಜನೆ ಪಡೆಯಬಹುದಾಗಿದೆ. ಈಗ ಈ ಕತೆಯನ್ನು ಓದುವ ಮಕ್ಕಳು ಮುಂದೆ ಹಲವು ವರ್ಷಗಳಾಗಿ ದೊಡ್ಡವರಾದ ಮೇಲೆ ಮತ್ತೊಮ್ಮೆ ಇದೇ…
ಲೇಖಕರು: Kavitha Mahesh
ವಿಧ: ರುಚಿ
September 17, 2024
ಅನನಾಸ್ ಹಣ್ಣಿನ ಹೋಳುಗಳನ್ನು ಎಣ್ಣೆಯಲ್ಲಿ ಬಾಡಿಸಿ ಬೇಯಿಸಿಡಿ. ಇಣ ಮೆಣಸಿನಕಾಯಿ, ಮೆಂತ್ಯದ ಕಾಳುಗಳು, ಚೆಕ್ಕೆಗಳನ್ನು ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ ತುರಿಯೊಂದಿಗೆ ರುಬ್ಬಿ. ಎಣ್ಣೆ ಕಾಯಿಸಿ ಸಾಸಿವೆ-ಇಂಗು-ಕರಿಬೇವು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ರುಬ್ಬಿದ ಮಿಶ್ರಣ, ಬೆಲ್ಲದ ಹುಡಿ, ಉಪ್ಪು, ಬೇಯಿಸಿದ ಅನನಾಸ್ ಹೋಳುಗಳನ್ನು ಹಾಕಿ ಕುದಿಸಿ. ರುಚಿಯಾದ ಅನನಾಸ್ ಗೊಜ್ಜು, ಚಪಾತಿಯೊಂದಿಗೆ ತಿನ್ನಲು ಬಹಳ ರುಚಿಕರ.
ವಿಧ: ರುಚಿ
September 15, 2024
ಬಾಳೆದಿಂಡು ಮತ್ತು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಚಿಕ್ಕ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಹಸಿಮೆಣಸನ್ನು ಸಿಗಿದು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸೇರಿಸಿ. ಅನಂತರ ಬಾಳೆದಿಂಡಿನ ಚೂರನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಗ್ಗರಣೆ ಕೊಡಿ. ಇದು ಅನ್ನಕ್ಕೆ, ಪಲಾವ್‌ನ ಜೊತೆಗೆ ಚೆನ್ನಾಗಿರುತ್ತದೆ.  - ಸಹನಾ ಕಾಂತಬೈಲು, ಬಾಲಂಬಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 14, 2024
ಪ್ರತಿಭಾವಂತ ಲೇಖಕರಾದ ಡಾ ಸುಬ್ರಹ್ಮಣ್ಯ ಸಿ ಕುಂದೂರು ಇವರ ‘ಜೀವನ ಯಾನ' ಎನ್ನುವ ಕಾದಂಬರಿ ಇತ್ತೀಚೆಗೆ ಪುಸ್ತಕ ಮನೆ ಪ್ರಕಾಶನದಿಂದ ಬಿಡುಗಡೆಯಾಗಿದೆ. ಈ ತಮ್ಮ ಕಾದಂಬರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಲೇಖಕರು ತಮ್ಮ ಮಾತಿನಲ್ಲಿ ಹಂಚಿಕೊಂಡಿದ್ದಾರೆ.. “ಕಳೆದ ದಶಕಗಳಿಂದ ಮಲೆನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ಮಾನವರ ವಲಸೆಯ ಅಭಿವ್ಯಕ್ತಿಯು ಸಾಮಾನ್ಯವಾಗಿ ಗೋಚರವಾಗುತ್ತಿದೆ. ದುಡಿಯುವ ನೆಲೆಯಲ್ಲಿ ನಡೆಯುವ ಮಾನವಕೇಂದ್ರಿತ ಪಲ್ಲಟಗಳು ಸಾಂಸ್ಕೃತಿಕ ಪಟುತ್ವವನ್ನು ಮೀರುವ ಮತ್ತು ಸಮಗೊಳಿಸುವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 14, 2024
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ starmaker ಎಂಬ App ನಲ್ಲಿ ಹಿನ್ನೆಲೆ ಸಂಗೀತದೊಡನೆ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ. 103) ಮೂಲ ಹಾಡು -'ಹಮ್ ದಿಲ್ ದೇ ಚುಕೇ ' ಚಿತ್ರದ 'ತಡಪ್ ತಡಪ್ ಕೆ ಇಸ ದಿಲ್ ' ನನ್ನ ಅನುವಾದ :- ಮರಳಿ ಮರಳಿ ಈ ಹೃದಯ ನಿಟ್ಟುಸಿರ ಬಿಡುತಲಿದೆ ಏಕೆ ನನಗೆ ಈ ಶಿಕ್ಷೆ ? ಯಾವ ಅಪರಾಧಕೆ? ಹಾಳಾದೆ ನಾ ಹಾಳಾದೇ ಹಾಳಾದೆ ನಿನ್ನ…
ವಿಧ: ರುಚಿ
September 14, 2024
ಹಣ್ಣುಗಳನ್ನು ಬೀಜ ಹಾಗೂ ಗಟ್ಟಿಯಾದ ಭಾಗವನ್ನು ತೆಗೆದು ಶುಂಠಿ ತುಂಡಿನೊಂದಿಗೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಬಾಣಲಿಯಲ್ಲಿ ಹಾಕಿ ಮಗುಚ ಬೇಕು. ಬೆಂದ ನಂತರ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಹಾಕಿ ಜಾಮ್ ನ ಹದ ಬರುವವರೆಗೆ ಮಗುಚುವುದು. -ಗೀತಾ ಕೋಟೆ, ಅಂಚೆ ಕಳಂಜ, ಸುಳ್ಯ 
ವಿಧ: ಪುಸ್ತಕ ವಿಮರ್ಶೆ
September 13, 2024
ಪರಿಶುದ್ಧ ಬಾಳೂ ಕವಿತೆಯೇ ಬರೀ ಪದಗಳಲ್ಲ ಕನ್ನಡದ ಪ್ರಮುಖ ವಿಮರ್ಶಕರೆಂದು ಹೆಸರಾದ ಡಾ. ಎಚ್ .ಎಸ್. ಸತ್ಯನಾರಾಯಣ ಅವರು ಈವರೆಗೆ ಬರೀ ಗದ್ಯ ಸಾಹಿತ್ಯ ಪ್ರಕಾರದಲ್ಲಿ ಒಡನಾಡುತ್ತಿದ್ದರು. ಅವರ ಮೊದಲ ಕವನ ಸಂಕಲನ (ಹಾಯ್ಕುಗಳ ಸಂಕಲನ) ಪ್ರಕಟಿಸುವ ಮೂಲಕ ಕವಿಯಾಗ ಬೇಕೆಂಬ ಅವರ ಅಸೆಯನ್ನೂ ಅವರು ಪೂರೈಸಿಕೊಂಡರು. ‘ಮರ  ಬರೆದ ರಂಗೋಲಿ’ ಎಂಬ ಹಾಯ್ಕು ಸಂಕಲನ ಮಾಲೂರಿನ ‘ಅಲಂಪು ಪ್ರಕಾಶನ’ದಿಂದ ೨೦೨೩ ರಲ್ಲಿ ಪ್ರಕಟವಾಗಿದೆ, ಅವರೇ ಹೇಳಿದಂತೆ ಹಲವಾರು ಹೈಕು ಬರಹಗಾರರಿಗೆ ಮುನ್ನುಡಿ ಬರೆಯುವ ಕಾರಣಕ್ಕಾಗಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 12, 2024
ರವಿ ಬೆಳಗೆರೆಯವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಪಟ ಸ್ವಾಮಿಗಳ ಬಗ್ಗೆ ವರದಿಗಳ ಸಂಗ್ರಹವೇ ‘ಹಾಯ್ ಕಂಡ ಸ್ವಾಮಿಗಳು' ಎನ್ನುವ ಕೃತಿ. ಈ ಪುಸ್ತಕ ರವಿ ಬೆಳಗೆರೆ ಅವರ ನಿಧನದ ನಂತರ ಅವರ ಮಗಳು ಭಾವನಾ ಬೆಳಗೆರೆ ಅವರ ಮುತುವರ್ಜಿಯಲ್ಲಿ ಹೊರಬಂದಿದೆ. ಈ ಕೃತಿಯ ಬೆನ್ನುಡಿಯಲ್ಲಿ ಸ್ವತಃ ಭಾವನಾ ಬೆಳಗೆರೆ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ..  “ಹಿಂದೂಧರ್ಮ, ಗೋರಕ್ಷಣೆ, ಕೇಸರಿ ಉಡುಪು, ಇದು ಈಗ ಭಾರತದಲ್ಲಿ ವಿಪರೀತವಾಗಿ…